ETV Bharat / state

ಅಫಜಲಪುರನಲ್ಲಿ ಅಣ್ಣ-ತಮ್ಮಂದಿರ ಪೈಪೋಟಿ: ಚಿತ್ತಾಪುರನಲ್ಲಿ ಖರ್ಗೆಗೆ ರಾಠೋಡ್​ ಟಕ್ಕರ್

author img

By

Published : Apr 19, 2023, 8:04 PM IST

ಅಫಜಲಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಮಾಲೀಕಯ್ಯ ಗುತ್ತೇದಾರ್ ನಾಮಪತ್ರ ಸಲ್ಲಿಕೆ ಮಾಡಿದ್ದು, ಅಣ್ಣನಿಗೆ ಸೆಡ್ಡು ಹೊಡೆದು ನಿತಿನ್​ ಗುತ್ತೇದಾರ್​​ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

fight between  gutthedar-brothers- afzalpur constituency
ಅಫಜಲಪುರನಲ್ಲಿ ಅಣ್ಣ ತಮ್ಮಂದಿರ ನಡುವೆ ಪೈಪೋಟಿ : ಚಿತ್ತಾಪುರನಲ್ಲಿ ಖರ್ಗೆಗೆ ರಾಠೋಡ್​ ಟಕ್ಕರ್

ಕಲಬುರಗಿ : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಅಖಾಡ ಸಿದ್ಧವಾಗಿದೆ. ಬಿಸಿಲೂರು ಕಲಬುರಗಿಯಲ್ಲಿ ಚುನಾವಣೆ ಕಾವು ಹೆಚ್ಚಾಗಿದೆ. ಅಫಜಲಪುರ ವಿಧಾನಸಭಾ ಕ್ಷೇತ್ರದಲ್ಲಿ ಗುತ್ತೇದಾರ್ ಸಹೋದರರ ಕಾಳಗ ಕಾವೇರುತ್ತಿದೆ. ಬಿಜೆಪಿ ಅಭ್ಯರ್ಥಿಯಾಗಿ ಪಕ್ಷದ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ ಉಮೇದುವಾರಿಕೆ ಸಲ್ಲಿಸಿದ್ದು, ಇದೇ ಕ್ಷೇತ್ರಕ್ಕೆ ಮಾಲಿಕಯ್ಯ ಅವರ ಸಹೋದರ ಬಿಜೆಪಿಯಿಂದ ಟಿಕೆಟ್ ವಂಚಿತರಾದ ನಿತಿನ್ ಗುತ್ತೇದಾರ್ ಇಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ನಿತಿನ್ ಗುತ್ತೇದಾರ ಕಣಕ್ಕಿಳಿಯುತ್ತಿದ್ದಂತೆ ಅಣ್ಣ ಮಾಲಿಕಯ್ಯ ಖುದ್ದು ನಿತಿನ್ ಮನೆಗೆ ಭೇಟಿ ನೀಡಿ ಸಂಧಾನಕ್ಕೆ ಪ್ರಯತ್ನ ಮಾಡಿದ್ದಾರೆ. ತಮ್ಮನಿಗೆ ಕೈ ಮುಗಿದು ಮನೆಯಲ್ಲಿಯೇ ಬಂಡಾಯವೇಳುವುದು ಸರಿಯಲ್ಲ. ಇದೊಂದು ಬಾರಿ ನನಗೆ ಅವಕಾಶ ಕೊಡು. ಮುಂದೆ ನೀನೇ ಉತ್ತರಾಧಿಕಾರಿ ಆಗು ಎಂದು ಮನವೊಲಿಸಲು ಯತ್ನಿಸಿದ್ದಾರೆ. ಆದರೆ ಅಣ್ಣನ ಮಾತಿಗೆ ಸುತಾರಾಂ ಒಪ್ಪದ ನಿತಿನ್ ಸಂಧಾನದ ಸಮಯ ಮುಗಿದಿದೆ. ಈಗ ಏನಿದ್ರೂ ಸಮರದ ಸಮಯ, ಈ ಹೋರಾಟದಲ್ಲಿ ಗೆದ್ದು ಬರುವಂತೆ ಆಶೀರ್ವಾದ ಮಾಡುವಂತೆ ಅಣ್ಣ ಮಾಲಿಕಯ್ಯ ಅವರ ಕಾಲಿಗೆ ಬಿದ್ದು ಕೇಳಿಕೊಳ್ಳುವ ಮೂಲಕ ಅಣ್ಣನನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

ನಿತಿನ್ ಗುತ್ತೇದಾರ್ ಬೃಹತ್‌ ಶಕ್ತಿ ಪ್ರದರ್ಶನ : ಮೇ 10 ರಂದು ನಡೆಯಲಿರುವ ಮತದಾನಕ್ಕೆ ನಾಳೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು ಎಲ್ಲೆಡೆ ನಾಮಪತ್ರ ಸಲ್ಲಿಕೆ ಜೋರಾಗಿ ನಡೆಯುತ್ತಿದೆ. ಭೀಮಾತೀರ ಅಫಜಲಪುರ ಕ್ಷೇತ್ರದಲ್ಲಿ ಗುತ್ತೇದಾರ್ ಸಹೋದರರ ನಡುವಿನ ಕಾಳಗ ಬಿರುಸಿನಿಂದ ಸಾಗಿದೆ. ಇಂದು ಪಕ್ಷೇತರ ಅಭ್ಯರ್ಥಿಯಾಗಿ ನಿತಿನ್ ಗುತ್ತೇದಾರ್ ತಮ್ಮ ಉಮೇದುವಾರಿಕೆ ಸಲ್ಲಿಸುವ ಮೂಲಕ ಬೃಹತ್‌ ಶಕ್ತಿ ಪ್ರದರ್ಶನ ಮಾಡಿದರು. ಅಫಜಲಪುರದಲ್ಲಿನ ರ್ಯಾಲಿ ನಡೆಸಿ ತಹಶೀಲ್ದಾರ್ ಕಚೇರಿಯಲ್ಲಿ ಉಮೇದುವಾರಿಕೆ ಸಲ್ಲಿಸಿದರು. ಬಿರು ಬಿಸಿಲಿನಲ್ಲೂ ಸುಮಾರು ಒಂದು ಕಿಮೀದೂರ ನಡೆದ ಬೃಹತ್ ರೋಡ್ ಶೋ ನಲ್ಲಿ ಅಭಿಮಾನಿಗಳು ಜೆಸಿಬಿ ಮೂಲಕ ಹೂಮಳೆ ಗೈದು ನಿತಿನ್​​ಗೆ ಭಾರೀ ಬೆಂಬಲ ಸೂಚಿಸಿದರು.

ನಿತಿನ್ ಗುತ್ತೇದಾರ್​ಗೆ ಬಂಡಾಯದ ಲಾಭ: ಬಿಜೆಪಿ ಅಭ್ಯರ್ಥಿ ಮಾಲೀಕಯ್ಯ ಗುತ್ತೇದಾರ್‌ಗೆ ತಮ್ಮ ನಿತಿನ್ ಬಂಡಾಯದ ಬಿಸಿ ಮುಟ್ಟಿಸಿದ್ದಾರೆ. ಟಿಕೆಟ್ ವಂಚಿತ ಕಾಂಗ್ರೆಸ್ ಅತೃಪ್ತರು ಕೂಡ ನಿತೀನ್‌ ಕೈ ಜೋಡಿಸಿ ಶಕ್ತಿ ತುಂಬಿದ್ರೆ, ಬಿಜೆಪಿಯ ಕೆಲ ಮುಖಂಡರು, ಕಾರ್ಯಕರ್ತರು ನಿತೀನ್ ಬೆನ್ನಿಗೆ ನಿಂತು ಬಿಜೆಪಿ ಅಭ್ಯರ್ಥಿ ಮಾಲೀಕಯ್ಯಗೆ ಶಾಕ್ ನೀಡಿದ್ದಾರೆ. ನಾಮಪತ್ರ ಸಲ್ಲಿಕೆ ಅಬ್ಬರದ ಮೂಲಕ ನಿತೀನ್ ಹಾವಾ ಜೋರಾಗಿದ್ದು ಕ್ಷೇತ್ರದ ಜನ ನಿತೀನ್‌ಗೆ ಜೈ ಎನ್ನುತ್ತಿದ್ದಾರೆ.

ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಉಮೇದುವಾರಿಕೆ ಸಲ್ಲಿಕೆ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಪುತ್ರ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಸ್ಪರ್ಧೆ ಮಾಡುವ ಚಿತ್ತಾಪುರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಮಣಿಕಂಠ ರಾಠೋಡ್ ಇಂದು ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಚಿತ್ತಾಪುರ ಪಟ್ಟಣದಲ್ಲಿ ಬೃಹತ್ ರೋಡ್​ ಶೋ ನಡೆಸುವ ಮೂಲಕ ಶಕ್ತಿ ಪ್ರದರ್ಶನ ನಡೆಸಿದರು.

ಹೈವೋಲ್ಟೆಜ್ ಕ್ಷೇತ್ರವಾಗಿ ಪರಿವರ್ತನೆ: ಕಲಬುರಗಿ ಜಿಲ್ಲೆಯ ಅಫಜಲಪುರ ಕ್ಷೇತ್ರದಲ್ಲಿ ಗುತ್ತೇದಾರ್ ಬ್ರದರ್ಸ್‌ ನಡುವಿನ ಪೈಟ್ ಎಲೆಕ್ಷನ್ ಅಖಾಡ ರಂಗೇರಿಸಿದೆ. ಇತ್ತ ಚಿತ್ತಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್​ ವಿರುದ್ದ ಅಖಾಡಕ್ಕಿಳಿದಿರುವ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಮಧ್ಯೆ ಟಫ್ ಫೈಟ್ ಏರ್ಪಟ್ಟಿದ್ದು ಎರಡು ಕ್ಷೇತ್ರಗಳು ಹೈವೋಲ್ಟೆಜ್ ಕ್ಷೇತ್ರವಾಗಿ ಮಾರ್ಪಾಡಾಗಿದೆ. ಚುನಾವಣೆ ಕಲಿಗಳು ತಮ್ಮ ತಮ್ಮ ಶಕ್ತಿ ಸಾಮರ್ಥ್ಯ ಪ್ರದರ್ಶನದ ಮೂಲಕ ಸ್ಪರ್ಧೆಗೆ ಇಳಿದಿದ್ದು, ಮತದಾರರ ಪ್ರಭು ಮಾತ್ರ ಯಾರಿಗೆ ವಿಜಯಮಾಲೆ ತೊಡಿಸುತ್ತಾನೆ ಎಂಬುದು ಮೇ 13ರಂದು ಗೊತ್ತಾಗಲಿದೆ.

ಇದನ್ನೂ ಓದಿ : ಕಾಂಗ್ರೆಸ್​ನಿಂದ ಸ್ಟಾರ್ ಕ್ಯಾಂಪೇನರ್‌ಗಳ ಪಟ್ಟಿ ಬಿಡುಗಡೆ: ನಟಿ ರಮ್ಯಾ, ಶೆಟ್ಟರ್​​ಗೂ ಸ್ಥಾನ

ಕಲಬುರಗಿ : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಅಖಾಡ ಸಿದ್ಧವಾಗಿದೆ. ಬಿಸಿಲೂರು ಕಲಬುರಗಿಯಲ್ಲಿ ಚುನಾವಣೆ ಕಾವು ಹೆಚ್ಚಾಗಿದೆ. ಅಫಜಲಪುರ ವಿಧಾನಸಭಾ ಕ್ಷೇತ್ರದಲ್ಲಿ ಗುತ್ತೇದಾರ್ ಸಹೋದರರ ಕಾಳಗ ಕಾವೇರುತ್ತಿದೆ. ಬಿಜೆಪಿ ಅಭ್ಯರ್ಥಿಯಾಗಿ ಪಕ್ಷದ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ ಉಮೇದುವಾರಿಕೆ ಸಲ್ಲಿಸಿದ್ದು, ಇದೇ ಕ್ಷೇತ್ರಕ್ಕೆ ಮಾಲಿಕಯ್ಯ ಅವರ ಸಹೋದರ ಬಿಜೆಪಿಯಿಂದ ಟಿಕೆಟ್ ವಂಚಿತರಾದ ನಿತಿನ್ ಗುತ್ತೇದಾರ್ ಇಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ನಿತಿನ್ ಗುತ್ತೇದಾರ ಕಣಕ್ಕಿಳಿಯುತ್ತಿದ್ದಂತೆ ಅಣ್ಣ ಮಾಲಿಕಯ್ಯ ಖುದ್ದು ನಿತಿನ್ ಮನೆಗೆ ಭೇಟಿ ನೀಡಿ ಸಂಧಾನಕ್ಕೆ ಪ್ರಯತ್ನ ಮಾಡಿದ್ದಾರೆ. ತಮ್ಮನಿಗೆ ಕೈ ಮುಗಿದು ಮನೆಯಲ್ಲಿಯೇ ಬಂಡಾಯವೇಳುವುದು ಸರಿಯಲ್ಲ. ಇದೊಂದು ಬಾರಿ ನನಗೆ ಅವಕಾಶ ಕೊಡು. ಮುಂದೆ ನೀನೇ ಉತ್ತರಾಧಿಕಾರಿ ಆಗು ಎಂದು ಮನವೊಲಿಸಲು ಯತ್ನಿಸಿದ್ದಾರೆ. ಆದರೆ ಅಣ್ಣನ ಮಾತಿಗೆ ಸುತಾರಾಂ ಒಪ್ಪದ ನಿತಿನ್ ಸಂಧಾನದ ಸಮಯ ಮುಗಿದಿದೆ. ಈಗ ಏನಿದ್ರೂ ಸಮರದ ಸಮಯ, ಈ ಹೋರಾಟದಲ್ಲಿ ಗೆದ್ದು ಬರುವಂತೆ ಆಶೀರ್ವಾದ ಮಾಡುವಂತೆ ಅಣ್ಣ ಮಾಲಿಕಯ್ಯ ಅವರ ಕಾಲಿಗೆ ಬಿದ್ದು ಕೇಳಿಕೊಳ್ಳುವ ಮೂಲಕ ಅಣ್ಣನನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

ನಿತಿನ್ ಗುತ್ತೇದಾರ್ ಬೃಹತ್‌ ಶಕ್ತಿ ಪ್ರದರ್ಶನ : ಮೇ 10 ರಂದು ನಡೆಯಲಿರುವ ಮತದಾನಕ್ಕೆ ನಾಳೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು ಎಲ್ಲೆಡೆ ನಾಮಪತ್ರ ಸಲ್ಲಿಕೆ ಜೋರಾಗಿ ನಡೆಯುತ್ತಿದೆ. ಭೀಮಾತೀರ ಅಫಜಲಪುರ ಕ್ಷೇತ್ರದಲ್ಲಿ ಗುತ್ತೇದಾರ್ ಸಹೋದರರ ನಡುವಿನ ಕಾಳಗ ಬಿರುಸಿನಿಂದ ಸಾಗಿದೆ. ಇಂದು ಪಕ್ಷೇತರ ಅಭ್ಯರ್ಥಿಯಾಗಿ ನಿತಿನ್ ಗುತ್ತೇದಾರ್ ತಮ್ಮ ಉಮೇದುವಾರಿಕೆ ಸಲ್ಲಿಸುವ ಮೂಲಕ ಬೃಹತ್‌ ಶಕ್ತಿ ಪ್ರದರ್ಶನ ಮಾಡಿದರು. ಅಫಜಲಪುರದಲ್ಲಿನ ರ್ಯಾಲಿ ನಡೆಸಿ ತಹಶೀಲ್ದಾರ್ ಕಚೇರಿಯಲ್ಲಿ ಉಮೇದುವಾರಿಕೆ ಸಲ್ಲಿಸಿದರು. ಬಿರು ಬಿಸಿಲಿನಲ್ಲೂ ಸುಮಾರು ಒಂದು ಕಿಮೀದೂರ ನಡೆದ ಬೃಹತ್ ರೋಡ್ ಶೋ ನಲ್ಲಿ ಅಭಿಮಾನಿಗಳು ಜೆಸಿಬಿ ಮೂಲಕ ಹೂಮಳೆ ಗೈದು ನಿತಿನ್​​ಗೆ ಭಾರೀ ಬೆಂಬಲ ಸೂಚಿಸಿದರು.

ನಿತಿನ್ ಗುತ್ತೇದಾರ್​ಗೆ ಬಂಡಾಯದ ಲಾಭ: ಬಿಜೆಪಿ ಅಭ್ಯರ್ಥಿ ಮಾಲೀಕಯ್ಯ ಗುತ್ತೇದಾರ್‌ಗೆ ತಮ್ಮ ನಿತಿನ್ ಬಂಡಾಯದ ಬಿಸಿ ಮುಟ್ಟಿಸಿದ್ದಾರೆ. ಟಿಕೆಟ್ ವಂಚಿತ ಕಾಂಗ್ರೆಸ್ ಅತೃಪ್ತರು ಕೂಡ ನಿತೀನ್‌ ಕೈ ಜೋಡಿಸಿ ಶಕ್ತಿ ತುಂಬಿದ್ರೆ, ಬಿಜೆಪಿಯ ಕೆಲ ಮುಖಂಡರು, ಕಾರ್ಯಕರ್ತರು ನಿತೀನ್ ಬೆನ್ನಿಗೆ ನಿಂತು ಬಿಜೆಪಿ ಅಭ್ಯರ್ಥಿ ಮಾಲೀಕಯ್ಯಗೆ ಶಾಕ್ ನೀಡಿದ್ದಾರೆ. ನಾಮಪತ್ರ ಸಲ್ಲಿಕೆ ಅಬ್ಬರದ ಮೂಲಕ ನಿತೀನ್ ಹಾವಾ ಜೋರಾಗಿದ್ದು ಕ್ಷೇತ್ರದ ಜನ ನಿತೀನ್‌ಗೆ ಜೈ ಎನ್ನುತ್ತಿದ್ದಾರೆ.

ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಉಮೇದುವಾರಿಕೆ ಸಲ್ಲಿಕೆ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಪುತ್ರ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಸ್ಪರ್ಧೆ ಮಾಡುವ ಚಿತ್ತಾಪುರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಮಣಿಕಂಠ ರಾಠೋಡ್ ಇಂದು ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಚಿತ್ತಾಪುರ ಪಟ್ಟಣದಲ್ಲಿ ಬೃಹತ್ ರೋಡ್​ ಶೋ ನಡೆಸುವ ಮೂಲಕ ಶಕ್ತಿ ಪ್ರದರ್ಶನ ನಡೆಸಿದರು.

ಹೈವೋಲ್ಟೆಜ್ ಕ್ಷೇತ್ರವಾಗಿ ಪರಿವರ್ತನೆ: ಕಲಬುರಗಿ ಜಿಲ್ಲೆಯ ಅಫಜಲಪುರ ಕ್ಷೇತ್ರದಲ್ಲಿ ಗುತ್ತೇದಾರ್ ಬ್ರದರ್ಸ್‌ ನಡುವಿನ ಪೈಟ್ ಎಲೆಕ್ಷನ್ ಅಖಾಡ ರಂಗೇರಿಸಿದೆ. ಇತ್ತ ಚಿತ್ತಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್​ ವಿರುದ್ದ ಅಖಾಡಕ್ಕಿಳಿದಿರುವ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಮಧ್ಯೆ ಟಫ್ ಫೈಟ್ ಏರ್ಪಟ್ಟಿದ್ದು ಎರಡು ಕ್ಷೇತ್ರಗಳು ಹೈವೋಲ್ಟೆಜ್ ಕ್ಷೇತ್ರವಾಗಿ ಮಾರ್ಪಾಡಾಗಿದೆ. ಚುನಾವಣೆ ಕಲಿಗಳು ತಮ್ಮ ತಮ್ಮ ಶಕ್ತಿ ಸಾಮರ್ಥ್ಯ ಪ್ರದರ್ಶನದ ಮೂಲಕ ಸ್ಪರ್ಧೆಗೆ ಇಳಿದಿದ್ದು, ಮತದಾರರ ಪ್ರಭು ಮಾತ್ರ ಯಾರಿಗೆ ವಿಜಯಮಾಲೆ ತೊಡಿಸುತ್ತಾನೆ ಎಂಬುದು ಮೇ 13ರಂದು ಗೊತ್ತಾಗಲಿದೆ.

ಇದನ್ನೂ ಓದಿ : ಕಾಂಗ್ರೆಸ್​ನಿಂದ ಸ್ಟಾರ್ ಕ್ಯಾಂಪೇನರ್‌ಗಳ ಪಟ್ಟಿ ಬಿಡುಗಡೆ: ನಟಿ ರಮ್ಯಾ, ಶೆಟ್ಟರ್​​ಗೂ ಸ್ಥಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.