ಕಲಬುರಗಿ: ಜಿಲ್ಲೆಯಲ್ಲಿ ಸುರಿದ ಮಳೆ ಹಲವು ಅವಾಂತರ ಸೃಷ್ಟಿಸಿದೆ. ಅಫ್ಜಲ್ಪುರ ತಾಲೂಕಿನ ಹರಸಗುಂಡಗಿಯಲ್ಲಿ ಮಳೆಗೆ ಪ್ರಮುಖ ರಸ್ತೆ ಕೊಚ್ಚಿಹೋಗಿದೆ.
ತೆಗ್ಗಳ್ಳಿ, ಚೌಡಾಪೂರ ರಸ್ತೆಯಲ್ಲಿ ಮಳೆ ನೀರು ಹರಿಯುತ್ತಿದ್ದು, ಜನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಮಳೆ ಅಥವಾ ನದಿಯಲ್ಲಿ ನೆರೆಯುಂಟಾದರೆ. ಈ ರಸ್ತೆ ಬಂದ್ ಆಗುತ್ತಿದ್ದು, ಅಕ್ಕಪಕ್ಕದ ನೂರಾರು ಏಕರೆ ಜಮೀನಿಗೆ ನೀರು ಹೊಕ್ಕು ಅನ್ನದಾತ ಬೆಳೆದ ಬೆಳೆ ನಷ್ಟವಾಗುತ್ತಿದೆ.
ಓವರ್ ಬ್ರಿಡ್ಜ್ ನಿರ್ಮಾಣ ಮಾಡುವ ಮೂಲಕ ರಸ್ತೆ ಸಂಪರ್ಕ ಸುಗಮಗೊಳಿಸಿ ರೈತರ ಬೆಳೆ ನಷ್ಟವಾಗದಂತೆ ಮಾರ್ಗ ಕಲ್ಪಿಸಿಕೊಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.