ETV Bharat / state

ಆಡಿಯೋ ಪ್ರಕರಣ: ನವೆಂಬರ್ 28 ರವರೆಗೆ ಬಿಎಸ್​​ವೈಗೆ ರಿಲೀಫ್ ನೀಡಿದ ಕಲಬುರಗಿ ಹೈಕೋರ್ಟ್

author img

By

Published : Nov 7, 2019, 4:00 PM IST

ಆಪರೇಷನ್ ಕಮಲ ಆಡಿಯೋ ಪ್ರಕರಣದಲ್ಲಿ ಸಿಎಂ ಯಡಿಯೂರಪ್ಪ ಅವರಿಗೆ ಕಲಬುರಗಿ ಹೈಕೋರ್ಟ್ ನವೆಂಬರ್ 28 ರವರೆಗೆ ರಿಲೀಫ್ ನೀಡಿದೆ.

ಸಿಎಂ ಗೆ ನವೆಂಬರ್ 28 ರವರೆಗೆ ರಿಲೀಫ್ ನೀಡಿದ ಕಲಬುರಗಿ ಹೈಕೋರ್ಟ್

ಕಲಬುರಗಿ: ಆಪರೇಷನ್ ಕಮಲ ಆಡಿಯೋ ಪ್ರಕರಣದಲ್ಲಿ ಸಿಎಂ ಯಡಿಯೂರಪ್ಪ ಅವರಿಗೆ ಕಲಬುರಗಿ ಹೈಕೋರ್ಟ್ ನವೆಂಬರ್ 28 ರವರೆಗೆ ರಿಲೀಫ್ ನೀಡಿದೆ.

ಪ್ರಕರಣದ ತನಿಖೆಗೆ ನೀಡಿದ್ದ ತೆಡೆಯಾಜ್ಞೆ ತೆರವುಗೊಳಿಸುವಂತೆ ಶರಣಗೌಡ ಕಂದಕೂರ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ನ್ಯಾಯಮೂರ್ತಿ ಮಹ್ಮದ್ ನವಾಜ್ ಅವರನ್ನೊಳಗೊಂಡ ಏಕ ಸದಸ್ಯ ಪೀಠವು ವಿಚಾರಣೆಯನ್ನು ನವೆಂಬರ್ 28 ಕ್ಕೆ ಮುಂದೂಡಿದೆ.

ಯಡಿಯೂರಪ್ಪ ಪರವಾಗಿ ಹಿರಿಯ ವಕೀಲ ಸಿ.ವಿ.ನಾಗೇಶ್ ಹಾಜರಾಗಿದ್ದರು. ಆದರೆ ಶರಣಗೌಡ ಪರ ವಕೀಲ ರವಿವರ್ಮ ಕುಮಾರ್ ಗೈರಾಗಿದ್ದ ಕಾರಣ ಮುಂದೂಡಲಾಗಿದೆ. ಈಗಾಗಲೇ ರವಿವರ್ಮ ಕುಮಾರ್ ವಾದ ಮಂಡಿಸಿದ್ದಾರೆ. ಶರಣಗೌಡ ಕಂದಕೂರ ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಪುತ್ರನಾಗಿದ್ದು, ದೇವದುರ್ಗ ಠಾಣೆಯಲ್ಲಿ ಆಪರೇಶನ್ ಕಮಲದ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ತನಿಖೆಗೆ ಕಲಬುರ್ಗಿ ಹೈಕೋರ್ಟ್ ಪೀಠ ತಡೆಯಾಜ್ಞೆ ನೀಡಿತ್ತು. ತಡೆಯಾಜ್ಞೆ ತೆರವು ಕೋರಿ ಸಲ್ಲಿಸಿರೋ ಅರ್ಜಿ ವಿಚಾರಣೆಯನ್ನು ಇದೀಗ ಮುಂದೂಡಲಾಗಿದೆ.

ಕಲಬುರಗಿ: ಆಪರೇಷನ್ ಕಮಲ ಆಡಿಯೋ ಪ್ರಕರಣದಲ್ಲಿ ಸಿಎಂ ಯಡಿಯೂರಪ್ಪ ಅವರಿಗೆ ಕಲಬುರಗಿ ಹೈಕೋರ್ಟ್ ನವೆಂಬರ್ 28 ರವರೆಗೆ ರಿಲೀಫ್ ನೀಡಿದೆ.

ಪ್ರಕರಣದ ತನಿಖೆಗೆ ನೀಡಿದ್ದ ತೆಡೆಯಾಜ್ಞೆ ತೆರವುಗೊಳಿಸುವಂತೆ ಶರಣಗೌಡ ಕಂದಕೂರ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ನ್ಯಾಯಮೂರ್ತಿ ಮಹ್ಮದ್ ನವಾಜ್ ಅವರನ್ನೊಳಗೊಂಡ ಏಕ ಸದಸ್ಯ ಪೀಠವು ವಿಚಾರಣೆಯನ್ನು ನವೆಂಬರ್ 28 ಕ್ಕೆ ಮುಂದೂಡಿದೆ.

ಯಡಿಯೂರಪ್ಪ ಪರವಾಗಿ ಹಿರಿಯ ವಕೀಲ ಸಿ.ವಿ.ನಾಗೇಶ್ ಹಾಜರಾಗಿದ್ದರು. ಆದರೆ ಶರಣಗೌಡ ಪರ ವಕೀಲ ರವಿವರ್ಮ ಕುಮಾರ್ ಗೈರಾಗಿದ್ದ ಕಾರಣ ಮುಂದೂಡಲಾಗಿದೆ. ಈಗಾಗಲೇ ರವಿವರ್ಮ ಕುಮಾರ್ ವಾದ ಮಂಡಿಸಿದ್ದಾರೆ. ಶರಣಗೌಡ ಕಂದಕೂರ ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಪುತ್ರನಾಗಿದ್ದು, ದೇವದುರ್ಗ ಠಾಣೆಯಲ್ಲಿ ಆಪರೇಶನ್ ಕಮಲದ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ತನಿಖೆಗೆ ಕಲಬುರ್ಗಿ ಹೈಕೋರ್ಟ್ ಪೀಠ ತಡೆಯಾಜ್ಞೆ ನೀಡಿತ್ತು. ತಡೆಯಾಜ್ಞೆ ತೆರವು ಕೋರಿ ಸಲ್ಲಿಸಿರೋ ಅರ್ಜಿ ವಿಚಾರಣೆಯನ್ನು ಇದೀಗ ಮುಂದೂಡಲಾಗಿದೆ.

Intro:ಕಲಬುರಗಿ: ಅಪರೇಷನ್ ಕಮಲ ಆಡಿಯೋ ಪ್ರಕರಣದಲ್ಲಿ ಸಿಎಂ ಯಡಿಯೂರಪ್ಪ ಅವರಿಗೆ ಕಲಬುರಗಿ ಹೈಕೊರ್ಟ್ ನೆ. 28 ರವರೆಗೆ ರಿಲೀಫ ನೀಡಿದೆ.
Body:ಪ್ರಕರಣದ ತನಿಖೆಗೆ ನೀಡಿದ್ದ ತೆಡೆಯಾಜ್ಞೆ ತೆರವುಗೊಳಿಸುವಂತೆ ಶರಣಗೌಡ ಕಂದಕೂರ ಸಲ್ಲಿಸಿದ್ದ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ಕಲಬುರ್ಗಿ ಹೈಕೋರ್ಟ್ ಪೀಠದ ನ್ಯಾಯಮೂರ್ತಿ ಮಹ್ಮದ್ ನವಾಜ್ ಅವರನ್ನೊಳಗೊಂಡ ಏಕ ಸದಸ್ಯ ಪೀಠದ ವಿಚಾರಣೆ ನವೆಂಬರ್ 28 ಕ್ಕೆ ಮುಂದೂಡಿದ್ದಾರೆ.

ಯಡಿಯೂರಪ್ಪ ಪರವಾಗಿ ಹಿರಿಯ ವಕೀಲ ಸಿ.ವಿ.ನಾಗೇಶ್ ಹಾಜರಾಗಿದ್ದರು. ಆದರೆ ಶರಣಗೌಡ ಪರ ವಕೀಲ ರವಿವರ್ಮ ಕುಮಾರ್ ಗೈರು ಆದ ಕಾರಣ ಮುಂದುಡಲಾಗಿದೆ. ಈಗಾಗಲೇ ರವಿವರ್ಮ ಕುಮಾರ್ ವಾದ ಮಂಡಿಸಿದ್ದಾರೆ. ಶರಣಗೌಡ ಕಂದಕೂರ ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಪುತ್ರನಾಗಿದ್ದು, ದೇವದುರ್ಗ ಠಾಣೆಯಲ್ಲಿ ಆಫರೇಶನ್ ಕಮಲದ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ. ಪ್ರರಣದ ತನಿಖೆಗೆ ಕಲುಬುರ್ಗಿ ಹೈಕೋರ್ಟ್ ಪೀಠ ತಡೆಯಾಜ್ಞೆ ನೀಡಿತ್ತು. ತಡೆಯಾಜ್ಞೆ ತೆರವು ಕೋರಿ ಸಲ್ಲಿಸಿರೋ ಅರ್ಜಿ ವಿಚಾರಣೆ ಮುಂದುಡಲಾಗಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.