ETV Bharat / state

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಖಂಡನೆ.. ಹೊಳೆನರಸೀಪುರದಲ್ಲಿ ಮುಸ್ಲಿಂ ಬಾಂಧವರಿಂದ ಪ್ರತಿಭಟನೆ..

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಮಾಜಿ ಪ್ರಧಾನಿ ತವರೂರಾದ ಹೊಳೆನರಸೀಪುರದಲ್ಲಿ ಮುಸ್ಲಿಂ ಬಾಂಧವರು ಕಾಂಗ್ರೆಸ್ ಪಕ್ಷದ ಸಹಕಾರದೊಂದಿಗೆ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದಾರೆ.

author img

By

Published : Dec 16, 2019, 11:45 PM IST

protest-in-hassan-by-muslims-against-citizenship-amendment-act
ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಖಂಡನೆ: ಹೊಳೆನರಸೀಪುರದಲ್ಲಿ ಮುಸ್ಲಿಂ ಬಾಂಧವರಿಂದ ಪ್ರತಿಭಟನೆ....

ಹಾಸನ: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಮಾಜಿ ಪ್ರಧಾನಿ ತವರೂರಾದ ಹೊಳೆನರಸೀಪುರದಲ್ಲಿ ಮುಸ್ಲಿಂ ಬಾಂಧವರು ಕಾಂಗ್ರೆಸ್ ಪಕ್ಷದ ಸಹಕಾರದೊಂದಿಗೆ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಖಂಡಿಸಿ ಪ್ರತಿಭಟನೆ..

ಹೊಳೆನರಸೀಪುರ ತಾಲೂಕು ಮುಸ್ಲಿಂ ಬಾಂಧವರು ಪಟ್ಟಣದ ಲಕ್ಷ್ಮಿನರಸಿಂಹ ದೇವಾಲಯದ ಹಿಂಭಾಗದಿಂದ ಪ್ರತಿಭಟನೆ ಪ್ರಾರಂಭಿಸಿ ಬಳಿಕ ಕೆಲವು ಪ್ರಮುಖ ರಸ್ತೆಯಲ್ಲಿ ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿದ್ದು, ತಮ್ಮ ಮುಸ್ಲಿಂ ಸಮಾಜವನ್ನ ಹೊರತುಪಡಿಸಿ ಪೌರತ್ವ ತಿದ್ದುಪಡಿ ಮಸೂದೆ ಜಾರಿ ಮಾಡಲು ಹೊರಟಿರುವುದು ಜಾತ್ಯಾತೀತೆಯ ವಿರುದ್ದದ ತಿದ್ದುಪಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಸ್ಸಾಂ ಬಳಿಕ ಭಾರತದಾದ್ಯಂತ ಎನ್.ಆರ್.ಸಿ.ಜಾರಿಗೊಳಿಸಲು ಭದ್ರತಾ ಮಸೂದೆಯಾಗಿ ಪೌರತ್ವ ಕಾಯ್ದೆ ಜಾರಿ (ಸಿಎಬಿ)ಯನ್ನ ತಿದ್ದುಪಡಿ ಮಾಡಿ ಇಸ್ಲಾಂ ಧರ್ಮವನ್ನ ಅವಮಾನಿಸಿ, ಧರ್ಮವನ್ನ ಹತ್ತಿಕ್ಕಲು ನಡೆಸುತ್ತಿರುವ ಷಡ್ಯಂತ್ರವಾಗಿದೆ. ಕೇಂದ್ರ ಸರ್ಕಾರ ಪ್ರಜಾಪ್ರಭುತ್ವ ವಿರೋಧಿ ಮಸೂದೆ ಮಂಡಿಸಿದ್ದು, ಬಿಜೆಪಿ ದೇಶಕ್ಕೆ ಮಾರಕ ಮತ್ತು ಸಂವಿಧಾನ ವಿರೋಧಿಯಾಗಿದ್ದು, ದೇಶ ಒಡೆಯಲು ಈ ಕಾಯ್ದೆ ಜಾರಿಗೊಳಿಸಿದೆ ಎಂದು ಆರೋಪಿಸಿದ್ದಾರೆ.

ಹಾಸನ: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಮಾಜಿ ಪ್ರಧಾನಿ ತವರೂರಾದ ಹೊಳೆನರಸೀಪುರದಲ್ಲಿ ಮುಸ್ಲಿಂ ಬಾಂಧವರು ಕಾಂಗ್ರೆಸ್ ಪಕ್ಷದ ಸಹಕಾರದೊಂದಿಗೆ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಖಂಡಿಸಿ ಪ್ರತಿಭಟನೆ..

ಹೊಳೆನರಸೀಪುರ ತಾಲೂಕು ಮುಸ್ಲಿಂ ಬಾಂಧವರು ಪಟ್ಟಣದ ಲಕ್ಷ್ಮಿನರಸಿಂಹ ದೇವಾಲಯದ ಹಿಂಭಾಗದಿಂದ ಪ್ರತಿಭಟನೆ ಪ್ರಾರಂಭಿಸಿ ಬಳಿಕ ಕೆಲವು ಪ್ರಮುಖ ರಸ್ತೆಯಲ್ಲಿ ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿದ್ದು, ತಮ್ಮ ಮುಸ್ಲಿಂ ಸಮಾಜವನ್ನ ಹೊರತುಪಡಿಸಿ ಪೌರತ್ವ ತಿದ್ದುಪಡಿ ಮಸೂದೆ ಜಾರಿ ಮಾಡಲು ಹೊರಟಿರುವುದು ಜಾತ್ಯಾತೀತೆಯ ವಿರುದ್ದದ ತಿದ್ದುಪಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಸ್ಸಾಂ ಬಳಿಕ ಭಾರತದಾದ್ಯಂತ ಎನ್.ಆರ್.ಸಿ.ಜಾರಿಗೊಳಿಸಲು ಭದ್ರತಾ ಮಸೂದೆಯಾಗಿ ಪೌರತ್ವ ಕಾಯ್ದೆ ಜಾರಿ (ಸಿಎಬಿ)ಯನ್ನ ತಿದ್ದುಪಡಿ ಮಾಡಿ ಇಸ್ಲಾಂ ಧರ್ಮವನ್ನ ಅವಮಾನಿಸಿ, ಧರ್ಮವನ್ನ ಹತ್ತಿಕ್ಕಲು ನಡೆಸುತ್ತಿರುವ ಷಡ್ಯಂತ್ರವಾಗಿದೆ. ಕೇಂದ್ರ ಸರ್ಕಾರ ಪ್ರಜಾಪ್ರಭುತ್ವ ವಿರೋಧಿ ಮಸೂದೆ ಮಂಡಿಸಿದ್ದು, ಬಿಜೆಪಿ ದೇಶಕ್ಕೆ ಮಾರಕ ಮತ್ತು ಸಂವಿಧಾನ ವಿರೋಧಿಯಾಗಿದ್ದು, ದೇಶ ಒಡೆಯಲು ಈ ಕಾಯ್ದೆ ಜಾರಿಗೊಳಿಸಿದೆ ಎಂದು ಆರೋಪಿಸಿದ್ದಾರೆ.

Intro:ಪೌರತ್ವ ಕಾಯ್ದೆ ಜಾರಿ ವಿರೋಧಿಸಿ ಮಾಜಿ ಪ್ರಧಾನಿ ತವರೂರಾದ ಹೊಳೆನರಸೀಪುರದಲ್ಲಿ ಮುಸ್ಲಿಂ ಬಾಂಧವರು ಕಾಂಗ್ರೇಸ್ ಪಕ್ಷದ ಸಹಕಾರದೊದಿಗೆ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ರು.

ಹೊಳೆನರಸೀಪುರ ತಾಲ್ಲೂಕು ಮುಸ್ಲಿಂ ಭಾಂದವರುಗಳು ಪಟ್ಟಣದ ಲಕ್ಷ್ಮಿನರಸಿಂಹ ದೇವಾಲಯದ ಹಿಂಭಾಗದಿಂದ ಪ್ರತಿಭಟನೆ ಪ್ರಾರಂಭಸಿ ಬಳಿಕ ಕೆಲವು ಪ್ರಮುಖ ರಸ್ತೆಯಲ್ಲಿ ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿ ತಮ್ಮ ಮಸ್ಲಿಂ ಹೊರತುಪಡಿಸಿ ಪೌರತ್ವ ತಿದ್ದುಪಡಿ ಮಸೂದೆ ಜಾರಿ ಮಾಡಲು ಹೊರಟಿರುವುದು ಜಾತ್ಯಾತಿತೆಯ ವಿರುದ್ದ ತಿದ್ದುಪಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

ಈ ವೇಳೆ ಮಾತನಾಡಿದ ಕಾಂಗ್ರೇಸ್ ಮುಖಂಡ ಮುಜಾಹಿದ್ ಪಾಷಾ ಕೆಲವು ನುಸುಳುಕೋರರನ್ನ ಹಿಡಿಯಲು ಸರ್ಕಾರದ ಬೊಕ್ಕಸದಿಂದ ಸುಮಾರು 16 ಸಾವಿರ ಕೋಟಿಗಳನ್ನ ವ್ಯಯಮಾಡುತ್ತಿರುವುದು ನ್ಯಾಯಸಮ್ಮತವಲ್ಲ. ಇದಕ್ಕೆ ಅಸ್ಸಾಂನಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಘಟನೆಗಳು ಸಾಕ್ಷಿಯಾಗಿವೆ. ಅಲ್ಲದೇ ಅಸ್ಸಾಂ ಬಳಿಕ ಭಾರತದಾದ್ಯಂತ ಎನ್.ಆರ್.ಸಿ.ಜಾರಿಗೊಳಿಸಲು ಭದ್ರತಾ ಮಸೂದೆಯಾಗಿ ಪೌರತ್ವ ಕಾಯ್ದೆ ಜಾರಿ (ಸಿಎಬಿ)ಯನ್ನ ತಿದ್ದುಪಡಿ ಮಾಡಿ ಇಸ್ಲಾಂ ಧರ್ಮವನ್ನ ಅವಮಾನಿಸಿ ಧರ್ಮವನ್ನ ಹತ್ತಿಕ್ಕಲು ನಡೆಸುತ್ತಿರುವ ಷಡ್ಯಂತ್ರವಾಗಿದೆ ಕೇಂದ್ರ ಸರಕಾರ ಪ್ರಜಾಪ್ರಭುತ್ವ ವಿರೋಧಿ ಮಸೂದೆ ಮಂಡಿಸಿದ್ದು, ಬಿಜೆಪಿ ದೇಶಕ್ಕೆ ಮಾರಕ ಮತ್ತು ಸಂವಿಧಾನ ವಿರೋಧಿಯಾಗಿದ್ದು, ದೇಶ ಒಡೆಯಲು ಈ ಕಾಯ್ದೆ ಜಾರಿಗೊಳಿಸಿದೆ ಎಂದು ಆರೋಪಿಸಿದರು.

ಇನ್ನು ಪ್ರತಿಭಟನೆ ಬಳಿಕ ತಾಲ್ಲೂಕಿನ ಮುಸ್ಲಿಂ ಸಂಘಟನೆಗಳು ತಹಶೀಲ್ದಾರ್ ಮೂಲಕ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ರವರಿಗೆ ತಲುಪಿಸಿ, ಕಾಯ್ದೆಯನ್ನ ಮರು ಪರುಶೀಲನೆ ಮಾಡಿ ನ್ಯಾಯಸಮ್ಮತ ಕಾಯ್ದೆ ರೂಪಿಸಲು ಪತ್ರದ ಮೂಲಕ ಮನವಿ ಮಾಡಿದ್ರು.

ಪ್ರತಿಭಟನೆಯಲ್ಲಿ ಮುಖಂಡರುಗಳಾದ ಮುಹೀಬ್, ಇಲಿಯಾಜ್, ಜಾಮೀಯಾ ಮಸೀದಿಯ ಇಮಾಮ್, ಇಮ್ರಾನ್ ಸೇರಿದಂತೆ ಹಲವರು ಭಾಗಿಯಾಗಿದ್ರು.


Body:7203289


Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.