ETV Bharat / state

ಕೊಳೆಯುತ್ತಿರುವ ಬಾಳೆ: ಕಣ್ಣೀರು ಹಾಕುತ್ತಿರುವ ಅನ್ನದಾತ

author img

By

Published : Jan 21, 2022, 12:30 PM IST

ಕಲಬುರಗಿ ತಾಲೂಕಿನ ಪಾಳಾ ಗ್ರಾಮದ ರೈತ ಚಂದ್ರಯ್ಯ ಎಂಬುವರು 6 ಎಕರೆ ಜಾಗದಲ್ಲಿ ಬಾಳೆ ಬೆಳೆದು ಕೈ ಸುಟ್ಟುಕೊಂಡಿದ್ದಾರೆ. ಅಂದಾಜು ಮೂರು ಲಕ್ಷ ರೂ. ಸಾಲ ಮಾಡಿ ಬೆಳೆ ಬೆಳೆದಿದ್ದು, ಸೂಕ್ತ ಬೆಲೆ ಇಲ್ಲದೇ ಕಂಗಾಲಾಗಿದ್ದಾರೆ.

banana
ಗಿಡದಲ್ಲೇ ಕೊಳೆಯುತ್ತಿರುವ ಬಾಳೆ ಬೆಳೆ

ಕಲಬುರಗಿ: ಬಾಳೆ ಬೆಳೆದರೆ ಬಾಳು ಬಂಗಾರವಾಗುತ್ತದೆ ಎಂದುಕೊಂಡು ಬೆಳೆ ಬೆಳೆದ ರೈತನೊಬ್ಬ ಇದೀಗ ಕಣ್ಣೀರು ಹಾಕುತ್ತಿದ್ದು, ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಕಲಬುರಗಿ ತಾಲೂಕಿನ ಪಾಳಾ ಗ್ರಾಮದ ರೈತ ಚಂದ್ರಯ್ಯ ಎಂಬುವರು 6 ಎಕರೆ ಜಾಗದಲ್ಲಿ ಬಾಳೆ ಬೆಳೆದು ಕೈ ಸುಟ್ಟುಕೊಂಡಿದ್ದಾರೆ. ಅಂದಾಜು ಮೂರು ಲಕ್ಷ ರೂ. ಸಾಲ ಮಾಡಿ ಬೆಳೆ ಬೆಳೆದಿದ್ದು, ಸೂಕ್ತ ಬೆಲೆ ಇಲ್ಲದೇ ಕಂಗಾಲಾಗಿದ್ದಾರೆ.

ಕೆಲವರು ತೋಟಕ್ಕೆ ಬಂದು ಖರೀದಿಸಲು ಮುಂದಾದರೂ ಅತಿ ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ಡಜನ್​ಗೆ ಕೇವಲ ಮೂರು ರೂಪಾಯಿಯಂತೆ ಮಾರಾಟ ಮಾಡುತ್ತಿದ್ದೇನೆ. ಏಜಂಟ್​ರಿಗೆ ಹೇಳಿದರೂ ಖರೀದಿಗೆ ಬರುತ್ತಿಲ್ಲ. ಜಿಲ್ಲೆಯಲ್ಲಿ ಬಹುತೇಕರಿಗೆ ಜ್ವರ, ನೆಗಡಿ, ಗಂಟಲು ನೋವು ಕಂಡು ಬಂದಿರುವುದರಿಂದ ಯಾರೂ ಬಾಳೆ ಕೇಳದಂತಾಗಿದೆ. ಬಹುತೇಕ ಬೆಳೆ ತೋಟದಲ್ಲೇ ಕೊಳೆಯುತ್ತಿದೆ ಎಂದು ರೈತ ಅಳಲು ತೋಡಿಕೊಂಡಿದ್ದಾರೆ.

ಗಿಡದಲ್ಲೇ ಕೊಳೆಯುತ್ತಿರುವ ಬಾಳೆ ಬೆಳೆ

ಕೊರೊನಾ ಮಹಾಮಾರಿ, ವೀಕೆಂಡ್​ ಕರ್ಫ್ಯೂ ಯಿಂದ ಅನ್ನದಾತರು ಸಂಕಷ್ಟ ಅನುಭವಿಸುತ್ತಿದ್ದು, ಸರ್ಕಾರ ಇತ್ತ ಗಮನಹರಿಸಿ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಜಾಹಿರಾತು:-ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಕಲಬುರಗಿ: ಬಾಳೆ ಬೆಳೆದರೆ ಬಾಳು ಬಂಗಾರವಾಗುತ್ತದೆ ಎಂದುಕೊಂಡು ಬೆಳೆ ಬೆಳೆದ ರೈತನೊಬ್ಬ ಇದೀಗ ಕಣ್ಣೀರು ಹಾಕುತ್ತಿದ್ದು, ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಕಲಬುರಗಿ ತಾಲೂಕಿನ ಪಾಳಾ ಗ್ರಾಮದ ರೈತ ಚಂದ್ರಯ್ಯ ಎಂಬುವರು 6 ಎಕರೆ ಜಾಗದಲ್ಲಿ ಬಾಳೆ ಬೆಳೆದು ಕೈ ಸುಟ್ಟುಕೊಂಡಿದ್ದಾರೆ. ಅಂದಾಜು ಮೂರು ಲಕ್ಷ ರೂ. ಸಾಲ ಮಾಡಿ ಬೆಳೆ ಬೆಳೆದಿದ್ದು, ಸೂಕ್ತ ಬೆಲೆ ಇಲ್ಲದೇ ಕಂಗಾಲಾಗಿದ್ದಾರೆ.

ಕೆಲವರು ತೋಟಕ್ಕೆ ಬಂದು ಖರೀದಿಸಲು ಮುಂದಾದರೂ ಅತಿ ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ಡಜನ್​ಗೆ ಕೇವಲ ಮೂರು ರೂಪಾಯಿಯಂತೆ ಮಾರಾಟ ಮಾಡುತ್ತಿದ್ದೇನೆ. ಏಜಂಟ್​ರಿಗೆ ಹೇಳಿದರೂ ಖರೀದಿಗೆ ಬರುತ್ತಿಲ್ಲ. ಜಿಲ್ಲೆಯಲ್ಲಿ ಬಹುತೇಕರಿಗೆ ಜ್ವರ, ನೆಗಡಿ, ಗಂಟಲು ನೋವು ಕಂಡು ಬಂದಿರುವುದರಿಂದ ಯಾರೂ ಬಾಳೆ ಕೇಳದಂತಾಗಿದೆ. ಬಹುತೇಕ ಬೆಳೆ ತೋಟದಲ್ಲೇ ಕೊಳೆಯುತ್ತಿದೆ ಎಂದು ರೈತ ಅಳಲು ತೋಡಿಕೊಂಡಿದ್ದಾರೆ.

ಗಿಡದಲ್ಲೇ ಕೊಳೆಯುತ್ತಿರುವ ಬಾಳೆ ಬೆಳೆ

ಕೊರೊನಾ ಮಹಾಮಾರಿ, ವೀಕೆಂಡ್​ ಕರ್ಫ್ಯೂ ಯಿಂದ ಅನ್ನದಾತರು ಸಂಕಷ್ಟ ಅನುಭವಿಸುತ್ತಿದ್ದು, ಸರ್ಕಾರ ಇತ್ತ ಗಮನಹರಿಸಿ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಜಾಹಿರಾತು:-ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.