ETV Bharat / state

ತಂಗಿಯನ್ನೇ ಮದುವೆಯಾದ ಅಣ್ಣ : ಪತ್ನಿ, ಸಹಚರರಿಂದ ಪತಿಯ ಕೊಲೆ

author img

By

Published : Oct 29, 2020, 7:59 PM IST

Updated : Oct 29, 2020, 10:54 PM IST

ದೊಡ್ಡಪ್ಪನ ಮಗಳನ್ನೇ ಮದುವೆಯಾದ ಕಾರಣಕ್ಕೆ ದಿನೇಶ್​​​ ಹೆಂಡತಿ, ಮಾವ ಮತ್ತು ಮೈದುನ ಸೇರಿಕೊಂಡು ಕೊಲೆ ಮಾಡಿದ್ದಾರೆ. ಸದ್ಯ ಆರೋಪಿಗಳನ್ನು ಚನ್ನರಾಯಪಟ್ಟಣ ಪೊಲೀಸರು ಬಂಧಿಸಿದ್ದಾರೆ.

murder case in channarayapattan
ತಂಗಿಯನ್ನೇ ಮದುವೆಯಾದ ಅಣ್ಣ :ಪತ್ನಿ, ಸಹಚರರಿಂದ ಪತಿಯ ಕೊಲೆ : ಆರೋಪಿಗಳ ಬಂಧನ

ಹಾಸನ: ಚನ್ನರಾಯಪಟ್ಟಣದ ಹೆಬ್ಬಳಲು (ಲಕ್ಷ್ಮಿಪುರ) ಗ್ರಾಮದ ದಿನೇಶ್(27)​ನನ್ನು ಕಾರಿನ ಡಿಕ್ಕಿಯಲ್ಲಿ ಸುಟ್ಟುಹಾಕಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ದೊಡ್ಡಪ್ಪನ ಮಗಳನ್ನೇ ಮದುವೆಯಾದ ಕಾರಣಕ್ಕೆ ದಿನೇಶ್​​​ ಹೆಂಡತಿ, ಮಾವ ಮತ್ತು ಮೈದುನ ಸೇರಿಕೊಂಡು ಕೊಲೆ ಮಾಡಿದ್ದಾರೆ. ಸದ್ಯ ಆರೋಪಿಗಳನ್ನು ಚನ್ನರಾಯಪಟ್ಟಣ ಪೊಲೀಸರು ಬಂಧಿಸಿದ್ದಾರೆ.

ಕೊಲೆಯಾಗಿರುವ ದಿನೇಶ್​​ ತಾತ ನಂಜುಂಡಯ್ಯನಿಗೆ ಪುಟ್ಟಸ್ವಾಮಿ ಮತ್ತು ಮಂಜಮ್ಮ ಎಂಬ ಇಬ್ಬರು ಮಕ್ಕಳಿದ್ದು, ಮಂಜಮ್ಮನ ಮಗಳಾದ ಅಭಿಲಾಷಾಳನ್ನು ದಿನೇಶ್​​ಗೆ ಕೊಟ್ಟು ಮದುವೆ ಮಾಡಲಾಗಿತ್ತು. ದಿನೇಶ್​​ ಮತ್ತು ಅಭಿಲಾಷ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಎಸ್​ಪಿ ಡಾ.ಆರ್.ಶ್ರೀನಿವಾಸ್ ಗೌಡ ಅವರಿಂದ ಮಾಹಿತಿ

ಇನ್ನು ತನ್ನ ತಾತನ ಮಗನಾಗಿದ್ದ ಮಂಜುನಾಥ್​​ಗೆ ಮಗಳಿದ್ದು, ಆ ಮಗಳನ್ನು ದಿನೇಶ್ ಲೈಂಗಿಕವಾಗಿ ಬಳಸಿಕೊಂಡು ನಂತ್ರ ಮದುವೆ ಆಗಿದ್ದ. ದಿನೇಶ್​ ಮದುವೆಯಾಗಿದ್ದ ಆ ಬಾಲಕಿ (16) ದಿನೇಶ್​ಗೆ ತಂಗಿಯಾಗಬೇಕಿತ್ತು. ಇದರಿಂದ ಸಂಬಂಧಕ್ಕೆ ಅವಮಾನ ಮಾಡಿದ ಎಂಬ ಕಾರಣಕ್ಕೆ ಸಿಟ್ಟಿಗೆದ್ದ ಪತ್ನಿ ಹಾಗೂ ದಿನೇಶ್​​ ಮೈದುನ ಸೇರಿ ಕೊಲೆ ಮಾಡಿ ಸುಟ್ಟು ಹಾಕಿದ್ದಾರೆ.

ಕೊಲೆಯಾಗಿದ್ದು ಹೇಗೆ :

ಮನೆಗೆ ಕರೆಸಿಕೊಂಡ ದಿನೇಶ್​ ಹೆಂಡತಿ ಅಭಿಲಾಷಾ, ದಿನೇಶ್​ಗೆ ಮದ್ಯಪಾನ ಮಾಡಿಸುತ್ತಾಳೆ. ಮದ್ಯದ ಅಮಲಿನಲ್ಲಿದ್ದ ದಿನೇಶ್​​ಗೆ ಅಭಿಲಾಷಾ ಸಹೋದರ ಮಂಜುನಾಥ್​ ಕಬ್ಬಿಣದ ಸಲಾಕೆಯಿಂದ ಹೊಡೆಯುತ್ತಾನೆ. ಇದಾದ ನಂತ್ರ ಕುಸಿದು ಬಿದ್ದ ದಿನೇಶ ಕುತ್ತಿಗೆಯನ್ನು ಚಾಕುವಿಂದು ಕುಯ್ದು ಕೊಲೆ ಮಾಡಲಾಗಿದೆ.

ತಂಗಿಯನ್ನೇ ಮದುವೆಯಾದ ಅಣ್ಣ :ಪತ್ನಿ, ಸಹಚರರಿಂದ ಪತಿಯ ಕೊಲೆ : ಆರೋಪಿಗಳ ಬಂಧನ

ಬಳಿಕ ಬೆಂಗಳೂರಿನಿಂದ ಹಾಸನ ತಮ್ಮ ಊರಿಗೆ ಮೃತ ದೇಹವನ್ನು ಕಾರಿನಲ್ಲಿ ತಂದು ಆ ಕಾರು ಸಮೇತ ಸುಟ್ಟು ಹಾಕಲಾಗಿದೆ. ತನಿಖೆ ನಡೆಸಿದ ಪೊಲೀಸರಿಗೆ ವಿಚಾರ ತಿಳಿದು, ಕೊಲೆಯಲ್ಲಿ ಭಾಗಿಯಾಗಿದ್ದ, ಅಭಿಲಾಷಾ, ಮಂಜುನಾಥ್​​ ಮತ್ತು ದಿನೇಶ್​​ ಮೈದುನ ಬಸವರಾಜ್​ನನ್ನು ಬಂಧಿಸಲಾಗಿದೆ

ಹಾಸನ: ಚನ್ನರಾಯಪಟ್ಟಣದ ಹೆಬ್ಬಳಲು (ಲಕ್ಷ್ಮಿಪುರ) ಗ್ರಾಮದ ದಿನೇಶ್(27)​ನನ್ನು ಕಾರಿನ ಡಿಕ್ಕಿಯಲ್ಲಿ ಸುಟ್ಟುಹಾಕಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ದೊಡ್ಡಪ್ಪನ ಮಗಳನ್ನೇ ಮದುವೆಯಾದ ಕಾರಣಕ್ಕೆ ದಿನೇಶ್​​​ ಹೆಂಡತಿ, ಮಾವ ಮತ್ತು ಮೈದುನ ಸೇರಿಕೊಂಡು ಕೊಲೆ ಮಾಡಿದ್ದಾರೆ. ಸದ್ಯ ಆರೋಪಿಗಳನ್ನು ಚನ್ನರಾಯಪಟ್ಟಣ ಪೊಲೀಸರು ಬಂಧಿಸಿದ್ದಾರೆ.

ಕೊಲೆಯಾಗಿರುವ ದಿನೇಶ್​​ ತಾತ ನಂಜುಂಡಯ್ಯನಿಗೆ ಪುಟ್ಟಸ್ವಾಮಿ ಮತ್ತು ಮಂಜಮ್ಮ ಎಂಬ ಇಬ್ಬರು ಮಕ್ಕಳಿದ್ದು, ಮಂಜಮ್ಮನ ಮಗಳಾದ ಅಭಿಲಾಷಾಳನ್ನು ದಿನೇಶ್​​ಗೆ ಕೊಟ್ಟು ಮದುವೆ ಮಾಡಲಾಗಿತ್ತು. ದಿನೇಶ್​​ ಮತ್ತು ಅಭಿಲಾಷ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಎಸ್​ಪಿ ಡಾ.ಆರ್.ಶ್ರೀನಿವಾಸ್ ಗೌಡ ಅವರಿಂದ ಮಾಹಿತಿ

ಇನ್ನು ತನ್ನ ತಾತನ ಮಗನಾಗಿದ್ದ ಮಂಜುನಾಥ್​​ಗೆ ಮಗಳಿದ್ದು, ಆ ಮಗಳನ್ನು ದಿನೇಶ್ ಲೈಂಗಿಕವಾಗಿ ಬಳಸಿಕೊಂಡು ನಂತ್ರ ಮದುವೆ ಆಗಿದ್ದ. ದಿನೇಶ್​ ಮದುವೆಯಾಗಿದ್ದ ಆ ಬಾಲಕಿ (16) ದಿನೇಶ್​ಗೆ ತಂಗಿಯಾಗಬೇಕಿತ್ತು. ಇದರಿಂದ ಸಂಬಂಧಕ್ಕೆ ಅವಮಾನ ಮಾಡಿದ ಎಂಬ ಕಾರಣಕ್ಕೆ ಸಿಟ್ಟಿಗೆದ್ದ ಪತ್ನಿ ಹಾಗೂ ದಿನೇಶ್​​ ಮೈದುನ ಸೇರಿ ಕೊಲೆ ಮಾಡಿ ಸುಟ್ಟು ಹಾಕಿದ್ದಾರೆ.

ಕೊಲೆಯಾಗಿದ್ದು ಹೇಗೆ :

ಮನೆಗೆ ಕರೆಸಿಕೊಂಡ ದಿನೇಶ್​ ಹೆಂಡತಿ ಅಭಿಲಾಷಾ, ದಿನೇಶ್​ಗೆ ಮದ್ಯಪಾನ ಮಾಡಿಸುತ್ತಾಳೆ. ಮದ್ಯದ ಅಮಲಿನಲ್ಲಿದ್ದ ದಿನೇಶ್​​ಗೆ ಅಭಿಲಾಷಾ ಸಹೋದರ ಮಂಜುನಾಥ್​ ಕಬ್ಬಿಣದ ಸಲಾಕೆಯಿಂದ ಹೊಡೆಯುತ್ತಾನೆ. ಇದಾದ ನಂತ್ರ ಕುಸಿದು ಬಿದ್ದ ದಿನೇಶ ಕುತ್ತಿಗೆಯನ್ನು ಚಾಕುವಿಂದು ಕುಯ್ದು ಕೊಲೆ ಮಾಡಲಾಗಿದೆ.

ತಂಗಿಯನ್ನೇ ಮದುವೆಯಾದ ಅಣ್ಣ :ಪತ್ನಿ, ಸಹಚರರಿಂದ ಪತಿಯ ಕೊಲೆ : ಆರೋಪಿಗಳ ಬಂಧನ

ಬಳಿಕ ಬೆಂಗಳೂರಿನಿಂದ ಹಾಸನ ತಮ್ಮ ಊರಿಗೆ ಮೃತ ದೇಹವನ್ನು ಕಾರಿನಲ್ಲಿ ತಂದು ಆ ಕಾರು ಸಮೇತ ಸುಟ್ಟು ಹಾಕಲಾಗಿದೆ. ತನಿಖೆ ನಡೆಸಿದ ಪೊಲೀಸರಿಗೆ ವಿಚಾರ ತಿಳಿದು, ಕೊಲೆಯಲ್ಲಿ ಭಾಗಿಯಾಗಿದ್ದ, ಅಭಿಲಾಷಾ, ಮಂಜುನಾಥ್​​ ಮತ್ತು ದಿನೇಶ್​​ ಮೈದುನ ಬಸವರಾಜ್​ನನ್ನು ಬಂಧಿಸಲಾಗಿದೆ

Last Updated : Oct 29, 2020, 10:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.