ETV Bharat / state

ಬಜರಂಗದಳ ದೇಶಭಕ್ತ ಸಂಘಟನೆ, ಕಾಂಗ್ರೆಸ್ ಹಿಂದೂ ವಿರೋಧಿ ಮಾನಸಿಕತೆ ಹೊಂದಿದೆ: ಜೋಶಿ

author img

By

Published : May 4, 2023, 10:15 AM IST

ಕಾಂಗ್ರೆಸ್ ಪಕ್ಷ ಹಿಂದೂ ವಿರೋಧಿ ಮಾನಸಿಕತೆ ಹೊಂದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

Congress party has an anti Hindu mentality  Union Minister Prahlad Joshi  Union Minister Prahlad Joshi news  ಕಾಂಗ್ರೆಸ್ ಪಕ್ಷ ಹಿಂದೂ ವಿರೋಧಿ ಮಾನಸಿಕತೆ ಹೊಂದಿದೆ  ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ  ತಮ್ಮ ಅಭ್ಯರ್ಥಿಗಳ ಪ್ರಚಾರ  ಜಿಲ್ಲೆಯಲ್ಲಿ ಚುನಾವಣ ಕಾವು  ಮುಸ್ಲಿಂ ಸಮುದಾಯಕ್ಕೆ ಮತ್ತೆ ಮೀಸಲಾತಿ  ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಗುಡುಗಿದ ಪ್ರಹ್ಲಾದ್ ಜೋಶಿ  ಪ್ರಹ್ಲಾದ್ ಜೋಶಿ ವಾಗ್ದಾಳಿ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ

ಗದಗ: ಜಿಲ್ಲೆಯಲ್ಲಿ ಚುನಾವಣೆಯ ಕಾವು ಜೋರಾಗಿದೆ. ಸಿನಿಮಾ ಕಲಾವಿದರು, ರಾಜಕೀಯ ನಾಯಕರು ತಮ್ಮ ತಮ್ಮ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸಿದ್ದಾರೆ. ಬುಧವಾರ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಮ್ಮ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, "ಕಾಂಗ್ರೆಸ್ ಪಕ್ಷ ಹಿಂದು ವಿರೋಧಿ ಮಾನಸಿಕತೆ ಹೊಂದಿದೆ. ಬಜರಂಗದಳ ನಿಷೇಧ ಮಾಡುವುದು ಕನಸಿನ ಮಾತು. ಮಾಡಿದರೂ ಅದಕ್ಕೆ ಹಿಂದು ಸಂಘಟನೆಗಳು ಉತ್ತರ ಕೊಡಲಿದ್ದಾರೆ" ಎಂದರು.

ಗದಗದಲ್ಲಿ ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಗುಡುಗಿದ ಜೋಶಿ, "ನಮ್ಮ ಹೋರಾಟ ಹಿಂದು ವಿರೋಧಿ ಮಾನಸಿಕತೆ ಬಗ್ಗೆ. ಕಾಶ್ಮೀರದ ಕಲಂ 370 ತೆಗೆದಾಗ, ಸರ್ಜಿಕಲ್ ಸ್ಟ್ರೈಕ್ ಆದಾಗ ಕಾಂಗ್ರೆಸ್ ಮತ್ತು ಪಾಕಿಸ್ತಾನ ಭಾಷೆ ಒಂದೇ ಆಗಿತ್ತು. ಬಾಟ್ಲಾ ಹೌಸ್​ ಪ್ರಕರಣ ನಡೆದಾಗಲೂ ಸಹ ಟೆರರಿಸ್ಟ್​ ಹತ್ಯೆ ಮಾಡಲಾಗಿತ್ತು. ಆಗ ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ ರಾತ್ರಿಪೂರ್ತಿ ಮಲಗಿರಲಿಲ್ಲ. ಮೋಹನ್ ಚಂದ್ರ ಅನ್ನೋ ಪೊಲೀಸ್ ಅಧಿಕಾರಿ ಮೃತಪಟ್ಟಾಗ ಅವರು ಒಂದು ತೊಟ್ಟೂ ಕಣ್ಣೀರು ಹಾಕಲಿಲ್ಲ. ಕಾಂಗ್ರೆಸ್-ಪಾಕಿಸ್ತಾನದ ನಡುವೆ ಹೊಂದಾಣಿಕೆ ಇದೆ ಎಂದು ತಿಳಿಯುತ್ತಿದೆ. ಹಾಗಾಗಿ ಬಜರಂಗದಳ ಮತ್ತು ಪಿಎಫ್ಐಯನ್ನು ಒಂದೇ ರೀತಿ ನೋಡ್ತಿದಾರೆ. ಇದು ದೇಶದ ಹಿಂದೂಗಳಿಗೆ ಮಾಡಿದ ಘನ ಘೋರ ಅಪಮಾನ" ಎಂದು ವಾಗ್ದಾಳಿ ನಡೆಸಿದರು.

"ಮುಸ್ಲಿಂ ಸಮುದಾಯಕ್ಕೆ ಮತ್ತೆ ಮೀಸಲಾತಿ ನೀಡ್ತೀವಿ ಎನ್ನುತ್ತಾರೆ. ಸುಪ್ರೀಂ ಕೋರ್ಟ್ ವಿರುದ್ಧ ಮತ ಬ್ಯಾಂಕ್​ಗಾಗಿ ಕಾಂಗ್ರೆಸ್ ಹೀಗೆ ಮಾಡ್ತಿದೆ. ಬಜರಂಗದಳ ಒಂದು ದೇಶಭಕ್ತ ಸಂಘಟನೆ. ಯಾವುದೇ ದೇಶ ಭಕ್ತ ಸಂಘಟನೆ ಬ್ಯಾನ್ ಮಾಡಿದ್ರೆ, ದೇಶ ಭಕ್ತಿ ಹೊಂದಿರುವ ವ್ಯಕ್ತಿಯನ್ನು ಹರಣ ಮಾಡಲು ಯತ್ನಿಸಿದರೆ ಬಿಜೆಪಿ ವಿರೋಧಿಸುತ್ತದೆ. ಅಕಸ್ಮಾತ್ ಹಿಂದೆ ಪಡೆಯುವುದಾದ್ರೆ ಕ್ಷಮೆ ಕೇಳಿ ಹಿಂಪಡೆಯಲಿ" ಎಂದರು.

"ಬಜರಂಗದಳ ಹನುಮಾನ್ ಹೆಸರಿನಲ್ಲಿ ನಡೆಯುವ ಒಂದು ಸಂಘಟನೆ. ಇದು ದೇಶ ಭಕ್ತಿ ಪಸರಿಸುವ ಸಂಘಟನೆ. ಅಧಿಕಾರದ ಲಾಲಸೆಗಾಗಿ, ತುಷ್ಟೀಕರಣದ ರಾಜನೀತಿಗಾಗಿ ಕಾಂಗ್ರೆಸ್ ದೇಶದಲ್ಲಿರುವ ಹಿಂದೂಗಳಿಗೆ, ಹಿಂದೂ ನಂಬಿಕೆಗಳಿಗೆ ಅಪಮಾನ ಮಾಡಿದ್ದಾರೆ. ಇದನ್ನು ಬಿಜೆಪಿ ಸಹಿಸೋದಿಲ್ಲ" ಎಂದು ತಿಳಿಸಿದರು.

"ಪ್ರಧಾನಮಂತ್ರಿಗಳ ಪ್ರವಾಸದಿಂದ ನಮ್ಮ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ. ರಾಜ್ಯದಲ್ಲಿ ಈ ಬಾರಿ ನಾವು ನಿಚ್ಚಳ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದರಲ್ಲಿ ಎರಡು ಮಾತಿಲ್ಲ" ಎಂದರು. ಹೆಲಿಕಾಪ್ಟರ್ ಮೂಲಕ ಗದಗಿಗೆ ಆಗಮಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕ್ಷೇತ್ರದ ಅಭ್ಯರ್ಥಿ ಪರ ಮತಯಾಚಿಸಿದರು.

ಇದನ್ನೂ ಓದಿ: ದೆಹಲಿಯಲ್ಲಿ ಪ್ರತಿಭಟನಾನಿರತ ಕುಸ್ತಿಪಟುಗಳು-ಪೊಲೀಸರ ಮಧ್ಯೆ ಸಂಘರ್ಷ: ಇಬ್ಬರಿಗೆ ಗಾಯ

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ

ಗದಗ: ಜಿಲ್ಲೆಯಲ್ಲಿ ಚುನಾವಣೆಯ ಕಾವು ಜೋರಾಗಿದೆ. ಸಿನಿಮಾ ಕಲಾವಿದರು, ರಾಜಕೀಯ ನಾಯಕರು ತಮ್ಮ ತಮ್ಮ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸಿದ್ದಾರೆ. ಬುಧವಾರ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಮ್ಮ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, "ಕಾಂಗ್ರೆಸ್ ಪಕ್ಷ ಹಿಂದು ವಿರೋಧಿ ಮಾನಸಿಕತೆ ಹೊಂದಿದೆ. ಬಜರಂಗದಳ ನಿಷೇಧ ಮಾಡುವುದು ಕನಸಿನ ಮಾತು. ಮಾಡಿದರೂ ಅದಕ್ಕೆ ಹಿಂದು ಸಂಘಟನೆಗಳು ಉತ್ತರ ಕೊಡಲಿದ್ದಾರೆ" ಎಂದರು.

ಗದಗದಲ್ಲಿ ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಗುಡುಗಿದ ಜೋಶಿ, "ನಮ್ಮ ಹೋರಾಟ ಹಿಂದು ವಿರೋಧಿ ಮಾನಸಿಕತೆ ಬಗ್ಗೆ. ಕಾಶ್ಮೀರದ ಕಲಂ 370 ತೆಗೆದಾಗ, ಸರ್ಜಿಕಲ್ ಸ್ಟ್ರೈಕ್ ಆದಾಗ ಕಾಂಗ್ರೆಸ್ ಮತ್ತು ಪಾಕಿಸ್ತಾನ ಭಾಷೆ ಒಂದೇ ಆಗಿತ್ತು. ಬಾಟ್ಲಾ ಹೌಸ್​ ಪ್ರಕರಣ ನಡೆದಾಗಲೂ ಸಹ ಟೆರರಿಸ್ಟ್​ ಹತ್ಯೆ ಮಾಡಲಾಗಿತ್ತು. ಆಗ ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ ರಾತ್ರಿಪೂರ್ತಿ ಮಲಗಿರಲಿಲ್ಲ. ಮೋಹನ್ ಚಂದ್ರ ಅನ್ನೋ ಪೊಲೀಸ್ ಅಧಿಕಾರಿ ಮೃತಪಟ್ಟಾಗ ಅವರು ಒಂದು ತೊಟ್ಟೂ ಕಣ್ಣೀರು ಹಾಕಲಿಲ್ಲ. ಕಾಂಗ್ರೆಸ್-ಪಾಕಿಸ್ತಾನದ ನಡುವೆ ಹೊಂದಾಣಿಕೆ ಇದೆ ಎಂದು ತಿಳಿಯುತ್ತಿದೆ. ಹಾಗಾಗಿ ಬಜರಂಗದಳ ಮತ್ತು ಪಿಎಫ್ಐಯನ್ನು ಒಂದೇ ರೀತಿ ನೋಡ್ತಿದಾರೆ. ಇದು ದೇಶದ ಹಿಂದೂಗಳಿಗೆ ಮಾಡಿದ ಘನ ಘೋರ ಅಪಮಾನ" ಎಂದು ವಾಗ್ದಾಳಿ ನಡೆಸಿದರು.

"ಮುಸ್ಲಿಂ ಸಮುದಾಯಕ್ಕೆ ಮತ್ತೆ ಮೀಸಲಾತಿ ನೀಡ್ತೀವಿ ಎನ್ನುತ್ತಾರೆ. ಸುಪ್ರೀಂ ಕೋರ್ಟ್ ವಿರುದ್ಧ ಮತ ಬ್ಯಾಂಕ್​ಗಾಗಿ ಕಾಂಗ್ರೆಸ್ ಹೀಗೆ ಮಾಡ್ತಿದೆ. ಬಜರಂಗದಳ ಒಂದು ದೇಶಭಕ್ತ ಸಂಘಟನೆ. ಯಾವುದೇ ದೇಶ ಭಕ್ತ ಸಂಘಟನೆ ಬ್ಯಾನ್ ಮಾಡಿದ್ರೆ, ದೇಶ ಭಕ್ತಿ ಹೊಂದಿರುವ ವ್ಯಕ್ತಿಯನ್ನು ಹರಣ ಮಾಡಲು ಯತ್ನಿಸಿದರೆ ಬಿಜೆಪಿ ವಿರೋಧಿಸುತ್ತದೆ. ಅಕಸ್ಮಾತ್ ಹಿಂದೆ ಪಡೆಯುವುದಾದ್ರೆ ಕ್ಷಮೆ ಕೇಳಿ ಹಿಂಪಡೆಯಲಿ" ಎಂದರು.

"ಬಜರಂಗದಳ ಹನುಮಾನ್ ಹೆಸರಿನಲ್ಲಿ ನಡೆಯುವ ಒಂದು ಸಂಘಟನೆ. ಇದು ದೇಶ ಭಕ್ತಿ ಪಸರಿಸುವ ಸಂಘಟನೆ. ಅಧಿಕಾರದ ಲಾಲಸೆಗಾಗಿ, ತುಷ್ಟೀಕರಣದ ರಾಜನೀತಿಗಾಗಿ ಕಾಂಗ್ರೆಸ್ ದೇಶದಲ್ಲಿರುವ ಹಿಂದೂಗಳಿಗೆ, ಹಿಂದೂ ನಂಬಿಕೆಗಳಿಗೆ ಅಪಮಾನ ಮಾಡಿದ್ದಾರೆ. ಇದನ್ನು ಬಿಜೆಪಿ ಸಹಿಸೋದಿಲ್ಲ" ಎಂದು ತಿಳಿಸಿದರು.

"ಪ್ರಧಾನಮಂತ್ರಿಗಳ ಪ್ರವಾಸದಿಂದ ನಮ್ಮ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ. ರಾಜ್ಯದಲ್ಲಿ ಈ ಬಾರಿ ನಾವು ನಿಚ್ಚಳ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದರಲ್ಲಿ ಎರಡು ಮಾತಿಲ್ಲ" ಎಂದರು. ಹೆಲಿಕಾಪ್ಟರ್ ಮೂಲಕ ಗದಗಿಗೆ ಆಗಮಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕ್ಷೇತ್ರದ ಅಭ್ಯರ್ಥಿ ಪರ ಮತಯಾಚಿಸಿದರು.

ಇದನ್ನೂ ಓದಿ: ದೆಹಲಿಯಲ್ಲಿ ಪ್ರತಿಭಟನಾನಿರತ ಕುಸ್ತಿಪಟುಗಳು-ಪೊಲೀಸರ ಮಧ್ಯೆ ಸಂಘರ್ಷ: ಇಬ್ಬರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.