ಹಾವೇರಿ: ಕೊರೊನಾ ಭೀತಿ ಹಿನ್ನೆಲೆ ದೇಶಕ್ಕೆ ದೇಶವೇ ಲಾಕ್ಡೌನ್ ಆಗಿದೆ. ಜಿಲ್ಲೆಯಲ್ಲಿಯೂ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ನಗರ ಪ್ರದೇಶಗಳಲ್ಲಿ ಯುಗಾದಿ ಹಬ್ಬದ ಕಳೆ ಮಾಯವಾಗಿದೆ. ಆದರೆ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ರೈತರು ವರ್ಷದ ಮೊದಲ ಹಬ್ಬ ಯುಗಾದಿ ಆಚರಿಸಿದರು. ತಮ್ಮ ಎತ್ತುಗಳನ್ನು ಸಿಂಗರಿಸಿಕೊಂಡು ಹೊಲಕ್ಕೆ ಹೋಗಿ ಪೂಜೆ ಸಲ್ಲಿಸಿದರು.
ಭೂ ತಾಯಿಗೆ ನಮಿಸಿ ಉತ್ತಮ ಮಳೆ ಬೆಳೆ ಬರಲಿ ಎಂದು ಬೇಡಿಕೊಂಡರು. ಯುಗಾದಿ ವಿಶೇಷವಾದ ಬೇವನ್ನು ಭೂ ತಾಯಿಗೆ ನೈವೇದ್ಯ ಮಾಡಿ ವರ್ಷ ಪೂರ್ತಿ ತಮ್ಮ ಬಾಳು ಸಿಹಿಯಾಗಿರುವಂತೆ ನೋಡಿಕೊಳ್ಳಮ್ಮ ಎಂದು ಬೇಡಿಕೊಂಡರು.