ETV Bharat / state

ಆನೆ ನಡೆಯುವಾಗ ನಾಯಿ ಬೊಗಳಿದಂತಿದೆ ಗುತ್ತೇದಾರ್ ವರ್ತನೆ: ಅರುಣ್​ ಪಾಟೀಲ್

ಖರ್ಗೆಯಂತಹ ಹಿರಿಯ ನಾಯಕರಿಗೆ ಜೀವ ಬೆದರಿಕೆ ಹಾಕುವವರು ಇದ್ದಾರೆ ಎಂದರೆ ನನಗೆ ನಂಬಲಾಗುತ್ತಿಲ್ಲ. ಎಸ್ಕಾರ್ಟ್​ಗಾಗಿ ಈ ರೀತಿ ನಾಟಕ ಮಾಡುತ್ತಿರಬಹುದು ಎಂದು ಹೇಳಿಕೆ ಕೊಟ್ಟಿದ್ದ ಮಾಲೀಕಯ್ಯ ಗುತ್ತೇದಾರ ವಿರುದ್ಧ ಕೈ ಮುಖಂಡರೊಬ್ಬರು ವಾಗ್ದಾಳಿ ನಡೆಸಿದ್ದಾರೆ.

author img

By

Published : Jun 12, 2020, 2:06 AM IST

Arun Patil reaction about Malikaiah Guttedar statement
ಜಿಲ್ಲಾ ಪಂಚಾಯಿತಿ ಸದಸ್ಯ ಅರುಣ್​ ಪಾಟೀಲ್

ಕಲಬುರಗಿ: ಕಾಂಗ್ರೆಸ್​ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಕುರಿತಂತೆ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಹೇಳಿಕೆಗೆ ಜಿಲ್ಲಾ ಪಂಚಾಯತಿ ಸದಸ್ಯ ಅರುಣ್​ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಖರ್ಗೆ ಎಸ್ಕಾರ್ಟ್​​ಗಾಗಿ ಕೊಲೆ ಬೆದರಿಕೆ ಆರೋಪ ಮಾಡಿರಬಹುದು.. ಮಾಲೀಕಯ್ಯ ಗುತ್ತೇದಾರ್‌ ವ್ಯಂಗ್ಯ

ಎಸ್ಕಾರ್ಟ್​ಗಾಗಿ ಬೆದರಿಕೆ ಕರೆ ಬಂದಿದೆ ಎಂದು ಕಾಂಗ್ರೆಸ್​ ಹಿರಿಯ ಮುಖಂಡ ಮಲ್ಲಿಕಾರ್ಜುನ್​ ಖರ್ಗೆ ಅವರು ನಾಟಕ ಮಾಡುತ್ತಿದ್ದಾರೆ ಎಂಬ ಮಾಲೀಕಯ್ಯ ಗುತ್ತೇದಾರ ಆರೋಪದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಜಿ.ಪಂ ಸದಸ್ಯ ಅರುಣ್​ ಪಾಟೀಲ್, ಆನೆ ನಡೆಯುವಾಗ ನಾಯಿ ಬೊಗಳಿದ ಹಾಗೆ ಗುತ್ತೇದಾರ್ ಅವರು ವರ್ತಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಸದಸ್ಯ ಅರುಣ್​ ಪಾಟೀಲ್

ಕಲಬುರಗಿಯಲ್ಲಿ ಮಾತನಾಡಿದ ಅವರು, ಆನೆ ನಡೆಯುವಾಗ ನಾಯಿಗಳು ಬೊಗಳಿದರೆ ಏನೂ ಆಗಲ್ಲ. ಮಾಲೀಕಯ್ಯ ಗುತ್ತೇದಾರ್,​​ ಖರ್ಗೆ ಅವರ ಬಗ್ಗೆ ಬೇಕಾಬಿಟ್ಟಿ ಹೇಳಿಕೆ ಕೊಡುತ್ತಿದ್ದಾರೆ. ಮಾಲೀಕಯ್ಯಗೆ ರಾಜಕೀಯ ಜನ್ಮ ಕೊಟ್ಟವರೆ ಮಲ್ಲಿಕಾರ್ಜುನ ಖರ್ಗೆ ಅನ್ನೋದನ್ನ ಅವರು ಮರೆಯಬಾರದು. ಗುತ್ತೇದಾರ್​ ಅವರು ಇದೇ ರೀತಿ ವರ್ತಿಸಿದರೆ ಜನರು ಹುಚ್ಚು ನಾಯಿಗೆ ಹೊಡೆದಂತೆ ಹೊಡೆಯುತ್ತಾರೆ ಎಂದು ಪಾಟೀಲ ಎಚ್ಚರಿಕೆ ನೀಡಿದ್ದಾರೆ.

ಕಲಬುರಗಿ: ಕಾಂಗ್ರೆಸ್​ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಕುರಿತಂತೆ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಹೇಳಿಕೆಗೆ ಜಿಲ್ಲಾ ಪಂಚಾಯತಿ ಸದಸ್ಯ ಅರುಣ್​ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಖರ್ಗೆ ಎಸ್ಕಾರ್ಟ್​​ಗಾಗಿ ಕೊಲೆ ಬೆದರಿಕೆ ಆರೋಪ ಮಾಡಿರಬಹುದು.. ಮಾಲೀಕಯ್ಯ ಗುತ್ತೇದಾರ್‌ ವ್ಯಂಗ್ಯ

ಎಸ್ಕಾರ್ಟ್​ಗಾಗಿ ಬೆದರಿಕೆ ಕರೆ ಬಂದಿದೆ ಎಂದು ಕಾಂಗ್ರೆಸ್​ ಹಿರಿಯ ಮುಖಂಡ ಮಲ್ಲಿಕಾರ್ಜುನ್​ ಖರ್ಗೆ ಅವರು ನಾಟಕ ಮಾಡುತ್ತಿದ್ದಾರೆ ಎಂಬ ಮಾಲೀಕಯ್ಯ ಗುತ್ತೇದಾರ ಆರೋಪದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಜಿ.ಪಂ ಸದಸ್ಯ ಅರುಣ್​ ಪಾಟೀಲ್, ಆನೆ ನಡೆಯುವಾಗ ನಾಯಿ ಬೊಗಳಿದ ಹಾಗೆ ಗುತ್ತೇದಾರ್ ಅವರು ವರ್ತಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಸದಸ್ಯ ಅರುಣ್​ ಪಾಟೀಲ್

ಕಲಬುರಗಿಯಲ್ಲಿ ಮಾತನಾಡಿದ ಅವರು, ಆನೆ ನಡೆಯುವಾಗ ನಾಯಿಗಳು ಬೊಗಳಿದರೆ ಏನೂ ಆಗಲ್ಲ. ಮಾಲೀಕಯ್ಯ ಗುತ್ತೇದಾರ್,​​ ಖರ್ಗೆ ಅವರ ಬಗ್ಗೆ ಬೇಕಾಬಿಟ್ಟಿ ಹೇಳಿಕೆ ಕೊಡುತ್ತಿದ್ದಾರೆ. ಮಾಲೀಕಯ್ಯಗೆ ರಾಜಕೀಯ ಜನ್ಮ ಕೊಟ್ಟವರೆ ಮಲ್ಲಿಕಾರ್ಜುನ ಖರ್ಗೆ ಅನ್ನೋದನ್ನ ಅವರು ಮರೆಯಬಾರದು. ಗುತ್ತೇದಾರ್​ ಅವರು ಇದೇ ರೀತಿ ವರ್ತಿಸಿದರೆ ಜನರು ಹುಚ್ಚು ನಾಯಿಗೆ ಹೊಡೆದಂತೆ ಹೊಡೆಯುತ್ತಾರೆ ಎಂದು ಪಾಟೀಲ ಎಚ್ಚರಿಕೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.