ETV Bharat / state

ಉಪಕಾರ ಮಾಡದಿದ್ದರೂ ಅಪಕಾರ ಮಾಡುವುದು ಪಾಪಕ್ಕೆ ಸಮಾನ.. ವಿಧುಶೇಖರ ಭಾರತೀ ಶ್ರೀಗಳು - ಹಾಸನದಲ್ಲಿ ವಿಧುಶೇಖರ ಭಾರತೀ ಶ್ರೀಗಳು ಪ್ರವಚನ ಸುದ್ದಿ

ಉಪಕಾರ ಮಾಡದಿದ್ದರೂ ಅಪಕಾರ ಮಾಡುವುದು ಪಾಪಕ್ಕೆ ಸಮಾನ ಎಂದು ಶೃಂಗೇರಿ ಪೀಠದ ಕಿರಿಯ ಸ್ವಾಮಿಜೀಗಳಾದ ವಿಧುಶೇಖರ ಭಾರತೀ ಶ್ರೀಗಳು ಹೇಳಿದರು.

ವಿಧುಶೇಖರ ಭಾರತೀ ಶ್ರೀಗಳ ಆಶೀರ್ವಚನ
author img

By

Published : Nov 19, 2019, 7:04 PM IST

ಹಾಸನ: ಜಗದ್ಗುರು ಆದಿಶಂಕರಚಾರ್ಯರ ಪರೋಪಕಾರ ಪುಣ್ಯಯಾ, ಪಾಪಯಾ ಪರಪೀಡನಂ ಎಂಬ ಮಾತನ್ನ ಇಂದಿನ ಯುಗದಲ್ಲಿ ಅಳವಡಿಸಿಕೊಂಡರೆ ದೇಶ ಸುಭಿಕ್ಷವಾಗಿರುತ್ತದೆ. ಉಪಕಾರ ಮಾಡದಿದ್ದರೂ ಅಪಕಾರ ಮಾಡುವುದು ಪಾಪಕ್ಕೆ ಸಮಾನ ಎಂದು ಶೃಂಗೇರಿ ಪೀಠದ ಕಿರಿಯ ಸ್ವಾಮಿಜೀಗಳಾದ ವಿಧುಶೇಖರ ಭಾರತೀ ಶ್ರೀಗಳು ಹೇಳಿದರು.

ವಿಧುಶೇಖರ ಭಾರತೀ ಶ್ರೀಗಳ ಆಶೀರ್ವಚನ

ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಅಣತಿ ಗ್ರಾಮದಲ್ಲಿ ಭಾರತಿ ನಿವಾಸ ಮತ್ತು ಕಲ್ಯಾಣ ಮಂಟಪದ ಶಿಲಾನ್ಯಾಸವನ್ನ ನೆರವೇರಿಸಿದ ಬಳಿಕ ಆಶೀರ್ವಚನ ನೀಡಿದರು. ಇನ್ನೊಬ್ಬರಿಗೆ ಉಪಕಾರ ಮಾಡುವುದು ಪುಣ್ಯ. ಅಪಕಾರ ಮಾಡಿದ್ರೆ ಪಾಪ. ಅನ್ನದಾನ, ವಿದ್ಯಾದಾನ, ವಸ್ತ್ರದಾನ ಮತ್ತು ಸಂಸ್ಕಾರ ನೀಡುವುದು ಉಪಕಾರ. ಕೆಟ್ಟ ಮಾರ್ಗಗಳನ್ನ ಬಿಟ್ಟು ಮತ್ತು ಕೆಟ್ಟ ಅಭ್ಯಾಸಗಳಿಗೆ ಅಧಿನರಾಗದೇ ಒಳ್ಳೆಯ ಮಾರ್ಗದಲ್ಲಿ ನಡೆಯಬೇಕು.

ಮಾನವ ತಾನು ಮಾಡುವ ಕೆಲಸವನ್ನ ಜವಾಬ್ದಾರಿಗಳನ್ನ ಆತನೇ ಅತ್ಯಂತ ನಿಷ್ಠೆಯಿಂದ ಮಾಡಬೇಕು. ಭಗವಂತನ ಮತ್ತು ಗುರುಗಳ ವಿಷಯದಲ್ಲಿ ಅಪಾರ ನಂಬಿಕೆ ಇರಬೇಕು. ಆಗ ಮಾತ್ರ ಸಾಧನೆ ಮಾಡಲು ಸಾಧ್ಯ. ಮನುಷ್ಯನಿಗೆ ಜ್ಞಾನದ ಅವಶ್ಯಕತೆಯು ತುಂಬಾ ಮುಖ್ಯ. ಅಜ್ಞಾನದಿಂದ ಪಾಪಗಳನ್ನು ಮಾಡುತ್ತಾನೆ. ಅದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು ಇಲ್ಲದಿದ್ದರೆ ಅದನ್ನು ಅನುಭವಿಸಬೇಕು. ಜನ್ಮಜನ್ಮಾಂತರಗಳಿಂದ ಇದ್ದಂತಹ ಪಾಪಗಳಿಂದಾಗಿ ನಾವು ಕರ್ಮಗಳನ್ನ ಅನುಭವಿಸುತ್ತಿದ್ದೇವೆ. ಮನುಷ್ಯನಿಗೆ ಜೀವನದಲ್ಲಿ ಕಷ್ಟ-ಸುಖ ಬರುತ್ತದೆ. ಎಲ್ಲವನ್ನೂ ಸಮಚಿತ್ತರಾಗಿ ಎದುರಿಸಬೇಕು ಎಂದರು.

ಹಾಸನ: ಜಗದ್ಗುರು ಆದಿಶಂಕರಚಾರ್ಯರ ಪರೋಪಕಾರ ಪುಣ್ಯಯಾ, ಪಾಪಯಾ ಪರಪೀಡನಂ ಎಂಬ ಮಾತನ್ನ ಇಂದಿನ ಯುಗದಲ್ಲಿ ಅಳವಡಿಸಿಕೊಂಡರೆ ದೇಶ ಸುಭಿಕ್ಷವಾಗಿರುತ್ತದೆ. ಉಪಕಾರ ಮಾಡದಿದ್ದರೂ ಅಪಕಾರ ಮಾಡುವುದು ಪಾಪಕ್ಕೆ ಸಮಾನ ಎಂದು ಶೃಂಗೇರಿ ಪೀಠದ ಕಿರಿಯ ಸ್ವಾಮಿಜೀಗಳಾದ ವಿಧುಶೇಖರ ಭಾರತೀ ಶ್ರೀಗಳು ಹೇಳಿದರು.

ವಿಧುಶೇಖರ ಭಾರತೀ ಶ್ರೀಗಳ ಆಶೀರ್ವಚನ

ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಅಣತಿ ಗ್ರಾಮದಲ್ಲಿ ಭಾರತಿ ನಿವಾಸ ಮತ್ತು ಕಲ್ಯಾಣ ಮಂಟಪದ ಶಿಲಾನ್ಯಾಸವನ್ನ ನೆರವೇರಿಸಿದ ಬಳಿಕ ಆಶೀರ್ವಚನ ನೀಡಿದರು. ಇನ್ನೊಬ್ಬರಿಗೆ ಉಪಕಾರ ಮಾಡುವುದು ಪುಣ್ಯ. ಅಪಕಾರ ಮಾಡಿದ್ರೆ ಪಾಪ. ಅನ್ನದಾನ, ವಿದ್ಯಾದಾನ, ವಸ್ತ್ರದಾನ ಮತ್ತು ಸಂಸ್ಕಾರ ನೀಡುವುದು ಉಪಕಾರ. ಕೆಟ್ಟ ಮಾರ್ಗಗಳನ್ನ ಬಿಟ್ಟು ಮತ್ತು ಕೆಟ್ಟ ಅಭ್ಯಾಸಗಳಿಗೆ ಅಧಿನರಾಗದೇ ಒಳ್ಳೆಯ ಮಾರ್ಗದಲ್ಲಿ ನಡೆಯಬೇಕು.

ಮಾನವ ತಾನು ಮಾಡುವ ಕೆಲಸವನ್ನ ಜವಾಬ್ದಾರಿಗಳನ್ನ ಆತನೇ ಅತ್ಯಂತ ನಿಷ್ಠೆಯಿಂದ ಮಾಡಬೇಕು. ಭಗವಂತನ ಮತ್ತು ಗುರುಗಳ ವಿಷಯದಲ್ಲಿ ಅಪಾರ ನಂಬಿಕೆ ಇರಬೇಕು. ಆಗ ಮಾತ್ರ ಸಾಧನೆ ಮಾಡಲು ಸಾಧ್ಯ. ಮನುಷ್ಯನಿಗೆ ಜ್ಞಾನದ ಅವಶ್ಯಕತೆಯು ತುಂಬಾ ಮುಖ್ಯ. ಅಜ್ಞಾನದಿಂದ ಪಾಪಗಳನ್ನು ಮಾಡುತ್ತಾನೆ. ಅದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು ಇಲ್ಲದಿದ್ದರೆ ಅದನ್ನು ಅನುಭವಿಸಬೇಕು. ಜನ್ಮಜನ್ಮಾಂತರಗಳಿಂದ ಇದ್ದಂತಹ ಪಾಪಗಳಿಂದಾಗಿ ನಾವು ಕರ್ಮಗಳನ್ನ ಅನುಭವಿಸುತ್ತಿದ್ದೇವೆ. ಮನುಷ್ಯನಿಗೆ ಜೀವನದಲ್ಲಿ ಕಷ್ಟ-ಸುಖ ಬರುತ್ತದೆ. ಎಲ್ಲವನ್ನೂ ಸಮಚಿತ್ತರಾಗಿ ಎದುರಿಸಬೇಕು ಎಂದರು.

Intro:ಹಾಸನ: ಜಗದ್ಗುರು ಆದಿಶಂಕರಚಾರ್ಯರ ಪರೋಪಕಾರ ಪುಣ್ಯಯಾ..ಪಾಪಯಾ ಪರಪೀಡನಂ ಎಂಬ ಮಾತನ್ನ ಇಂದಿನ ಯುಗದಲ್ಲಿ ಅಳವಡಿಸಿಕೊಂಡರೇ ದೇಶ ಸುಭಿಕ್ಷವಾಗಿರುತ್ತದೆ. ಉಪಕಾರ ಮಾಡದಿದ್ದರೂ ಅಪಕಾರ ಮಾಡುವುದು ಪಾಪಕ್ಕೆ ಸಮಾನ ಎಂದು ಶೃಂಗೇರಿ ಪೀಠದ ಕಿರಿಯ ಸ್ವಾಮಿಜೀಗಳಾದ ವಿಧುಶೇಖರ ಭಾರತೀ ಶ್ರೀಗಳು ಹೇಳಿದ್ರು. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಅಣತಿ ಗ್ರಾಮದಲ್ಲಿ ಭಾರತೀ ನಿವಾಸ ಮತ್ತು ಕಲ್ಯಾಣ ಮಂಟಪದ ಶಿಲಾನ್ಯಾಸವನ್ನ ನೆರವೇರಿಸಿದ ಬಳಿಕ ಅವರು ಭಕ್ತರುಗಲಿಗೆ ಆಶೀರ್ವಚನ ನೀಡಿದ್ರು. ಇನ್ನೋಬ್ಬರಿಗೆ ಉಪಕಾರ ಮಾಡುವುದು ಪುಣ್ಯ. ಅಪಕಾರ ಮಾಡಿದ್ರೆ ಪಾಪ. ಅನ್ನದಾನ, ವಿದ್ಯಾದಾನ, ವಸ್ತ್ರದಾನ ಮತ್ತು ಸಂಸ್ಕಾರ ನೀಡುವುದು ಉಪಕಾರ. ಕಟ್ಟ ಮಾರ್ಗಗಳನ್ನ ಬಿಟ್ಟು ಮತ್ತು ಅಭ್ಯಾಸಗಳಿಗೆ ಅಧಿನರಾಗದೇ ಒಳ್ಳೆಯ ಮಾರ್ಗದಲ್ಲಿ ನಡೆಯಬೇಕು. ಮಾನವ ತಾನು ಮಾಡುವ ಕೆಲಸವನ್ನ ಜವಾಬ್ದಾರಿಗಳನ್ನ ಆತನೇ ಅತ್ಯಂತ ನಿಷ್ಠೆಯಿಂದ ಮಾಡಬೇಕು. ಭಗವಂತನ ಮತ್ತು ಗುರುಗಳ ವಿಷಯದಲ್ಲಿ ಅಪಾರ ನಂಬಿಕೆ ಇರಬೇಕು. ಆಗ ಮಾತ್ರ ಸಾಧನೆ ಮಾಡಲು ಸಾಧ್ಯ. ಮನುಷ್ಯನಿಗೆ ಜ್ಞಾನದ ಅವಶ್ಯಕತೆಯು ತುಂಬಾ ಮುಖ್ಯ. ಅಜ್ಞಾನದಿಂದ ಪಾಪಗಳನ್ನು ಮಾಡುತ್ತಾನೆ. ಅದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು ಇಲ್ಲದಿದ್ದರೆ ಅದನ್ನು ಅನುಭವಿಸಬೇಕು. ಜನ್ಮಜನ್ಮಾಂತರ ಗಳಿಂದ ಇದ್ದಂತಹ ಪಾಪಗಳಿಂದಾಗಿ ನಾವು ಕರ್ಮಗಳನ್ನ ಅನುಭವಿಸುತ್ತಿದ್ದೇವೆ. ಮನುಷ್ಯನಿಗೆ ಜೀವನದಲ್ಲಿ ಕಷ್ಟ-ಸುಖ ಬರುತ್ತದೆ ಎಲ್ಲವನ್ನು ಸಮಚಿತ್ತರಾಗಿ ಎದುರಿಸಬೇಕು ಎಂದ್ರು. ಬೈಟ್: ವಿಧುಶೇಖರ ಭಾರತೀ ಶ್ರೀ, ಕಿರಿಯ ಸ್ವಾಮಿಜೀ. ಶೃಂಗೇರಿ ಮಠ. ಹಲವು ವರ್ಷಗಳ ಬಳಿಕ ಆಗಮಿಸಿದ ಶೃಂಗೇರಿ ಜಗದ್ಗರುಗಳ ಆಶೀರ್ವಾದ ಪಡೆಯಲು ಬ್ರಾಹ್ಮಣ ಸುವಾಸಿನಿಯರ ಜೊತೆಗೆ ಸಕಲ ಭಕ್ತ ವೃಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಪೂರ್ಣ ಕುಂಭ ಸ್ವಾಗತದೊಂದಿಗೆ ಗ್ರಾಮಕ್ಕೆ ಬರಮಾಡಿಕೊಂಡರು. ಬಳಿಕ ಶ್ರೀಗಳಿಗೆ ಆರತಿ ಬೆಳಗಿ ಶಿಲನ್ಯಾಸ ಸ್ಥಳಕ್ಕೆ ಕರೆತರಲಾಯ್ತು. ನಂತರ ಶ್ರೀಗಳವರಿಂದ ಭಾರತೀ ನಿವಾಸ ಮತ್ತು ಕಲ್ಯಾಣ ಮಂಟಪದ ಶಿಲಾನ್ಯಾಸಕ್ಕೂ ಮುನ್ನ ಪೂಜಾ ಕೈಂಕರ್ಯವನ್ನ ಶ್ರೀಗಳವರೇ ನೆರವೇರಿಸಿ ಭಕ್ತ ವೃಂದಕ್ಕೆ ಆಶೀರ್ವಚನ ನೀಡಿದ್ರು.


Body:7203289


Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.