ETV Bharat / state

ಸಿಎಂ ತವರು ಜಿಲ್ಲೆಯಲ್ಲಿ ವೈದ್ಯರ ಕೊರತೆ... ತಪ್ಪದ ರೋಗಿಗಳ ಪರದಾಟ - undefined

50 ಹಾಸಿಗೆಗಳು ಆಸ್ಪತ್ರೆಯಲ್ಲಿ ವೈದ್ಯರ ಮತ್ತು ಸಿಬ್ಬಂದಿ ಕೊರತೆ ತಲೆದೋರಿದೆ. ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಪ್ರವಾಸಿಗರೂ ಭೇಟಿ ನೀಡುವ ಕೇಂದ್ರದಲ್ಲಿ ವೈದ್ಯರು ಇಲ್ಲದಿರುವುದು ಸರ್ಕಾರದ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಹಳೇಬೀಡು ಸಮುದಾಯ ಆರೋಗ್ಯ ಕೇಂದ್ರ
author img

By

Published : May 12, 2019, 4:01 AM IST

ಹಾಸನ: ಹಳೇಬೀಡು ತಾಲೂಕು ಕೇಂದ್ರದಲ್ಲಿರುವ ಸಮುದಾಯ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಕೊರತೆಯಿಂದಾಗಿ ಉತ್ತಮ ಆರೋಗ್ಯ ಸೇವೆ ದೊರೆಯದೇ ರೋಗಿಗಳು ಪರದಾಡುವಂತಾಗಿದೆ.

ಸ್ಥಳೀಯ ಸಂಘಟನೆಗಳ ಹೋರಾಟದ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ಸಮುದಾಯ ಆರೋಗ್ಯ ಕೇಂದ್ರವನ್ನು ಕೆಲವು ವರ್ಷಗಳ ಹಿಂದೆ ನಿರ್ಮಾಣ ಮಾಡಿತ್ತು. 50 ಹಾಸಿಗೆಗಳು ಆಸ್ಪತ್ರೆಯಲ್ಲಿ ವೈದ್ಯರ ಮತ್ತು ಸಿಬ್ಬಂದಿ ಕೊರತೆ ತಲೆದೋರಿದೆ. ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಪ್ರವಾಸಿಗರೂ ಭೇಟಿ ನೀಡುವ ಕೇಂದ್ರದಲ್ಲಿ ವೈದ್ಯರು ಇಲ್ಲದಿರುವುದು ಸರ್ಕಾರದ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಹಳೇಬೀಡು ಸಮುದಾಯ ಆರೋಗ್ಯ ಕೇಂದ್ರ

ಆಸ್ಪತ್ರೆಯಲ್ಲಿ ವೈದ್ಯರ ಹುದ್ದೆ ಖಾಲಿ ಇರುವುದು ಸೇರಿದಂತೆ ನಾನಾ ಸಮಸ್ಯೆಗಳು ಜನತೆಯನ್ನು ಕಾಡುತ್ತಿವೆ. ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತೆಹಲವು ಬಾರಿ ಮನವಿ ಮಾಡಿಕೊಳ್ಳಲಾಗಿದೆ ಎಂದು ಸ್ಥಳೀಯರು ಹೇಳಿದರು.

ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದ್ದರೂ ನಿತ್ಯ ನೂರಾರ ಜನರು ಚಿಕಿತ್ಸೆಗಾಗಿ ಸಮುದಾಯ ಆರೋಗ್ಯಕ್ಕೆ ಬರುತ್ತಾರೆ. 50 ಹಾಸಿಗೆಯ ಆಸ್ಪತ್ರೆಗೆ ಸಮನಾಗಿ ವೈದ್ಯರು ಹಾಗೂ ದಾದಿಯರು ಇಲ್ಲ. ಆಸ್ಪತ್ರೆಗೆ ರೋಗಿ ಬಂದರೇ ಇರುವ ಓರ್ವ ನರ್ಸ್​, ವೈದ್ಯರಿಗೆ ಕರೆ ಮಾಡಿ ಬರ ಹೇಳುತ್ತಾರೆ. ಇಲ್ಲವೆ ತಾವೇ ರೋಗಿಗೆ ಚಿಕಿತ್ಸೆ ಕೊಟ್ಟು ಔಷಧಿ ನೀಡುತ್ತಾರೆ ಎಂದು ಪ್ರಾಂಶುಪಾಲ ಡಾ. ಕುಮಾರಸ್ವಾಮಿ ಆರೋಪಿಸಿದರು.

ನವೀಕರಣಗೊಂಡ ಆಸ್ಪತ್ರೆ ವ್ಯಾಪ್ತಿಯಲ್ಲಿ ವೈದ್ಯ ಸಿಬ್ಬಂದ ತಂಗಲು ಸೂಕ್ತ ಸೌಲಭ್ಯಗಳಿಲ್ಲ. ಮೂಲಸೌಕರ್ಯದ ಕೊರತೆಯಿಂದ ವೈದ್ಯರು ಇಲ್ಲಿ ಉಳಿದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ವೈದ್ಯರಿಗೆ ನಿರ್ಮಿಸಲಾದ ಸಮುಚ್ಚಯ ಸಮಸ್ಯೆಗಳ ಕೂಪವಾಗಿದೆ. ಕಟ್ಟಡ ದೊಡ್ಡದಿದ್ದರೂ ಸೌಕರ್ಯಗಳು ಕನಿಷ್ಠ ಮಟ್ಟದಲ್ಲಿವೆ. ಹೀಗಾಗಿ, ವೈದ್ಯರು ಬಂದ ವೇಗದಲ್ಲಿ ವರ್ಗಾವಣೆ ಮಾಡಿಸಿಕೊಂಡು ಹೋಗುತ್ತಾರೆ ಎಂದು ಸ್ಥಳೀಯ ನಿವಾಸಿ ಪುಟ್ಟಸ್ವಾಮಿ ಆರೋಪಿಸಿದರು.

ಹಾಸನ: ಹಳೇಬೀಡು ತಾಲೂಕು ಕೇಂದ್ರದಲ್ಲಿರುವ ಸಮುದಾಯ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಕೊರತೆಯಿಂದಾಗಿ ಉತ್ತಮ ಆರೋಗ್ಯ ಸೇವೆ ದೊರೆಯದೇ ರೋಗಿಗಳು ಪರದಾಡುವಂತಾಗಿದೆ.

ಸ್ಥಳೀಯ ಸಂಘಟನೆಗಳ ಹೋರಾಟದ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ಸಮುದಾಯ ಆರೋಗ್ಯ ಕೇಂದ್ರವನ್ನು ಕೆಲವು ವರ್ಷಗಳ ಹಿಂದೆ ನಿರ್ಮಾಣ ಮಾಡಿತ್ತು. 50 ಹಾಸಿಗೆಗಳು ಆಸ್ಪತ್ರೆಯಲ್ಲಿ ವೈದ್ಯರ ಮತ್ತು ಸಿಬ್ಬಂದಿ ಕೊರತೆ ತಲೆದೋರಿದೆ. ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಪ್ರವಾಸಿಗರೂ ಭೇಟಿ ನೀಡುವ ಕೇಂದ್ರದಲ್ಲಿ ವೈದ್ಯರು ಇಲ್ಲದಿರುವುದು ಸರ್ಕಾರದ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಹಳೇಬೀಡು ಸಮುದಾಯ ಆರೋಗ್ಯ ಕೇಂದ್ರ

ಆಸ್ಪತ್ರೆಯಲ್ಲಿ ವೈದ್ಯರ ಹುದ್ದೆ ಖಾಲಿ ಇರುವುದು ಸೇರಿದಂತೆ ನಾನಾ ಸಮಸ್ಯೆಗಳು ಜನತೆಯನ್ನು ಕಾಡುತ್ತಿವೆ. ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತೆಹಲವು ಬಾರಿ ಮನವಿ ಮಾಡಿಕೊಳ್ಳಲಾಗಿದೆ ಎಂದು ಸ್ಥಳೀಯರು ಹೇಳಿದರು.

ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದ್ದರೂ ನಿತ್ಯ ನೂರಾರ ಜನರು ಚಿಕಿತ್ಸೆಗಾಗಿ ಸಮುದಾಯ ಆರೋಗ್ಯಕ್ಕೆ ಬರುತ್ತಾರೆ. 50 ಹಾಸಿಗೆಯ ಆಸ್ಪತ್ರೆಗೆ ಸಮನಾಗಿ ವೈದ್ಯರು ಹಾಗೂ ದಾದಿಯರು ಇಲ್ಲ. ಆಸ್ಪತ್ರೆಗೆ ರೋಗಿ ಬಂದರೇ ಇರುವ ಓರ್ವ ನರ್ಸ್​, ವೈದ್ಯರಿಗೆ ಕರೆ ಮಾಡಿ ಬರ ಹೇಳುತ್ತಾರೆ. ಇಲ್ಲವೆ ತಾವೇ ರೋಗಿಗೆ ಚಿಕಿತ್ಸೆ ಕೊಟ್ಟು ಔಷಧಿ ನೀಡುತ್ತಾರೆ ಎಂದು ಪ್ರಾಂಶುಪಾಲ ಡಾ. ಕುಮಾರಸ್ವಾಮಿ ಆರೋಪಿಸಿದರು.

ನವೀಕರಣಗೊಂಡ ಆಸ್ಪತ್ರೆ ವ್ಯಾಪ್ತಿಯಲ್ಲಿ ವೈದ್ಯ ಸಿಬ್ಬಂದ ತಂಗಲು ಸೂಕ್ತ ಸೌಲಭ್ಯಗಳಿಲ್ಲ. ಮೂಲಸೌಕರ್ಯದ ಕೊರತೆಯಿಂದ ವೈದ್ಯರು ಇಲ್ಲಿ ಉಳಿದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ವೈದ್ಯರಿಗೆ ನಿರ್ಮಿಸಲಾದ ಸಮುಚ್ಚಯ ಸಮಸ್ಯೆಗಳ ಕೂಪವಾಗಿದೆ. ಕಟ್ಟಡ ದೊಡ್ಡದಿದ್ದರೂ ಸೌಕರ್ಯಗಳು ಕನಿಷ್ಠ ಮಟ್ಟದಲ್ಲಿವೆ. ಹೀಗಾಗಿ, ವೈದ್ಯರು ಬಂದ ವೇಗದಲ್ಲಿ ವರ್ಗಾವಣೆ ಮಾಡಿಸಿಕೊಂಡು ಹೋಗುತ್ತಾರೆ ಎಂದು ಸ್ಥಳೀಯ ನಿವಾಸಿ ಪುಟ್ಟಸ್ವಾಮಿ ಆರೋಪಿಸಿದರು.

Intro:ಹಾಸನ: ಹಾಸನ ಶಿಲ್ವಕಲೆಗಳ ಬೀಡು. ರಾಜಕೀಯದಲ್ಲಿಯೂ ತನ್ನದೇ ಆದ ಹೆಸರು ಮಾಡಿರೋ ಜಿಲ್ಲೆ. ಹೊರ ಜಿಲ್ಲೆಯಿಂದ ಹಾಸನಕ್ಕೆ ಪ್ರವಾಸ ಬರುವ ವೇಳೆ ವಾಹನ ಸವಾರರಿಗೆ ಮತ್ತು ಸಣ್ಣ ಪುಟ್ಟ ಅವಘಡಗಳು ಸಂಭವಿಸುತ್ತಲೇ ಇರುತ್ತವೆ. ಹಾಗಾಗಿ ಇಲ್ಲೊಂದು ಸಮುದಾಯ ಆರೋಗ್ಯ ಬೇಕೆಂದು ಸ್ಥಳೀಯರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ರು. ಸರ್ಕಾರ ಕೂಡಾ ಸಮುದಾಯ ಕೇಂದ್ರವನ್ನ ಕೂಡಾ ನಿರ್ಮಾಣ ಮಾಡ್ತು. ಆದ್ರೆ ಆಸ್ಪತ್ರೆಗೆ ವೈದ್ಯರಿಲ್ಲದೇ ಅನಾಥವಾಗಿದೆ. ಹಾಗಿದ್ರೆ ಯಾವುದೀ ಆಸ್ಪತ್ರೆ, ಹಾಗಿದ್ರೆ ಅಲ್ಲಿನ ರೋಗಿಗಳ ಪರಿಸ್ಥತಿಯಾದ್ರು ಏನು...? ಇಲ್ಲಿದೆ ಒಂದು ವರದಿ.

ಹಾಸನ ಮಲೆನಾಡು, ಅರೆಮಲೆನಾಡು ಮತ್ತು ಬಯಲುಸೀಮೆ ಪ್ರದೇಶವನ್ನ ಹೊಂದಿರೋ ಜಿಲ್ಲೆ. ಬೇಲೂರು ಮತ್ತು ಹಳೇಬೀಡು ಗಳನ್ನ ನೋಡಲು ಪ್ರವಾಸಿಗರ ರಾಜ್ಯದಿಂದಷ್ಟೆಯಲ್ಲದೇ ದೇಶ ವಿದೇಶಗಳಿಂದಲೂ ಲಕ್ಷಾಂತರ ಮಂದಿ ಆಗಮಿಸ್ತಾರೆ. ಬರುವ ವೇಳೆ ಕೆಲವು ಬಾರಿ ವಾಹನ ಸವಾರರಿಗೆ ಅಪಘಾತಗಳು ಸಂಭವಿಸಿದಾಗ ಚಿಕಿತ್ಸೆಗಾಗಿ ಹಾಸನ ಅಥವಾ ಬೇಲೂರಿಗೆ ಹೋಗುವ ಅನಿವಾರ್ಯತೆಯಿತ್ತು. ಕೆಲವು ಸಂಘಟನೆಗಳೊಂದಿಗೆ ಸ್ಥಳೀಯರು ನಡೆಸಿದ ಪ್ರತಿಭಟನೆ, ಹೋರಾಟಕ್ಕೆ ಸರ್ಕಾರ ಕೊನಗೂ ಹಳೇಬೀಡಿನಲ್ಲಿ ಸಮುದಾಯ ಆರೋಗ್ಯ ಕೇಂದ್ರವನ್ನ ತೆರೆಯಿತು.

50 ಬೆಡ್ ಆಸ್ಪತ್ರೆಯಲ್ಲಿ ಒಬ್ಬರೂ ವೈದ್ಯರಿಲ್ಲ:
ಹತ್ತು ಸಾವಿರಕ್ಕೂ ಅಧಿಕ ಜನಸಂಖ್ಯೆಯನ್ನ ಹೊಂದಿರುವ ಹಳೇಬೀಡು ಹೋಬಳಿ ಮಾತ್ರವಲ್ಲದೇ ವಿಶ್ವವೇ ಒಮ್ಮೆ ತಿರುಗಿ ನೋಡಿವಂತಹ ಪ್ರವಾಸಿ ಕೆಂದ್ರ. ಹೊಯ್ಸಳೇಶ್ವರ ದೇವಾಲಯವನ್ನ ನೋಡಲು ರಾಜ್ಯ, ಹೊರರಾಜ್ಯವಷ್ಟೆಯಲ್ಲದೇ ಹೊರ ದೇಶಗಳಿಂದಲೂ ಪ್ರವಾಸಿಗರು ಆಗಮಿಸ್ತಾರೆ. 10-15 ವರ್ಷಗಳಿಂದ ಕೂಡಾ ಈ ಭಾಗದಲ್ಲಿ ಬರಗಾಲ ಆವರಿಸಿ ನೀರಿಗೂ ಸಾಕಷ್ಟು ಸಮಸ್ಯೆಯಾಗಿದೆ. ಇದ್ರಿಂದ ಈ ಭಾಗದ ಜನ್ರ ಆರೋಗ್ಯದ ಮೇಲೂ ಕೂಡಾ ವ್ಯತ್ಯಾಸಗಳಾಗಿದ್ದು, ಪ್ರತಿನಿತ್ಯ ನೂರಾರ ಜನ ಸಮುದಾಯ ಆರೋಗ್ಯ ಕೆಂದ್ರಕ್ಕೆ ಬಂದ್ರು ಕೂಡಾ ಸೂಕ್ತ ಚಿಕಿತ್ಸೆ ನೀಡುವ ವೈದ್ಯರಿಲ್ಲದೇ ಭಣಗುಡುತ್ತಿದೆ.
ಬೈಟ್: ಡಾ.ಕುಮಾರ್ ಸ್ವಾಮಿ, ಪ್ರಾಂಶುಪಾಲರು, ಹಳೇಬೀಡು.

6 ಮಂದಿಯ ವೈದ್ಯರಿಗೆ ಒಬ್ಬರೇ ನರ್ಸ:
0 ಹಾಸಿಗೆಯುಳ್ಳ ಆಸ್ಪತ್ರೆಗೆ ಕನಿಷ್ಠ ಪಕ್ಷ 6 ಮಂದಿ ವೈದ್ಯರಿರಬೇಕು. ಆದ್ರೆ ಈ ಆಸ್ಪತ್ರೆಯಲ್ಲಿ 6 ವೈದ್ಯರಿಗೆ ಸಮನಾಗಿ ಒರ್ವ ನರ್ಸ ಇದ್ದು, ಆಸ್ಪತ್ರಗೆ ರೋಗಿಗಳು ಬಂದ್ರೆ ಆ ನರ್ಸ್ ತಮ್ಮ ಮೊಬೈಲ್ ಮೂಲಕ ವೈದ್ಯರಿಗೆ ಕರೆಮಾಡಿ ಚಿಕಿತ್ಸೆಯ ವಿವಿರ ಪಡೆದು ಅದ್ರಂತೆ ರೋಗಿಗಳಿಗೆ ಚಿಕಿತ್ಸೆ ನೀಡ್ತಾರಂತೆ. ದುರಾದೃಷ್ಟವಾಶಾತ್ ನರ್ಸ್ ನೀಡಿದ್ದ ಚಿಕಿತ್ಸೆಯಿಂದ ಯಾವುದೇ ಪ್ರಾಣಹಾನಿಯಾಗಿಲ್ಲ. ಆದ್ರೆ ಸಣ್ಣ ಪುಟ್ಟ ರೋಗಗಳಿಗೆ ಬೇಲೂರು-ಹಾಸನಕ್ಕೆ ಹೋಗುವ ಬದಲು ಇಲ್ಲಿಯೇ ಪ್ರಾಥಮಿಕ ಚಿಕಿತ್ಸೆ ಪಡೆದು ಸುಮ್ಮನಾಗಿಬಿಟ್ತಾರೆ.

ಮೂಲಸೌಕರ್ಯದ ಕೊರತೆಯಿಂದ ಹಿಂದೇಟಾಕುವ ವೈದ್ಯರು:
ಹಾಸನದಿಂದ ಸುಮಾರು 30 ಕಿ.ಮೀ.ದೂರದಲ್ಲಿ ಹಳೇಬೀಡಿದೆ. ನವೀಕರಣಗೊಂಡ ಆಸ್ಪತ್ರೆ ಕೂಡಾ ಇದೆ. ಆದ್ರೆ ವೈದ್ಯರಿಗೆ ಬೇಕಾದ ಮೂಲಸೌಕರ್ಯವಿಲ್ಲವಂತೆ. ಈ ಆಸ್ಪತ್ರೆಗೆ ವೈದ್ಯರು ಬಾರದಿರಲು ಸರಿಯಾದ ಕ್ವಾಟ್ರಸ್ ಇಲ್ವಂತೆ. ಕುಡಿಯುವ ನೀರಿನ ಸಮಸ್ಯೆ, ಮಕ್ಕಳ ವಿದ್ಯಾಬ್ಯಾಸಕ್ಕೆ ಸರಿಯಾದ ಶಾಲಾಕಾಲೇಜುಗಳ ಕೊರತೆಯಿದೆ. ಹಾಗಾಗಿ ಕೆಲವು ಮಂದಿ ಬರುವ ವೈದ್ಯರು ಇಂತಹ ಕಾರಣಗಳಿಂದ ಹೊರಗುಳಿಯುತ್ತಾರೆ. ಇನ್ನು ವಾರಕ್ಕೊಮ್ಮೆ ಕೆ.ಬಿ.ಹಾಳ್, ಅಂಕಪುರ, ಹಗರೆ ಅಡುಗೂರು ಆಸ್ಪತ್ರೆಯ ವೈದ್ಯರನ್ನ ವಾರಕ್ಕೆ ಒಂದು ದಿನದಂತೆ ನಿಯೋಜನೆ ಮಾಡ್ತಾರೆ. ಭಾನುವಾರ ಬಂದ್ರೆ ಇವರುಗಳು ಕೂಡಾ ಬರೋದಿಲ್ಲ. ಹೀಗಾಗಿ ಆಸ್ಪತ್ರೆ ದೊಡ್ಡದಿದ್ದರೂ ಕೂಡಾ ಡಾಕ್ಟರ್ ಮಾತ್ರ ಇಲ್ಲದಿರುವುದು ವಿಪರ್ಯಾಸ.
ಬೈಟ್: ಪುಟ್ಟಸ್ವಾಮಿ, ಹೊರರೋಗಿ ಮತ್ತು ಸ್ಥಳೀಯರು.

ರಿಯಾಲಿಟಿ ಚೆಕ್ ಮಾಡಿದಾಗ ಬಯಲಾದ ಆಸ್ಪತ್ರೆಯ ಕರ್ಮಕಾಂಡ:
ಇನ್ನು ಸ್ಥಳೀಯರ ಆರೋಪವನ್ನ ಗಂಭೀರವಾಗಿ ಪಡೆದುಕೊಂಡ ಈ ಟಿವಿ ಭಾರತ ಸಮಸ್ಯೆಯನ್ನ ಖುದ್ದು ನೋಡಲು ಮುಂದಾದಾಗಲೂ ಸಹ ಕ್ಯಾಮರಾಗೆ ಬಿದ್ದದ್ದು, ವೈದ್ಯರಿಲ್ಲದ ಆಸ್ಪತ್ರೆ. ಪ್ರತಿ ರೂಮ್ ಗೂ ಕ್ಯಾಮರಾ ಹಿಡಿದು ಹೊರಟ ನಮ್ಮ ಪ್ರತಿನಿಧಿಗೆ ಕಾಣಿಸಿದ್ದು ಖಾಲಿ ಖಾಲಿಯಾಗಿರೋ ವೈದ್ಯರ ಕೊಠಡಿ, ಚಿಕಿತ್ಸಾಕೊಠಡಿ, ಸ್ಕ್ಯಾನಿಂಗ್ ರೂಂ. ಪ್ರಾಥಮಿಕ ಚಿಕಿತ್ಸಾ ಕೊಠಡಿ, ದಾದಿಯರ ಕೊಠಡಿ, ಗಬ್ಬು ನಾರುವ ಶೌಚಾಲಯದ ಜೊತೆಗೆ ಚಿಕಿತ್ಸೆಗೆಂದು ಕರೆತರುವ ರೋಗಿಗಳನ್ನ ವೈದ್ಯರಿಲ್ಲದೇ ಪೋಷಕರೇ ವಾಪಸ್ಸ್ ಕರೆದುಕೊಂಡು ಹೋಗುವ ದೃಶ್ಯಗಳು.

ಒಟ್ಟಾರೆ, ಸರ್ಕಾರ ದೊಡ್ಡದೊಂದು ಆಸ್ಪತ್ರೆಯನ್ನೇನೋ ಕಟ್ಟಿದೆ. ಆದ್ರೆ ದೇವರಿಲ್ಲದ ದೇವಾಸ್ಥಾನಕ್ಕೆ ಭಕ್ತರು ಬಂದು ಹೋಗುವ ಹಾಗೇ, ವೈದ್ಯರಿಲ್ಲದ ದೊಡ್ಡಸ್ಪತ್ರೆಗೆ ನಿತ್ಯವೂ ನೂರಾರು ರೋಗಿಗಳು ಆಗಮಿಸಿ ವಾಪಸ್ ಹೋಗುವ ಪರಿಸ್ಥಿತಿ ಇದೆ. ಇನ್ನಾದ್ರೂ ಕೂಡಾ ಸರ್ಕಾರ ಎಚ್ಚೆತ್ತು ಈ ಭಾಗದ ಜನ್ರ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವರೇ ಕಾದುನೋಡಬೇಕಿದೆ.

•         ಸುನೀಲ್ ಕುಂಭೇನಹಳ್ಳಿ, ಈ ಟಿವಿ ನ್ಯೂಸ್, ಹಾಸನ.


Body:0


Conclusion:0

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.