ಶೂಟ್ ಮಾಡೋದಾದರೆ ಮಾಡಿ.. ನಾವೂ ನಿಮಗೆ ಶೂಟ್ ಮಾಡ್ತೇವೆ: ಪ್ರಿಯಾಂಕ್ಗೆ ಬಿಜೆಪಿ ಮುಖಂಡನ ಎಚ್ಚರಿಕೆ - ಬಿಜೆಪಿಯವರಿಗೆ ಓಡಾಡಲು ಬಿಡುವುದಿಲ್ಲ ಎಂದ ಪ್ರಿಯಾಂಕ್
ಕಲಬುರಗಿ ಜಿಲ್ಲೆಯಲ್ಲಿ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಮತ್ತು ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ನಡುವೆ ಮಾತಿನ ಸಮರ ನಡೆದಿದೆ.
![ಶೂಟ್ ಮಾಡೋದಾದರೆ ಮಾಡಿ.. ನಾವೂ ನಿಮಗೆ ಶೂಟ್ ಮಾಡ್ತೇವೆ: ಪ್ರಿಯಾಂಕ್ಗೆ ಬಿಜೆಪಿ ಮುಖಂಡನ ಎಚ್ಚರಿಕೆ bjp-leader-manikanta-rathod-warning-to-mla-priyank-kharge-in-kalaburagi](https://etvbharatimages.akamaized.net/etvbharat/prod-images/768-512-16908453-thumbnail-3x2-ran.jpg?imwidth=3840)
ಕಲಬುರಗಿ: ಜಿಲ್ಲಾ ರಾಜಕಾರಣದಲ್ಲಿ ಗನ್ ಹಿಡಿದು ಶೂಟ್ ಮಾಡುವ ಮಾತಿನ ಮಟ್ಟಿನ ರಾಜಕಾರಣ ನಡೆದಿದೆ. ಬಿಜೆಪಿಯವರಿಗೆ ಓಡಾಡಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದು, ಇದಕ್ಕೆ ಪ್ರತಿಯಾಗಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್, ನೀವು ಎಕೆ 47ನಿಂದ ಶೂಟ್ ಮಾಡಿದರೂ ನಾವು ಸಾಯಲು ಸಿದ್ಧ ಮತ್ತು ಶೂಟ್ ಮಾಡಲೂ ಸಿದ್ಧ ಎಂದು ಹೇಳಿದ್ದಾರೆ.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಪ್ರಿಯಾಂಕ್ ಖರ್ಗೆ, ನಿಮಗೆ (ಬಿಜೆಪಿಯವರಿಗೆ) ನಿಜವಾಗಿ ರಾಜಕೀಯ ಮಾಡಬೇಕೆಂದರೇ, ನಿಮಗಿಂತ ನೂರು ಪಟ್ಟು ರಾಜಕೀಯ ಮಾಡುವ ಅನುಭವ ನಮಗೂ ಇದೆ. ನೀವು (ಬಿಜೆಪಿಯವರು) ಹೇಗೆಲ್ಲ ಮಾಡಿದರೆ, ಜಿಲ್ಲೆಯಲ್ಲಿ ಕಾಂಗ್ರೆಸ್ನವರು ಸತ್ತೋಗಿಲ್ಲ. ನಾವು ಮನಸ್ಸು ಮಾಡಿದರೆ ಬಿಜೆಪಿ ನಾಯಕರಿಗೆ ಓಡಾಡಲು ಬಿಡೋದಿಲ್ಲ ಎಂದು ಹೇಳಿದ್ದರು.
ಇದಕ್ಕೆ ಪ್ರತ್ಯುತ್ತರವಾಗಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮಾತನಾಡಿ, ನಾವು ನಮ್ಮ ಎಲ್ಲ ಸಮಾಜಕ್ಕೆ ಸೇನೆಯಂತೆ ನಿಂತಿದ್ದೇವೆ. ನೀವು ನಮ್ಮನ್ನು ಎಕೆ 47ನಿಂದ ಶೂಟ್ ಮಾಡೋದಿದೆಯೋ, ತೋಪ್ನಿಂದ ಶೂಟ್ ಮಾಡೋದಿದೆಯೋ ಮಾಡ್ರಿ ಸಾಯಲು ಸಿದ್ಧರಿದ್ದೇವೆ. ನಾವು ನಿಮಗೂ ಶೂಟ್ ಮಾಡುಲು ತಯಾರಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ನಾಪತ್ತೆ ಪೋಸ್ಟರ್ ಅಳವಡಿಕೆ : ಕೆರಳಿದ ಅಭಿಮಾನಿಗಳಿಂದ ಪ್ರತಿಭಟನೆ