ETV Bharat / state

ಬಯೋಡೇಟಾ ಕಳಿಸಿ ಕೆಲಸ ತಗೊಳ್ಳಿ: ನಿರುದ್ಯೋಗ ಮುಕ್ತ ರಾಣೆಬೆನ್ನೂರಿಗೆ ಪಣ

author img

By

Published : Dec 21, 2022, 7:15 AM IST

ನಿರುದ್ಯೋಗ ಮುಕ್ತ ರಾಣೆಬೆನ್ನೂರನ್ನು ಮಾಡಲು ಕಾಂಗ್ರೆಸ್ ಮುಖಂಡ ಪ್ರಕಾಶ್ ಕೋಳಿವಾಡ್ ಪಣ ತೊಟ್ಟಿದ್ದು, ಬಯೋಡೇಟಾ ಕಳಿಸಿ ಕೆಲಸ ತಗೊಳ್ಳಿ ಎಂಬ ಅಭಿಯಾನ ಪ್ರಾರಂಭಿಸಿದ್ದಾರೆ.

Send resume and get job Campaign
ಬಯೋಡೇಟಾ ಕಳಿಸಿ ಕೆಲಸ ತಗೊಳ್ಳಿ ಅಭಿಯಾನ
ಬಯೋಡೇಟಾ ಕಳಿಸಿ ಕೆಲಸ ತಗೊಳ್ಳಿ ಅಭಿಯಾನ

ಹಾವೇರಿ: ನಿರುದ್ಯೋಗ ಸಮಸ್ಯೆ ನಿವಾರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಕಾಂಗ್ರೆಸ್ ಮುಖಂಡ ಪ್ರಕಾಶ್ ಕೋಳಿವಾಡ್ ಆರೋಪಿಸಿದ್ದಾರೆ.

ಹಾವೇರಿ ಜಿಲ್ಲೆ ರಾಣೆಬೆನ್ನೂರಲ್ಲಿ ಮಾತನಾಡಿದ ಅವರು, ನಿರುದ್ಯೋಗ ಸಮಸ್ಯೆಯಿಂದ ವಿದ್ಯಾರ್ಥಿಗಳು ಆತ್ಮಹತ್ಯೆಯತ್ತ ಮುಖಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಣೆಬೆನ್ನೂರನ್ನು ನಿರುದ್ಯೋಗ ಮುಕ್ತ ಮಾಡಲು ಅಭಿಯಾನ ಕೈಗೊಂಡಿದ್ದೇನೆ. ಮಿಷನ್ 2028 ರೊಳಗೆ ರಾಣೆಬೆನ್ನೂರು ತಾಲೂಕನ್ನು ನಿರುದ್ಯೋಗ ಮುಕ್ತ ಮಾಡುವುದಾಗಿ ತಿಳಿಸಿದರು.

ಈಗಾಗಲೇ ಹಲವು ಬಾರಿ ಉದ್ಯೋಗ ಮೇಳ ನಡೆಸಿದ್ದು, ಹಲವು ಕಂಪನಿಗಳ ಜೊತೆ ಸಂಪರ್ಕ ಇದೆ. ಈ ಹಿನ್ನೆಲೆಯಲ್ಲಿ ಬಯೋಡೇಟಾ ಕೊಡಿ ಕೆಲಸ ತಗೊಳ್ಳಿ ಎಂಬ ಅಭಿಯಾನ ಆರಂಭಿಸಿದ್ದೇವೆ. ರಾಣೆಬೆನ್ನೂರು ನಗರದಲ್ಲಿರುವ 35 ವಾರ್ಡ್‌ಗಳಲ್ಲಿ 83 ಗ್ರಾಮಗಳಲ್ಲಿ ಈ ಅಭಿಯಾನ ಆರಂಭಿಸಿದ್ದೇವೆ. ಈ ಅಭಿಯಾನ 45 ದಿನಗಳ ಕಾಲ ರಾಣೆಬೆನ್ನೂರು ತಾಲೂಕಿನಲ್ಲಿರಲಿದೆ. ಬಯೋಡೇಟಾ ಕೊಟ್ಟು ಯುವಕ ಯುವತಿಯರು ಕೆಲಸ ಪಡೆದುಕೊಳ್ಳುವಂತೆ ತಿಳಿಸಿದರು.

ಇದನ್ನೂ ಓದಿ: ಯಾವುದೇ ಶ್ರೀಗಳ ಬಗ್ಗೆ ಹಗುರ ಮಾತು ಬೇಡ: ಯತ್ನಾಳ್ ವಿರುದ್ಧ ಸಚಿವ ಮುರುಗೇಶ್ ನಿರಾಣಿ ಪರೋಕ್ಷ ವಾಗ್ದಾಳಿ

ಬಯೋಡೇಟಾ ಕಳಿಸಿ ಕೆಲಸ ತಗೊಳ್ಳಿ ಅಭಿಯಾನ

ಹಾವೇರಿ: ನಿರುದ್ಯೋಗ ಸಮಸ್ಯೆ ನಿವಾರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಕಾಂಗ್ರೆಸ್ ಮುಖಂಡ ಪ್ರಕಾಶ್ ಕೋಳಿವಾಡ್ ಆರೋಪಿಸಿದ್ದಾರೆ.

ಹಾವೇರಿ ಜಿಲ್ಲೆ ರಾಣೆಬೆನ್ನೂರಲ್ಲಿ ಮಾತನಾಡಿದ ಅವರು, ನಿರುದ್ಯೋಗ ಸಮಸ್ಯೆಯಿಂದ ವಿದ್ಯಾರ್ಥಿಗಳು ಆತ್ಮಹತ್ಯೆಯತ್ತ ಮುಖಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಣೆಬೆನ್ನೂರನ್ನು ನಿರುದ್ಯೋಗ ಮುಕ್ತ ಮಾಡಲು ಅಭಿಯಾನ ಕೈಗೊಂಡಿದ್ದೇನೆ. ಮಿಷನ್ 2028 ರೊಳಗೆ ರಾಣೆಬೆನ್ನೂರು ತಾಲೂಕನ್ನು ನಿರುದ್ಯೋಗ ಮುಕ್ತ ಮಾಡುವುದಾಗಿ ತಿಳಿಸಿದರು.

ಈಗಾಗಲೇ ಹಲವು ಬಾರಿ ಉದ್ಯೋಗ ಮೇಳ ನಡೆಸಿದ್ದು, ಹಲವು ಕಂಪನಿಗಳ ಜೊತೆ ಸಂಪರ್ಕ ಇದೆ. ಈ ಹಿನ್ನೆಲೆಯಲ್ಲಿ ಬಯೋಡೇಟಾ ಕೊಡಿ ಕೆಲಸ ತಗೊಳ್ಳಿ ಎಂಬ ಅಭಿಯಾನ ಆರಂಭಿಸಿದ್ದೇವೆ. ರಾಣೆಬೆನ್ನೂರು ನಗರದಲ್ಲಿರುವ 35 ವಾರ್ಡ್‌ಗಳಲ್ಲಿ 83 ಗ್ರಾಮಗಳಲ್ಲಿ ಈ ಅಭಿಯಾನ ಆರಂಭಿಸಿದ್ದೇವೆ. ಈ ಅಭಿಯಾನ 45 ದಿನಗಳ ಕಾಲ ರಾಣೆಬೆನ್ನೂರು ತಾಲೂಕಿನಲ್ಲಿರಲಿದೆ. ಬಯೋಡೇಟಾ ಕೊಟ್ಟು ಯುವಕ ಯುವತಿಯರು ಕೆಲಸ ಪಡೆದುಕೊಳ್ಳುವಂತೆ ತಿಳಿಸಿದರು.

ಇದನ್ನೂ ಓದಿ: ಯಾವುದೇ ಶ್ರೀಗಳ ಬಗ್ಗೆ ಹಗುರ ಮಾತು ಬೇಡ: ಯತ್ನಾಳ್ ವಿರುದ್ಧ ಸಚಿವ ಮುರುಗೇಶ್ ನಿರಾಣಿ ಪರೋಕ್ಷ ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.