ETV Bharat / state

ಕಲಬುರಗಿಯಲ್ಲಿ ಸತ್ತು ಬದುಕಿ, ಮತ್ತೆ ಶಾಶ್ವತವಾಗಿ ಕಣ್ಮುಚ್ಚಿದ ವೃದ್ಧ! - ವೃದ್ಧನ ಆಶ್ಛರ್ಯ ಸಾವು ಕಲಬುರಗಿ

ಕಲಬುರಗಿ ಜಿಲ್ಲೆಯ ಅಫ್ಜಲಪುರ ತಾಲ್ಲೂಕಿನ ಹಿರೇಜೇವರ್ಗಿ ಗ್ರಾಮದ ನಿವಾಸಿ ಚಂದಪ್ಪ ಅತನೂರು ಎನ್ನುವ ವೃದ್ಧ ಸತ್ತು ಬದುಕಿ ಅಚ್ಚರಿಸಿ ಮೂಡಿಸಿ ಮತ್ತೆ ಶಾಶ್ವತವಾಗಿ ಕಣ್ಮುಚ್ಚಿದ್ದಾರೆ. ಕುತೂಹಲಕಾರಿ ಸ್ಟೋರಿ ಇಲ್ಲಿದೆ ನೋಡಿ.

kalburagi
ಸಾವನ್ನಪ್ಪಿದ ವೃದ್ಧ
author img

By

Published : Dec 24, 2019, 1:52 PM IST

ಕಲಬುರಗಿ: ಜಿಲ್ಲೆಯ ಅಫ್ಜಲಪುರ ತಾಲ್ಲೂಕಿನ ಹಿರೇಜೇವರ್ಗಿ ಗ್ರಾಮದ ನಿವಾಸಿ ಚಂದಪ್ಪ ಅತನೂರು ಎನ್ನುವ ವೃದ್ಧ ಸತ್ತು ಬದುಕಿ ಅಚ್ಚರಿಸಿ ಮೂಡಿಸಿ ಮತ್ತೆ ಶಾಶ್ವತವಾಗಿ ಕಣ್ಮುಚ್ಚಿದ್ದಾರೆ.

ಚಂದಪ್ಪ ಅತನೂರು (95) ನಗರದ ಡಬರಾಬಾದ್ ಕಾಲೋನಿಯ ತನ್ನ ಪುತ್ರನ ಮನೆಯಲ್ಲಿ ವಾಸಿಸುತ್ತಿದ್ದರು. ಕಳೆದ ತಿಂಗಳು ನವೆಂಬರ್ 24 ರಂದು ವೃದ್ಧ ಚಂದಪ್ಪ ಸಾವನ್ನಪ್ಪಿದ್ದರು. ಅವರ ಅಂತ್ಯಕ್ರಿಯೆ ಮಾಡಲು ಮೃತದೇಹವನ್ನು ಆಂಬ್ಯುಲೆನ್ಸ್‌ ಮೂಲಕ ಸ್ವಗ್ರಾಮಕ್ಕೆ ಸ್ಥಳಾಂತರಿಸಲಾಗಿತ್ತು. ಮನೆ ಮುಂದೆ ಮೃತದೇಹವಿಟ್ಟು ಸಂಬಂಧಿಕರ ಆಗಮನಕ್ಕಾಗಿ ಕಾಯುವಾಗ ಐದಾರು ಗಂಟೆಗಳ ನಂತ್ರ ಸತ್ತಿದ್ದ ಚಂದಪ್ಪಜ್ಜ ದಿಢೀರ್ ಉಸಿರಾಡಲು ಪ್ರಾರಂಭಿಸಿದ್ದಾರೆ! ನಂತರ ಬರೋಬ್ಬರಿ 27 ದಿನಗಳ ಕಾಲ ಬದುಕಿದ ಈ ವ್ಯಕ್ತಿ ಡಿಸೆಂಬರ್ 22 ರಂದು ಮನೆಯಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಶಾಶ್ವತವಾಗಿ ಕಣ್ಮುಚ್ಚಿದ್ದಾರೆ.

ಇನ್ನು ಕಾರ್ಯಕ್ರಮ ನಡೆಯುವುದಕ್ಕೂ ಮುನ್ನ (ಡಿ. 22 ರಂದು) ಮಧ್ಯಾಹ್ನ 2 ಗಂಟೆಯೊಳಗೆ ಕಾರ್ಯಕ್ರಮಗಳನ್ನು ಮುಗಿಸಿ, ನಾ ಹೋಗಬೇಕಾಗಿದೆ ಎಂದು ಕುಟುಂಬಸ್ಥರ ಬಳಿ ಹೇಳಿದ್ದರಂತೆ. ಅದರಂತೆ ಡಿ. 22 ರಂದು ಮಧ್ಯಾಹ್ನ 2 ಗಂಟೆಯೊಳಗೆ ಚಂದಪ್ಪಜ್ಜ ಸಾವನ್ನಪ್ಪಿದ್ದಾರೆ.

ಕಲಬುರಗಿ: ಜಿಲ್ಲೆಯ ಅಫ್ಜಲಪುರ ತಾಲ್ಲೂಕಿನ ಹಿರೇಜೇವರ್ಗಿ ಗ್ರಾಮದ ನಿವಾಸಿ ಚಂದಪ್ಪ ಅತನೂರು ಎನ್ನುವ ವೃದ್ಧ ಸತ್ತು ಬದುಕಿ ಅಚ್ಚರಿಸಿ ಮೂಡಿಸಿ ಮತ್ತೆ ಶಾಶ್ವತವಾಗಿ ಕಣ್ಮುಚ್ಚಿದ್ದಾರೆ.

ಚಂದಪ್ಪ ಅತನೂರು (95) ನಗರದ ಡಬರಾಬಾದ್ ಕಾಲೋನಿಯ ತನ್ನ ಪುತ್ರನ ಮನೆಯಲ್ಲಿ ವಾಸಿಸುತ್ತಿದ್ದರು. ಕಳೆದ ತಿಂಗಳು ನವೆಂಬರ್ 24 ರಂದು ವೃದ್ಧ ಚಂದಪ್ಪ ಸಾವನ್ನಪ್ಪಿದ್ದರು. ಅವರ ಅಂತ್ಯಕ್ರಿಯೆ ಮಾಡಲು ಮೃತದೇಹವನ್ನು ಆಂಬ್ಯುಲೆನ್ಸ್‌ ಮೂಲಕ ಸ್ವಗ್ರಾಮಕ್ಕೆ ಸ್ಥಳಾಂತರಿಸಲಾಗಿತ್ತು. ಮನೆ ಮುಂದೆ ಮೃತದೇಹವಿಟ್ಟು ಸಂಬಂಧಿಕರ ಆಗಮನಕ್ಕಾಗಿ ಕಾಯುವಾಗ ಐದಾರು ಗಂಟೆಗಳ ನಂತ್ರ ಸತ್ತಿದ್ದ ಚಂದಪ್ಪಜ್ಜ ದಿಢೀರ್ ಉಸಿರಾಡಲು ಪ್ರಾರಂಭಿಸಿದ್ದಾರೆ! ನಂತರ ಬರೋಬ್ಬರಿ 27 ದಿನಗಳ ಕಾಲ ಬದುಕಿದ ಈ ವ್ಯಕ್ತಿ ಡಿಸೆಂಬರ್ 22 ರಂದು ಮನೆಯಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಶಾಶ್ವತವಾಗಿ ಕಣ್ಮುಚ್ಚಿದ್ದಾರೆ.

ಇನ್ನು ಕಾರ್ಯಕ್ರಮ ನಡೆಯುವುದಕ್ಕೂ ಮುನ್ನ (ಡಿ. 22 ರಂದು) ಮಧ್ಯಾಹ್ನ 2 ಗಂಟೆಯೊಳಗೆ ಕಾರ್ಯಕ್ರಮಗಳನ್ನು ಮುಗಿಸಿ, ನಾ ಹೋಗಬೇಕಾಗಿದೆ ಎಂದು ಕುಟುಂಬಸ್ಥರ ಬಳಿ ಹೇಳಿದ್ದರಂತೆ. ಅದರಂತೆ ಡಿ. 22 ರಂದು ಮಧ್ಯಾಹ್ನ 2 ಗಂಟೆಯೊಳಗೆ ಚಂದಪ್ಪಜ್ಜ ಸಾವನ್ನಪ್ಪಿದ್ದಾರೆ.

Intro:ಕಲಬುರಗಿ: ಹುಟ್ಟು ಅನಿರೀಕ್ಷಿತ, ಸಾವು ಖಚೀತ ಆದ್ರೆ. ಆದ್ರೂ ಯಾವಾಗ ಎಲ್ಲಿ ಹೇಗೆ ಪ್ರಾಣ ಪಕ್ಷಿ ಹಾರಿಹೊಗುತ್ತೇ ಅಂತಾ ಯಾರಿಗೂ ತಿಳಿಯದು. ಆದ್ರು ಕೆಲವರಿಗೆ ಸಾವು ಸಂಭವಿಸುವ ಕೆಲ ಹೊತ್ತು ಮುಂಚೆ ಗೊತ್ತಾಗುತ್ತದೆ ಅನ್ನೋ ಮಾತಿದೆ. ಅದಕ್ಕೆ ಸಾಕ್ಷಿ ಕಲಬುರಗಿಯಲ್ಲಿ ನಡೆದ ಒಂದು ಅಚ್ಚರಿಯ ಘಟನೆ. Body:ಹೌದು ಕಲಬುರಗಿ ಜಿಲ್ಲೆ ಅಫಜಲಪುರ ತಾಲ್ಲೂಕಿನ ಹಿರೇಜೇವರ್ಗಿ ಗ್ರಾಮದ ನಿವಾಸಿ 95 ವರ್ಷದ ಚಂದಪ್ಪ ಅತನೂರು ಎನ್ನುವ ಅಜ್ಜ ಸತ್ತು ಬದುಕಿ ಅಚ್ಚರಿಸಿ ಮೂಡಿಸಿ ಮತ್ತೇ ಶಾಶ್ವತವಾಗಿ ಕಣ್ಮುಚ್ಚಿದ್ದಾರೆ. ಚಂದಪ್ಪ ಅತನೂರು (95) ಕಲಬುರಗಿ ನಗರದ ಡಬರಾಬಾದ್ ಕಾಲೋನಿಯ ತನ್ನ ಪುತ್ರನ ಮನೆಯಲ್ಲಿ ಇರುತ್ತಾರೆ. ಕಳೆದ ತಿಂಗಳು ನವೆಂಬರ್ 24 ರಂದು ಅಜ್ಜ ಚಂದಪ್ಪ ಸಾವನಪ್ಪುತ್ತಾರೆ. ಅಂತ್ಯಕ್ರಿಯೆ ಮಾಡಲು ಆಂಬ್ಯುಲೆನ್ಸ್‌ನಲ್ಲಿ ಸ್ವಗ್ರಾಮಕ್ಕೆ ಮೃತದೇಹ ಸ್ಥಳಾಂತರ ಮಾಡಿತ್ತಾರೆ. ಮನೆ ಮುಂದೆ ಮೃತದೇಹವಿಟ್ಟು ಸಂಬಂಧಿಕರ ಆಗಮನಕ್ಕಾಗಿ ಕಾಯುವಾಗ ಐದಾರು ಗಂಟೆಗಳ ನಂತ್ರ ಸತ್ತಿದ್ದ ಚಂದಪ್ಪಜ್ಜ ದಿಢೀರ್ ಎಂದು ಉಸಿರಾಡಲು ಪ್ರಾರಂಭಿಸಿದ್ದಾರೆ. ನಂತರ ಬರೋಬ್ಬರಿ 27 ದಿನಗಳ ಕಾಲ ಬದುಕಿದ ಡಿಸೆಂಬರ್ 22 ರಂದು ಮನೆಯಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಶಾಶ್ವತವಾಗಿ ಕಣ್ಮುಚ್ಚಿದ್ದಾರೆ. ಕಾರ್ಯಕ್ರಮ ನಡೆಯುದಕ್ಕೂ ಮುನ್ನ ಡಿ. 22 ರಂದು ಮಧ್ಯಾಹ್ನ 2 ಗಂಟೆಯೊಳಗೆ ಕಾರ್ಯಕ್ರಮಗಳನ್ನ ಮುಗಿಸಿ, ನಾ ಹೋಗಬೇಕಾಗಿದೆ ಅಂತಾ ಕುಟುಂಬಸ್ಥರಿಗೆ ಅರ್ಥವಾಗದ ಹಾಗೆ ಸಾವಿನ ಸುಳಿವು ನೀಡಿ ಅಜ್ಜ ಚಂದಪ್ಪ ತನ್ನ ಪುತ್ರನ ಬಳಿ ಹೇಳಿದ್ದರಂತೆ. ಅದರಂತೆ ಡಿ. 22 ರಂದು ಮಧ್ಯಾಹ್ನ 2 ಗಂಟೆಯೊಳಗೆ ಚಂದಪ್ಪ ಅಜ್ಜ ಸಾವನಪ್ಪಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.