ಹಾವೇರಿ: ನಾನು ಮುಖ್ಯಮಂತ್ರಿಯಾಗುವುದಕ್ಕೆ ಕ್ಷೇತ್ರದ ಮಠಗಳು ಮತ್ತು ಮತದಾರರ ಆಶೀರ್ವಾದವೇ ಕಾರಣ. ರಾಜ್ಯದಲ್ಲಿ ಸದ್ಯ ಗುರಿ ಮೀರಿ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಮಾಡಿದ್ದೇವೆ. ಕೇಂದ್ರ ಸರ್ಕಾರ ಸಹಕಾರ ನೀಡಿದ ಫಲವಾಗಿ ದಾಖಲೆಯ ಬಜೆಟ್ ಮಂಡಿಸಲು ಸಾಧ್ಯವಾಯಿತು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇದನ್ನೂ ಓದಿ: ಚಂದ್ರು ಹತ್ಯೆ ಪ್ರಕರಣವನ್ನು ಈಗಾಗಲೇ ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ : ಸಿಎಂ ಬೊಮ್ಮಾಯಿ
'ನಾನು ಕನಕದಾಸ ಸಂತ ಶಿಶುನಾಳ ಶರೀಫರು ಜನಿಸಿದ ಪುಣ್ಯಭೂಮಿಯನ್ನು ಪ್ರತಿನಿಧಿಸುತ್ತಿರುವುದಕ್ಕೆ ಹೆಮ್ಮೆಯಾಗುತ್ತದೆ. ನಿಮ್ಮೆಲ್ಲರ ಆಶೀರ್ವಾದದಿಂದ ಪ್ರಯತ್ನಿಸಿದ ಯೋಜನೆಗಳು ಯಶಸ್ವಿಯಾಗುತ್ತಿವೆ. ಇಡೀ ನಾಡು ಸುಖ,ಶಾಂತಿ,ನೆಮ್ಮದಿಯಿಂದ ಇದ್ದಾಗ ಪ್ರಗತಿ ಸಾಧ್ಯ ಸಿಎಂ ಬೊಮ್ಮಾಯಿ ಅಭಿಪ್ರಾಯಪಟ್ಟರು.