ETV Bharat / state

ಭಾರತವನ್ನು ಮೋದಿ ಹಿಂದೂರಾಷ್ಟ್ರ ಮಾಡಲು ಹೊರಟಿದ್ದಾರೆ: ದೊಡ್ಡಗೌಡ್ರ ಗುಡುಗು

ಮೋದಿ ಹಿಂದೂರಾಷ್ಟ್ರ ಮಾಡಲು ಹೊರಟಿದ್ದಾರೆ ಎಂದು ಜೆಡಿಎಸ್​ ರಾಷ್ಟ್ರಾಧ್ಯಕ್ಷ ದೇವೇಗೌಡ ಕಿಡಿ ಕಾರಿದರು

author img

By

Published : Apr 2, 2019, 5:28 PM IST

ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ದೇವೇಗೌಡ

ಹಾಸನ: ಪ್ರಧಾನಿ ಮೋದಿ ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಹೊರಟಿದ್ದಾರೆ. ನಾನು ಹಿಂದೂ ಅಲ್ಲವೇ? ಆದರೆ, ಎಲ್ಲರನ್ನೂ ನಾವು ವಿಶ್ವಾಸಕ್ಕೆ ತೆಗೆದುಕೊಳ್ತೇವೆ ಎಂದು ಮಾಜಿ ಪ್ರಧಾನಿ, ಜೆಡಿಎಸ್​ ರಾಷ್ಟ್ರಾಧ್ಯಕ್ಷ ದೇವೇಗೌಡ ಪ್ರಧಾನಿಗೆ ಟಾಂಗ್ ಕೊಟ್ಟರು.

ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ನೀಡುವ ಕಲಂ 370 ಬಗ್ಗೆ ಪ್ರಧಾನಿ ಮೋದಿ, ದೇವೇಗೌಡರ ನಿಲುವು ತಿಳಿಸಬೇಕೆಂದು ಸವಾಲು ಹಾಕಿದ್ದರು. ಈ ಬಗ್ಗೆ ಚನ್ನರಾಯಪಟ್ಟಣ ತಾಲೂಕಿನ ಯಲಿಯೂರಿನಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಕಲಂ 370 ಅನ್ನು ಏಕೆ ರದ್ದು ಮಾಡಬೇಕು ಎಂದು ಪ್ರಶ್ನಿಸಿದರು.

ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ದೇವೇಗೌಡ

ಸೆಕ್ಷನ್​ 370ನ್ನು ನಾನು ಕೊಟ್ಟಿದ್ದಲ್ಲ. ದೇಶ ಒಗ್ಗೂಡುವ ಸಂದರ್ಭದಲ್ಲಿ ಸಂವಿಧಾನದಂತೆ ಕಾಶ್ಮೀರಕ್ಕೆ ಈ ಪ್ರಾತಿನಿಧ್ಯ ನೀಡಲಾಯಿತು. ಕಾಶ್ಮೀರದ ಎಲ್ಲ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡೇ ಈ ಕಲಂ ನೀಡಲಾಯ್ತು. ನಾನು ಹಿಂದೂ. ನಾನೇನು ಮುಸ್ಲಿಂ ಅಥವಾ ಕ್ರಿಶ್ಚಿಯನ್ನಾ? ಎಂದು ಪ್ರಶ್ನಿಸಿದ ಅವರು, ಆದರೆ ನಮಗೆ ಎಲ್ಲರ ಹಿತಾಸಕ್ತಿ ಮುಖ್ಯ ಎಂದರು.

ಮಹಾತ್ಮಗಾಂಧಿ, ಅಂಬೇಡ್ಕರ್​ ದೇಶ ಒಗ್ಗೂಡಿಸಲು ಸಾಕಷ್ಟು ಶ್ರಮ ಪಟ್ಟಿದ್ದಾರೆ. ಆದರೆ, ಹಿಂದೂ ರಾಷ್ಟ್ರ ಮಾಡಲು ಹೊರಟಿರುವ ಮೋದಿ ಇಂತಹ ಮಾತನಾಡುತ್ತಿದ್ದಾರೆ ಎಂದು ಕುಟುಕಿದರು.

ಬಿಜೆಪಿ ಸೋಲಿಸಲು ದೇವರ ಮೊರೆ:

ನನ್ನ ಮೊಮ್ಮಕ್ಕಳಾದ ಪ್ರಜ್ವಲ್​ ಹಾಗೂ ನಿಖಿಲ್​ ಸೇರಿ ಜೆಡಿಎಸ್​ನ ಹಾಗೂ ಮೈತ್ರಿ ಸರ್ಕಾರದ ಎಲ್ಲಾ ಅಭ್ಯರ್ಥಿಗಳು ಗೆಲ್ಲಬೇಕು ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ. ನಾನು ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಕಾಂಗ್ರೆಸ್​ ನಾಯಕರು ಸಹ ವಿವಿಧೆಡೆ ಪ್ರವಾಸ ಮಾಡುತ್ತಿದ್ದಾರೆ. ನಮ್ಮ ಉದ್ದೇಶ ಬಿಜೆಪಿಯನ್ನು ಸೋಲಿಸುವುದೇ ಆಗಿದೆ ಎಂದು ಘೋಷಿಸಿದರು.

ಈಗಾಗಲೆ ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಮ್ಮ ಕುಲದೇವತೆ ಪಾರ್ವತಿಗೆ ಪೂಜೆ ಸಲ್ಲಿಸಿದ್ದೇನೆ. ಹರದನಹಳ್ಳಿಯ ಈಶ್ವರ ಹಾಗೂ ದೇವೀರಮ್ಮನ ಮೊರೆ ಹೋಗಿದ್ದೇನೆ ಎಂದು ತಮ್ಮ ದೈವಭಕ್ತಿಯನ್ನು ಬಿಚ್ಚಿಟ್ಟರು.

ಹಾಸನ: ಪ್ರಧಾನಿ ಮೋದಿ ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಹೊರಟಿದ್ದಾರೆ. ನಾನು ಹಿಂದೂ ಅಲ್ಲವೇ? ಆದರೆ, ಎಲ್ಲರನ್ನೂ ನಾವು ವಿಶ್ವಾಸಕ್ಕೆ ತೆಗೆದುಕೊಳ್ತೇವೆ ಎಂದು ಮಾಜಿ ಪ್ರಧಾನಿ, ಜೆಡಿಎಸ್​ ರಾಷ್ಟ್ರಾಧ್ಯಕ್ಷ ದೇವೇಗೌಡ ಪ್ರಧಾನಿಗೆ ಟಾಂಗ್ ಕೊಟ್ಟರು.

ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ನೀಡುವ ಕಲಂ 370 ಬಗ್ಗೆ ಪ್ರಧಾನಿ ಮೋದಿ, ದೇವೇಗೌಡರ ನಿಲುವು ತಿಳಿಸಬೇಕೆಂದು ಸವಾಲು ಹಾಕಿದ್ದರು. ಈ ಬಗ್ಗೆ ಚನ್ನರಾಯಪಟ್ಟಣ ತಾಲೂಕಿನ ಯಲಿಯೂರಿನಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಕಲಂ 370 ಅನ್ನು ಏಕೆ ರದ್ದು ಮಾಡಬೇಕು ಎಂದು ಪ್ರಶ್ನಿಸಿದರು.

ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ದೇವೇಗೌಡ

ಸೆಕ್ಷನ್​ 370ನ್ನು ನಾನು ಕೊಟ್ಟಿದ್ದಲ್ಲ. ದೇಶ ಒಗ್ಗೂಡುವ ಸಂದರ್ಭದಲ್ಲಿ ಸಂವಿಧಾನದಂತೆ ಕಾಶ್ಮೀರಕ್ಕೆ ಈ ಪ್ರಾತಿನಿಧ್ಯ ನೀಡಲಾಯಿತು. ಕಾಶ್ಮೀರದ ಎಲ್ಲ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡೇ ಈ ಕಲಂ ನೀಡಲಾಯ್ತು. ನಾನು ಹಿಂದೂ. ನಾನೇನು ಮುಸ್ಲಿಂ ಅಥವಾ ಕ್ರಿಶ್ಚಿಯನ್ನಾ? ಎಂದು ಪ್ರಶ್ನಿಸಿದ ಅವರು, ಆದರೆ ನಮಗೆ ಎಲ್ಲರ ಹಿತಾಸಕ್ತಿ ಮುಖ್ಯ ಎಂದರು.

ಮಹಾತ್ಮಗಾಂಧಿ, ಅಂಬೇಡ್ಕರ್​ ದೇಶ ಒಗ್ಗೂಡಿಸಲು ಸಾಕಷ್ಟು ಶ್ರಮ ಪಟ್ಟಿದ್ದಾರೆ. ಆದರೆ, ಹಿಂದೂ ರಾಷ್ಟ್ರ ಮಾಡಲು ಹೊರಟಿರುವ ಮೋದಿ ಇಂತಹ ಮಾತನಾಡುತ್ತಿದ್ದಾರೆ ಎಂದು ಕುಟುಕಿದರು.

ಬಿಜೆಪಿ ಸೋಲಿಸಲು ದೇವರ ಮೊರೆ:

ನನ್ನ ಮೊಮ್ಮಕ್ಕಳಾದ ಪ್ರಜ್ವಲ್​ ಹಾಗೂ ನಿಖಿಲ್​ ಸೇರಿ ಜೆಡಿಎಸ್​ನ ಹಾಗೂ ಮೈತ್ರಿ ಸರ್ಕಾರದ ಎಲ್ಲಾ ಅಭ್ಯರ್ಥಿಗಳು ಗೆಲ್ಲಬೇಕು ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ. ನಾನು ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಕಾಂಗ್ರೆಸ್​ ನಾಯಕರು ಸಹ ವಿವಿಧೆಡೆ ಪ್ರವಾಸ ಮಾಡುತ್ತಿದ್ದಾರೆ. ನಮ್ಮ ಉದ್ದೇಶ ಬಿಜೆಪಿಯನ್ನು ಸೋಲಿಸುವುದೇ ಆಗಿದೆ ಎಂದು ಘೋಷಿಸಿದರು.

ಈಗಾಗಲೆ ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಮ್ಮ ಕುಲದೇವತೆ ಪಾರ್ವತಿಗೆ ಪೂಜೆ ಸಲ್ಲಿಸಿದ್ದೇನೆ. ಹರದನಹಳ್ಳಿಯ ಈಶ್ವರ ಹಾಗೂ ದೇವೀರಮ್ಮನ ಮೊರೆ ಹೋಗಿದ್ದೇನೆ ಎಂದು ತಮ್ಮ ದೈವಭಕ್ತಿಯನ್ನು ಬಿಚ್ಚಿಟ್ಟರು.

Intro: ಬಿಜೆಪಿ ಅಭ್ಯರ್ಥಿಗಳನ್ನು ಹಿಮ್ಮುಖಗೊಳಿಸುವುದು ನನ್ನ ಗುರಿ: ದೇವೇಗೌಡ

ಹಾಸನ: ಮೈತ್ರಿ ಸರ್ಕಾರದ ಎಲ್ಲಾ ಅಭ್ಯರ್ಥಿ ಗಳು ಹೆಚ್ಚು ಗೆಲ್ಲಬೇಕು.ಬಿಜೆಪಿ ಅಭ್ಯರ್ಥಿಗಳನ್ನ ಹಿಮ್ಮುಖ ಮಾಡಬೇಕು ಎಂಬುದೆ ಗುರಿ
ಅದಕ್ಕಾಗಿ ಪೂಜೆ ಸಲ್ಲಿಸಿದ್ದೇನೆ ಎಂದು ಸಂಸದ ಹೆಚ್.ಡಿ.ದೇವೇಗೌಡ ಹೇಳಿದರು.
ಚನ್ನರಾಯಪಟ್ಟಣ ತಾಲೂಕಿನ ಯಲಿಯೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಹಾಸನ ಲೋಕಸಭಾ ಕ್ಷೇತ್ರದಲ್ಲಿ ಕುಲ ದೇವತೆ ಪಾರ್ವತಿಗೆ ಪೂಜೆ ಮಾಡಿದ್ದೇನೆ.ಹರದನಹಳ್ಳಿಯಲ್ಲಿ ಈಶ್ವರ ಹಾಗೂ ದೇವೀರಮ್ಮ ಇದ್ದಾರೆಂದು ಜಿಲ್ಲೆಯ ವಂಶಪರಂಪರೆಯಾಗಿ ನಾವು ವರ್ಷಕ್ಕೊಮ್ಮೆ ಎರಡು ಬಾರಿ ಬರುತ್ತಿದ್ದೇವೆ ಎಂದರು.
ನಾನು ಈ ಕ್ಷೇತ್ರದಲ್ಲಿ ಪ್ರವಾಸ ಮಾಡುವ ಮೊದಲು ನಮ್ಮ ಶಕ್ತಿ ದೇವತೆ ಸನ್ನಿಧಾನದಲ್ಲಿ ಪ್ರಾರ್ಥನೆ ಮಾಡಿದ್ದೇನೆ. ಮೈತ್ರಿ ಸರ್ಕಾರದ ಎಲ್ಲಾ ಅಭ್ಯರ್ಥಿ ಗಳು ಹೆಚ್ಚು ಗೆಲ್ಲಬೇಕು. ಬಿಜೆಪಿ ಅಭ್ಯರ್ಥಿಗಳನ್ನ ಹಿಮ್ಮುಖ ಮಾಡಬೇಕು ಎನ್ನೋದು ನನ್ನ ಗುರಿ.
ಅದಕ್ಕಾಗಿ ಪೂಜೆ ಸಲ್ಲಿಸಿದ್ದೇನೆ ಎಂದರು.
ಕಲಂ 370 ಯನ್ನು ಏಕೆ ರದ್ದು ಮಾಡಬೇಕು.ಕಲಂ 370 ನಾನು ಕೊಟ್ಟಿದ್ದಲ್ಲ. ದೇಶದೊಟ್ಟಿಗೆ ಕಾಶ್ಮೀರ ಸೇರುವಾಗ ಈ ಕಲಂ ಜಾರಿಗೆ ತರಲಾಯಿತು.
ಬೌದ್ಧರು, ಮುಸ್ಲಿಂ ಹಾಗೂ ಹಿಂದೂಗಳಿದ್ದಾರೆ ಅಲ್ಲಿ ಹಿಂದಿನ ವಾತಾವರಣ ನೋಡಿ ಒಂದು ನಿರ್ಣಯಕ್ಕೆ ಬಂದರು.ನಾನು ಹಿಂದೂ ಅಲ್ವೇ. ನಾನು ಮುಸ್ಲಿಂ ಏನ್ರಿ, ಕ್ರಿಶ್ಚಿಯನ್ನಾ?.ನಾವು ಎಲ್ಲಾ ಧರ್ಮವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಬಿಜೆಪಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಹಾಸನ.Body:0Conclusion:0

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.