ETV Bharat / state

ಮೋದಿ  ಟೀಕಿಸದಿದ್ದರೆ ಸಿದ್ದರಾಮಯ್ಯಗೆ ಉಂಡ ಅನ್ನ ಅರಗಲ್ಲ: ಈಶ್ವರಪ್ಪ ಆಕ್ರೋಶ - ಸಚಿವ ಕೆ.ಎಸ್.ಈಶ್ವರಪ್ಪ ಹಾವೇರಿಯಲ್ಲಿ ಸಿದ್ದರಾಮಯ್ಯಗೆ ಟಾಂಗ್

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕೆ ಮಾಡದಿದ್ದರೇ ಮಾಜಿ ಸಿ.ಎಂ.ಸಿದ್ದರಾಮಯ್ಯಗೆ ಉಂಡ ಅನ್ನ ಅರಗುವುದಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಟಾಂಗ್ ನೀಡಿದ್ದಾರೆ.

eshwarappa
eshwarappa
author img

By

Published : Dec 23, 2019, 3:38 PM IST

ಹಾವೇರಿ: ಪ್ರಧಾನಿ ನರೇಂದ್ರ ಮೋದಿಗೆ ಟೀಕೆ ಮಾಡದಿದ್ದರೇ ಮಾಜಿ ಸಿ.ಎಂ.ಸಿದ್ದರಾಮಯ್ಯಗೆ ಉಂಡ ಅನ್ನ ಅರಗುವುದಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಟಾಂಗ್ ನೀಡಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ, ಮೋದಿ ವಿರುದ್ಧ ಟೀಕೆ ಮಾಡುವ ಮೂಲಕ ನಾನೇ ದೊಡ್ಡ ನಾಯಕ ಅನ್ನುವ ಭ್ರಮೆಯಲ್ಲಿದ್ದಾರೆ ಎಂದು ಲೇವಡಿ ಮಾಡಿದರು. ಇದೇ ವೇಳೆ, ಸಿದ್ದರಾಮಯ್ಯ ಪೌರತ್ವ ಕಾಯ್ದೆ ತಿದ್ದುಪಡಿ ಕುರಿತಂತೆ ಟೀಕೆ ಮಾಡುತ್ತಿದ್ದಾರೆ. ಆದರೆ, ಪೌರತ್ವ ತಿದ್ದುಪಡಿ ಕಾಯ್ದೆಯನ್ನ ಮುಸ್ಲಿಮರೇ ಸ್ವಾಗತ ಮಾಡಿದ್ದಾರೆ ಎಂದರು.

ಸಿದ್ದರಾಮಯ್ಯಗೆ ಎಷ್ಟು ಬಾರಿ ಸೋತರು ಬುದ್ದಿ ಬರಲಿಲ್ಲ, ಅವರಿಗೆ ಇನ್ನು ಎಷ್ಟು ಚುನಾವಣೆ ಸೋತ ಮೇಲೆ ಬುದ್ದಿ ಬರುತ್ತೋ ಅವರೇ ಹೇಳಬೇಕು ಎಂದು ಸವಾಲೆಸಿದರು. ಚಾಮುಂಡೇಶ್ವರಿಯಲ್ಲಿ ಸೋತರು, ಎಂಪಿ ಚುನಾವಣೆಯಲ್ಲಿ ಬಿಜೆಪಿಗೆ ಒಂದು ಸೀಟು ಬರಲ್ಲ ಅಂದಿದ್ರು, ಉಪಚುನಾವಣೆಯಲ್ಲಿ ಸಹ ಬಿಜೆಪಿಗೆ ಹೆಚ್ಚಿನ ಸೀಟು ಬಂದಾಗ ಅವರಿಗೆ ಬುದ್ದಿ ಬರಲಿಲ್ಲ ಎಂದು ಛೇಡಿಸಿದರು.

ಕೆ.ಎಸ್.ಈಶ್ವರಪ್ಪ

ಶಾಸಕರಾದ ಮೇಲೆ ಎಲ್ಲರಿಗೂ ಸಚಿವರಾಗಬೇಕು ಎನ್ನುವ ಆಸೆ ಇರುತ್ತೆ. ಎಲ್ಲ ಸ್ವಾಮೀಜಿಗಳಿಗೂ ತಮ್ಮ ಜಾತಿಯವರು ಸಚಿವ, ಉಪಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಬೇಕೆಂಬ ಆಸೆ ಇರುತ್ತೆ. ಆದರೆ, ಸಂವಿಧಾನದಲ್ಲಿ ಏನು ಇರುತ್ತೊ ಅದನ್ನ ಪಾಲಿಸಬೇಕಾಗುತ್ತೆ. ಅದರಂತೆ ಸಚಿವ ಸ್ಥಾನ, ಉಪಮುಖ್ಯಮಂತ್ರಿ ಸ್ಥಾನ ನೀಡಬೇಕಾಗುತ್ತೆ. ಸ್ವಾಮೀಜಿಗಳು ತಮಗೆ ಮಾರ್ಗದರ್ಶನ ಮಾಡಬೇಕು ಎಂದು ತಿಳಿಸಿದರು.

ಹಾವೇರಿ: ಪ್ರಧಾನಿ ನರೇಂದ್ರ ಮೋದಿಗೆ ಟೀಕೆ ಮಾಡದಿದ್ದರೇ ಮಾಜಿ ಸಿ.ಎಂ.ಸಿದ್ದರಾಮಯ್ಯಗೆ ಉಂಡ ಅನ್ನ ಅರಗುವುದಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಟಾಂಗ್ ನೀಡಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ, ಮೋದಿ ವಿರುದ್ಧ ಟೀಕೆ ಮಾಡುವ ಮೂಲಕ ನಾನೇ ದೊಡ್ಡ ನಾಯಕ ಅನ್ನುವ ಭ್ರಮೆಯಲ್ಲಿದ್ದಾರೆ ಎಂದು ಲೇವಡಿ ಮಾಡಿದರು. ಇದೇ ವೇಳೆ, ಸಿದ್ದರಾಮಯ್ಯ ಪೌರತ್ವ ಕಾಯ್ದೆ ತಿದ್ದುಪಡಿ ಕುರಿತಂತೆ ಟೀಕೆ ಮಾಡುತ್ತಿದ್ದಾರೆ. ಆದರೆ, ಪೌರತ್ವ ತಿದ್ದುಪಡಿ ಕಾಯ್ದೆಯನ್ನ ಮುಸ್ಲಿಮರೇ ಸ್ವಾಗತ ಮಾಡಿದ್ದಾರೆ ಎಂದರು.

ಸಿದ್ದರಾಮಯ್ಯಗೆ ಎಷ್ಟು ಬಾರಿ ಸೋತರು ಬುದ್ದಿ ಬರಲಿಲ್ಲ, ಅವರಿಗೆ ಇನ್ನು ಎಷ್ಟು ಚುನಾವಣೆ ಸೋತ ಮೇಲೆ ಬುದ್ದಿ ಬರುತ್ತೋ ಅವರೇ ಹೇಳಬೇಕು ಎಂದು ಸವಾಲೆಸಿದರು. ಚಾಮುಂಡೇಶ್ವರಿಯಲ್ಲಿ ಸೋತರು, ಎಂಪಿ ಚುನಾವಣೆಯಲ್ಲಿ ಬಿಜೆಪಿಗೆ ಒಂದು ಸೀಟು ಬರಲ್ಲ ಅಂದಿದ್ರು, ಉಪಚುನಾವಣೆಯಲ್ಲಿ ಸಹ ಬಿಜೆಪಿಗೆ ಹೆಚ್ಚಿನ ಸೀಟು ಬಂದಾಗ ಅವರಿಗೆ ಬುದ್ದಿ ಬರಲಿಲ್ಲ ಎಂದು ಛೇಡಿಸಿದರು.

ಕೆ.ಎಸ್.ಈಶ್ವರಪ್ಪ

ಶಾಸಕರಾದ ಮೇಲೆ ಎಲ್ಲರಿಗೂ ಸಚಿವರಾಗಬೇಕು ಎನ್ನುವ ಆಸೆ ಇರುತ್ತೆ. ಎಲ್ಲ ಸ್ವಾಮೀಜಿಗಳಿಗೂ ತಮ್ಮ ಜಾತಿಯವರು ಸಚಿವ, ಉಪಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಬೇಕೆಂಬ ಆಸೆ ಇರುತ್ತೆ. ಆದರೆ, ಸಂವಿಧಾನದಲ್ಲಿ ಏನು ಇರುತ್ತೊ ಅದನ್ನ ಪಾಲಿಸಬೇಕಾಗುತ್ತೆ. ಅದರಂತೆ ಸಚಿವ ಸ್ಥಾನ, ಉಪಮುಖ್ಯಮಂತ್ರಿ ಸ್ಥಾನ ನೀಡಬೇಕಾಗುತ್ತೆ. ಸ್ವಾಮೀಜಿಗಳು ತಮಗೆ ಮಾರ್ಗದರ್ಶನ ಮಾಡಬೇಕು ಎಂದು ತಿಳಿಸಿದರು.

Intro:KN_HVR_02_SIDDU_ESWARAPPA_SCRIPT_7202143
ಮಾಜಿ ಸಿ.ಎಂ.ಸಿದ್ದರಾಮಯ್ಯಗೆ ಪ್ರಧಾನಿ ನರೇಂದ್ರ ಮೋದಿಗೆ ಟೀಕೆ ಮಾಡದಿದ್ದರೇ ಉಂಡ ಅನ್ನ ಅರಗುವುದಿಲ್ಲಾ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ ಮೋದಿ ಟೀಕೆ ಮಾಡುವ ಮೂಲಕ ನಾನೇ ದೊಡ್ಡ ನಾಯಕ ಅನ್ನುವ ಭ್ರಮೆಯಲ್ಲಿದ್ದಾರೆ ಎಂದು ಲೇವಡಿ ಮಾಡಿದರು. ಇದೇ ವೇಳೆ ಸಿದ್ದರಾಮಯ್ಯ ಪೌರತ್ವ ಕಾಯ್ದೆ ತಿದ್ದುಪಡಿ ಕುರಿತಂತೆ ಟೀಕೆ ಮಾಡುತ್ತಿದ್ದಾರೆ. ಆದರೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನ ಮುಸ್ಲೀಂರೇ ಸ್ವಾಗತ ಮಾಡಿದ್ದಾರೆ ಎಂದು ತಿಳಿಸಿದರು. ಸಿದ್ದರಾಮಯ್ಯಗೆ ಎಷ್ಟು ಬಾರಿ ಸೋತರು ಬುದ್ದಿ ಬರಲಿಲ್ಲಾ ಅವರಿಗೆ ಇನ್ನು ಎಷ್ಟು ಚುನಾವಣೆ ಸೋತ ಮೇಲೆ ಬುದ್ದಿ ಬರುತ್ತೋ ಅವರೇ ಹೇಳಬೇಕು ಎಂದು ಈಶ್ವರಪ್ಪ ಸವಾಲೆಸಿದರು. ಚಾಮುಂಡೇಶ್ವರಿಯಲ್ಲಿ ಸೋತರು, ಎಂಪಿ ಚುನಾವಣೆಯಲ್ಲಿ ಬಿಜೆಪಿ ಒಂದು ಸೀಟು ಬರಲ್ಲ ಅಂದಿದ್ರು ಆದ್ರೊ 25 ಸೀಟ್ ಬಂದ್ವು. ಉಪಚುನಾವಣೆಯಲ್ಲಿ ಸಹ ಬಿಜೆಪಿಗೆ ಹೆಚ್ಚಿನ ಸೀಟು ಬಂದಾಗ ಸಹ ಅವರಿಗೆ ಬುದ್ದಿ ಬರಲಿಲ್ಲಾ ಎಂದು ಆರೋಪಿಸಿದರು. ಶಾಸಕರಾದ ಮೇಲೆ ಎಲ್ಲರಿಗೂ ಸಚಿವರಾಗಬೇಕು ಎನ್ನುವ ಆಸೆ ಇರುತ್ತೆ. ಎಲ್ಲ ಸ್ವಾಮಿಜಿಗಳಿಗೂ ತಮ್ಮ ಜಾತಿಯವರು ಸಚಿವ ಉಪಮುಖ್ಯಮಂತ್ರಿ ಮುಖ್ಯಮಂತ್ರಿಯಾಗುವ ಆಸೆ ಇರುತ್ತೆ. ಆದರೆ ಸಂವಿಧಾನದಲ್ಲಿ ಏನು ಇರುತ್ತೊ ಅದನ್ನ ಪಾಲಿಸಬೇಕಾಗುತ್ತೆ. ಅದರಂತೆ ಸಚಿವ ಸ್ಥಾನ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕಾಗುತ್ತೆ ಎಂದು ತಿಳಿಸಿದರು. ಈಗ ನಮಗೆ ಸಂಪೂರ್ಣ ಬೆಂಬಲ ಸಿಕ್ಕಿದೆ ಸ್ವಾಮಿಜಿಗಳು ತಮಗೆ ಮಾರ್ಗದರ್ಶನ ಮಾಡಬೇಕು. ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಮೂರುವರೆ ವರ್ಷ ಪೂರೈಸಲಿದ್ದು ಸ್ವಾಮಿಜಿಗಳು ಸೇರಿದಂತೆ ರಾಜ್ಯದ ಅಭಿವೃದ್ಧಿ ಯಡಿಯೂರಪ್ಪ ಕೆಲಸ ಮಾಡಲಿದ್ದಾರೆ ಎಂದು ಈಶ್ವರಪ್ಪ ತಿಳಿಸಿದರು.
LOOK..........,
BYTE-01ಕೆ.ಎಸ್.ಈಶ್ವರಪ್ಪ, ಸಚಿವBody:sameConclusion:same

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.