ETV Bharat / state

ಬಿಎಸ್​ವೈ ಬಜೆಟ್​ನಲ್ಲಿ ಹಾಸನ ಜಿಲ್ಲೆಗೆ ಸಿಕ್ಕಿದ್ದೇನು?

author img

By

Published : Mar 8, 2021, 3:36 PM IST

Updated : Mar 8, 2021, 6:34 PM IST

ರಾಜ್ಯ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು 2021-2022ನೇ ಸಾಲಿನ ರಾಜ್ಯ ಬಜೆಟ್ 2021 ಮಂಡನೆ ಮಾಡಿದ್ದು, ಹಾಸನ ವಿಮಾನ ನಿಲ್ದಾಣಕ್ಕೆ 175 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ.

Budget
ಬಜೆಟ್

ಹಾಸನ: ಕಳೆದ ವಾರದಿಂದ ಕರ್ನಾಟಕ ರಾಜ್ಯ ಬಜೆಟ್ ಅಧಿವೇಶನ ಆರಂಭವಾಗಿದ್ದು, ಇಂದು ಬಜೆಟ್ ಮಂಡನೆಯಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 8ನೇ ಬಾರಿಗೆ ಬಜೆಟ್ ಮಂಡನೆ ಮಾಡಿದ್ದಾರೆ. ಈ ಬಜೆಟ್​ನಲ್ಲಿ ಹಾಸನ ಜಿಲ್ಲೆಗೆ ಸಿಕ್ಕಿರುವ ಅನುದಾನ ಮತ್ತು ಯೋಜನೆಗಳ ಮಾಹಿತಿ ಇಲ್ಲಿದೆ.

ಬಿ ಎಸ್ ಯಡಿಯೂರಪ್ಪ ಮಂಡಿಸಿದ ಬಜೆಟ್ ನಲ್ಲಿ ಹಾಸನಕ್ಕೆ ಸಿಕ್ಕಿದ್ದಿಷ್ಟು:

  • ಹಾಸನ ವಿಮಾನ ನಿಲ್ದಾಣಕ್ಕೆ 175 ಕೋಟಿ
  • ಹಾಸನದಲ್ಲಿ ಸ್ವಯಂ ಚಾಲಿತ ಚಾಲನೆ ಪರೀಕ್ಷಾ ಪಥ ಸ್ಥಾಪನೆ.
  • ವಿವಿಧ ಜನಾಂಗಗಳ ಹಾಸ್ಟೆಲ್ ನಿರ್ಮಾಣಕ್ಕೆ ಒತ್ತು
  • ಕರ್ನಾಟಕ ಪಬ್ಲಿಕ್ ಶಾಲೆಗಳ ಅಭಿವೃದ್ಧಿಗೆ ಕ್ರಮ.
  • ಹಿಂದುಳಿದ ತಾಲೂಕು ಎಂದು ಕರೆಯಲಾಗಿರುವ ಆಲೂರು ಕ್ಷೇತ್ರಕ್ಕೆ ಅನುದಾನ
  • ಸಾರಿಗೆ ಇಲಾಖೆಯ ಮಾಲೀಕತ್ವ ವರ್ಗಾವಣೆ ಸರಕು ಸಾಗಣೆ ಮುಂತಾದವುಗಳಿಗೆ ಕಾಂಟ್ಯಾಕ್ಟ್​ ಲೆಸ್ ಮತ್ತು ಫೇಸ್ ಲೆಸ್ ಹಾಗೂ ಕ್ಯಾಸ್​ಲೆಸ್ ಯೋಜನೆ ಜಾರಿ ಹಾಸನಕ್ಕೆ ಅನ್ವಯ.
  • ಕಟ್ಟಡ ಕಾರ್ಮಿಕರ ಮಕ್ಕಳ ಸಂರಕ್ಷಣೆಗೆ ಹಾಸನದಲ್ಲಿ ಕೇಂದ್ರ ಸ್ಥಾಪನೆ.
  • ಆಸ್ಪತ್ರೆಗಳ ಆಧುನೀಕರಣಕ್ಕೆ ಮತ್ತು ಮೇಲ್ದರ್ಜೆಗೆ ಒತ್ತು.
  • ಹಾಸನದಲ್ಲಿ ಬಿ ಆರ್ ಅಂಬೇಡ್ಕರ್ ಸ್ಮಾರಕ ಭವನ ನಿರ್ಮಾಣ.
  • ಎತ್ತಿನಹೊಳೆ ಯೋಜನೆಗೆ ಭೂ ಸ್ವಾಧೀನ ಪ್ರಕ್ರಿಯೆ ಹೆಚ್ಚಿನ ಒತ್ತು ನೀಡಿ ಸರ್ಕಾರದಿಂದ ನೆರವಿನ ಘೋಷಣೆ.

ಹಾಸನ: ಕಳೆದ ವಾರದಿಂದ ಕರ್ನಾಟಕ ರಾಜ್ಯ ಬಜೆಟ್ ಅಧಿವೇಶನ ಆರಂಭವಾಗಿದ್ದು, ಇಂದು ಬಜೆಟ್ ಮಂಡನೆಯಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 8ನೇ ಬಾರಿಗೆ ಬಜೆಟ್ ಮಂಡನೆ ಮಾಡಿದ್ದಾರೆ. ಈ ಬಜೆಟ್​ನಲ್ಲಿ ಹಾಸನ ಜಿಲ್ಲೆಗೆ ಸಿಕ್ಕಿರುವ ಅನುದಾನ ಮತ್ತು ಯೋಜನೆಗಳ ಮಾಹಿತಿ ಇಲ್ಲಿದೆ.

ಬಿ ಎಸ್ ಯಡಿಯೂರಪ್ಪ ಮಂಡಿಸಿದ ಬಜೆಟ್ ನಲ್ಲಿ ಹಾಸನಕ್ಕೆ ಸಿಕ್ಕಿದ್ದಿಷ್ಟು:

  • ಹಾಸನ ವಿಮಾನ ನಿಲ್ದಾಣಕ್ಕೆ 175 ಕೋಟಿ
  • ಹಾಸನದಲ್ಲಿ ಸ್ವಯಂ ಚಾಲಿತ ಚಾಲನೆ ಪರೀಕ್ಷಾ ಪಥ ಸ್ಥಾಪನೆ.
  • ವಿವಿಧ ಜನಾಂಗಗಳ ಹಾಸ್ಟೆಲ್ ನಿರ್ಮಾಣಕ್ಕೆ ಒತ್ತು
  • ಕರ್ನಾಟಕ ಪಬ್ಲಿಕ್ ಶಾಲೆಗಳ ಅಭಿವೃದ್ಧಿಗೆ ಕ್ರಮ.
  • ಹಿಂದುಳಿದ ತಾಲೂಕು ಎಂದು ಕರೆಯಲಾಗಿರುವ ಆಲೂರು ಕ್ಷೇತ್ರಕ್ಕೆ ಅನುದಾನ
  • ಸಾರಿಗೆ ಇಲಾಖೆಯ ಮಾಲೀಕತ್ವ ವರ್ಗಾವಣೆ ಸರಕು ಸಾಗಣೆ ಮುಂತಾದವುಗಳಿಗೆ ಕಾಂಟ್ಯಾಕ್ಟ್​ ಲೆಸ್ ಮತ್ತು ಫೇಸ್ ಲೆಸ್ ಹಾಗೂ ಕ್ಯಾಸ್​ಲೆಸ್ ಯೋಜನೆ ಜಾರಿ ಹಾಸನಕ್ಕೆ ಅನ್ವಯ.
  • ಕಟ್ಟಡ ಕಾರ್ಮಿಕರ ಮಕ್ಕಳ ಸಂರಕ್ಷಣೆಗೆ ಹಾಸನದಲ್ಲಿ ಕೇಂದ್ರ ಸ್ಥಾಪನೆ.
  • ಆಸ್ಪತ್ರೆಗಳ ಆಧುನೀಕರಣಕ್ಕೆ ಮತ್ತು ಮೇಲ್ದರ್ಜೆಗೆ ಒತ್ತು.
  • ಹಾಸನದಲ್ಲಿ ಬಿ ಆರ್ ಅಂಬೇಡ್ಕರ್ ಸ್ಮಾರಕ ಭವನ ನಿರ್ಮಾಣ.
  • ಎತ್ತಿನಹೊಳೆ ಯೋಜನೆಗೆ ಭೂ ಸ್ವಾಧೀನ ಪ್ರಕ್ರಿಯೆ ಹೆಚ್ಚಿನ ಒತ್ತು ನೀಡಿ ಸರ್ಕಾರದಿಂದ ನೆರವಿನ ಘೋಷಣೆ.
Last Updated : Mar 8, 2021, 6:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.