ETV Bharat / state

ಪೊಲೀಸರ ಸಮ್ಮುಖದಲ್ಲೇ ಮದುವೆಯಾದ ಭೂಪ, ಬಳಿಕ ಎಸ್ಕೇಪ್​​: ಠಾಣೆ ಮೆಟ್ಟಿಲೇರಿದ ಯುವತಿ

author img

By

Published : Sep 22, 2019, 7:47 PM IST

Updated : Sep 22, 2019, 8:20 PM IST

ಯುವತಿಯನ್ನು ಪೊಲೀಸರ ಸಮ್ಮುಖದಲ್ಲೇ ಮದುವೆಯಾದ ವಿಶಾಲ್​ ಎಂಬ ವ್ಯಕ್ತಿ, ಬಳಿಕ ಆಕೆಗೆ ಮನೆ ನೋಡಿಕೊಂಡು ಬರೋದಾಗಿ ಹೇಳಿ ಎಸ್ಕೇಪ್​ ಆದ ಘಟನೆ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆದಿದೆ.

ವಿಶಾಲ್​ ಮತ್ತು ಶಿಲ್ಪ

ಕಲಬುರಗಿ: ಮದುವೆಯಾಗೋದಾಗಿ ಯುವತಿಯನ್ನು ನಂಬಿಸಿ, ಅತ್ಯಾಚಾರ ಎಸಗಿ, ಬಳಿಕ ಗರ್ಭಪಾತ ಮಾಡಿಸಿ, ಕೊನೆಗೆ ಪೊಲೀಸರ ಸಮ್ಮುಖದಲ್ಲಿ ಆಕೆಯನ್ನು ಮದುವೆಯಾದ ವ್ಯಕ್ತಿಯೊಬ್ಬ, ಇದೀಗ ಎಸ್ಕೇಪ್ ಆಗಿದ್ದಾನೆ. ಈಗ ಯುವತಿ ತನ್ನ ಗಂಡನನ್ನು ಹುಡುಕಿಕೊಡಿ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಈ ಘಟನೆ ಕಲಬುರಗಿಯ ವಾಡಿ ಪಟ್ಟಣದಲ್ಲಿ ನಡೆದಿದೆ.

ಹೀಗೆ ಯುವತಿಗೆ ಮೋಸ ಮಾಡಿದ ಯುವಕನನ್ನು ವಿಶಾಲ ಚವ್ಹಾಣ ಎಂದು ಗುರುತಿಸಲಾಗಿದೆ. ಮೋಸ ಹೋದ ಹುಡುಗಿಯನ್ನು ರಾಧಾ(ಹೆಸರು ಬದಲಿಸಲಾಗಿದೆ) ಎಂದು ಗುರುತಿಸಲಾಗಿದೆ. ಇಬ್ಬರೂ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣಕ್ಕೆ ಸೇರಿದವರು. ಉನ್ನತ ವ್ಯಾಸಾಂಗಕ್ಕೆಂದು ತೆರಳಿದ್ದ ವಿಶಾಲ್ ಮತ್ತು ಯುವತಿ ನಡುವೆ ಬೆಂಗಳೂರಿನಲ್ಲಿ ಪ್ರೇಮಾಂಕುರವಾಗಿದೆ. ಮದುವೆಯಾಗೋದಾಗಿ ನಂಬಿಸಿದ ವಿಶಾಲ್, ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಎರಡು ಬಾರಿ ಗರ್ಭ ಧರಿಸಿದ ಸಂದರ್ಭದಲ್ಲಿ ಟ್ಯಾಬ್ಲೆಟ್ ನೀಡಿ ಗರ್ಭಪಾತ ಮಾಡಿಸಿದ್ದಾನೆ. ಇನ್ನೇನು ಆತ ಕೈ ಕೊಡುತ್ತಿದ್ದಾನೆ ಎಂಬ ಅನುಮಾನದಿಂದ ಪೊಲೀಸ್ ಠಾಣೆ ಮೆಟ್ಟಿಲೇರಿದಾಗ, ವಾಡಿ ಪೊಲೀಸರು ವಿಶಾಲ್ ಹಾಗೂ ಯುವತಿಯ ಮದುವೆ ಮಾಡಿಸಿದ್ದಾರೆ.

ಪೊಲೀಸರ ಸಮ್ಮುಖದಲ್ಲೇ ಮದುವೆಯಾದ ಭೂಪ, ಬಳಿಕ ಎಸ್ಕೇಪ್

ಮದುವೆಯಾದ ಕೂಡಲೇ ಮನೆ ನೋಡಿಕೊಂಡು ಬರೋದಾಗಿ ಎಸ್ಕೇಪ್ ಆದ ವಿಶಾಲ್ ಮತ್ತೆ ರಾಧಾಗೆ ಸಿಕ್ಕಿಲ್ಲ. ಮತ್ತೊಂದೆಡೆ ವಿಶಾಲ್ ಪೋಷಕರು ಶಿಲ್ಪ ಮತ್ತು ಅವರ ಪೋಷಕರಿಗೆ ಧಮ್ಕಿ ಹಾಕಿ, ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ತನ್ನ ಗಂಡನನ್ನು ಹುಡುಕಿಕೊಡುವಂತೆ ಯುವತಿ ಮತ್ತೊಮ್ಮೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಈ ಸಂಬಂಧ ವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡೋ ಜೊತೆಗೆ, ಈಶಾನ್ಯ ವಲಯ ಐಜಿಪಿ ಅವರಿಗೂ ಯುವತಿ ಮನವಿ ಸಲ್ಲಿಸಿದ್ದಾಳೆ. ಈ ಕುರಿತು ಪ್ರತಿಕ್ರಿಯಿಸಿರುವ ಎಸ್​​​ಪಿ ವಿನಾಯಕ ಪಾಟೀಲ, ಯುವತಿ ದೂರು ನೀಡಿದ್ದಾಳೆ. ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ. ಯುವಕನ ಪೋಷಕರು ಕಿರುಕುಳ ನೀಡುತ್ತಿರುವುದರ ಬಗ್ಗೆ ದೂರು ನೀಡಿದಲ್ಲಿ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಸ್​​​ಪಿ ತಿಳಿಸಿದ್ದಾರೆ.

ಕಲಬುರಗಿ: ಮದುವೆಯಾಗೋದಾಗಿ ಯುವತಿಯನ್ನು ನಂಬಿಸಿ, ಅತ್ಯಾಚಾರ ಎಸಗಿ, ಬಳಿಕ ಗರ್ಭಪಾತ ಮಾಡಿಸಿ, ಕೊನೆಗೆ ಪೊಲೀಸರ ಸಮ್ಮುಖದಲ್ಲಿ ಆಕೆಯನ್ನು ಮದುವೆಯಾದ ವ್ಯಕ್ತಿಯೊಬ್ಬ, ಇದೀಗ ಎಸ್ಕೇಪ್ ಆಗಿದ್ದಾನೆ. ಈಗ ಯುವತಿ ತನ್ನ ಗಂಡನನ್ನು ಹುಡುಕಿಕೊಡಿ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಈ ಘಟನೆ ಕಲಬುರಗಿಯ ವಾಡಿ ಪಟ್ಟಣದಲ್ಲಿ ನಡೆದಿದೆ.

ಹೀಗೆ ಯುವತಿಗೆ ಮೋಸ ಮಾಡಿದ ಯುವಕನನ್ನು ವಿಶಾಲ ಚವ್ಹಾಣ ಎಂದು ಗುರುತಿಸಲಾಗಿದೆ. ಮೋಸ ಹೋದ ಹುಡುಗಿಯನ್ನು ರಾಧಾ(ಹೆಸರು ಬದಲಿಸಲಾಗಿದೆ) ಎಂದು ಗುರುತಿಸಲಾಗಿದೆ. ಇಬ್ಬರೂ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣಕ್ಕೆ ಸೇರಿದವರು. ಉನ್ನತ ವ್ಯಾಸಾಂಗಕ್ಕೆಂದು ತೆರಳಿದ್ದ ವಿಶಾಲ್ ಮತ್ತು ಯುವತಿ ನಡುವೆ ಬೆಂಗಳೂರಿನಲ್ಲಿ ಪ್ರೇಮಾಂಕುರವಾಗಿದೆ. ಮದುವೆಯಾಗೋದಾಗಿ ನಂಬಿಸಿದ ವಿಶಾಲ್, ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಎರಡು ಬಾರಿ ಗರ್ಭ ಧರಿಸಿದ ಸಂದರ್ಭದಲ್ಲಿ ಟ್ಯಾಬ್ಲೆಟ್ ನೀಡಿ ಗರ್ಭಪಾತ ಮಾಡಿಸಿದ್ದಾನೆ. ಇನ್ನೇನು ಆತ ಕೈ ಕೊಡುತ್ತಿದ್ದಾನೆ ಎಂಬ ಅನುಮಾನದಿಂದ ಪೊಲೀಸ್ ಠಾಣೆ ಮೆಟ್ಟಿಲೇರಿದಾಗ, ವಾಡಿ ಪೊಲೀಸರು ವಿಶಾಲ್ ಹಾಗೂ ಯುವತಿಯ ಮದುವೆ ಮಾಡಿಸಿದ್ದಾರೆ.

ಪೊಲೀಸರ ಸಮ್ಮುಖದಲ್ಲೇ ಮದುವೆಯಾದ ಭೂಪ, ಬಳಿಕ ಎಸ್ಕೇಪ್

ಮದುವೆಯಾದ ಕೂಡಲೇ ಮನೆ ನೋಡಿಕೊಂಡು ಬರೋದಾಗಿ ಎಸ್ಕೇಪ್ ಆದ ವಿಶಾಲ್ ಮತ್ತೆ ರಾಧಾಗೆ ಸಿಕ್ಕಿಲ್ಲ. ಮತ್ತೊಂದೆಡೆ ವಿಶಾಲ್ ಪೋಷಕರು ಶಿಲ್ಪ ಮತ್ತು ಅವರ ಪೋಷಕರಿಗೆ ಧಮ್ಕಿ ಹಾಕಿ, ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ತನ್ನ ಗಂಡನನ್ನು ಹುಡುಕಿಕೊಡುವಂತೆ ಯುವತಿ ಮತ್ತೊಮ್ಮೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಈ ಸಂಬಂಧ ವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡೋ ಜೊತೆಗೆ, ಈಶಾನ್ಯ ವಲಯ ಐಜಿಪಿ ಅವರಿಗೂ ಯುವತಿ ಮನವಿ ಸಲ್ಲಿಸಿದ್ದಾಳೆ. ಈ ಕುರಿತು ಪ್ರತಿಕ್ರಿಯಿಸಿರುವ ಎಸ್​​​ಪಿ ವಿನಾಯಕ ಪಾಟೀಲ, ಯುವತಿ ದೂರು ನೀಡಿದ್ದಾಳೆ. ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ. ಯುವಕನ ಪೋಷಕರು ಕಿರುಕುಳ ನೀಡುತ್ತಿರುವುದರ ಬಗ್ಗೆ ದೂರು ನೀಡಿದಲ್ಲಿ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಸ್​​​ಪಿ ತಿಳಿಸಿದ್ದಾರೆ.

Intro:ಕಲಬುರಗಿ:ಲವ್.. ಸೆಕ್ಸ್.. ಮದುವೆ... ಧೋಖಾ.. ಇದು ಕಲಬರ್ಗಿ ಜಿಲ್ಲೆ ವಾಡಿ ಪಟ್ಣದಲ್ಲಿ ಬೆಳಕಿಗೆ ಬಂದಿರೋ ಪ್ರಕರಣ.ಮದುವೆಯಾಗೋದಾಗಿ ನಂಬಿಸಿ,ಯುವತಿಯ ಮೇಲೆ ಅತ್ಯಾಚಾರ ಮಾಡಿ, ಗರ್ಭಪಾತ ಮಾಡಿಸಿ, ಕೊನೆಗೂ ಪೊಲೀಸರ ಸಮ್ಮುಖದಲ್ಲಿ ಮದುವೆಯಾದ ಭೂಪ, ನಂತರ ಎಸ್ಕೇಪ್ ಆಗಿದ್ದಾನೆ. ಇದೀಗ ತನ್ನ ಗಂಡನನ್ನು ಹುಡುಕಿಕೊಡಿ ಎಂದು ಯುವತಿ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾಳೆ. ಏನಿದು ಕಥೆ ಅಂತೀರಾ.. ಈ ಸ್ಚೋರಿ ನೋಡಿ.

ಇಬ್ಬರೂ ಒಂದೇ ಊರಿವರು.ಒಂದೆ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡಿದವರು.ಉನ್ನತ ವ್ಯಾಸಾಂಗಕ್ಕೆಂದು ಬೆಂಗಳೂರಿಗೆ ಹೋದವರು.ಹತ್ತನೆ ತರಗತಿಯಲ್ಲಿ ಲವ್ ಆಗಿ, ಪರಸ್ಪರ ಅನ್ಯೂನ್ಯತೆಯಿಂದ ಇದ್ದ ಪರಿಣಾಮ ಯುವತಿ ಗರ್ಭಿಣಿಯಾಗಿ,ಯುವಕ ಒತ್ತಾಯ ಪೂರ್ವಕವಾಗಿ ಗರ್ಭಪಾತ ಮಾಡಿಸಿ,ಇನ್ನೇನು ಕೈಕೊಟ್ಟು ಹೋಗ್ತಾನೆ ಅನ್ನೋವಾಗ ಪೊಲೀಸರು ಮಧ್ಯಪ್ರವೇಶ ಮಾಡಿ ಇಬ್ಬರ ಮದುವೆ ಮಾಡಿಸಿದ್ದಾರೆ. ಕಥೆಯೇನು ಸುಖಾಂತ್ಯಗೊಂಡಿತು ಅನ್ನುವುದರೊಳಗಾಗಿ ತಾನು ನೌಕರಿ ಮಾಡೋ ಊರಿನಲ್ಲಿ ಮನೆ ಮಾಡಿ ನಿನ್ನನ್ನು ಕರೆದುಕೊಂಡು ಹೋಗ್ತೇನೆ ಎಂದು ಯುವಕ ಎಸ್ಕೇಪ್ ಆಗಿದ್ದಾನೆ.ಇದೀಗ ಯುವತಿ ತನ್ನ ಗಂಡನನ್ನು ಕರೆದುಕೊಂಡು ಬರುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಹೀಗೆ ದೋಖಾ ಮಾಡಿದ ಯುವಕನನ್ನು ವಿಶಾಲ ಚವ್ಹಾಣ ಎಂದು ಗುರುತಿಸಲಾಗಿದೆ. ಮೋಸ ಹೋದ ಹುಡುಗಿಯನ್ನು ಶಿಲ್ಪ ಜಾಧವ್ ಎಂದು ಗುರುತಿಸಲಾಗಿದೆ. ಇಬ್ಬರೂ ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣಕ್ಕೆ ಸೇರಿದವರು. ಉನ್ನತ ವ್ಯಾಸಾಂಗಕ್ಕೆಂದು ತೆರಳಿದ್ದ ವಿಶಾಲ್ ಮತ್ತು ಶಿಲ್ಪ ಜಾಧವ್ ನಡುವೆ ಬೆಂಗಳೂರಿನಲ್ಲಿ ಪ್ರೀತಿ ಅಂಕುರವಾಗಿದೆ. ಮದುವೆಯಾಗೋದಾಗಿ ನಂಬಿಸಿದ ವಿಶಾಲ್, ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಎರಡು ಬಾರಿ ಗರ್ಭ ಧರಿಸಿದ ಸಂದರ್ಭದಲ್ಲಿ ಟ್ಯಾಬ್ಲೆಟ್ ನೀಡಿ ಗರ್ಭಪಾತ ಮಾಡಿಸಿದ್ದಾನೆ. ತನಗೆ ಯುವಕ ಕೈಕೊಡುತ್ತಿದ್ದಾನೆ ಎಂಬ ಅನುಮಾನದಿಂದ ಪೊಲೀಸ್ ಠಾಣೆ ಮೆಟ್ಟಿಲೇರಿದಾಗ ವಾಡಿ ಪೊಲೀಸರು ವಿಶಾಲ್ ಹಾಗೂ ಶಿಲ್ಪ ಮದುವೆ ಮಾಡಿಸಿದ್ದಾರೆ. ಮದುವೆಯಾದ ಕೂಡಲೇ ಮನೆ ನೋಡೀಕೊಂಡು ಬರೋದಾಗಿ ಎಸ್ಕೇಪ್ ಆದ ವಿಶಾಲ್ ಮತ್ತೆ ಶಿಲ್ಪಗೆ ಸಿಕ್ಕಿಲ್ಲ. ಮತ್ತೊಂದೆಡೆ ವಿಶಾಲ್ ಪೋಷಕರು ಶಿಲ್ಪ ಮತ್ತು ಅವರ ಪೋಷಕರಿಗೆ ಧಮ್ಕಿ ಹಾಕಿ, ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ತನ್ನ ಗಂಡನನ್ನು ಹಿಡಿದು ತರುವಂತೆ ಯುವತಿ ಮತ್ತೊಮ್ಮೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಬೈಟ್-1.ಶಿಲ್ಪಾ ಜಾಧವ್, ವಂಚನೆಗೆ ಒಳಗಾದ ಯುವತಿ.

ಈ ಸಂಬಂಧ ವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡೋ ಜೊತೆಗೆ, ಈಶಾನ್ಯ ವಲಯ ಐಜಿಪಿ ಅವರಿಗೂ ಯುವತಿ ಮನವಿ ಸಲ್ಲಿಸಿದ್ದಾಳೆ. ಈ ಕುರಿತು ಪ್ರತಿಕ್ರಿಯಿಸಿರುವ ಎಸ್.ಪಿ. ವಿನಾಯಕ ಪಾಟೀಲ, ಯುವತಿ ದೂರು ನೀಡಿದ್ದಾಳೆ. ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ. ಯುವಕನ ಪೋಷಕರು ಕಿರುಕುಳ ನೀಡುತ್ತಿರುವುದರ ಬಗ್ಗೆ ದೂರು ನೀಡಿದಲ್ಲಿ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಸ್.ಪಿ. ತಿಳಿಸಿದ್ದಾರೆ.

ಬೈಟ್-2. ವಿನಾಯಕ ಪಾಟೀಲ್,ಕಲಬುರ್ಗಿ ಎಸ್.ಪಿ.

ಒಟ್ಟಾರೆ ಮದುವೆಯಾಗೋದಾಗಿ ಹೇಳಿದ ಮಾತನ್ನು ನಂಬಿದ ಯುವತಿ ಮೋಸ ಹೋಗಿದ್ದಾಳೆ. ಎರಡು ಬಾರಿ ಗರ್ಭಪಾತ ಮಾಡಿಸಿಕೊಂಡು,ಮದುವೆಯಾದ ನಂತರವೂ ಯುವಕ ಕೈಕೊಟ್ಟು ಹೋಗಿರುವುದರಿಂದ ಮನನೊಂದಿರುವ ಯುವತಿ, ತನಗೆ ನ್ಯಾಯ ದೊರಕಿಸಿಕೊಡುವಂತೆ ಅಲವತ್ತುಕೊಂಡಿದ್ದಾಳೆ.Body:ಕಲಬುರಗಿ:ಲವ್.. ಸೆಕ್ಸ್.. ಮದುವೆ... ಧೋಖಾ.. ಇದು ಕಲಬರ್ಗಿ ಜಿಲ್ಲೆ ವಾಡಿ ಪಟ್ಣದಲ್ಲಿ ಬೆಳಕಿಗೆ ಬಂದಿರೋ ಪ್ರಕರಣ.ಮದುವೆಯಾಗೋದಾಗಿ ನಂಬಿಸಿ,ಯುವತಿಯ ಮೇಲೆ ಅತ್ಯಾಚಾರ ಮಾಡಿ, ಗರ್ಭಪಾತ ಮಾಡಿಸಿ, ಕೊನೆಗೂ ಪೊಲೀಸರ ಸಮ್ಮುಖದಲ್ಲಿ ಮದುವೆಯಾದ ಭೂಪ, ನಂತರ ಎಸ್ಕೇಪ್ ಆಗಿದ್ದಾನೆ. ಇದೀಗ ತನ್ನ ಗಂಡನನ್ನು ಹುಡುಕಿಕೊಡಿ ಎಂದು ಯುವತಿ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾಳೆ. ಏನಿದು ಕಥೆ ಅಂತೀರಾ.. ಈ ಸ್ಚೋರಿ ನೋಡಿ.

ಇಬ್ಬರೂ ಒಂದೇ ಊರಿವರು.ಒಂದೆ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡಿದವರು.ಉನ್ನತ ವ್ಯಾಸಾಂಗಕ್ಕೆಂದು ಬೆಂಗಳೂರಿಗೆ ಹೋದವರು.ಹತ್ತನೆ ತರಗತಿಯಲ್ಲಿ ಲವ್ ಆಗಿ, ಪರಸ್ಪರ ಅನ್ಯೂನ್ಯತೆಯಿಂದ ಇದ್ದ ಪರಿಣಾಮ ಯುವತಿ ಗರ್ಭಿಣಿಯಾಗಿ,ಯುವಕ ಒತ್ತಾಯ ಪೂರ್ವಕವಾಗಿ ಗರ್ಭಪಾತ ಮಾಡಿಸಿ,ಇನ್ನೇನು ಕೈಕೊಟ್ಟು ಹೋಗ್ತಾನೆ ಅನ್ನೋವಾಗ ಪೊಲೀಸರು ಮಧ್ಯಪ್ರವೇಶ ಮಾಡಿ ಇಬ್ಬರ ಮದುವೆ ಮಾಡಿಸಿದ್ದಾರೆ. ಕಥೆಯೇನು ಸುಖಾಂತ್ಯಗೊಂಡಿತು ಅನ್ನುವುದರೊಳಗಾಗಿ ತಾನು ನೌಕರಿ ಮಾಡೋ ಊರಿನಲ್ಲಿ ಮನೆ ಮಾಡಿ ನಿನ್ನನ್ನು ಕರೆದುಕೊಂಡು ಹೋಗ್ತೇನೆ ಎಂದು ಯುವಕ ಎಸ್ಕೇಪ್ ಆಗಿದ್ದಾನೆ.ಇದೀಗ ಯುವತಿ ತನ್ನ ಗಂಡನನ್ನು ಕರೆದುಕೊಂಡು ಬರುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಹೀಗೆ ದೋಖಾ ಮಾಡಿದ ಯುವಕನನ್ನು ವಿಶಾಲ ಚವ್ಹಾಣ ಎಂದು ಗುರುತಿಸಲಾಗಿದೆ. ಮೋಸ ಹೋದ ಹುಡುಗಿಯನ್ನು ಶಿಲ್ಪ ಜಾಧವ್ ಎಂದು ಗುರುತಿಸಲಾಗಿದೆ. ಇಬ್ಬರೂ ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣಕ್ಕೆ ಸೇರಿದವರು. ಉನ್ನತ ವ್ಯಾಸಾಂಗಕ್ಕೆಂದು ತೆರಳಿದ್ದ ವಿಶಾಲ್ ಮತ್ತು ಶಿಲ್ಪ ಜಾಧವ್ ನಡುವೆ ಬೆಂಗಳೂರಿನಲ್ಲಿ ಪ್ರೀತಿ ಅಂಕುರವಾಗಿದೆ. ಮದುವೆಯಾಗೋದಾಗಿ ನಂಬಿಸಿದ ವಿಶಾಲ್, ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಎರಡು ಬಾರಿ ಗರ್ಭ ಧರಿಸಿದ ಸಂದರ್ಭದಲ್ಲಿ ಟ್ಯಾಬ್ಲೆಟ್ ನೀಡಿ ಗರ್ಭಪಾತ ಮಾಡಿಸಿದ್ದಾನೆ. ತನಗೆ ಯುವಕ ಕೈಕೊಡುತ್ತಿದ್ದಾನೆ ಎಂಬ ಅನುಮಾನದಿಂದ ಪೊಲೀಸ್ ಠಾಣೆ ಮೆಟ್ಟಿಲೇರಿದಾಗ ವಾಡಿ ಪೊಲೀಸರು ವಿಶಾಲ್ ಹಾಗೂ ಶಿಲ್ಪ ಮದುವೆ ಮಾಡಿಸಿದ್ದಾರೆ. ಮದುವೆಯಾದ ಕೂಡಲೇ ಮನೆ ನೋಡೀಕೊಂಡು ಬರೋದಾಗಿ ಎಸ್ಕೇಪ್ ಆದ ವಿಶಾಲ್ ಮತ್ತೆ ಶಿಲ್ಪಗೆ ಸಿಕ್ಕಿಲ್ಲ. ಮತ್ತೊಂದೆಡೆ ವಿಶಾಲ್ ಪೋಷಕರು ಶಿಲ್ಪ ಮತ್ತು ಅವರ ಪೋಷಕರಿಗೆ ಧಮ್ಕಿ ಹಾಕಿ, ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ತನ್ನ ಗಂಡನನ್ನು ಹಿಡಿದು ತರುವಂತೆ ಯುವತಿ ಮತ್ತೊಮ್ಮೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಬೈಟ್-1.ಶಿಲ್ಪಾ ಜಾಧವ್, ವಂಚನೆಗೆ ಒಳಗಾದ ಯುವತಿ.

ಈ ಸಂಬಂಧ ವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡೋ ಜೊತೆಗೆ, ಈಶಾನ್ಯ ವಲಯ ಐಜಿಪಿ ಅವರಿಗೂ ಯುವತಿ ಮನವಿ ಸಲ್ಲಿಸಿದ್ದಾಳೆ. ಈ ಕುರಿತು ಪ್ರತಿಕ್ರಿಯಿಸಿರುವ ಎಸ್.ಪಿ. ವಿನಾಯಕ ಪಾಟೀಲ, ಯುವತಿ ದೂರು ನೀಡಿದ್ದಾಳೆ. ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ. ಯುವಕನ ಪೋಷಕರು ಕಿರುಕುಳ ನೀಡುತ್ತಿರುವುದರ ಬಗ್ಗೆ ದೂರು ನೀಡಿದಲ್ಲಿ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಸ್.ಪಿ. ತಿಳಿಸಿದ್ದಾರೆ.

ಬೈಟ್-2. ವಿನಾಯಕ ಪಾಟೀಲ್,ಕಲಬುರ್ಗಿ ಎಸ್.ಪಿ.

ಒಟ್ಟಾರೆ ಮದುವೆಯಾಗೋದಾಗಿ ಹೇಳಿದ ಮಾತನ್ನು ನಂಬಿದ ಯುವತಿ ಮೋಸ ಹೋಗಿದ್ದಾಳೆ. ಎರಡು ಬಾರಿ ಗರ್ಭಪಾತ ಮಾಡಿಸಿಕೊಂಡು,ಮದುವೆಯಾದ ನಂತರವೂ ಯುವಕ ಕೈಕೊಟ್ಟು ಹೋಗಿರುವುದರಿಂದ ಮನನೊಂದಿರುವ ಯುವತಿ, ತನಗೆ ನ್ಯಾಯ ದೊರಕಿಸಿಕೊಡುವಂತೆ ಅಲವತ್ತುಕೊಂಡಿದ್ದಾಳೆ.Conclusion:
Last Updated : Sep 22, 2019, 8:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.