ರಾಣೆಬೆನ್ನೂರು: ದುರ್ಗಾಂಬಿಕಾ ದೇವಿ ಜಾತ್ರೆಯ ನಿಮಿತ್ತ ಸರ್ಕಾರಿ ಬಸ್ ಸಿಗದ ಕಾರಣ ಪ್ರಯಾಣಿಕರು ಆಂಬುಲೆನ್ಸ್ನಲ್ಲಿ ದಾವಣಗೆರೆಗೆ ಪ್ರಯಾಣಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಹೌದು, ರಾಣೆಬೆನ್ನೂರು ನಗರದ ಸರ್ಕಾರಿ ಬಸ್ ನಿಲ್ದಾಣದಲ್ಲಿ ದಾವಣಗೆರೆಗೆ ತೆರಳಲು ಬಸ್ ಸಿಗದ ಕಾರಣ ಪ್ರಯಾಣಿಕರು ಆಂಬುಲೆನ್ಸ್ ಮೂಲಕ ತೆರಳುತ್ತಿರುವ ವಿಡಿಯೋವನ್ನು ಸಾರ್ವಜನಿಕರು ಸೆರೆ ಹಿಡಿದಿದ್ದಾರೆ.
ಈ ವಿಡಿಯೋವನ್ನು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದ್ದು, "ಸರ್ಕಾರಿ ಬಸ್ ಕೊರತೆಯಿಂದ ಪ್ರಯಾಣಿಕರು ಆಂಬುಲೆನ್ಸ್ ಮೂಲಕ ಪ್ರಯಾಣ ಮಾಡುತ್ತಿರುವುದು ಸಂತೋಷಕರ ಹಾಗೂ ಆರೋಗ್ಯಕರ ವಿಷಯ ಎಂದು ಟ್ರೋಲ್ ಮಾಡಿ ಹರಿಬಿಟ್ಟಿದ್ದಾರೆ.