ETV Bharat / state

ಕಾರು ಹುಡುಕಾಟದಲ್ಲಿದ್ದ ಪೊಲೀಸರಿಗೆ ಸಿಕ್ಕಿದ್ದು 300 ಕೆಜಿ ಶ್ರೀಗಂಧ: ಕಾನ್ಸ್​ಟೇಬಲ್​​​ ಸಸ್ಪೆಂಡ್

author img

By

Published : Feb 24, 2021, 7:06 PM IST

ಫಾರ್ಚುನರ್ ಕಾರು ಕದ್ದಿದ್ದ ಮಂಜುನಾಥ್ ಎಂಬಾತ ಕಾರು ಕಳ್ಳತನ ಮಾಡೋದಲ್ಲದೆ ತಾನು ಬಾಡಿಗೆ ಇದ್ದ ಮನೆಯಲ್ಲೇ ಶ್ರೀಗಂಧ ಸ್ಮಗ್ಲಿಂಗ್​ ಮಾಡುತ್ತಿದ್ದುದು ಪತ್ತೆಯಾಗಿದೆ. ಅಂದಾಜು 300 ಕೆಜಿಯಷ್ಟು ಶ್ರೀಗಂಧ ದೊರೆತಿದೆ. ಇದರ ಬೆಲೆ ಮಾರುಕಟ್ಟೆಯಲ್ಲಿ 3 ಕೋಟಿ ರೂ. ತನಕ ಇರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಸಸ್ಪೆಂಡ್
ಸಸ್ಪೆಂಡ್

ಹಾಸನ: ನಗರದ ಎಸ್​ಬಿಐ ಬಡಾವಣೆಯ ಮನೆಯೊಂದರಲ್ಲಿ 300 ಕೆಜಿ ಅಕ್ರಮ ಶ್ರೀಗಂಧ ದಾಸ್ತಾನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಪ್ರಕರಣ ಸಂಬಂಧ ಪೊಲೀಸ್ ಕಾನ್ಸ್​ಟೇಬಲ್​​​ವೊಬ್ಬರನ್ನು ಸಸ್ಪೆಂಡ್​ ಮಾಡಲಾಗಿದೆ.

ಫಾರ್ಚುನರ್​​ ಕಾರು ಕಳ್ಳತನ ಪ್ರಕರಣವೊಂದರ ಸಂಬಂಧ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದರು. ಈ ವೇಳೆ ಫಾರ್ಚುನರ್ ಕಾರು ಕದ್ದಿದ್ದ ಮಂಜುನಾಥ್ ಎಂಬಾತ ಕಾರು ಕಳ್ಳತನ ಮಾಡೋದಲ್ಲದೆ ತಾನು ಬಾಡಿಗೆ ಇದ್ದ ಮನೆಯಲ್ಲೇ ಶ್ರೀಗಂಧ ಸ್ಮಗ್ಲಿಂಗ್​ ಮಾಡುತ್ತಿದ್ದುದು ಪತ್ತೆಯಾಗಿದೆ. ಅಂದಾಜು 300 ಕೆಜಿಯಷ್ಟು ಶ್ರೀಗಂಧ ದೊರೆತಿದೆ. ಇದರ ಬೆಲೆ ಮಾರುಕಟ್ಟೆಯಲ್ಲಿ 3 ಕೋಟಿ ರೂ. ತನಕ ಇರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಶ್ರೀನಿವಾಸ್ ಗೌಡ

ಪ್ರಮುಖ ಆರೋಪಿ ಮಂಜುನಾಥ್ ಪರಾರಿಯಾಗಿದ್ದು, ಈತ ಶ್ರೀಗಂಧ ಮಾತ್ರವಲ್ಲದೇ ಹಲವಾರು ವಾಹನಗಳನ್ನ ಕಳ್ಳತನ ಮಾಡಿದ್ದಾನೆಂದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ಅಲ್ಲದೇ ಈ ಪ್ರಕರಣ ಸಂಬಂಧ ಆರೋಪಿ ಮಂಜುನಾಥ್ ಜೊತೆ ಸಂಪರ್ಕ ಹೊಂದಿದ್ದ ಮತ್ತು ಆರೋಪಿಯೊಂದಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ ಎಂಬ ಆರೋಪದಡಿ ಹಾಸನ ಜಿಲ್ಲೆಯ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಕಾನ್ಸ್​​ಟೇಬಲ್​​ ಸೋಮಶೇಖರ್ ಎಂಬುವರನ್ನು ಹಾಸನ ಎಸ್​ಪಿ ಅಮಾನತಿನಲ್ಲಿಟ್ಟು ತನಿಖೆ ಮುಂದುವರೆಸಿದ್ದಾರೆ.

Police suspended in connection with the case
ಪ್ರಕರಣ ಸಂಬಂಧ ಪೊಲೀಸ್ ಕಾನ್ಸ್​​ಟೇಬಲ್​ ಸಸ್ಪೆಂಡ್

ಹಾಸನ ನಗರಠಾಣೆ ಸಿಪಿಐ ರೇಣುಕಾ ಪ್ರಸಾದ್ ಹಾಗೂ ಪಿಎಸ್ಐ ಅಭಿಜಿತ್ ತಂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಶ್ರೀಗಂಧ ವಶಪಡಿಸಿಕೊಂಡಿದ್ದಾರೆ.

ಹಾಸನ: ನಗರದ ಎಸ್​ಬಿಐ ಬಡಾವಣೆಯ ಮನೆಯೊಂದರಲ್ಲಿ 300 ಕೆಜಿ ಅಕ್ರಮ ಶ್ರೀಗಂಧ ದಾಸ್ತಾನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಪ್ರಕರಣ ಸಂಬಂಧ ಪೊಲೀಸ್ ಕಾನ್ಸ್​ಟೇಬಲ್​​​ವೊಬ್ಬರನ್ನು ಸಸ್ಪೆಂಡ್​ ಮಾಡಲಾಗಿದೆ.

ಫಾರ್ಚುನರ್​​ ಕಾರು ಕಳ್ಳತನ ಪ್ರಕರಣವೊಂದರ ಸಂಬಂಧ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದರು. ಈ ವೇಳೆ ಫಾರ್ಚುನರ್ ಕಾರು ಕದ್ದಿದ್ದ ಮಂಜುನಾಥ್ ಎಂಬಾತ ಕಾರು ಕಳ್ಳತನ ಮಾಡೋದಲ್ಲದೆ ತಾನು ಬಾಡಿಗೆ ಇದ್ದ ಮನೆಯಲ್ಲೇ ಶ್ರೀಗಂಧ ಸ್ಮಗ್ಲಿಂಗ್​ ಮಾಡುತ್ತಿದ್ದುದು ಪತ್ತೆಯಾಗಿದೆ. ಅಂದಾಜು 300 ಕೆಜಿಯಷ್ಟು ಶ್ರೀಗಂಧ ದೊರೆತಿದೆ. ಇದರ ಬೆಲೆ ಮಾರುಕಟ್ಟೆಯಲ್ಲಿ 3 ಕೋಟಿ ರೂ. ತನಕ ಇರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಶ್ರೀನಿವಾಸ್ ಗೌಡ

ಪ್ರಮುಖ ಆರೋಪಿ ಮಂಜುನಾಥ್ ಪರಾರಿಯಾಗಿದ್ದು, ಈತ ಶ್ರೀಗಂಧ ಮಾತ್ರವಲ್ಲದೇ ಹಲವಾರು ವಾಹನಗಳನ್ನ ಕಳ್ಳತನ ಮಾಡಿದ್ದಾನೆಂದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ಅಲ್ಲದೇ ಈ ಪ್ರಕರಣ ಸಂಬಂಧ ಆರೋಪಿ ಮಂಜುನಾಥ್ ಜೊತೆ ಸಂಪರ್ಕ ಹೊಂದಿದ್ದ ಮತ್ತು ಆರೋಪಿಯೊಂದಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ ಎಂಬ ಆರೋಪದಡಿ ಹಾಸನ ಜಿಲ್ಲೆಯ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಕಾನ್ಸ್​​ಟೇಬಲ್​​ ಸೋಮಶೇಖರ್ ಎಂಬುವರನ್ನು ಹಾಸನ ಎಸ್​ಪಿ ಅಮಾನತಿನಲ್ಲಿಟ್ಟು ತನಿಖೆ ಮುಂದುವರೆಸಿದ್ದಾರೆ.

Police suspended in connection with the case
ಪ್ರಕರಣ ಸಂಬಂಧ ಪೊಲೀಸ್ ಕಾನ್ಸ್​​ಟೇಬಲ್​ ಸಸ್ಪೆಂಡ್

ಹಾಸನ ನಗರಠಾಣೆ ಸಿಪಿಐ ರೇಣುಕಾ ಪ್ರಸಾದ್ ಹಾಗೂ ಪಿಎಸ್ಐ ಅಭಿಜಿತ್ ತಂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಶ್ರೀಗಂಧ ವಶಪಡಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.