ಹಾವೇರಿ: ಉತ್ತರ ಭಾರತದಲ್ಲಿ ಕುಂಭಮೇಳ ನಡೆಯುವ ರೀತಿ ಬೆಂಗಳೂರಿನಲ್ಲಿ ಇದೇ 16 ರಂದು ಸರ್ವಶರಣರ ಸಮ್ಮೇಳನ ನಡೆಯಲಿದೆ ಎಂದು ಹೊಸಮಠದ ಬಸವಶಾಂತಲಿಂಗ ಶ್ರೀಗಳು ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು ಚಿತ್ರದುರ್ಗ ಬ್ರಹನ್ಮಠದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಈ ರೀತಿಯ ಶಿವಯೋಗ ಸಂಭ್ರಮ ಮತ್ತು ಅಸಂಖ್ಯೆ ಪ್ರಮಥರ ಗಣಮೇಳ ಆಯೋಜಿಸಲಾಗುತ್ತಿದೆ. ಈ ಸಮ್ಮೇಳನದಲ್ಲಿ ನಾಡಿನ ಸುಮಾರು 300 ಮಠಾಧೀಶರು ಪಾಲ್ಗೊಳ್ಳಲಿದ್ದಾರೆ ಎಂದರು.
ಅಲ್ಲದೆ ಸುಮಾರು 2 ಲಕ್ಷ ಜನ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಇದು ಗಿನ್ನಿಸ್ ರೆಕಾರ್ಡ್ ಆಗಲಿದೆ. ವಿಶ್ವ ಶಾಂತಿ ಮತ್ತು ಪ್ರಗತಿಯ ಉದ್ದೇಶ ಇಟ್ಟುಕೊಂಡು ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಶ್ರೀಗಳು ತಿಳಿಸಿದರು.