ETV Bharat / state

ಬೆಂಗಳೂರಿಂದ ರೆಸಾರ್ಟ್​​​ಗೆ ಬಂದಿದ್ದ ಯುವಕರನ್ನು ರಾತ್ರೋರಾತ್ರಿ ವಾಪಸ್​​ ಕಳುಹಿಸಿದ ಸ್ಥಳೀಯರು!

author img

By

Published : Apr 30, 2021, 3:22 PM IST

ಕಳೆದ ಕೆಲ ದಿನಗಳ ಹಿಂದಷ್ಟೇ ಪೊಲೀಸ್ ಇಲಾಖೆ ವತಿಯಿಂದ ರೆಸಾರ್ಟ್ ಹಾಗೂ ಹೋಂ ಸ್ಟೇ ಮಾಲೀಕರ ಸಭೆ ನಡೆಸಿ ಸರ್ಕಾರದ ನಿಯಮಗಳನ್ನು ಕಾಪಾಡುವಂತೆ ಆದೇಶಿಸಲಾಗಿತ್ತು. ಆದರೂ ಸಹ ಕೆಲವು ರೆಸಾರ್ಟ್ ಹಾಗೂ ಹೋಂ ಸ್ಟೇ ಮಾಲೀಕರು ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಹಾನುಬಾಳ್ ಸುತ್ತಮುತ್ತಲಿನ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ‌.

ಬೆಂಗಳೂರಿಂದ ರೆಸಾರ್ಟ್​​​ಗೆ ಬಂದಿದ್ದ ಯುವಕರ ರಾತ್ರೋರಾತ್ರಿ ವಾಪಾಸು ಕಳುಹಿಸಿದ ಸ್ಥಳೀಯರು
ಬೆಂಗಳೂರಿಂದ ರೆಸಾರ್ಟ್​​​ಗೆ ಬಂದಿದ್ದ ಯುವಕರ ರಾತ್ರೋರಾತ್ರಿ ವಾಪಾಸು ಕಳುಹಿಸಿದ ಸ್ಥಳೀಯರು

ಸಕಲೇಶಪುರ (ಹಾಸನ): ತಾಲೂಕಿನ ಹಾನುಬಾಳ್​ ಹೋಬಳಿಯ ಅಗ್ನಿಗುಡ್ಡದ ರೆಸಾರ್ಟ್​​​​ವೊಂದರಲ್ಲಿ ಮೋಜು ಮಸ್ತಿಗಾಗಿ ಆಗಮಿಸಿದ್ದ ಯುವಕರನ್ನು ಸ್ಥಳೀಯರು ವಾಪಸ್​​ ಕಳುಹಿಸಿದ್ದಾರೆ.

ಎರಡು ದಿನಗಳ ಹಿಂದೆ ರೆಸಾರ್ಟ್‌ಗೆ 60ಕ್ಕೂ ಹೆಚ್ಚು ಮಂದಿ ಬೆಂಗಳೂರಿನಿಂದ ಬಂದು ತಂಗಿದ್ದರು. ರೆಸಾರ್ಟ್​​​ನಲ್ಲಿ ಹೊರ ಊರಿನಿಂದ ಬಂದವರಿಂದ ಸ್ಥಳೀಯರಿಗೆ ಕೊರೊನಾ ಸೋಂಕು ತಗುಲುವ ಭೀತಿ ಹಿನ್ನೆಲೆ ಅತಿಥಿಗಳನ್ನು ತೆರವುಗೊಳಿಸುವಂತೆ ತಾಲೂಕು ಆಡಳಿತಕ್ಕೆ ಮನವಿ ಮಾಡಲಾಗಿತ್ತು.

ಬೆಂಗಳೂರಿಂದ ರೆಸಾರ್ಟ್​​​ಗೆ ಬಂದಿದ್ದ ಯುವಕರನ್ನು ರಾತ್ರೋರಾತ್ರಿ ವಾಪಸ್​​ ಕಳುಹಿಸಿದ ಸ್ಥಳೀಯರು

ಈ ಹಿನ್ನೆಲೆಯಲ್ಲಿ ರೆಸಾರ್ಟ್​​​ಗೆ ಭೇಟಿ ನೀಡಿದ ಕಂದಾಯ ನಿರೀಕ್ಷಕ ಹಾಗೂ ಓರ್ವ ಪೊಲೀಸ್ ಕಾನ್ಸ್​​​ಟೇಬಲ್,​​​ ರೆಸಾರ್ಟ್ ಬಂದ್ ಮಾಡುವಂತೆ ಮನವಿ ಮಾಡಿದ್ದರು. ಆದರೂ ರೆಸಾರ್ಟ್ ಮಾಲೀಕರು ಕ್ರಮ ಕೈಗೊಳ್ಳದ ಹಿನ್ನೆಲೆ ಗುರುವಾರ ಮಧ್ಯರಾತ್ರಿ ರೆಸಾರ್ಟ್​​​ಗೆ ನುಗ್ಗಿದ ಸ್ಥಳೀಯರು, ಅಲ್ಲಿದ್ದ ಯುವಕರನ್ನು ಖಾಲಿ ಮಾಡಿಸಿದ್ದಾರೆ. 60ಕ್ಕೂ ಹೆಚ್ಚು ಯುವಕರನ್ನು ವಾಪಸ್​ ಬೆಂಗಳೂರಿಗೆ ಕಳುಹಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಪೊಲೀಸ್ ಇಲಾಖೆ ವತಿಯಿಂದ ರೆಸಾರ್ಟ್ ಹಾಗೂ ಹೋಂ ಸ್ಟೇ ಮಾಲೀಕರ ಸಭೆ ನಡೆಸಿ ಸರ್ಕಾರದ ನಿಯಮಗಳನ್ನು ಕಾಪಾಡುವಂತೆ ಆದೇಶಿಸಲಾಗಿತ್ತು. ಆದರೂ ಸಹ ಕೆಲವು ರೆಸಾರ್ಟ್ ಹಾಗೂ ಹೋಂ ಸ್ಟೇ ಮಾಲೀಕರು ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಹಾನುಬಾಳ್ ಸುತ್ತಮುತ್ತಲಿನ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ‌.

ಸಕಲೇಶಪುರ (ಹಾಸನ): ತಾಲೂಕಿನ ಹಾನುಬಾಳ್​ ಹೋಬಳಿಯ ಅಗ್ನಿಗುಡ್ಡದ ರೆಸಾರ್ಟ್​​​​ವೊಂದರಲ್ಲಿ ಮೋಜು ಮಸ್ತಿಗಾಗಿ ಆಗಮಿಸಿದ್ದ ಯುವಕರನ್ನು ಸ್ಥಳೀಯರು ವಾಪಸ್​​ ಕಳುಹಿಸಿದ್ದಾರೆ.

ಎರಡು ದಿನಗಳ ಹಿಂದೆ ರೆಸಾರ್ಟ್‌ಗೆ 60ಕ್ಕೂ ಹೆಚ್ಚು ಮಂದಿ ಬೆಂಗಳೂರಿನಿಂದ ಬಂದು ತಂಗಿದ್ದರು. ರೆಸಾರ್ಟ್​​​ನಲ್ಲಿ ಹೊರ ಊರಿನಿಂದ ಬಂದವರಿಂದ ಸ್ಥಳೀಯರಿಗೆ ಕೊರೊನಾ ಸೋಂಕು ತಗುಲುವ ಭೀತಿ ಹಿನ್ನೆಲೆ ಅತಿಥಿಗಳನ್ನು ತೆರವುಗೊಳಿಸುವಂತೆ ತಾಲೂಕು ಆಡಳಿತಕ್ಕೆ ಮನವಿ ಮಾಡಲಾಗಿತ್ತು.

ಬೆಂಗಳೂರಿಂದ ರೆಸಾರ್ಟ್​​​ಗೆ ಬಂದಿದ್ದ ಯುವಕರನ್ನು ರಾತ್ರೋರಾತ್ರಿ ವಾಪಸ್​​ ಕಳುಹಿಸಿದ ಸ್ಥಳೀಯರು

ಈ ಹಿನ್ನೆಲೆಯಲ್ಲಿ ರೆಸಾರ್ಟ್​​​ಗೆ ಭೇಟಿ ನೀಡಿದ ಕಂದಾಯ ನಿರೀಕ್ಷಕ ಹಾಗೂ ಓರ್ವ ಪೊಲೀಸ್ ಕಾನ್ಸ್​​​ಟೇಬಲ್,​​​ ರೆಸಾರ್ಟ್ ಬಂದ್ ಮಾಡುವಂತೆ ಮನವಿ ಮಾಡಿದ್ದರು. ಆದರೂ ರೆಸಾರ್ಟ್ ಮಾಲೀಕರು ಕ್ರಮ ಕೈಗೊಳ್ಳದ ಹಿನ್ನೆಲೆ ಗುರುವಾರ ಮಧ್ಯರಾತ್ರಿ ರೆಸಾರ್ಟ್​​​ಗೆ ನುಗ್ಗಿದ ಸ್ಥಳೀಯರು, ಅಲ್ಲಿದ್ದ ಯುವಕರನ್ನು ಖಾಲಿ ಮಾಡಿಸಿದ್ದಾರೆ. 60ಕ್ಕೂ ಹೆಚ್ಚು ಯುವಕರನ್ನು ವಾಪಸ್​ ಬೆಂಗಳೂರಿಗೆ ಕಳುಹಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಪೊಲೀಸ್ ಇಲಾಖೆ ವತಿಯಿಂದ ರೆಸಾರ್ಟ್ ಹಾಗೂ ಹೋಂ ಸ್ಟೇ ಮಾಲೀಕರ ಸಭೆ ನಡೆಸಿ ಸರ್ಕಾರದ ನಿಯಮಗಳನ್ನು ಕಾಪಾಡುವಂತೆ ಆದೇಶಿಸಲಾಗಿತ್ತು. ಆದರೂ ಸಹ ಕೆಲವು ರೆಸಾರ್ಟ್ ಹಾಗೂ ಹೋಂ ಸ್ಟೇ ಮಾಲೀಕರು ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಹಾನುಬಾಳ್ ಸುತ್ತಮುತ್ತಲಿನ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.