ಹಾವೇರಿ: ಜಮೀನಿಗೆ ತೆರಳಿದ್ದ ಮೂವರು ರೈತರ ಮೇಲೆ ನರಿ ದಾಳಿ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಲ್ಲೆದೇವರು ಗ್ರಾಮದಲ್ಲಿ ನಡೆದಿದೆ.
ಹರೀಶ್ ಲಮಾಣಿ, ಶಂಕರಪ್ಪ ಲಮಾಣಿ ಮತ್ತು ರುದ್ರಪ್ಪ ಲಮಾಣಿ (45) ಗಾಯಗಳಾಗಿದ್ದು, ಇವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ತೊಡೆ, ಕೈ- ಕಾಲುಗಳಿಗೆ ನರಿ ಕಚ್ಚಿ ಗಾಯಗೊಳಿಸಿದೆ. ರೇಷ್ಮೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ದಾಳಿ ಮಾಡಿದೆ ಎಂಬುದು ತಿಳಿದುಬಂದಿದೆ.
ಓದಿ: ಒಂದೇ ತಿಂಗಳಲ್ಲಿ 7 ಜನರ ಕೊಂದು ಹಾಕಿದ ನರಭಕ್ಷಕ ಹುಲಿ: ಕಂಡಲ್ಲಿ ಗುಂಡಿಕ್ಕಲು ಆದೇಶ