ETV Bharat / state

ನಮ್ಮ ಪಕ್ಷದ ಎಲ್ಲ ಸಚಿವರಲ್ಲಿ ಹೊಂದಾಣಿಕೆ ಇದೆ: ಎಸ್. ಟಿ. ಸೋಮಶೇಖರ್ - ಡಿ.ಕೆ.ಶಿವಕುಮಾರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸೋಮಶೇಖರ್

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಅವರು ಮಾಡಿರುವ ಆರೋಪಕ್ಕೆ ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಪ್ರತಿಕ್ರಿಯಿಸಿದ್ದು, ತಮ್ಮ ಪಕ್ಷದ ಸಚಿವರಲ್ಲಿ ಹೊಂದಾಣಿಕೆ ಇದೆ ಎಂದಿದ್ದಾರೆ.

ST Somashekar
ಎಸ್. ಟಿ .ಸೋಮಶೇಖರ್
author img

By

Published : Jul 15, 2020, 3:46 PM IST

ಹಾವೇರಿ: ಕೊರೊನಾ ವಿರುದ್ಧದ ಹೋರಾಟದಲ್ಲಿ ಎಲ್ಲಾ ಸಚಿವರ ನಡುವೆ ಹೊಂದಾಣಿಕೆ ಇದೆ ಎಂದು ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.

ಸಚಿವರ ನಡುವೆ ಹೊಂದಾಣಿಕೆ ಇಲ್ಲವೆಂಬ ಆರೋಪಕ್ಕೆ ಎಸ್. ಟಿ. ಸೋಮಶೇಖರ್ ಸ್ಪಷ್ಟನೆ

ಜಿಲ್ಲೆಯ ಬ್ಯಾಡಗಿಯಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರದಲ್ಲಿ ಹೊಂದಾಣಿಕೆ ಇಲ್ಲ ಎನ್ನುತ್ತಿರುವ ಕೆಪಿಸಿಸಿ ಡಿ.ಕೆ. ಶಿವಕುಮಾರ್ ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಈ ರೀತಿ ಆಪಾದನೆ ಮಾಡುತ್ತಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆಯೇ ಹೊಂದಾಣಿಕೆ ಇಲ್ಲವೆಂದು ಟಾಂಗ್​ ನೀಡಿದ್ದಾರೆ.

ಕಾಂಗ್ರೆಸ್‌ ಪಕ್ಷದವರು ಲೆಕ್ಕ ಕೊಡಿ ಎನ್ನುವ ಚಳವಳಿ ಆರಂಭಿಸಿದರೆ, ಲೆಕ್ಕ ತಗೊಳ್ಳಿ ಎನ್ನುವ ಚಳವಳಿ ಆರಂಭಿಸುವುದಾಗಿ ಸಚಿವ ಸೋಮಶೇಖರ್​ ತಿಳಿಸಿದರು.

ಇದೇ ವೇಳೆ ಹೊಸದಾಗಿ ಸಚಿವರಾಗಲು ಬಯಸುವವರಿಗೆ ನೀವು ಸಚಿವಸ್ಥಾನ ಬಿಟ್ಟು ಕೊಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸೋಮಶೇಖರ್​ ಈ ಪ್ರಮೇಯವೇ ಇಲ್ಲ. ಕೊರೊನಾ ಸಲಕರಣಿಗಳ ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಅದರಲ್ಲಿ ಖರ್ಚು ಮಾಡಿರುವ ಹಣಕ್ಕಿಂತ ಕಾಂಗ್ರೆಸ್​ನವರು ಆರೋಪಿಸುತ್ತಿರುವ ಹಣವೇ ಅಧಿಕವಾಗಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರದಲ್ಲಿ ಯಾರಿಗೂ ಅಸಮಾಧಾನ ಇಲ್ಲ. ಎಲ್ಲರೂ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಒಟ್ಟಾಗಿ ಕಾರ್ಯ ನಿರ್ವಹಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಹಾವೇರಿ: ಕೊರೊನಾ ವಿರುದ್ಧದ ಹೋರಾಟದಲ್ಲಿ ಎಲ್ಲಾ ಸಚಿವರ ನಡುವೆ ಹೊಂದಾಣಿಕೆ ಇದೆ ಎಂದು ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.

ಸಚಿವರ ನಡುವೆ ಹೊಂದಾಣಿಕೆ ಇಲ್ಲವೆಂಬ ಆರೋಪಕ್ಕೆ ಎಸ್. ಟಿ. ಸೋಮಶೇಖರ್ ಸ್ಪಷ್ಟನೆ

ಜಿಲ್ಲೆಯ ಬ್ಯಾಡಗಿಯಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರದಲ್ಲಿ ಹೊಂದಾಣಿಕೆ ಇಲ್ಲ ಎನ್ನುತ್ತಿರುವ ಕೆಪಿಸಿಸಿ ಡಿ.ಕೆ. ಶಿವಕುಮಾರ್ ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಈ ರೀತಿ ಆಪಾದನೆ ಮಾಡುತ್ತಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆಯೇ ಹೊಂದಾಣಿಕೆ ಇಲ್ಲವೆಂದು ಟಾಂಗ್​ ನೀಡಿದ್ದಾರೆ.

ಕಾಂಗ್ರೆಸ್‌ ಪಕ್ಷದವರು ಲೆಕ್ಕ ಕೊಡಿ ಎನ್ನುವ ಚಳವಳಿ ಆರಂಭಿಸಿದರೆ, ಲೆಕ್ಕ ತಗೊಳ್ಳಿ ಎನ್ನುವ ಚಳವಳಿ ಆರಂಭಿಸುವುದಾಗಿ ಸಚಿವ ಸೋಮಶೇಖರ್​ ತಿಳಿಸಿದರು.

ಇದೇ ವೇಳೆ ಹೊಸದಾಗಿ ಸಚಿವರಾಗಲು ಬಯಸುವವರಿಗೆ ನೀವು ಸಚಿವಸ್ಥಾನ ಬಿಟ್ಟು ಕೊಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸೋಮಶೇಖರ್​ ಈ ಪ್ರಮೇಯವೇ ಇಲ್ಲ. ಕೊರೊನಾ ಸಲಕರಣಿಗಳ ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಅದರಲ್ಲಿ ಖರ್ಚು ಮಾಡಿರುವ ಹಣಕ್ಕಿಂತ ಕಾಂಗ್ರೆಸ್​ನವರು ಆರೋಪಿಸುತ್ತಿರುವ ಹಣವೇ ಅಧಿಕವಾಗಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರದಲ್ಲಿ ಯಾರಿಗೂ ಅಸಮಾಧಾನ ಇಲ್ಲ. ಎಲ್ಲರೂ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಒಟ್ಟಾಗಿ ಕಾರ್ಯ ನಿರ್ವಹಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.