ETV Bharat / state

ನಿಡಗುಂದಾ ವೀರಭದ್ರೇಶ್ವರ ಜಾತ್ರೆ: ಭಕ್ತಸಾಗರದ ನಡುವೆ ಅದ್ದೂರಿ ರಥೋತ್ಸವ - Kalaburagi

ವಿವಿಧ ವಾದ್ಯ ಮೇಳದೊಂದಿಗೆ ವೀರಭದ್ರೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ರಥೋತ್ಸವ ಅದ್ದೂರಿಯಾಗಿ ನಡೆಯಿತು.

ವೀರಭದ್ರೇಶ್ವರ ದೇವಾಲಯ
author img

By

Published : May 10, 2019, 11:29 AM IST

Updated : May 10, 2019, 11:48 AM IST

ಕಲಬುರಗಿ: ಇತಿಹಾಸ ಪ್ರಸಿದ್ಧ ನಿಡಗುಂದಾ ವೀರಭದ್ರೇಶ್ವರ ಜಾತ್ರೆ ಅದ್ದೂರಿಯಾಗಿ ನಡೆಯಿತು.

ವಿವಿಧ ವಾದ್ಯ ಮೇಳದೊಂದಿಗೆ ವೀರಭದ್ರೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ರಥೋತ್ಸವ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಈ ವೇಳೆ ಜೈಕಾರ ಹಾಕುತ್ತಿದ್ದ ಭಕ್ತರು ಈ ಅದ್ಭುತ ಕ್ಷಣವನ್ನು ಕಣ್ತುಂಬಿಕೊಂಡರು.

ವೀರಭದ್ರೇಶ್ವರ ಜಾತ್ರೆಯಲ್ಲಿ ಭಕ್ತಸ್ತೋಮ

ರಥೋತ್ಸವದಲ್ಲಿ ನಿಡಗುಂದಾ ಹಾಗೂ ಸುತ್ತಮುತ್ತಲಿನ ಹಲವು ಹಳ್ಳಿಗಳು ಸೇರಿದಂತೆ ಆಂಧ್ರಪ್ರದೇಶ, ತೆಲಂಗಾಣ, ಸೇಡಂ, ಚಿಂಚೋಳಿ ಹಾಗೂ ಕಲಬುರಗಿಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಜಾತ್ರೆಯ ವೇಳೆ ಬೆಂಕಿ ಕೆಂಡ ತುಳಿಯುವ ಮೂಲಕ ಭಕ್ತರು ಭಕ್ತಿಯ ಪರಾಕಾಷ್ಠೆ ಪ್ರದರ್ಶಿಸಿದರು.

ಭಕ್ತರು ಮಾವಿನ ಹಣ್ಣು, ಬಾಳೆಹಣ್ಣುಗಳನ್ನು ತೇರಿಗೆ ಎಸೆಯುವ ದೃಶ್ಯಾವಳಿ ಸಾಮಾನ್ಯವಾಗಿತ್ತು. ಜಾತ್ರೆಯಲ್ಲಿ ಪಾಲ್ಗೊಂಡ ಭಕ್ತರಿಗೆ ವಿವಿಧ ಸಂಸ್ಥೆಗಳಿಂದ ದಾಸೋಹ ವ್ಯವಸ್ಥೆ ಮಾಡಲಾಯಿತು.

ಕಲಬುರಗಿ: ಇತಿಹಾಸ ಪ್ರಸಿದ್ಧ ನಿಡಗುಂದಾ ವೀರಭದ್ರೇಶ್ವರ ಜಾತ್ರೆ ಅದ್ದೂರಿಯಾಗಿ ನಡೆಯಿತು.

ವಿವಿಧ ವಾದ್ಯ ಮೇಳದೊಂದಿಗೆ ವೀರಭದ್ರೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ರಥೋತ್ಸವ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಈ ವೇಳೆ ಜೈಕಾರ ಹಾಕುತ್ತಿದ್ದ ಭಕ್ತರು ಈ ಅದ್ಭುತ ಕ್ಷಣವನ್ನು ಕಣ್ತುಂಬಿಕೊಂಡರು.

ವೀರಭದ್ರೇಶ್ವರ ಜಾತ್ರೆಯಲ್ಲಿ ಭಕ್ತಸ್ತೋಮ

ರಥೋತ್ಸವದಲ್ಲಿ ನಿಡಗುಂದಾ ಹಾಗೂ ಸುತ್ತಮುತ್ತಲಿನ ಹಲವು ಹಳ್ಳಿಗಳು ಸೇರಿದಂತೆ ಆಂಧ್ರಪ್ರದೇಶ, ತೆಲಂಗಾಣ, ಸೇಡಂ, ಚಿಂಚೋಳಿ ಹಾಗೂ ಕಲಬುರಗಿಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಜಾತ್ರೆಯ ವೇಳೆ ಬೆಂಕಿ ಕೆಂಡ ತುಳಿಯುವ ಮೂಲಕ ಭಕ್ತರು ಭಕ್ತಿಯ ಪರಾಕಾಷ್ಠೆ ಪ್ರದರ್ಶಿಸಿದರು.

ಭಕ್ತರು ಮಾವಿನ ಹಣ್ಣು, ಬಾಳೆಹಣ್ಣುಗಳನ್ನು ತೇರಿಗೆ ಎಸೆಯುವ ದೃಶ್ಯಾವಳಿ ಸಾಮಾನ್ಯವಾಗಿತ್ತು. ಜಾತ್ರೆಯಲ್ಲಿ ಪಾಲ್ಗೊಂಡ ಭಕ್ತರಿಗೆ ವಿವಿಧ ಸಂಸ್ಥೆಗಳಿಂದ ದಾಸೋಹ ವ್ಯವಸ್ಥೆ ಮಾಡಲಾಯಿತು.

Intro:ನಿಡಗುಂದಾ ವೀರಭದ್ರೇಶ್ವರ ಜಾತ್ರೆ... ಭಕ್ತಸಾಗರ ನಡುವೆ ಜರುಗಿದ ಅದ್ದೂರಿ ರಥೋತ್ಸವ

ಕಲಬುರಗಿ: ಭಾರತೀಯ ಧಾರ್ಮಿಕ ಪರಂಪರೆಯಲ್ಲಿ ರೌದ್ರಾವತಾರದಿಂದಲೇ ಶಿಷ್ಟ ರಕ್ಷಕ ದುಷ್ಟರ ಸಂಹಾರಿಕಾಯಾಗಿ ಹೊರಹೊಮ್ಮುವ ಪರಶಿವನ ನೆಚ್ಚಿನ ವೀರ ಹಾಗೂ ಚಿಂಚೋಳಿ ತಾಲೂಕಿನ ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ನಿಡಗುಂದಾ ಗ್ರಾಮದ ಆರಾಧ್ಯ ದೇವರಾದ ವೀರಭದ್ರೇಶ್ವರ ಜಾತ್ರೆ ಅದ್ದೂರಿಯಾಗಿ ಜರುಗಿತ್ತು.

ವೀರಭದ್ರೇಶ್ವರ ದೇವರಿಂದ ನಿಡಗುಂದಾ ಗ್ರಾಮ ಸರ್ವ ಜನಾಂಗದ ಸಾಮರಸ್ಯವು ಬೀಡಾಗಿದೆ. ವಿವಿಧ ವಾದ್ಯ ಮೇಳದೊಂದಿಗೆ ವೀರಭದ್ರೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಕಳಸದೊಂದಿಗೆ ವೀರಭದ್ರೇಶ್ವರ ಜೈಕಾರದ ನಡುವೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ತೇರಿನ ಮೈದಾನಕ್ಕೆ ಬಂದ ಕಳಸ, ಪುರತರರು ಕಳಸ ರಥೋತ್ಸವದ ಮೇಲೆ ಕೂಡಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ರಥೋತ್ಸವದಲ್ಲಿ ನಿಡಗುಂದಾ ಹಾಗೂ ಸುತ್ತಮುತ್ತಲಿನ ಹಲವಾರು ಗ್ರಾಮಗಳಿಂದ ವೀರಭದ್ರೇಶ್ವರ ಜಾತ್ರೋತ್ಸವದಲ್ಲಿ ಜಾತಿ ಭೇದವಿಲ್ಲದೆ ಎಲ್ಲರೂ ಪಾಲ್ಗೊಂಡಿದ್ದರು. ಬೇರೆ ಊರಿಗಳಾದ ಹೂವಿನಹಳ್ಳಿ, ಶೀರೋಳ್ಳಿ, ಎಲ್ಲಮ್ಮ ಗೇಟ್, ರುದ್ನೂರ, ಭೂತಪೂರ, ಚಿಂತಪಳ್ಳಿ, ರಾಯಕೋಡ, ಕೇರೋಳಿ, ಕಂಡಂಪಳ್ಳಿ, ಪಂಚಪಳ್ಳಿ, ಸುಲೇಪೇಟ್, ಖರ್ಚಖೇಡ, ಚತ್ರಾಸಾಲ, ಬುರಪಳ್ಳಿ, ಪೋತಂಗಲ್, ಹಲಕೋಡ, ಜಟ್ಟೂರ್ ಸೇರಿದಂತೆ ಆಂಧ್ರಪ್ರದೇಶ, ತೆಲಂಗಾಣ, ಸೇಡಂ, ಚಿಂಚೋಳಿ ಹಾಗೂ ಕಲಬುರಗಿಯಿಂದ ಹಲವು ಭಕ್ತರು ಬಂದು ಭಾಗಿಯಾಗಿರೋದು ವಿಶೇಷವಾಗಿತ್ತು. ಅನೇಕ ಭಕ್ತರು ಬೆಂಕಿ ಕೆಂಡ ತುಳಿಯುವ ಮೂಲಕ ಭಕ್ತಿ ಸಮರ್ಪಿಸಿದರು.

ಕಾರಿಕ್ ನಾರ್, ಮಾವಿನ ಹಣ್ಣು, ಬಾಳೆಹಣ್ಣು ತೇರಿಗೆ ಎಸೆಯುವ ಮೂಲಕ ತಮ್ಮ ಭಕ್ತಿ ಅರ್ಪಿಸಿದರು. ಬೇರೆ ಕಡೆಯಿಂದ ಬಂದಂತಹ ಭಕ್ತರಿಗೆ ವಿವಿಧ ಸಂಸ್ಥೆಯಿಂದ ಅನ್ನ ದಾಸೋಹ, ತಂಪು ನೀರಿನ ವ್ಯವಸ್ಥೆ ಹಾಗೂ ಮಂಜಿಗೆ ವ್ಯವಸ್ಥೆ ಮಾಡಲಾಯಿತು. ಸುಲೇಪೇಟ್ ಠಾಣೆಯ ಪೊಲೀಸ್ ಸಿಬ್ಬಂದಿಗಳು ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು.Body:ನಿಡಗುಂದಾ ವೀರಭದ್ರೇಶ್ವರ ಜಾತ್ರೆ... ಭಕ್ತಸಾಗರ ನಡುವೆ ಜರುಗಿದ ಅದ್ದೂರಿ ರಥೋತ್ಸವ

ಕಲಬುರಗಿ: ಭಾರತೀಯ ಧಾರ್ಮಿಕ ಪರಂಪರೆಯಲ್ಲಿ ರೌದ್ರಾವತಾರದಿಂದಲೇ ಶಿಷ್ಟ ರಕ್ಷಕ ದುಷ್ಟರ ಸಂಹಾರಿಕಾಯಾಗಿ ಹೊರಹೊಮ್ಮುವ ಪರಶಿವನ ನೆಚ್ಚಿನ ವೀರ ಹಾಗೂ ಚಿಂಚೋಳಿ ತಾಲೂಕಿನ ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ನಿಡಗುಂದಾ ಗ್ರಾಮದ ಆರಾಧ್ಯ ದೇವರಾದ ವೀರಭದ್ರೇಶ್ವರ ಜಾತ್ರೆ ಅದ್ದೂರಿಯಾಗಿ ಜರುಗಿತ್ತು.

ವೀರಭದ್ರೇಶ್ವರ ದೇವರಿಂದ ನಿಡಗುಂದಾ ಗ್ರಾಮ ಸರ್ವ ಜನಾಂಗದ ಸಾಮರಸ್ಯವು ಬೀಡಾಗಿದೆ. ವಿವಿಧ ವಾದ್ಯ ಮೇಳದೊಂದಿಗೆ ವೀರಭದ್ರೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಕಳಸದೊಂದಿಗೆ ವೀರಭದ್ರೇಶ್ವರ ಜೈಕಾರದ ನಡುವೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ತೇರಿನ ಮೈದಾನಕ್ಕೆ ಬಂದ ಕಳಸ, ಪುರತರರು ಕಳಸ ರಥೋತ್ಸವದ ಮೇಲೆ ಕೂಡಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ರಥೋತ್ಸವದಲ್ಲಿ ನಿಡಗುಂದಾ ಹಾಗೂ ಸುತ್ತಮುತ್ತಲಿನ ಹಲವಾರು ಗ್ರಾಮಗಳಿಂದ ವೀರಭದ್ರೇಶ್ವರ ಜಾತ್ರೋತ್ಸವದಲ್ಲಿ ಜಾತಿ ಭೇದವಿಲ್ಲದೆ ಎಲ್ಲರೂ ಪಾಲ್ಗೊಂಡಿದ್ದರು. ಬೇರೆ ಊರಿಗಳಾದ ಹೂವಿನಹಳ್ಳಿ, ಶೀರೋಳ್ಳಿ, ಎಲ್ಲಮ್ಮ ಗೇಟ್, ರುದ್ನೂರ, ಭೂತಪೂರ, ಚಿಂತಪಳ್ಳಿ, ರಾಯಕೋಡ, ಕೇರೋಳಿ, ಕಂಡಂಪಳ್ಳಿ, ಪಂಚಪಳ್ಳಿ, ಸುಲೇಪೇಟ್, ಖರ್ಚಖೇಡ, ಚತ್ರಾಸಾಲ, ಬುರಪಳ್ಳಿ, ಪೋತಂಗಲ್, ಹಲಕೋಡ, ಜಟ್ಟೂರ್ ಸೇರಿದಂತೆ ಆಂಧ್ರಪ್ರದೇಶ, ತೆಲಂಗಾಣ, ಸೇಡಂ, ಚಿಂಚೋಳಿ ಹಾಗೂ ಕಲಬುರಗಿಯಿಂದ ಹಲವು ಭಕ್ತರು ಬಂದು ಭಾಗಿಯಾಗಿರೋದು ವಿಶೇಷವಾಗಿತ್ತು. ಅನೇಕ ಭಕ್ತರು ಬೆಂಕಿ ಕೆಂಡ ತುಳಿಯುವ ಮೂಲಕ ಭಕ್ತಿ ಸಮರ್ಪಿಸಿದರು.

ಕಾರಿಕ್ ನಾರ್, ಮಾವಿನ ಹಣ್ಣು, ಬಾಳೆಹಣ್ಣು ತೇರಿಗೆ ಎಸೆಯುವ ಮೂಲಕ ತಮ್ಮ ಭಕ್ತಿ ಅರ್ಪಿಸಿದರು. ಬೇರೆ ಕಡೆಯಿಂದ ಬಂದಂತಹ ಭಕ್ತರಿಗೆ ವಿವಿಧ ಸಂಸ್ಥೆಯಿಂದ ಅನ್ನ ದಾಸೋಹ, ತಂಪು ನೀರಿನ ವ್ಯವಸ್ಥೆ ಹಾಗೂ ಮಂಜಿಗೆ ವ್ಯವಸ್ಥೆ ಮಾಡಲಾಯಿತು. ಸುಲೇಪೇಟ್ ಠಾಣೆಯ ಪೊಲೀಸ್ ಸಿಬ್ಬಂದಿಗಳು ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು.Conclusion:
Last Updated : May 10, 2019, 11:48 AM IST

For All Latest Updates

TAGGED:

Kalaburagi
ETV Bharat Logo

Copyright © 2025 Ushodaya Enterprises Pvt. Ltd., All Rights Reserved.