ಹಾವೇರಿ: ವಿವಾಹ ಪತ್ರಿಕೆಯಲ್ಲಿ ಮೊದಲೆಲ್ಲಾ ಲಗ್ನಪತ್ರಿಕೆ ನೀಡಬೇಕಾದವರ ಹೆಸರು ಇರುತ್ತಿತ್ತು. ತದನಂತರ ನಿಮ್ಮ ಹೆಸರು ನಮ್ಮ ನಮ್ಮ ಮನದಲ್ಲಿದೆ ಮದುವೆಗೆ ಬನ್ನಿ ಎಂದು ಪ್ರಿಂಟ್ ಮಾಡಲಾಗುತ್ತಿತ್ತು.
ಆದರೆ ಕರೊನಾ ಬಂದ ಮೇಲೆ ನಿಗದಿಯಾದ ಮದುವೆಗಳನ್ನು ಸಹ ಮುಂದೂಡಲಾಗುತ್ತಿದೆ. ಈ ರೀತಿ ಮದುವೆಗಳು ಮುಂದೂಡಲ್ಪಟ್ಟ ವಿವಾಹ ಪತ್ರಿಕೆಗಳನ್ನು ಸಂಬಂಧಿಕರಿಗೆ ವಿತರಿಸಲಾಗುತ್ತಿದೆ.
ಆದರೆ ಹಾವೇರಿ ಜಿಲ್ಲೆ ಬ್ಯಾಡಗಿಯ ವರ್ತಕ ಪಿ.ಆರ್ ದೊಡ್ಮನಿ ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ತಮ್ಮ ಮಗನ ಮದುವೆ ಕಾರ್ಡ್ನಲ್ಲಿ ಕೊರೊನಾದಿಂದ ತಮ್ಮ ಮಗನ ಮದುವೆ ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನ ಸಾಮಾಜಿಕ ಜಾಲತಾಣದಲ್ಲಿ ತಿಳಿಸುವ ಒಕ್ಕಣೆ ಇರುವ ಲಗ್ನ ಪತ್ರಿಕಗಳನ್ನ ವಿತರಿಸುತ್ತಿದ್ದಾರೆ. ಅಲ್ಲದೆ ಎಲ್ಲರೂ ಪ್ರಧಾನಿ ಕರೆ ನೀಡಿರುವ ಲಾಕ್ ಡೌನ್ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.