ETV Bharat / state

ದುರಸ್ತಿ ಕಾಣದ ರಸ್ತೆ:ಯಾಮಾರಿದ್ರೆ ಸೀದಾ ಯಮನ ಪಾದ

ಹಾಸನ ಮತ್ತು ಹಳೆಬೀಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ತೀರಾ ಹದೆಗೆಟ್ಟಿದ್ದು ಜನ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಜೊತೆಗೆ ವಾಹನ ಸವಾರರು ಪರದಾಡುವಂತಾಗಿದೆ.

author img

By

Published : Jun 15, 2019, 8:31 AM IST

ದುರಸ್ತಿ ಕಾಣದ ರಸ್ತೆ

ಹಾಸನ:ಹಾಸನ ಮತ್ತು ಹಳೆಬೀಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ತೀರಾ ಹದೆಗೆಟ್ಟಿದ್ದು, ಸಾರ್ವಜನಿಕರು ಓಡಾಡೋದೇ ದುಸ್ತರವಾಗಿದೆ. ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುವವರಿಗೆ ಧೂಳಿನ ಸ್ನಾನವಾಗುತ್ತಿದ್ದು ಪ್ರಯಾಣಿಕರು ಮತ್ತು ಸಾರ್ವಜನಿಕರು ಲೋಕೋಪಯೋಗಿ ಇಲಾಖೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ದುರಸ್ತಿ ಕಾಣದ ರಸ್ತೆ

ಹಾಸನ ಮತ್ತು ಹಳೆಬೀಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ನಗರದಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿರುವ ರಸ್ತೆ ಕಾಮಗಾರಿಯನ್ನು ಕಳೆದ ವರ್ಷವೇ ಲೋಕೋಪಯೋಗಿ ಇಲಾಖೆ ಪ್ರಾರಂಭ ಮಾಡಿತ್ತು. ಆದರೆ ವರ್ಷ ಕಳೆದರೂ ಕೂಡ ಕಾಮಗಾರಿ ಮುಗಿಸದಿರುವುದು ಸಾರ್ವಜನಿಕರಿಂದ ಆಕ್ರೋಶಕ್ಕೆ ಕಾರಣವಾಗಿದೆ.ರಸ್ತೆಯನ್ನು ದುರಸ್ತಿ ಕಾರ್ಯಕ್ಕೆಂದು ಅಗೆದು ಸುಮಾರು ಎಂಟು- ಹತ್ತು ತಿಂಗಳುಗಳೇ ಕಳೆದಿದ್ದರು ದುರಸ್ತಿ ಕಾರ್ಯ ಮಾತ್ರ ಇನ್ನೂ ಪೂರ್ಣಗೊಂಡಿಲ್ಲ. ನಗರದ ಪ್ರಮುಖ ರಸ್ತೆಯಾಗಿದ್ದು, ಈ ರಸ್ತೆ ಸಾಲಗಾಮೆ ಗೇಟ್ ನಿಂದ ಹಿಡಿದು ಬಾಹ್ಯಾಕಾಶ ನಿಯಂತ್ರಣ ಕೇಂದ್ರವಾದ ಎಂಸಿಎಫ್ ವರೆಗೆ ಸುಮಾರು ಆರು ಕಿಲೋಮೀಟರ್ ನಷ್ಟು ರಸ್ತೆಯನ್ನು ದುರಸ್ತಿ ಕಾರ್ಯಕ್ಕೆಂದು ಎಂಟತ್ತು ತಿಂಗಳ ಹಿಂದೆಯೇ ಅಗೆಯಲಾಗಿದೆ. ಇದರಿಂದ ರಸ್ತೆಯ ಅಕ್ಕಪಕ್ಕದಲ್ಲಿರುವ ವ್ಯಾಪಾರಸ್ಥರು ವ್ಯಾಪಾರವು ಇಲ್ಲದೆ ನಿತ್ಯವೂ ಕಿರಿಕಿರಿ ಅನುಭವಿಸುವಂತಾಗಿದೆ.

ರಸ್ತೆ ಅಗೆದಿರುವ ಕಾರಣ ಧೂಳು ಹೆಚ್ಚಾಗಿದ್ದು ಇಲ್ಲಿನ ವ್ಯಾಪಾರಸ್ಥರು ನಿತ್ಯ ದೂಳಿನ ಸ್ನಾನ ಮಾಡುತ್ತಿದ್ದಾರೆ. ವ್ಯಾಪಾರ ನಷ್ಟದ ಜೊತೆಗೆ ಉಸಿರಾಟದ ಸಮಸ್ಯೆಯನ್ನು ಕೂಡ ಎದುರಿಸಬೇಕಾಗಿದೆ.ಅಲ್ಲದೆ ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿಗಳಿದ್ದು ವಾಹನಗಳ ಅಪಘಾತ ಸರ್ವೆ ಸಾಮಾನ್ಯವಾಗಿದೆ. ಸಂಬಂಧ ಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳು ಇನ್ನಾದರೂ ಇತ್ತ ಕಡೆ ಗಮನಹರಿಸಿ ನೆನಗುದಿಗೆ ಬಿದ್ದಿರುವ ರಸ್ತೆ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚನೆ ನೀಡುತ್ತಾರಾ...? ಕಾದುನೋಡಬೇಕಿದೆ....

ಹಾಸನ:ಹಾಸನ ಮತ್ತು ಹಳೆಬೀಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ತೀರಾ ಹದೆಗೆಟ್ಟಿದ್ದು, ಸಾರ್ವಜನಿಕರು ಓಡಾಡೋದೇ ದುಸ್ತರವಾಗಿದೆ. ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುವವರಿಗೆ ಧೂಳಿನ ಸ್ನಾನವಾಗುತ್ತಿದ್ದು ಪ್ರಯಾಣಿಕರು ಮತ್ತು ಸಾರ್ವಜನಿಕರು ಲೋಕೋಪಯೋಗಿ ಇಲಾಖೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ದುರಸ್ತಿ ಕಾಣದ ರಸ್ತೆ

ಹಾಸನ ಮತ್ತು ಹಳೆಬೀಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ನಗರದಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿರುವ ರಸ್ತೆ ಕಾಮಗಾರಿಯನ್ನು ಕಳೆದ ವರ್ಷವೇ ಲೋಕೋಪಯೋಗಿ ಇಲಾಖೆ ಪ್ರಾರಂಭ ಮಾಡಿತ್ತು. ಆದರೆ ವರ್ಷ ಕಳೆದರೂ ಕೂಡ ಕಾಮಗಾರಿ ಮುಗಿಸದಿರುವುದು ಸಾರ್ವಜನಿಕರಿಂದ ಆಕ್ರೋಶಕ್ಕೆ ಕಾರಣವಾಗಿದೆ.ರಸ್ತೆಯನ್ನು ದುರಸ್ತಿ ಕಾರ್ಯಕ್ಕೆಂದು ಅಗೆದು ಸುಮಾರು ಎಂಟು- ಹತ್ತು ತಿಂಗಳುಗಳೇ ಕಳೆದಿದ್ದರು ದುರಸ್ತಿ ಕಾರ್ಯ ಮಾತ್ರ ಇನ್ನೂ ಪೂರ್ಣಗೊಂಡಿಲ್ಲ. ನಗರದ ಪ್ರಮುಖ ರಸ್ತೆಯಾಗಿದ್ದು, ಈ ರಸ್ತೆ ಸಾಲಗಾಮೆ ಗೇಟ್ ನಿಂದ ಹಿಡಿದು ಬಾಹ್ಯಾಕಾಶ ನಿಯಂತ್ರಣ ಕೇಂದ್ರವಾದ ಎಂಸಿಎಫ್ ವರೆಗೆ ಸುಮಾರು ಆರು ಕಿಲೋಮೀಟರ್ ನಷ್ಟು ರಸ್ತೆಯನ್ನು ದುರಸ್ತಿ ಕಾರ್ಯಕ್ಕೆಂದು ಎಂಟತ್ತು ತಿಂಗಳ ಹಿಂದೆಯೇ ಅಗೆಯಲಾಗಿದೆ. ಇದರಿಂದ ರಸ್ತೆಯ ಅಕ್ಕಪಕ್ಕದಲ್ಲಿರುವ ವ್ಯಾಪಾರಸ್ಥರು ವ್ಯಾಪಾರವು ಇಲ್ಲದೆ ನಿತ್ಯವೂ ಕಿರಿಕಿರಿ ಅನುಭವಿಸುವಂತಾಗಿದೆ.

ರಸ್ತೆ ಅಗೆದಿರುವ ಕಾರಣ ಧೂಳು ಹೆಚ್ಚಾಗಿದ್ದು ಇಲ್ಲಿನ ವ್ಯಾಪಾರಸ್ಥರು ನಿತ್ಯ ದೂಳಿನ ಸ್ನಾನ ಮಾಡುತ್ತಿದ್ದಾರೆ. ವ್ಯಾಪಾರ ನಷ್ಟದ ಜೊತೆಗೆ ಉಸಿರಾಟದ ಸಮಸ್ಯೆಯನ್ನು ಕೂಡ ಎದುರಿಸಬೇಕಾಗಿದೆ.ಅಲ್ಲದೆ ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿಗಳಿದ್ದು ವಾಹನಗಳ ಅಪಘಾತ ಸರ್ವೆ ಸಾಮಾನ್ಯವಾಗಿದೆ. ಸಂಬಂಧ ಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳು ಇನ್ನಾದರೂ ಇತ್ತ ಕಡೆ ಗಮನಹರಿಸಿ ನೆನಗುದಿಗೆ ಬಿದ್ದಿರುವ ರಸ್ತೆ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚನೆ ನೀಡುತ್ತಾರಾ...? ಕಾದುನೋಡಬೇಕಿದೆ....

Intro:ಹಾಸನ: ವರ್ಷವೇ ಕಳೆಯುತ್ತಾ ಬಂದರೂ ದುರಸ್ತಿ ಕಾಣದ ರಸ್ತೆಯಲ್ಲಿ ಸಾರ್ವಜನಿಕರು ಓಡಾಡೋದೇ ದುಸ್ತರವಾಗಿದೆ. ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುವವರಿಗೆ ದೂಳಿನ ಸ್ನಾನವಾಗುತ್ತಿದ್ದು ಪ್ರಯಾಣಿಕರು ಮತ್ತು ಸಾರ್ವಜನಿಕರು ಲೋಕೋಪಯೋಗಿ ಇಲಾಖೆಗೆ ಶಾಪ ಹಾಕುತ್ತಿದ್ದಾರೆ. ಆಗಿದ್ರೆ ಯಾವುದು ರಸ್ತೆ ಕಾಮಗಾರಿ ಯಾಕೆ ತಡವಾಯ್ತು ಅಂತಿರಾ ಈ ಸ್ಟೋರಿ ನೋಡಿ.

ಇದು ಹಾಸನ ಮತ್ತು ಹಳೆಬೀಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ನಗರದಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿರುವ ರಸ್ತೆಯನ್ನ ಕಳೆದವರ್ಷವೇ ರಸ್ತೆ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಪ್ರಾರಂಭ ಮಾಡಿತ್ತು. ಆದರೆ ವರ್ಷಗಳು ಕಳೆದರೂ ಕೂಡ ಕಾಮಗಾರಿ ಮುಗಿಸದಿರುವುದು ಸಾರ್ವಜನಿಕರಿಂದ ಆಕ್ರೋಶಕ್ಕೆ ಕಾರಣವಾಗಿದೆ.

ಈ ರಸ್ತೆಯಲ್ಲಿ ಓಡಾಡುವವರ ಪಾಡು ಹೇಳತೀರದು, ರಸ್ತೆಯನ್ನು ದುರಸ್ತಿ ಕಾರ್ಯಕ್ಕೆಂದು ಅಗೆದು ಸುಮಾರು ಎಂಟು- ಹತ್ತು ತಿಂಗಳುಗಳೇ ಕಳೆದಿದ್ದರು ದುರಸ್ತಿ ಕಾರ್ಯ ಮಾತ್ರ ಇನ್ನೂ ಪೂರ್ಣಗೊಂಡಿಲ್ಲ. ನಗರದ ಪ್ರಮುಖ ರಸ್ತೆಯಾಗಿದ್ದು, ಈ ರಸ್ತೆ ಬಾಹ್ಯಾಕಾಶ ನಿಯಂತ್ರಣ ಕೇಂದ್ರ ಅಂದರೆ ಎಂಸಿಎಫ್ ಗೆ ಸಂಪರ್ಕ ಹೊಂದುತ್ತದೆ.

ಸಾಲಗಾಮೆ ಗೇಟ್ ನಿಂದ ಹಿಡಿದು ಎಂಸಿಎಫ಼್ವವರೆಗೆ ಸುಮಾರು ಆರು ಕಿಲೋಮೀಟರ್ ನಷ್ಟು ರಸ್ತೆಯನ್ನು ದುರಸ್ತಿ ಕಾರ್ಯಕ್ಕೆಂದು ಎಂಟತ್ತು ತಿಂಗಳ ಹಿಂದೆಯೇ ಅಗೆಯಲಾಗಿದೆ. ಆಗೊಮ್ಮೆ ಈಗೊಮ್ಮೆ ಕಾಮಗಾರಿ ಕೆಲಸ ನಡೆಯುತ್ತಿದ್ದರು, ಕೇವಲ ಆರು ಕಿಲೋಮೀಟರ್ ಇರುವ ರಸ್ತೆ ಕಾರ್ಯವನ್ನು ಪೂರ್ಣಗೊಳಿಸಲು ವರ್ಷವೇ ಕಳೆಯುತ್ತಾ ಬಂದರೂ ಕಾಮಗಾರಿ ಮಾತ್ರ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ರಸ್ತೆಯ ಅಕ್ಕಪಕ್ಕದಲ್ಲಿರುವ ವ್ಯಾಪಾರಸ್ಥರು ವ್ಯಾಪಾರವು ಇಲ್ಲದೆ ನಿತ್ಯವೂ ಕಿರಿಕಿರಿ ಅನುಭವಿಸುವಂತಾಗಿದೆ.

ಬೈಟ್: ನಿರಂಜನ್, ಸ್ಥಳೀಯರು

ರಸ್ತೆ ಅಗೆದಿರುವ ಕಾರಣ ಧೂಳು ಹೆಚ್ಚಾಗಿದ್ದು ಇಲ್ಲಿನ ವ್ಯಾಪಾರಸ್ಥರು ನಿತ್ಯ ದೂಳಿನ ಸ್ನಾನ ಮಾಡುತ್ತಿದ್ದಾರೆ. ವ್ಯಾಪಾರ ನಷ್ಟದ ಜೊತೆಗೆ ಉಸಿರಾಟದ ಸಮಸ್ಯೆಯನ್ನು ಕೂಡ ಎದುರಿಸಬೇಕಾಗಿದೆ

ಬೈಟ್: ಕುಮಾರಸ್ವಾಮಿ, ವ್ಯಾಪಾರಸ್ಥರು.

ಇನ್ನೂ ಬಸ್ಸು ಲಾರಿ ಭಾರಿಗಾತ್ರದ ವಾಹನಗಳು ಈ ರಸ್ತೆಯಲ್ಲಿ ಓಡಾಡಲು ಹರಸಾಹಸವನ್ನೇಪಡಬೇಕು. ಅಲ್ಲದೆ ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿಗಳಿದ್ದು ವಾಹನಗಳ ಅಪಘಾತ ಸರ್ವೆ ಸಾಮಾನ್ಯವಾಗಿದೆ.

ಜಿಲ್ಲೆಯ ಉಸ್ತುವಾರಿ ಸಚಿವರಾಗಿರೋ ರೇವಣ್ಣ ಹದಗೆಟ್ಟಿರೋ ರಸ್ತೆಯ ಸ್ಥಿತಿಯನ್ನ ಕಂಡಿದ್ದರೂ ಕಾಮಗಾರಿಯನ್ನ ಬೇಗ ಮುಗಿಸಲು ಆದೇಶ ನೀಡದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಇತ್ತ ಕಡೆ ಗಮನಹರಿಸಿ ನೆನಗುದಿಗೆ ಬಿದ್ದಿರುವ ರಸ್ತೆ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚನೆ ನೀಡುತ್ತಾರಾ...? ಕಾದುನೋಡಬೇಕಿದೆ....Body:0Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.