ಅರಕಲಗೂಡು: ಕೊಣನೂರು ವೃತ್ತದ ಗ್ರಾಮ ಸಹಾಯಕ ಆನಂದ್ ಅವರು ಅಕಾಲಿಕ ಮರಣ ಹೊಂದಿದ್ದರಿಂದ ಅರಕಲಗೂಡು ಗ್ರಾಮಲೆಕ್ಕಿಗರ ಸಂಘ ಹಾಗೂ ರಾಮನಾಥಪುರ ನಾಡ ಕಚೇರಿ ವತಿಯಿಂದ ಮೃತ ಆನಂದ್ ಕುಟುಂಬಕ್ಕೆ ಧನಸಹಾಯ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಮನಾಥಪುರ ಹೋಬಳಿಯ ರಾಜಸ್ವ ನಿರೀಕ್ಷಕರಾದ ಸಿ.ಸ್ವಾಮಿ.ಗ್ರಾಮಲೆಕ್ಕಿಗರ ಸಂಘದ ಅಧ್ಯಕ್ಷರಾದ ಲೋಕೇಶ್ ಹಾಗೂ ಗ್ರಾಮಲೆಕ್ಕಿಗರು ಹಾಜರಿದ್ದರು.