ಸೇಡಂ: ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರಿಗೆ ಹಾಗೂ ವೈದ್ಯಕೀಯ ಸಿಬ್ಬಂದಿಗೆ ಮಾಸ್ಕ್, ಗ್ಲೌಸ್ ಹಾಗೂ ಸ್ಯಾನಿಟೈಸರ್ ವಿತರಿಸಿದರು.
ನಿರ್ಗತಿಕರು ಹಾಗೂ ಭಿಕ್ಷುಕರಿಗೆ ಆಹಾರ ನೀಡಲಾಯಿತು. ಗ್ರಾಮದ ದೊಡ್ಡ ಅಗಸಿ, ಬಸವ ನಗರ, ಕೆಇಬಿ ಕಾಲನಿ, ಸಾಯಿಬಾಬಾ ಕಾಲನಿ, ಗಣೇಶ ನಗರ, ಆಶ್ರಯ ಕಾಲನಿಗಳಲ್ಲಿ 100 ದವಸ ಧಾನ್ಯಗಳ ಕಿಟ್ಗಳನ್ನು ಸಹ ವಿತರಿಸಲಾಯಿತು.