ETV Bharat / state

ವಿವಿಧ ಅಂಗಡಿಗಳ ಮೇಲೆ ಕಾರ್ಮಿಕ ಇಲಾಖೆ ಅಧಿಕಾರಿಗಳ ದಾಳಿ: 5 ಬಾಲಕರ ರಕ್ಷಣೆ

author img

By

Published : Jan 13, 2021, 10:22 PM IST

ರಾಣೆಬೆನ್ನೂರು ತಾಲೂಕಿನ ಕಿರಾಣಿ ಅಂಗಡಿ, ಟೈಯರ್ ಅಲೈನ್​ಮೆಂಟ್​ ಮತ್ತು ಪಾದರಕ್ಷೆ ಅಂಗಡಿಗಳ ಮೇಲೆ ದಿಢೀರ್​ ದಾಳಿ ಮಾಡಿದ ಅಧಿಕಾರಿಗಳು ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ.

5-child-laborers-detained-in-ranebennur
5 ಬಾಲಕರು ವಶ

ರಾಣೆಬೆನ್ನೂರು: ತಾಲೂಕಿನ ವಿವಿಧ ಅಂಗಡಿಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ 5 ಬಾಲಕರನ್ನು ಕಾರ್ಮಿಕ ಇಲಾಖೆಯ ಜಿಲ್ಲಾಧಿಕಾರಿ ಲಲಿತಾ ಸಾತೇನಹಳ್ಳಿ ರಕ್ಷಣೆ ಮಾಡಿ ತಮ್ಮ ವಶಕ್ಕೆ ಪಡೆದಿದ್ದಾರೆ.

ಕಿರಾಣಿ ಅಂಗಡಿ, ಟೈಯರ್ ಅಲೈನ್​ಮೆಂಟ್​ ಮತ್ತು ಪಾದರಕ್ಷೆ ಅಂಗಡಿಗಳ ಮೇಲೆ ದಿಢೀರ್​ ದಾಳಿ ಮಾಡಿದ ಅಧಿಕಾರಿಗಳು ಬಾಲ ಕಾರ್ಮಿಕರನ್ನು ರಕ್ಷಿಸಿದ್ದಾರೆ.

ಕಳೆದ ಒಂದು ವಾರದಿಂದ ಬಾಲ ಕಾರ್ಮಿಕರ ಪತ್ತೆಗಾಗಿ ಹತ್ತಾರು ಸ್ಥಳಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದರು. ಆದರೆ ಯಾರೊಬ್ಬರು ಪತ್ತೆಯಾಗಿರಲಿಲ್ಲ. ಇಂದು ರಾಣೆಬೆನ್ನೂರು ನಗರದಲ್ಲಿ ತಹಶೀಲ್ದಾರ್​ ಬಸನಗೌಡ ಕೊಟೂರು ಮತ್ತು ಕಾರ್ಮಿಕ ನಿರೀಕ್ಷಕರಾದ ಪಿ.ಜಿ.ಬಾಲಾಜಿ ದಾಳಿ ನಡೆಸಿದಾಗ ಐವರು ವಯಸ್ಸಿಗೆ ಬಾರದ ಮಕ್ಕಳನ್ನು ಅಂಗಡಿ ಮಾಲೀಕರು ದುಡಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ಕಾರ್ಮಿಕ ಇಲಾಖೆ ಅಧಿಕಾರಿಗಳು ಮಾಲೀಕರಿಗೆ ನೋಟಿಸ್ ನೀಡಿದ್ದಾರೆ.

ಓದಿ: ಸಚಿವ ಸ್ಥಾನ ಕಳೆದುಕೊಂಡ ನಾಗೇಶ್​ಗೆ ಗಿಫ್ಟ್​: ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಿದ ಸಿಎಂ!

ಜಿಲ್ಲಾ ಕಾರ್ಮಿಕ ಅಧಿಕಾರಿ ಲಲಿತಾ ಸಾತೆನಹಳ್ಳಿ, ಕಾರ್ಮಿಕ ನಿರೀಕ್ಷಕ ಪಿ.ಜಿ.ಬಾಲಾಜಿ ಹಾಗೂ ರಾಣೆಬೆನ್ನೂರು ತಹಶೀಲ್ದಾರ್​ ಬಸನಗೌಡ ಕೊಟೂರು ದಾಳಿಯಲ್ಲಿ ಭಾಗಿಯಾಗಿದ್ದರು.

ರಾಣೆಬೆನ್ನೂರು: ತಾಲೂಕಿನ ವಿವಿಧ ಅಂಗಡಿಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ 5 ಬಾಲಕರನ್ನು ಕಾರ್ಮಿಕ ಇಲಾಖೆಯ ಜಿಲ್ಲಾಧಿಕಾರಿ ಲಲಿತಾ ಸಾತೇನಹಳ್ಳಿ ರಕ್ಷಣೆ ಮಾಡಿ ತಮ್ಮ ವಶಕ್ಕೆ ಪಡೆದಿದ್ದಾರೆ.

ಕಿರಾಣಿ ಅಂಗಡಿ, ಟೈಯರ್ ಅಲೈನ್​ಮೆಂಟ್​ ಮತ್ತು ಪಾದರಕ್ಷೆ ಅಂಗಡಿಗಳ ಮೇಲೆ ದಿಢೀರ್​ ದಾಳಿ ಮಾಡಿದ ಅಧಿಕಾರಿಗಳು ಬಾಲ ಕಾರ್ಮಿಕರನ್ನು ರಕ್ಷಿಸಿದ್ದಾರೆ.

ಕಳೆದ ಒಂದು ವಾರದಿಂದ ಬಾಲ ಕಾರ್ಮಿಕರ ಪತ್ತೆಗಾಗಿ ಹತ್ತಾರು ಸ್ಥಳಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದರು. ಆದರೆ ಯಾರೊಬ್ಬರು ಪತ್ತೆಯಾಗಿರಲಿಲ್ಲ. ಇಂದು ರಾಣೆಬೆನ್ನೂರು ನಗರದಲ್ಲಿ ತಹಶೀಲ್ದಾರ್​ ಬಸನಗೌಡ ಕೊಟೂರು ಮತ್ತು ಕಾರ್ಮಿಕ ನಿರೀಕ್ಷಕರಾದ ಪಿ.ಜಿ.ಬಾಲಾಜಿ ದಾಳಿ ನಡೆಸಿದಾಗ ಐವರು ವಯಸ್ಸಿಗೆ ಬಾರದ ಮಕ್ಕಳನ್ನು ಅಂಗಡಿ ಮಾಲೀಕರು ದುಡಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ಕಾರ್ಮಿಕ ಇಲಾಖೆ ಅಧಿಕಾರಿಗಳು ಮಾಲೀಕರಿಗೆ ನೋಟಿಸ್ ನೀಡಿದ್ದಾರೆ.

ಓದಿ: ಸಚಿವ ಸ್ಥಾನ ಕಳೆದುಕೊಂಡ ನಾಗೇಶ್​ಗೆ ಗಿಫ್ಟ್​: ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಿದ ಸಿಎಂ!

ಜಿಲ್ಲಾ ಕಾರ್ಮಿಕ ಅಧಿಕಾರಿ ಲಲಿತಾ ಸಾತೆನಹಳ್ಳಿ, ಕಾರ್ಮಿಕ ನಿರೀಕ್ಷಕ ಪಿ.ಜಿ.ಬಾಲಾಜಿ ಹಾಗೂ ರಾಣೆಬೆನ್ನೂರು ತಹಶೀಲ್ದಾರ್​ ಬಸನಗೌಡ ಕೊಟೂರು ದಾಳಿಯಲ್ಲಿ ಭಾಗಿಯಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.