ETV Bharat / state

ವಿದ್ಯಾರ್ಥಿಗಳು ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ: ಹೆಚ್.ಡಿ ನಾರಾಯಣಸ್ವಾಮಿ

author img

By

Published : Nov 3, 2019, 8:14 PM IST

ಹಾಸನ ನಗರದ ಚಿಕ್ಕಹೊನ್ನೇನಹಳ್ಳಿಯಲ್ಲಿರುವ ಪಶುವೈದ್ಯಕೀಯ ಮಹಾವಿದ್ಯಾಲಯ ಸಭಾಂಗಣದಲ್ಲಿ ಮೂರು ದಿನಗಳ 15 ನೇ ಅಂತರ ಕಾಲೇಜು ಯುವಜನೋತ್ಸವ ಹಾಗೂ ಗೋಕುಲೋತ್ಸವಕ್ಕೆ ಚಾಲನೆ ನೀಡಲಾಯಿತು.

ಹೆಚ್.ಡಿ ನಾರಾಯಣಸ್ವಾಮಿ

ಹಾಸನ: ಇಂದಿನ ಆಧುನಿಕ ಯುಗದಲ್ಲಿ ಜಾನಪದ ಕಲೆ ನಶಿಸಿ ಹೋಗುತ್ತಿದ್ದು ಅದನ್ನು ಗುರುತಿಸಿ, ಪೋಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಪಶು ವೈದ್ಯಕೀಯ ಕಾಲೇಜು ಕುಲಪತಿಗಳಾದ ಹೆಚ್.ಡಿ ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

ಪಶುವೈದ್ಯಕೀಯ ಮಹಾವಿದ್ಯಾಲಯದ ಗೋಕುಲೋತ್ಸವ

ನಗರದ ಚಿಕ್ಕಹೊನ್ನೇನಹಳ್ಳಿಯಲ್ಲಿರುವ ಪಶುವೈದ್ಯಕೀಯ ಮಹಾವಿದ್ಯಾಲಯ ಸಭಾಂಗಣದಲ್ಲಿ ಮೂರು ದಿನಗಳ 15 ನೇ ಅಂತರ ಕಾಲೇಜು ಯುವಜನೋತ್ಸವ, ಗೋಕುಲೋತ್ಸವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ಯುಗದಲ್ಲಿ ಕೆಲ ಕಡೆ ಜಾನಪದ ಕಲೆಗಳು ನಶಿಸಿ ಹೋಗುತ್ತಿದೆ. ಅವನ್ನು ನಾವು ಗುರುತಿಸಿ ಪೋಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ವಿದ್ಯಾರ್ಥಿಗಳು ಓದಿನಲ್ಲಿಯೇ ಮುಳುಗಿ ಹೋಗದೇ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಮತ್ತು ಜಾನಪದ ತಜ್ಞರಾದ ಗೊ.ರು ಚನ್ನಬಸಪ್ಪ, ಕೆ.ಸಿ ವೀರಣ್ಣ, ಎಂ. ನಾರಾಯಣ ಭಟ್, ದಿಲೀಪ್ ಕುಮಾರ್, ಯುವ ಜನೋತ್ಸವ ವಿದ್ಯಾರ್ಥಿ ಕಲ್ಯಾಣ ನಿರ್ದೇಶಕರಾದ ಡಾ. ಯಶವಂತ್ ಕುಮಾರ್, ಪಶುವೈದ್ಯಕೀಯ ಮಹಾವಿದ್ಯಾಲಯ ಸಂಘಟನಾ ಸಹ ಕಾರ್ಯದರ್ಶಿ ಡಾ. ಎಸ್.ಪಿ ಸತೀಶ್ ಇತರರು ಪಾಲ್ಗೊಂಡಿದ್ದರು.

ಹಾಸನ: ಇಂದಿನ ಆಧುನಿಕ ಯುಗದಲ್ಲಿ ಜಾನಪದ ಕಲೆ ನಶಿಸಿ ಹೋಗುತ್ತಿದ್ದು ಅದನ್ನು ಗುರುತಿಸಿ, ಪೋಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಪಶು ವೈದ್ಯಕೀಯ ಕಾಲೇಜು ಕುಲಪತಿಗಳಾದ ಹೆಚ್.ಡಿ ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

ಪಶುವೈದ್ಯಕೀಯ ಮಹಾವಿದ್ಯಾಲಯದ ಗೋಕುಲೋತ್ಸವ

ನಗರದ ಚಿಕ್ಕಹೊನ್ನೇನಹಳ್ಳಿಯಲ್ಲಿರುವ ಪಶುವೈದ್ಯಕೀಯ ಮಹಾವಿದ್ಯಾಲಯ ಸಭಾಂಗಣದಲ್ಲಿ ಮೂರು ದಿನಗಳ 15 ನೇ ಅಂತರ ಕಾಲೇಜು ಯುವಜನೋತ್ಸವ, ಗೋಕುಲೋತ್ಸವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ಯುಗದಲ್ಲಿ ಕೆಲ ಕಡೆ ಜಾನಪದ ಕಲೆಗಳು ನಶಿಸಿ ಹೋಗುತ್ತಿದೆ. ಅವನ್ನು ನಾವು ಗುರುತಿಸಿ ಪೋಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ವಿದ್ಯಾರ್ಥಿಗಳು ಓದಿನಲ್ಲಿಯೇ ಮುಳುಗಿ ಹೋಗದೇ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಮತ್ತು ಜಾನಪದ ತಜ್ಞರಾದ ಗೊ.ರು ಚನ್ನಬಸಪ್ಪ, ಕೆ.ಸಿ ವೀರಣ್ಣ, ಎಂ. ನಾರಾಯಣ ಭಟ್, ದಿಲೀಪ್ ಕುಮಾರ್, ಯುವ ಜನೋತ್ಸವ ವಿದ್ಯಾರ್ಥಿ ಕಲ್ಯಾಣ ನಿರ್ದೇಶಕರಾದ ಡಾ. ಯಶವಂತ್ ಕುಮಾರ್, ಪಶುವೈದ್ಯಕೀಯ ಮಹಾವಿದ್ಯಾಲಯ ಸಂಘಟನಾ ಸಹ ಕಾರ್ಯದರ್ಶಿ ಡಾ. ಎಸ್.ಪಿ ಸತೀಶ್ ಇತರರು ಪಾಲ್ಗೊಂಡಿದ್ದರು.

Intro:ಹಾಸನ: ಇಂದಿನ ಆಧುನಿಕ ಯುಗದಲ್ಲಿ ಕೆಲ ಕಡೆ ಜಾನಪದ ಕೆಲಗಳು ನಶಿಸಿ ಹೋಗುತ್ತಿದ್ದು, ಅದನ್ನು ಗುರುತಿಸಿ ಪೋಷಣೆ ಮಾಡುವುದು ನಮ್ಮೆಲ್ಲಾರ ಆಧ್ಯ ಕರ್ತವ್ಯವಾಗಿದೆ ಎಂದು ಬೀದರಿನ ಪಶು ವೈದ್ಯಕೀಯ ಕಾಲೇಜು ಕುಲಪತಿಗಳಾದ ಪ್ರೋ. ಹೆಚ್.ಡಿ. ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಚಿಕ್ಕಹೊನ್ನೇನಹಳ್ಳಿಯಲ್ಲಿರುವ ಪಶುವೈದ್ಯಕೀಯ ಮಹಾವಿದ್ಯಾಲಯ ಸಭಾಂಗಣದಲ್ಲಿ ರಾಜ್ಯ ಪಶು ಕಾಲೇಜು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಮೂರು ದಿವಸಗಳ ೧೫ನೇ ಅಂತರ ಕಾಲೇಜು ಯುವಜನೋತ್ಸವ, ಗೋಕುಲೋತ್ಸವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ಯುಗದಲ್ಲಿ ಕೆಲ ಕಡೆ ಜಾನಪದ ಕಲೆಗಳು ನಶಿಸಿ ಹೋಗುತ್ತಿದೆ. ಅವನ್ನು ನಾವು ಗುರುತಿಸಿ ಪೋಷಣೆ ಮಾಡುವುದು ನಮ್ಮೆಲ್ಲಾರ ಆಧ್ಯ ಕರ್ತವ್ಯವಾಗಿದೆ. ಅಂತರ ಕಾಲೇಜಿನ ಯುವಜನೋತ್ಸವ ಎಂದರೇ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಸಮಾಗಮ. ರಾಜ್ಯದ ವಿಶ್ವವಿದ್ಯಾನಿಲಯದಿಂದ ಇಲ್ಲಿಗೆ ಬಂದಿದ್ದು, ಒಂದೊಂದು ಕಡೆ ನಾನಾ ತರ ಸಾಂಸ್ಕೃತಿ ವೈಭವವಿರುತ್ತದೆ. ಉತ್ತರ ಕರ್ನಾಟಕ, ಹಳೇ ಮೈಸೂರು ದಾಟಿ ಬಂದರೇ ಅಲ್ಲಿನ ಸಾಂಸ್ಕೃತಿಕ ಚಟುವಟಿಕೆ ನೋಡಬಹುದು, ವಿದ್ಯಾರ್ಥಿಗಳೆಂದರೇ ಓದುವಿನಲ್ಲಿಯೇ ಮುಳಿಗಿ ಹೋಗಿರುತ್ತಾರೆ. ಈ ಮಧ್ಯೆ ಸಲ್ಪ ಸಾಂಸ್ಕೃತಿಕ ಚಟುವಟಿಕೆಗಳಿಗೂ ಅವಕಾಶ ಕಲ್ಪಿಸಿಕೊಡೋಣ ಎನ್ನುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಒಬ್ಬೊಬ್ಬರಲ್ಲಿ ಒಂದೊಂದು ಪ್ರತಿಭೆ ಇದ್ದು, ಅದನ್ನು ಅಭಿವ್ಯಕ್ತಿಪಡಿಸಲು ಇದು ಉತ್ತಮ ವೇದಿಕೆಯಾಗಿದೆ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಮತ್ತು ಜಾನಪದ ತಜ್ಞರಾದ ಗೊ.ರು. ಚನ್ನಬಸಪ್ಪ, ಕೆ.ಸಿ. ವೀರಣ್ಣ, ಎಮ್. ನಾರಾಯಣ ಭಟ್, ದಿಲೀಪ್ ಕುಮಾರ್, ಪಶುವೈದ್ಯಕೀಯ ಮಹಾವಿದ್ಯಾಲಯ ಡೀನ್ ಡಾ. ಎಂ.ಸಿ. ಶಿವಕುಮಾರ್, ಯುವಜನೋತ್ಸವ ವಿದ್ಯಾರ್ಥಿ ಕಲ್ಯಾಣ ನಿರ್ದೇಶಕರಾದ ಡಾ. ಯಶವಂತ್ ಕುಮಾರ್, ಪಶುವೈದ್ಯಕೀಯ ಮಹಾವಿದ್ಯಾಲಯ ಸಂಘಟನಾ ಸಹ ಕಾರ್ಯದರ್ಶಿ ಡಾ. ಎಸ್.ಪಿ. ಸತೀಶ್ ಇತರರು ಪಾಲ್ಗೊಂಡಿದ್ದರು.
Body:ಬೈಟ್ 1 : ಬೀದರಿನ ಪಶು ವೈದ್ಯಕೀಯ ಕಾಲೇಜು ಕುಲಪತಿಗಳಾದ ಪ್ರೋ. ಹೆಚ್.ಡಿ. ನಾರಾಯಣಸ್ವಾಮಿ.Conclusion:- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.