ETV Bharat / state

ತಗ್ಗಿದ ಪ್ರವಾಹ: ಹಾವೇರಿಯಲ್ಲಿ ಸೇತುವೆಗಳು ಸಂಚಾರಕ್ಕೆ ಮುಕ್ತ

author img

By

Published : Jul 19, 2022, 11:39 AM IST

ಜಿಲ್ಲೆಯಲ್ಲಿ ಮಳೆ ಆರ್ಭಟ ತಗ್ಗಿದ್ದು ನದಿಗಳಲ್ಲಿ ನೀರಿನ ಪ್ರವಾಹವೂ ಕಡಿಮೆಯಾಗುತ್ತಿದೆ. ಹೀಗಾಗಿ ಸೇತುವೆಗಳ ಮೇಲಿನ ನೀರು ಕಡಿಮೆಯಾಗಿ ಜನರ ಓಡಾಟ‌‌ ಆರಂಭವಾಗಿದೆ.

Bridges are opened for traffic in Haveri
ಸೇತುವೆಗಳು ಸಂಚಾರಕ್ಕೆ ಮುಕ್ತ

ಹಾವೇರಿ: ಜಿಲ್ಲೆಯಾದ್ಯಂತ ಮಳೆ ಅಬ್ಬರ ಕಡಿಮೆಯಾಗಿದ್ದು ವರದಾ, ತುಂಗಭದ್ರಾ, ಧರ್ಮಾ, ಕುಮುದ್ವತಿ ನದಿಗಳಲ್ಲಿ ನೀರಿನ‌‌ ಪ್ರಮಾಣವೂ ತಗ್ಗುತ್ತಿದೆ.‌ ಹೀಗಾಗಿ ಸೇತುವೆಗಳು ಜನ, ವಾಹನ ಸಂಚಾರಕ್ಕೆ ಮುಕ್ತವಾಗುತ್ತಿವೆ. ರಟ್ಟಿಹಳ್ಳಿ ತಾಲೂಕಿನ ಯಲಿವಾಳ-ಚಪ್ಪರದಹಳ್ಳಿ ಸೇತುವೆ ಮೇಲಿನ ನೀರು ಇಳಿದಿದ್ದು, ಜನರ ಓಡಾಟ‌‌ ಶುರುವಾಗಿದೆ. ಸೇತುವೆ ಮೇಲೆ ಕುಮುದ್ವತಿ ನದಿ ನೀರು ಭರಪೂರ ಹರಿಯುತ್ತಿದ್ದುದರಿಂದ ಸಂಚಾರ ಬಂದ್ ಆಗಿತ್ತು. ಸವಣೂರು ತಾಲೂಕಿನ ಕಲಕೋಟಿ-ಕರ್ಜಗಿ ಸೇತುವೆ ಮೇಲಿನ ನೀರು ಕೂಡಾ ಕಡಿಮೆಯಾಗಿದ್ದು ಸಂಚಾರಕ್ಕೆ ತೆರೆದುಕೊಂಡಿದೆ.

ಹಾವೇರಿ: ಜಿಲ್ಲೆಯಾದ್ಯಂತ ಮಳೆ ಅಬ್ಬರ ಕಡಿಮೆಯಾಗಿದ್ದು ವರದಾ, ತುಂಗಭದ್ರಾ, ಧರ್ಮಾ, ಕುಮುದ್ವತಿ ನದಿಗಳಲ್ಲಿ ನೀರಿನ‌‌ ಪ್ರಮಾಣವೂ ತಗ್ಗುತ್ತಿದೆ.‌ ಹೀಗಾಗಿ ಸೇತುವೆಗಳು ಜನ, ವಾಹನ ಸಂಚಾರಕ್ಕೆ ಮುಕ್ತವಾಗುತ್ತಿವೆ. ರಟ್ಟಿಹಳ್ಳಿ ತಾಲೂಕಿನ ಯಲಿವಾಳ-ಚಪ್ಪರದಹಳ್ಳಿ ಸೇತುವೆ ಮೇಲಿನ ನೀರು ಇಳಿದಿದ್ದು, ಜನರ ಓಡಾಟ‌‌ ಶುರುವಾಗಿದೆ. ಸೇತುವೆ ಮೇಲೆ ಕುಮುದ್ವತಿ ನದಿ ನೀರು ಭರಪೂರ ಹರಿಯುತ್ತಿದ್ದುದರಿಂದ ಸಂಚಾರ ಬಂದ್ ಆಗಿತ್ತು. ಸವಣೂರು ತಾಲೂಕಿನ ಕಲಕೋಟಿ-ಕರ್ಜಗಿ ಸೇತುವೆ ಮೇಲಿನ ನೀರು ಕೂಡಾ ಕಡಿಮೆಯಾಗಿದ್ದು ಸಂಚಾರಕ್ಕೆ ತೆರೆದುಕೊಂಡಿದೆ.


ಇದನ್ನೂ ಓದಿ: ಶಿಡ್ಲಾಪುರ ಕೆರೆ ಭರ್ತಿ: ಜಮೀನಿಗೆ ತೆರಳಲು ರೈತರ ಹರಸಾಹಸ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.