ETV Bharat / state

ಅಸಮಾಧಾನಿತ ಯಾವ ಶಾಸಕರು ನನ್ನನ್ನ ಸಂಪರ್ಕಿಸಿಲ್ಲ: ಶಾಸಕ ನೆಹರು ಓಲೇಕಾರ್

author img

By

Published : Aug 11, 2021, 6:47 PM IST

ಸಚಿವ ಸ್ಥಾನ, ಖಾತೆ ಬದಲಾವಣೆ ಸಮಸ್ಯೆಯನ್ನ ಮುಖ್ಯಮಂತ್ರಿ ಶೀಘ್ರದಲ್ಲೇ ಪರಿಹರಿಸುತ್ತಾರೆ. ಅದರಲ್ಲಿ ಸಂಶಯವಿಲ್ಲ ಎಂದು ಶಾಸಕ ನೆಹರು ಓಲೇಕಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

MLA Nehru Olekar
ಶಾಸಕ ನೆಹರು ಓಲೇಕಾರ್

ಹಾವೇರಿ: ಸಚಿವ ಸ್ಥಾನದಿಂದ ವಂಚಿತರಾಗಿ ಅಸಮಾಧಾನ, ಬೇಸರ ವ್ಯಕ್ತಪಡಿಸುತ್ತಿರುವ ಯಾವ ಶಾಸಕರು ನನ್ನನ್ನ ಸಂಪರ್ಕಿಸಿಲ್ಲ ಎಂದು ಹಾವೇರಿ ಶಾಸಕ ನೆಹರು ಓಲೇಕಾರ್ ಸ್ಪಷ್ಟಪಡಿಸಿದ್ದಾರೆ.

ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಅಸಮಾಧಾನ ವ್ಯಕ್ತಪಡಿಸುವ ಬದಲು ಸರ್ಕಾರದಿಂದ ಕೆಲಸ ಮಾಡಿಸಿಕೊಳ್ಳುವುದು ಮುಖ್ಯವಾಗಿದೆ. ಸಚಿವ ಸ್ಥಾನ, ಖಾತೆ ಬದಲಾವಣೆ ಸಮಸ್ಯೆಯನ್ನ ಮುಖ್ಯಮಂತ್ರಿ ಶೀಘ್ರದಲ್ಲಿ ಪರಿಹರಿಸುತ್ತಾರೆ. ಅದರಲ್ಲಿ ಸಂಶಯವಿಲ್ಲ ಎಂದರು.

ಶಾಸಕ ನೆಹರು ಓಲೇಕಾರ್ ಪ್ರತಿಕ್ರಿಯೆ

ಮುಖ್ಯಮಂತ್ರಿ ತಮಗೆ ಸ್ವಲ್ಪ ಕಾಲ ಕಾಯಲು ತಿಳಿಸಿದ್ದಾರೆ. ಅಲ್ಲಿಯವರೆಗೆ ಕಾಯುವೆ. ಎಲ್ಲರಿಗೂ ಸರಿಸಮಾನವಾದ, ಅವರು ಕೇಳಿರುವ ಹುದ್ದೆಗಳನ್ನ ನೀಡಲು ಸಾಧ್ಯವಿಲ್ಲ. ಸಿಕ್ಕಿರುವ ಖಾತೆ ಬಗ್ಗೆ ಸಮಾಧಾನಪಟ್ಟುಕೊಳ್ಳಬೇಕು. ಇಲ್ಲದಿದ್ದರೆ ಅವರೇ ಸಮಸ್ಯೆ ಮಾಡಿಕೊಂಡಂತಾಗುತ್ತದೆ ಎಂದರು.

ನನ್ನ ಜೊತೆ ಅಸಮಾಧಾನಿತ ಶಾಸಕರು ಮಾತನಾಡಿಲ್ಲ. ಒಂದು ವೇಳೆ ಅವರು ನನ್ನನ್ನು ಸಂಪರ್ಕಿಸಿದರೆ ಅವರ ಜೊತೆ ಮಾತನಾಡುತ್ತೇನೆ. ಎಲ್ಲರೂ ಸಮಾಧಾನದಿಂದ ಕುಳಿತು ಮಾತನಾಡೋಣ. ಇದನ್ನ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಿಕೊಳ್ಳೋಣ ಎನ್ನುತ್ತೇವೆ ಎಂದು ತಿಳಿಸಿದರು.

ಸಚಿವ ಸ್ಥಾನ ನೀಡುವ ಕುರಿತಂತೆ ಈಗಾಗಲೇ ಸಚಿವ ಬಿ.ಸಿ. ಪಾಟೀಲ್, ಸಿಎಂ ಬಸವರಾಜ್ ಬೊಮ್ಮಾಯಿ ಜೊತೆಗೂ ಮಾತನಾಡಿದ್ದೇನೆ. ಅವರು ಸ್ವಲ್ಪ ಕಾಲ ಕಾಯಲು ತಿಳಿಸಿದ್ದಾರೆ. ಅಲ್ಲಿಯವರೆಗೆ ಕಾಯುವುದಾಗಿ ಶಾಸಕ ಓಲೇಕಾರ್ ತಿಳಿಸಿದರು.

ಹಾವೇರಿ: ಸಚಿವ ಸ್ಥಾನದಿಂದ ವಂಚಿತರಾಗಿ ಅಸಮಾಧಾನ, ಬೇಸರ ವ್ಯಕ್ತಪಡಿಸುತ್ತಿರುವ ಯಾವ ಶಾಸಕರು ನನ್ನನ್ನ ಸಂಪರ್ಕಿಸಿಲ್ಲ ಎಂದು ಹಾವೇರಿ ಶಾಸಕ ನೆಹರು ಓಲೇಕಾರ್ ಸ್ಪಷ್ಟಪಡಿಸಿದ್ದಾರೆ.

ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಅಸಮಾಧಾನ ವ್ಯಕ್ತಪಡಿಸುವ ಬದಲು ಸರ್ಕಾರದಿಂದ ಕೆಲಸ ಮಾಡಿಸಿಕೊಳ್ಳುವುದು ಮುಖ್ಯವಾಗಿದೆ. ಸಚಿವ ಸ್ಥಾನ, ಖಾತೆ ಬದಲಾವಣೆ ಸಮಸ್ಯೆಯನ್ನ ಮುಖ್ಯಮಂತ್ರಿ ಶೀಘ್ರದಲ್ಲಿ ಪರಿಹರಿಸುತ್ತಾರೆ. ಅದರಲ್ಲಿ ಸಂಶಯವಿಲ್ಲ ಎಂದರು.

ಶಾಸಕ ನೆಹರು ಓಲೇಕಾರ್ ಪ್ರತಿಕ್ರಿಯೆ

ಮುಖ್ಯಮಂತ್ರಿ ತಮಗೆ ಸ್ವಲ್ಪ ಕಾಲ ಕಾಯಲು ತಿಳಿಸಿದ್ದಾರೆ. ಅಲ್ಲಿಯವರೆಗೆ ಕಾಯುವೆ. ಎಲ್ಲರಿಗೂ ಸರಿಸಮಾನವಾದ, ಅವರು ಕೇಳಿರುವ ಹುದ್ದೆಗಳನ್ನ ನೀಡಲು ಸಾಧ್ಯವಿಲ್ಲ. ಸಿಕ್ಕಿರುವ ಖಾತೆ ಬಗ್ಗೆ ಸಮಾಧಾನಪಟ್ಟುಕೊಳ್ಳಬೇಕು. ಇಲ್ಲದಿದ್ದರೆ ಅವರೇ ಸಮಸ್ಯೆ ಮಾಡಿಕೊಂಡಂತಾಗುತ್ತದೆ ಎಂದರು.

ನನ್ನ ಜೊತೆ ಅಸಮಾಧಾನಿತ ಶಾಸಕರು ಮಾತನಾಡಿಲ್ಲ. ಒಂದು ವೇಳೆ ಅವರು ನನ್ನನ್ನು ಸಂಪರ್ಕಿಸಿದರೆ ಅವರ ಜೊತೆ ಮಾತನಾಡುತ್ತೇನೆ. ಎಲ್ಲರೂ ಸಮಾಧಾನದಿಂದ ಕುಳಿತು ಮಾತನಾಡೋಣ. ಇದನ್ನ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಿಕೊಳ್ಳೋಣ ಎನ್ನುತ್ತೇವೆ ಎಂದು ತಿಳಿಸಿದರು.

ಸಚಿವ ಸ್ಥಾನ ನೀಡುವ ಕುರಿತಂತೆ ಈಗಾಗಲೇ ಸಚಿವ ಬಿ.ಸಿ. ಪಾಟೀಲ್, ಸಿಎಂ ಬಸವರಾಜ್ ಬೊಮ್ಮಾಯಿ ಜೊತೆಗೂ ಮಾತನಾಡಿದ್ದೇನೆ. ಅವರು ಸ್ವಲ್ಪ ಕಾಲ ಕಾಯಲು ತಿಳಿಸಿದ್ದಾರೆ. ಅಲ್ಲಿಯವರೆಗೆ ಕಾಯುವುದಾಗಿ ಶಾಸಕ ಓಲೇಕಾರ್ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.