ETV Bharat / state

ಹಾವೇರಿ: ಉತ್ತಮ ದರ ಸಿಗದೆ ಬೇಸತ್ತು ಮೆಣಸಿನಕಾಯಿ ಬೆಳೆ ನಾಶಪಡಿಸಿದ ರೈತ! - ಮೆಣಸಿನಕಾಯಿ ಬೆಳೆ ನಾಶ ಪಡಿಸಿದ ರೈತ

ಉತ್ತಮ ದರ ಸಿಗದೆ ಬೇಸತ್ತು ಬೆಳೆದಿದ್ದ ಮೆಣಸಿನಕಾಯಿ ಬೆಳೆಯನ್ನ ರೈತ ನಾಶಪಡಿಸಿದ್ದಾನೆ.

ಮೆಣಸಿನಕಾಯಿ ಬೆಳೆ ನಾಶಪಡಿಸಿದ ರೈತ
ಮೆಣಸಿನಕಾಯಿ ಬೆಳೆ ನಾಶಪಡಿಸಿದ ರೈತ
author img

By

Published : May 3, 2020, 10:02 PM IST

ಹಾವೇರಿ: ಲಾಕ್​ಡೌನ್​ನಿಂದಾಗಿ ಉತ್ತಮ ದರ ಸಿಗದೆ ಬೇಸತ್ತು ಬೆಳೆದಿದ್ದ ಮೆಣಸಿನಕಾಯಿ ಬೆಳೆಯನ್ನ ರೈತನೋರ್ವ ನಾಶಪಡಿಸಿರುವ ಘಟನೆ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ನಡೆದಿದೆ.

ಮೆಣಸಿನಕಾಯಿ ಬೆಳೆ ನಾಶಪಡಿಸಿದ ರೈತ

ಗ್ರಾಮದ ಬಸವಂತಪ್ಪ ಅಗಡಿ ಎಂಬ ರೈತ ತನ್ನ ಮೂರು ಎಕರೆ ಜಮೀನಿನಲ್ಲಿ 1.5 ಲಕ್ಷ ರೂಪಾಯಿ ಖರ್ಚು ಮಾಡಿ ಮೆಣಸಿನಕಾಯಿ ಬೆಳೆದಿದ್ದ. ಆದರೆ ಲಾಕ್​ಡೌನ್​ನಿಂದಾಗಿ ಮೆನಸಿಣಕಾಯಿ ದರ ಕ್ವಿಂಟಾಲ್​ಗೆ ಕೇವಲ‌ 800 ರೂಪಾಯಿಯಿಂದ 1000 ರೂಪಾಯಿಗೆ ಕುಸಿದಿತ್ತು. ಲಾಕ್​ಡೌನ್​ಗಿಂತಲೂ ಮೊದಲು ಮೆನಸಿಣಕಾಯಿ ದರ ಕ್ವಿಂಟಾಲ್​ಗೆ 4000ರಿಂದ 10,000 ರೂಪಾಯಿವರೆಗೆ ಮಾರಾಟ ಆಗುತ್ತಿತ್ತು.

ಮುಂಬೈ ಸೇರಿದಂತೆ ವಿವಿಧ ಮಾರುಕಟ್ಟೆಗಳಿಗೆ ಹೋಗುತ್ತಿತ್ತು. ಆದರೆ ಲಾಕ್​ಡೌನ್ ನಂತರ ದರ ಕುಸಿದಿದ್ದರಿಂದ ಬೇಸತ್ತು ರೋಟರ್ ಹೊಡೆದು ರೈತ ಬಸವಂತಪ್ಪ ಬೆಳೆ ನಾಶ ಮಾಡಿದ್ದಾರೆ.

ಹಾವೇರಿ: ಲಾಕ್​ಡೌನ್​ನಿಂದಾಗಿ ಉತ್ತಮ ದರ ಸಿಗದೆ ಬೇಸತ್ತು ಬೆಳೆದಿದ್ದ ಮೆಣಸಿನಕಾಯಿ ಬೆಳೆಯನ್ನ ರೈತನೋರ್ವ ನಾಶಪಡಿಸಿರುವ ಘಟನೆ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ನಡೆದಿದೆ.

ಮೆಣಸಿನಕಾಯಿ ಬೆಳೆ ನಾಶಪಡಿಸಿದ ರೈತ

ಗ್ರಾಮದ ಬಸವಂತಪ್ಪ ಅಗಡಿ ಎಂಬ ರೈತ ತನ್ನ ಮೂರು ಎಕರೆ ಜಮೀನಿನಲ್ಲಿ 1.5 ಲಕ್ಷ ರೂಪಾಯಿ ಖರ್ಚು ಮಾಡಿ ಮೆಣಸಿನಕಾಯಿ ಬೆಳೆದಿದ್ದ. ಆದರೆ ಲಾಕ್​ಡೌನ್​ನಿಂದಾಗಿ ಮೆನಸಿಣಕಾಯಿ ದರ ಕ್ವಿಂಟಾಲ್​ಗೆ ಕೇವಲ‌ 800 ರೂಪಾಯಿಯಿಂದ 1000 ರೂಪಾಯಿಗೆ ಕುಸಿದಿತ್ತು. ಲಾಕ್​ಡೌನ್​ಗಿಂತಲೂ ಮೊದಲು ಮೆನಸಿಣಕಾಯಿ ದರ ಕ್ವಿಂಟಾಲ್​ಗೆ 4000ರಿಂದ 10,000 ರೂಪಾಯಿವರೆಗೆ ಮಾರಾಟ ಆಗುತ್ತಿತ್ತು.

ಮುಂಬೈ ಸೇರಿದಂತೆ ವಿವಿಧ ಮಾರುಕಟ್ಟೆಗಳಿಗೆ ಹೋಗುತ್ತಿತ್ತು. ಆದರೆ ಲಾಕ್​ಡೌನ್ ನಂತರ ದರ ಕುಸಿದಿದ್ದರಿಂದ ಬೇಸತ್ತು ರೋಟರ್ ಹೊಡೆದು ರೈತ ಬಸವಂತಪ್ಪ ಬೆಳೆ ನಾಶ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.