ETV Bharat / state

ಬಿಎಸ್​ವೈಗೆ ಪೂರ್ಣಾವಧಿ ಅಧಿಕಾರ ನಡೆಸಲು ಬಿಡಿ: ರಂಭಾಪುರಿ ಶ್ರೀ

author img

By

Published : Nov 4, 2019, 8:44 PM IST

ಯಡಿಯೂರಪ್ಪ ಎಲ್ಲ ವರ್ಗದ ಜನರ ಹಿತಕಾಯುವ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಅವರ ಬೆಳವಣಿಗೆಯನ್ನ ಅವರ ಪಕ್ಷದ ಮತ್ತು ಬೇರೆ ಪಕ್ಷದ ರಾಜಕಾರಣಿಗಳಿಗೆ ಸಹಿಸಲು ಆಗುತ್ತಿಲ್ಲ ಎಂದು ಹಾವೇರಿಯಲ್ಲಿ ರಂಭಾಪುರಿ ಶ್ರೀಗಳು ಹೇಳಿದ್ಧಾರೆ.

ರಂಭಾಪುರಿ ಶ್ರೀ

ಹಾವೇರಿ: ಬಿ.ಎಸ್.ಯಡಿಯೂರಪ್ಪ ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ, ಇಂದು ಮುಖ್ಯಮಂತ್ರಿಯಾಗುವವರೆಗೂ ಹೋರಾಟದ ಬದುಕನ್ನ ನಡೆಸಿಕೊಂಡು ಬಂದಿದ್ದಾರೆ. ದೂರದೃಷ್ಟಿಯುಳ್ಳ ಬಿಎಸ್​​ವೈಗೆ ರಾಜ್ಯದಲ್ಲಿ ಪೂರ್ಣ ಅವಧಿವರೆಗೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲು ಎಲ್ಲರೂ ಸಹಕರಿಸಬೇಕೆಂದು ರಂಭಾಪುರಿ ಶ್ರೀಗಳು ತಿಳಿಸಿದರು.

ಹಾವೇರಿಯಲ್ಲಿ ರಂಭಾಪುರಿ ಶ್ರೀಗಳ ಪ್ರತಿಕ್ರಿಯೆ

ಹಾವೇರಿಯಲ್ಲಿ ಮಾತನಾಡಿದ ಶ್ರೀಗಳು, ಯಡಿಯೂರಪ್ಪ ಎಲ್ಲ ವರ್ಗದ ಜನರ ಹಿತಕಾಯುವ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಅವರ ಬೆಳವಣಿಗೆಯನ್ನ ಅವರ ಪಕ್ಷದ ಮತ್ತು ಬೇರೆ ಪಕ್ಷದ ರಾಜಕಾರಣಿಗಳಿಗೆ ಸಹಿಸಲು ಆಗುತ್ತಿಲ್ಲ. ಅವರ ಬಗ್ಗೆ ಹಲವು ಗೊಂದಲ ಸೃಷ್ಟಿಸುವ ಬದಲು ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ಬಿಡಬೇಕು ಎಂದು ಶ್ರೀಗಳು ತಿಳಿಸಿದ್ದಾರೆ.

ಹೆಚ್​.ಡಿ.ಕುಮಾರಸ್ವಾಮಿ ಕಾಂಗ್ರೆಸ್ ಜೊತೆಗಿನ ಮೈತ್ರಿಯಿಂದ ನೋವುಂಡಿದ್ದಾರೆ. ಅವರು ಸರ್ಕಾರದ ಹೊರಗೆ ಇದ್ದು ಬಿಜೆಪಿಗೆ ಬೆಂಬಲ ನೀಡುವ ಧೋರಣೆ ಹೊಂದಿದ್ದಾರೆ. ಹೆಚ್​​ಡಿಕೆ ಅನುಭವದಿಂದ ಚುನಾವಣೆಗೆ ತೊಂದರೆಯಾಗಬಹುದು. ಅವರು ಬಿಜೆಪಿ ಸರ್ಕಾರಕ್ಕೆ ಸಹಕಾರ ನೀಡಿದರೆ ಒಳ್ಳೆಯದು. ಈಗ ನಡೆಯುವ ಉಪಚುನಾವಣೆಯ ಫಲಿತಾಂಶ ಮುಂದಿನ ಭವಿಷ್ಯ ನಿರ್ಧರಿಸಲಿದೆ ಎಂದು ರಂಭಾಪುರಿ ಶ್ರೀಗಳು ಹೇಳಿದರು.

ಹಾವೇರಿ: ಬಿ.ಎಸ್.ಯಡಿಯೂರಪ್ಪ ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ, ಇಂದು ಮುಖ್ಯಮಂತ್ರಿಯಾಗುವವರೆಗೂ ಹೋರಾಟದ ಬದುಕನ್ನ ನಡೆಸಿಕೊಂಡು ಬಂದಿದ್ದಾರೆ. ದೂರದೃಷ್ಟಿಯುಳ್ಳ ಬಿಎಸ್​​ವೈಗೆ ರಾಜ್ಯದಲ್ಲಿ ಪೂರ್ಣ ಅವಧಿವರೆಗೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲು ಎಲ್ಲರೂ ಸಹಕರಿಸಬೇಕೆಂದು ರಂಭಾಪುರಿ ಶ್ರೀಗಳು ತಿಳಿಸಿದರು.

ಹಾವೇರಿಯಲ್ಲಿ ರಂಭಾಪುರಿ ಶ್ರೀಗಳ ಪ್ರತಿಕ್ರಿಯೆ

ಹಾವೇರಿಯಲ್ಲಿ ಮಾತನಾಡಿದ ಶ್ರೀಗಳು, ಯಡಿಯೂರಪ್ಪ ಎಲ್ಲ ವರ್ಗದ ಜನರ ಹಿತಕಾಯುವ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಅವರ ಬೆಳವಣಿಗೆಯನ್ನ ಅವರ ಪಕ್ಷದ ಮತ್ತು ಬೇರೆ ಪಕ್ಷದ ರಾಜಕಾರಣಿಗಳಿಗೆ ಸಹಿಸಲು ಆಗುತ್ತಿಲ್ಲ. ಅವರ ಬಗ್ಗೆ ಹಲವು ಗೊಂದಲ ಸೃಷ್ಟಿಸುವ ಬದಲು ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ಬಿಡಬೇಕು ಎಂದು ಶ್ರೀಗಳು ತಿಳಿಸಿದ್ದಾರೆ.

ಹೆಚ್​.ಡಿ.ಕುಮಾರಸ್ವಾಮಿ ಕಾಂಗ್ರೆಸ್ ಜೊತೆಗಿನ ಮೈತ್ರಿಯಿಂದ ನೋವುಂಡಿದ್ದಾರೆ. ಅವರು ಸರ್ಕಾರದ ಹೊರಗೆ ಇದ್ದು ಬಿಜೆಪಿಗೆ ಬೆಂಬಲ ನೀಡುವ ಧೋರಣೆ ಹೊಂದಿದ್ದಾರೆ. ಹೆಚ್​​ಡಿಕೆ ಅನುಭವದಿಂದ ಚುನಾವಣೆಗೆ ತೊಂದರೆಯಾಗಬಹುದು. ಅವರು ಬಿಜೆಪಿ ಸರ್ಕಾರಕ್ಕೆ ಸಹಕಾರ ನೀಡಿದರೆ ಒಳ್ಳೆಯದು. ಈಗ ನಡೆಯುವ ಉಪಚುನಾವಣೆಯ ಫಲಿತಾಂಶ ಮುಂದಿನ ಭವಿಷ್ಯ ನಿರ್ಧರಿಸಲಿದೆ ಎಂದು ರಂಭಾಪುರಿ ಶ್ರೀಗಳು ಹೇಳಿದರು.

Intro:KN_HVR_08_RAMBAPURI_YADIYURAPPA_SCRIPT_7202143
ಬಿ.ಎಸ್.ಯಡಿಯೂರಪ್ಪ ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ನಂತರ ಸಿ.ಎಂ ಆಗಿದ್ದಾರೆ. ಅವರೊಬ್ಬ ದೂರದೃಷ್ಠಿಯುಳ್ಳ ಸಿ.ಎಂ.ಎಂದು ರಂಭಾಪುರಿಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಶ್ರೀಗಳು ಯಡಿಯೂರಪ್ಪ ಎಲ್ಲ ವರ್ಗದ ಜನರ ಹಿತಕಾಯುವ ಮುಖ್ಯಮಂತ್ರಿ ಯಡಿಯೂರಪ್ಪ ಅಂದರೇ ಸಮಗ್ರ ಕರ್ನಾಟಕ ಅಭಿವೃದ್ಧಿಯ ಹರಿಕಾರ ಎಂದು ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪ ಅವರ ಬೆಳವಣಿಗೆ ಅವರ ಪಕ್ಷದ ಮತ್ತು ಬೇರೆ ಪಕ್ಷದ ರಾಜಕಾರಣಿಗಳಿಗೆ ಸಹಿಸಲು ಆಗುತ್ತಿಲ್ಲಾ. ಅವರು ಹಲವು ಗೊಂದಲಗಳನ್ನ ಸೃಷ್ಠಿಸಿ ಮಾಡುತ್ತಿದ್ದಾರೆ. ಅವರು ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ಬಿಡಬೇಕು ಎಂದು ಶ್ರೀಗಳು ತಿಳಿಸಿದ್ದಾರೆ. ಹೆಚ್ಡಿಕೆ ಕಾಂಗ್ರೆಸ್ ಮೈತ್ರಿಯಿಂದ ನೋವುಂಡಿದ್ದಾರೆ ಅವರು ಸರ್ಕಾರದ ಹೊರಗೆ ಇದ್ದು ಬಿಜೆಪಿಗೆ ಬೆಂಬಲ ನೀಡವ ಧೋರಣೆ ಹೊಂದಿದ್ದಾರೆ. ಹೆಚ್ಡಿಕೆ ಅನುಭವದಿಂದ ಚುನಾವಣೆಗೆ ತೊಂದರೆಯಾಗಬಹುದು ಎಂದು ಸರ್ಕಾರದ ಬಗ್ಗೆ ಈ ರೀತಿ ಹೇಳಿಕೆ ನೀಡಿದ್ದಾರೆ. ಅವರು ಬಿಜೆಪಿ ಸರ್ಕಾರಕ್ಕೆ ಸಹಕಾರ ನೀಡಿದರೇ ಒಳ್ಳೇಯದು. ಈಗ ನಡೆಯುವ ಉಪಚುನಾವಣೆಯ ಫಲಿತಾಂಶ ಮುಂದಿನ ಭವಿಷ್ಯ ನಿರ್ಧರಿಸಲಿದೆ ಎಂದು ರಂಭಾಪುರಿಶ್ರೀಗಳು ತಿಳಿಸಿದ್ದಾರೆ.
LOOK.........,
BYTE-01ಪ್ರಸನ್ನ ರೇಣುಕಾ ವೀರಸೋಮೇಶ್ವರ ಸ್ವಾಮಿಜಿ. ರಂಭಾಪುರಿ ಪೀಠ ಬಾಳೆಹೊನ್ನೂರುBody:sameConclusion:same
ETV Bharat Logo

Copyright © 2024 Ushodaya Enterprises Pvt. Ltd., All Rights Reserved.