ETV Bharat / state

ಹಾಸನ RTO ಕಚೇರಿ ಮೇಲೆ 50ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳಿಂದ ದಾಳಿ

author img

By

Published : Feb 15, 2021, 5:53 PM IST

ಇಂದು ಮಧ್ಯಾಹ್ನ ಸುಮಾರು ನಾಲ್ಕು ಗಂಟೆಗೆ ಹಾಸನದ ಎಸಿಬಿ ಡಿವೈಎಸ್​ಪಿ ಕೃಷ್ಣಮೂರ್ತಿ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳು, ಆರ್​ಟಿಓ ಕಚೇರಿಯ ಪ್ರಮುಖ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

The simultaneous attack by more than 50 officers on the RTO office
ದಾಳಿ

ಹಾಸನ: ಮೈಸೂರು, ಬೆಂಗಳೂರು, ಮಂಡ್ಯ ಕಡೆಯಿಂದ ಬಂದ ಎಸಿಬಿ ಅಧಿಕಾರಿಗಳು ಏಕಾಏಕಿ ಹಾಸನದ ಪ್ರಾದೇಶಿಕ ಸಾರಿಗೆ ಕಚೇರಿ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದೆ.

ಇಂದು ಮಧ್ಯಾಹ್ನ ಸುಮಾರು ನಾಲ್ಕು ಗಂಟೆಗೆ ಹಾಸನದ ಎಸಿಬಿ ಡಿವೈಎಸ್​ಪಿ ಕೃಷ್ಣಮೂರ್ತಿ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳು, ಆರ್​ಟಿಓ ಕಚೇರಿಯ ಪ್ರಮುಖ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿರುವುದು ಇದೇ ಮೊದಲ ಬಾರಿಗೆ. ಕಚೇರಿಯನ್ನು ಸಂಪೂರ್ಣ ಮುಚ್ಚಿ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ.

ಆರ್​ಟಿಓ ಕಚೇರಿ ಅಕ್ಕಪಕ್ಕದಲ್ಲಿದ್ದ ಅಂಗಡಿಗಳ ಮೇಲೆಯೂ ಅಧಿಕಾರಿಗಳು ದಾಳಿ ನಡೆಸಿ, ವಾಹನಗಳ ಆರ್​ಸಿ ಬುಕ್ಕುಗಳು ಇನ್ನಿತರ ವಸ್ತುಗಳು ಸೇರಿದಂತೆ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

RTO ಕಚೇರಿ ಮೇಲೆ 50ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳ ದಾಳಿ

ಕಳೆದ ಹಲವು ದಿನಗಳಲ್ಲಿ ಆರ್​ಟಿಒ​ ಕಚೇರಿಯಲ್ಲಿ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಚಾಲನಾ ಪರವಾನಿಗೆ ನೀಡಲು, ವಾಹನಗಳನ್ನು ನವೀಕರಣ ಹಾಗೂ ಮರು ನೋಂದಣಿ ಜೊತೆಗೆ ವಾಹನಗಳಿಗೆ ನೀಡುವ ನಂಬರ್ ಪ್ಲೇಟ್​ಗಳಿಗೆ ದುಬಾರಿ ಹಣ ಕೊಡಬೇಕು ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಬೆಂಗಳೂರು-ಮೈಸೂರು, ತುಮಕೂರು, ಮಂಡ್ಯ ಭಾಗದ ಸುಮಾರು 50ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಹಾಸನ: ಮೈಸೂರು, ಬೆಂಗಳೂರು, ಮಂಡ್ಯ ಕಡೆಯಿಂದ ಬಂದ ಎಸಿಬಿ ಅಧಿಕಾರಿಗಳು ಏಕಾಏಕಿ ಹಾಸನದ ಪ್ರಾದೇಶಿಕ ಸಾರಿಗೆ ಕಚೇರಿ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದೆ.

ಇಂದು ಮಧ್ಯಾಹ್ನ ಸುಮಾರು ನಾಲ್ಕು ಗಂಟೆಗೆ ಹಾಸನದ ಎಸಿಬಿ ಡಿವೈಎಸ್​ಪಿ ಕೃಷ್ಣಮೂರ್ತಿ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳು, ಆರ್​ಟಿಓ ಕಚೇರಿಯ ಪ್ರಮುಖ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿರುವುದು ಇದೇ ಮೊದಲ ಬಾರಿಗೆ. ಕಚೇರಿಯನ್ನು ಸಂಪೂರ್ಣ ಮುಚ್ಚಿ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ.

ಆರ್​ಟಿಓ ಕಚೇರಿ ಅಕ್ಕಪಕ್ಕದಲ್ಲಿದ್ದ ಅಂಗಡಿಗಳ ಮೇಲೆಯೂ ಅಧಿಕಾರಿಗಳು ದಾಳಿ ನಡೆಸಿ, ವಾಹನಗಳ ಆರ್​ಸಿ ಬುಕ್ಕುಗಳು ಇನ್ನಿತರ ವಸ್ತುಗಳು ಸೇರಿದಂತೆ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

RTO ಕಚೇರಿ ಮೇಲೆ 50ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳ ದಾಳಿ

ಕಳೆದ ಹಲವು ದಿನಗಳಲ್ಲಿ ಆರ್​ಟಿಒ​ ಕಚೇರಿಯಲ್ಲಿ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಚಾಲನಾ ಪರವಾನಿಗೆ ನೀಡಲು, ವಾಹನಗಳನ್ನು ನವೀಕರಣ ಹಾಗೂ ಮರು ನೋಂದಣಿ ಜೊತೆಗೆ ವಾಹನಗಳಿಗೆ ನೀಡುವ ನಂಬರ್ ಪ್ಲೇಟ್​ಗಳಿಗೆ ದುಬಾರಿ ಹಣ ಕೊಡಬೇಕು ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಬೆಂಗಳೂರು-ಮೈಸೂರು, ತುಮಕೂರು, ಮಂಡ್ಯ ಭಾಗದ ಸುಮಾರು 50ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.