ETV Bharat / state

ಹಾವೇರಿ: ರಟ್ಟೀಹಳ್ಳಿ ಪ್ರಕರಣದಲ್ಲಿ 20 ಜನರ ಬಂಧನ

ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ಪಟ್ಟಣದಲ್ಲಿ ಆರ್​ಎಸ್​ಎಸ್​ ಕಾರ್ಯಕರ್ತರ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ಮಾಡಿದ್ದಾರೆ. ಈ ಸಂಬಂಧ 20 ಜನರನ್ನು ಈಗಾಗಲೇ ಬಂಧಿಸಲಾಗಿದೆ.

author img

By

Published : Oct 12, 2022, 8:48 PM IST

20-people-arrested-in-haveri-rss-workers-attack-case
ರಟ್ಟೀಹಳ್ಳಿ ಪ್ರಕರಣದಲ್ಲಿ 20 ಜನರ ಬಂಧನ

ಹಾವೇರಿ : ನಿನ್ನೆ ರಾತ್ರಿ ನಡೆದ ಆರ್​ಎಸ್​ಎಸ್ ಕಾರ್ಯಕರ್ತರ ಮೇಲೆ ಹಲ್ಲೆ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಅನ್ಯಕೋಮಿನ 20 ಆರೋಪಿಗಳನ್ನು ಬಂಧಿಸಿದ್ದಾರೆ. ಅಕ್ಟೋಬರ್​ 14 ರಂದು ನಡೆಯುವ ಪಥಸಂಚಲನ ಮಾರ್ಗದ ಪರಿಶೀಲನೆಗೆ ತೆರಳಿದ್ದ ನಾಲ್ಕು ಗಣವೇಷದಾರಿಗಳ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ನಡೆಸಿದ್ದರು. ಇದರಲ್ಲಿ ಗುರುರಾಜ್​ ಎಂಬುವವರಿಗೆ ಗಂಭಿರವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಲ್ಲೆ ವೇಳೆ ಗಾಯಗೊಂಡಿದ್ದ ಚಂದ್ರಪ್ಪ ನೀಡಿದ ದೂರಿನ ಆಧಾರ ಮೇಲೆ 20 ಆರೋಪಿಗಳನ್ನ ಬಂಧಿಸಿದ್ದಾರೆ. ಬಂಧಿತರ ಮೇಲೆ ಕಲಂ 143, 147, 148, 323, 324, 307, 504, 506 ಮತ್ತು 149 ಅಡಿ ಪ್ರಕರಣ ದಾಖಲಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ರಟ್ಟಿಹಳ್ಳಿ ಪಟ್ಟಣದಲ್ಲಿ ಪೊಲೀಸ್ ಬಿಗಿಬಂದೋಬಸ್ತ್​ ಕೈಗೊಳ್ಳಲಾಗಿದೆ.

ರಟ್ಟೀಹಳ್ಳಿ ಪಟ್ಟಣದಲ್ಲಿ ಆರ್​ಎಸ್​ಎಸ್​ ಕಾರ್ಯಕರ್ತರ ಮೇಲೆ ಅನ್ಯಕೋಮಿನ ಯುವಕರಿಂದ ಹಲ್ಲೆ

ರಟ್ಟಿಹಳ್ಳಿಯಲ್ಲಿ ಕಳೆದ 7 ರಿಂದ ಆರ್​ಎಸ್​ಎಸ್ ಪ್ರಾಥಮಿಕ ಶಿಕ್ಷಾ ವರ್ಗ ನಡೆಯುತ್ತಿದೆ. ಧಾರವಾಡ ವಿಭಾಗದ ಸುಮಾರು 160 ಕ್ಕೂ ಅಧಿಕ ಕಾರ್ಯಕರ್ತರು ಮತ್ತು ಆರ್​ಎಸ್​ಎಸ್ ಮುಖಂಡರು ಪ್ರಶಿಕ್ಷಾದಲ್ಲಿ ಭಾಗವಹಿಸಿದ್ದಾರೆ. ಆಕ್ಟೋಬರ್ 14 ರಂದು ನಡೆಯುವ ಪಥಸಂಚಲನದೊಂದಿಗೆ ಪ್ರಶಿಕ್ಷಾ ಮುಕ್ತಾಯವಾಗಲಿದೆ. ಈ ಮಧ್ಯೆ ಶುಕ್ರವಾರ ನಡೆಯುವ ಪಥಸಂಚಲನಕ್ಕೆ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಇದನ್ನೂ ಓದಿ : ರಟ್ಟೀಹಳ್ಳಿಯಲ್ಲಿ ಆರ್​ಎಸ್​ಎಸ್​ ಕಾರ್ಯಕರ್ತರ ಮೇಲೆ ಹಲ್ಲೆ..

ಹಾವೇರಿ : ನಿನ್ನೆ ರಾತ್ರಿ ನಡೆದ ಆರ್​ಎಸ್​ಎಸ್ ಕಾರ್ಯಕರ್ತರ ಮೇಲೆ ಹಲ್ಲೆ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಅನ್ಯಕೋಮಿನ 20 ಆರೋಪಿಗಳನ್ನು ಬಂಧಿಸಿದ್ದಾರೆ. ಅಕ್ಟೋಬರ್​ 14 ರಂದು ನಡೆಯುವ ಪಥಸಂಚಲನ ಮಾರ್ಗದ ಪರಿಶೀಲನೆಗೆ ತೆರಳಿದ್ದ ನಾಲ್ಕು ಗಣವೇಷದಾರಿಗಳ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ನಡೆಸಿದ್ದರು. ಇದರಲ್ಲಿ ಗುರುರಾಜ್​ ಎಂಬುವವರಿಗೆ ಗಂಭಿರವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಲ್ಲೆ ವೇಳೆ ಗಾಯಗೊಂಡಿದ್ದ ಚಂದ್ರಪ್ಪ ನೀಡಿದ ದೂರಿನ ಆಧಾರ ಮೇಲೆ 20 ಆರೋಪಿಗಳನ್ನ ಬಂಧಿಸಿದ್ದಾರೆ. ಬಂಧಿತರ ಮೇಲೆ ಕಲಂ 143, 147, 148, 323, 324, 307, 504, 506 ಮತ್ತು 149 ಅಡಿ ಪ್ರಕರಣ ದಾಖಲಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ರಟ್ಟಿಹಳ್ಳಿ ಪಟ್ಟಣದಲ್ಲಿ ಪೊಲೀಸ್ ಬಿಗಿಬಂದೋಬಸ್ತ್​ ಕೈಗೊಳ್ಳಲಾಗಿದೆ.

ರಟ್ಟೀಹಳ್ಳಿ ಪಟ್ಟಣದಲ್ಲಿ ಆರ್​ಎಸ್​ಎಸ್​ ಕಾರ್ಯಕರ್ತರ ಮೇಲೆ ಅನ್ಯಕೋಮಿನ ಯುವಕರಿಂದ ಹಲ್ಲೆ

ರಟ್ಟಿಹಳ್ಳಿಯಲ್ಲಿ ಕಳೆದ 7 ರಿಂದ ಆರ್​ಎಸ್​ಎಸ್ ಪ್ರಾಥಮಿಕ ಶಿಕ್ಷಾ ವರ್ಗ ನಡೆಯುತ್ತಿದೆ. ಧಾರವಾಡ ವಿಭಾಗದ ಸುಮಾರು 160 ಕ್ಕೂ ಅಧಿಕ ಕಾರ್ಯಕರ್ತರು ಮತ್ತು ಆರ್​ಎಸ್​ಎಸ್ ಮುಖಂಡರು ಪ್ರಶಿಕ್ಷಾದಲ್ಲಿ ಭಾಗವಹಿಸಿದ್ದಾರೆ. ಆಕ್ಟೋಬರ್ 14 ರಂದು ನಡೆಯುವ ಪಥಸಂಚಲನದೊಂದಿಗೆ ಪ್ರಶಿಕ್ಷಾ ಮುಕ್ತಾಯವಾಗಲಿದೆ. ಈ ಮಧ್ಯೆ ಶುಕ್ರವಾರ ನಡೆಯುವ ಪಥಸಂಚಲನಕ್ಕೆ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಇದನ್ನೂ ಓದಿ : ರಟ್ಟೀಹಳ್ಳಿಯಲ್ಲಿ ಆರ್​ಎಸ್​ಎಸ್​ ಕಾರ್ಯಕರ್ತರ ಮೇಲೆ ಹಲ್ಲೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.