ETV Bharat / state

ಜಾಗರಣೆ ಪೂರೈಸಿ, ದೇಗುಲಕ್ಕೆ ಭೇಟಿ ನೀಡಿದ ದೊಡ್ಡಗೌಡ್ರು

author img

By

Published : Mar 5, 2019, 10:34 PM IST

Updated : Mar 5, 2019, 11:24 PM IST

ಶಿವರಾತ್ರಿಯಂದು ಜಾಗರಣೆ ಪೂರೈಸಿದ ಹೆಚ್​.ಡಿ. ದೇವೇಗೌಡ್ರು ಈಶ್ವರ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಈಶ್ವರ ದೇವಾಲಯಕ್ಕೆ ಹೆಚ್​.ಡಿ. ದೇವೇಗೌಡರ ಭೇಟಿ

ಹಾಸನ: ಶಿವರಾತ್ರಿಯಂದು ಜಾಗರಣೆ ಮಾಡಿದ ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ್ರು ಮುಂಜಾನೆ ತಮ್ಮ ಮನೆದೇವರಾದ ಹುಚ್ಚೂರು ಹರದನಹಳ್ಳಿಯ ಈಶ್ವರ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ದೊಡ್ಡಗೌಡರ ಪುತ್ರ. ಸಚಿವ ಎಚ್.ಡಿ. ರೇವಣ್ಣ, ಮೊಮ್ಮಗ ಸೂರಜ್ ಹಾಗೂ ರೇವಣ್ಣನ ಸೊಸೆ ಈ ವೇಳೆ ಉಪಸ್ಥಿತರಿದ್ದರು.

ಈಶ್ವರ ದೇವಾಲಯಕ್ಕೆ ಹೆಚ್​.ಡಿ. ದೇವೇಗೌಡರ ಭೇಟಿ

ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ದೇವೇಗೌಡ್ರು, ನಾನು, ನನ್ನ ಮಕ್ಕಳೆಲ್ಲಾ ಹುಟ್ಟಿದ್ದು ರೈತ ಕುಟುಂಬದಲ್ಲಿ. ನಮ್ಮದು ರಾಜರ ವಂಶವಲ್ಲ. ಇಷ್ಟು ವರ್ಷಗಳು ಕಳೆದರೂ ನಾನು ಯಾವ ಬದಲಾವಣೆಗಳನ್ನು ಮಾಡಿಕೊಂಡಿಲ್ಲ. ಪುನರಪಿ ಜನನಂ ಪುನರಪಿ ಮರಣಂ ಎಂದು ಹೇಳಿದರು. ನಾನು ಬಾಲ್ಯದಲ್ಲಿ ತಂದೆ ಹಾಗೂ ತಾತನೊಂದಿಗೆ ದೇಗುಲಕ್ಕೆ ಬರುತ್ತಿದೆ. ಅಂದಿನ ವಿದ್ಯಮಾನವೇ ಬೇರೆಯಾಗಿತ್ತು. ಇಂದು ಸ್ವಲ್ಪ ಬದಲಾಗಿದೆ ಎಂದು ತಮ್ಮ ಬಾಲ್ಯದ ನೆನಪನ್ನು ಬಿಚ್ಚಿಟ್ಟರು.

undefined

ನಾನು ಜೀವನದಲ್ಲಿ ಏನನ್ನಾದರೂ ಪಡೆದಿದ್ದೇನೆ ಎಂದರೆ ಅದೆಲ್ಲ ಕೊಟ್ಟಿದ್ದು ಈಶ್ವರ. ಸಾಮಾನ್ಯ ರೈತ ಮಗನಾಗಿ ಇಂದು ನಾವು ಎಲ್ಲವನ್ನೂ ಗಳಿಸಿದ್ದೇವೆ ಎಂದರೆ ಆತನ ಶಕ್ತಿಯಿಂದಲೇ. ಶಿವನ ಮೇಲೆ ನಮ್ಮ ಕುಟುಂಬ ಸಂಪೂರ್ಣ ನಂಬಿಕೆಯಿಟ್ಟಿದೆ ಎಂದರು.

ನನ್ನ ಮಗ ಮುಖ್ಯಮಂತ್ರಿಯಾಗಲು, ಮತ್ತೊಬ್ಬ ಮಗ ಜಿಲ್ಲಾ ಉಸ್ತುವಾರಿ ಸಚಿವನಾಗಲು ಈ ದೈವ ಕೃಪೆ ಕಾರಣ. ಇನ್ಮುಂದೆಯೂ ದೇಶದಲ್ಲಿ ಏನೇನು ಬದಲಾವಣೆ ಆಗುತ್ತದೆ ಎಂಬುದನ್ನು ಕಾದು ನೋಡುತ್ತೇವೆಯಷ್ಟೇ. ಈಶ್ವರ ತೋರುವ ಮಾರ್ಗದಲ್ಲಿ ನಾವು ನಡೆದುಕೊಳ್ಳುತ್ತೇವೆ ಎಂದರು.

ಹಾಸನ: ಶಿವರಾತ್ರಿಯಂದು ಜಾಗರಣೆ ಮಾಡಿದ ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ್ರು ಮುಂಜಾನೆ ತಮ್ಮ ಮನೆದೇವರಾದ ಹುಚ್ಚೂರು ಹರದನಹಳ್ಳಿಯ ಈಶ್ವರ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ದೊಡ್ಡಗೌಡರ ಪುತ್ರ. ಸಚಿವ ಎಚ್.ಡಿ. ರೇವಣ್ಣ, ಮೊಮ್ಮಗ ಸೂರಜ್ ಹಾಗೂ ರೇವಣ್ಣನ ಸೊಸೆ ಈ ವೇಳೆ ಉಪಸ್ಥಿತರಿದ್ದರು.

ಈಶ್ವರ ದೇವಾಲಯಕ್ಕೆ ಹೆಚ್​.ಡಿ. ದೇವೇಗೌಡರ ಭೇಟಿ

ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ದೇವೇಗೌಡ್ರು, ನಾನು, ನನ್ನ ಮಕ್ಕಳೆಲ್ಲಾ ಹುಟ್ಟಿದ್ದು ರೈತ ಕುಟುಂಬದಲ್ಲಿ. ನಮ್ಮದು ರಾಜರ ವಂಶವಲ್ಲ. ಇಷ್ಟು ವರ್ಷಗಳು ಕಳೆದರೂ ನಾನು ಯಾವ ಬದಲಾವಣೆಗಳನ್ನು ಮಾಡಿಕೊಂಡಿಲ್ಲ. ಪುನರಪಿ ಜನನಂ ಪುನರಪಿ ಮರಣಂ ಎಂದು ಹೇಳಿದರು. ನಾನು ಬಾಲ್ಯದಲ್ಲಿ ತಂದೆ ಹಾಗೂ ತಾತನೊಂದಿಗೆ ದೇಗುಲಕ್ಕೆ ಬರುತ್ತಿದೆ. ಅಂದಿನ ವಿದ್ಯಮಾನವೇ ಬೇರೆಯಾಗಿತ್ತು. ಇಂದು ಸ್ವಲ್ಪ ಬದಲಾಗಿದೆ ಎಂದು ತಮ್ಮ ಬಾಲ್ಯದ ನೆನಪನ್ನು ಬಿಚ್ಚಿಟ್ಟರು.

undefined

ನಾನು ಜೀವನದಲ್ಲಿ ಏನನ್ನಾದರೂ ಪಡೆದಿದ್ದೇನೆ ಎಂದರೆ ಅದೆಲ್ಲ ಕೊಟ್ಟಿದ್ದು ಈಶ್ವರ. ಸಾಮಾನ್ಯ ರೈತ ಮಗನಾಗಿ ಇಂದು ನಾವು ಎಲ್ಲವನ್ನೂ ಗಳಿಸಿದ್ದೇವೆ ಎಂದರೆ ಆತನ ಶಕ್ತಿಯಿಂದಲೇ. ಶಿವನ ಮೇಲೆ ನಮ್ಮ ಕುಟುಂಬ ಸಂಪೂರ್ಣ ನಂಬಿಕೆಯಿಟ್ಟಿದೆ ಎಂದರು.

ನನ್ನ ಮಗ ಮುಖ್ಯಮಂತ್ರಿಯಾಗಲು, ಮತ್ತೊಬ್ಬ ಮಗ ಜಿಲ್ಲಾ ಉಸ್ತುವಾರಿ ಸಚಿವನಾಗಲು ಈ ದೈವ ಕೃಪೆ ಕಾರಣ. ಇನ್ಮುಂದೆಯೂ ದೇಶದಲ್ಲಿ ಏನೇನು ಬದಲಾವಣೆ ಆಗುತ್ತದೆ ಎಂಬುದನ್ನು ಕಾದು ನೋಡುತ್ತೇವೆಯಷ್ಟೇ. ಈಶ್ವರ ತೋರುವ ಮಾರ್ಗದಲ್ಲಿ ನಾವು ನಡೆದುಕೊಳ್ಳುತ್ತೇವೆ ಎಂದರು.

Intro:ನಾನು ನನ್ನ ಮಗ ಮತ್ತು ನನ್ನ ಮಕ್ಕಳೆಲ್ಲಾ ಹುಟ್ಟಿದ್ದು ರೈತ ಫ್ಯಾಮಿಲಿಯಲ್ಲಿ. ನಮ್ಮದು ರಾಜರ ವಂಶವಲ್ಲ. ನನ್ನ ಐವತ್ತು ವರ್ಷದಲ್ಲಿ ನಾನು ಯಾವ ಬದಲಾವಣೆಗಳನ್ನು ಮಾಡಿಕೊಂಡಿಲ್ಲ ಅಂತ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಹೇಳಿದ್ರು.

ಶಿವರಾತ್ರಿ ಜಾಗರಣೆ ಮುಗಿದ ಬಳಿಕ ಮುಂಜಾನೆ ತಮ್ಮ ಮನೆದೇವರಾದ ಹುಟ್ಚೂರು ಹರದನಹಳ್ಳಿಯ ಈಶ್ವರ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅವರು ಮಾತನಾಡಿದ್ದರು. ಈ ವೇಳೆ ಪುತ್ರ ಎಚ್ ಡಿ ರೇವಣ್ಣ ಮೊಮ್ಮಗ ಸೂರಜ್ ಹಾಗೂ ರೇವಣ್ಣನ ಸೊಸೆ ಕೂಡ ದೇವಾಲಯದಲ್ಲಿ ಉಪಸ್ಥಿತರಿದ್ದು ದೇವೇಗೌಡರಿಗೆ ಸಾಥ್ ನೀಡಿದರು.

ಈ ವೇಳೆ ಮಾತನಾಡಿದ ದೇವೇಗೌಡರು ನಮ್ಮ ಕುಟುಂಬ ಶಿವನ ಆರಾಧಕರು ಆದರೆ ಕೇವಲ ಶಿವನ ಬಳಿ ಮಾತ್ರವಲ್ಲ ಪಕ್ಕದ ಮಾವಿನಕೆರೆ ರಂಗನಾಥಸ್ವಾಮಿ ದೇವಾಲಯಕ್ಕೂ ಕೂಡ ಅಷ್ಟೇ ಭಕ್ತಿಯನ್ನು ತೋರುತ್ತೇವೆ. ಪುನರಪಿ ಜನನಂ ಪುನರಪಿ ಮರಣಂ ಎಂಬ ಗಾದೆ ಮಾತನ್ನಾಡುವ ಮೂಲಕ ತಮ್ಮ ಬಾಲ್ಯವಸ್ಥೆಯಲ್ಲಿ ಈ ದೇವಾಲಯಕ್ಕೆ ನಮ್ಮ ತಂದೆ ಹಾಗೂ ತಾತ ನೊಂದಿಗೆ ಬರುತ್ತಿದೆ. ಅಂದಿನ ವಿದ್ಯಮಾನವೇ ಬೇರೆಯಾಗಿತ್ತು. ಇಂದು ಸ್ವಲ್ಪ ಬದಲಾಗಿದೆ ಎಂದು ತಮ್ಮ ಬಾಲ್ಯದ ನೆನಪನ್ನು ಬಿಚ್ಚಿಟ್ಟರು.

ನಾನು ಜೀವನದಲ್ಲಿ ಏನನ್ನಾದರೂ ಪಡೆದಿದ್ದೇನೆ ಎಂದರೆ ಅದೆಲ್ಲ ಕೊಟ್ಟಿದ್ದು ಈಶ್ವರ. ಸಾಮಾನ್ಯ ರೈತ ಮಗನಾಗಿ ಇಂದು ನಾವು ಎಲ್ಲವನ್ನೂ ಗಳಿಸಿದ್ದೇವೆ ಎಂದರೆ ಆತನ ಶಕ್ತಿಯಿಂದಲೇ. ಇದರಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ. ಅವನನ್ನು ನಮ್ಮ ಕುಟುಂಬ ಸಂಪೂರ್ಣ ನಂಬಿಕೆಯಿಟ್ಟು ಅವನ ಮಾರ್ಗದಲ್ಲಿಯೇ ನಡೆಯುತ್ತಾ ಬಂದಿದ್ದೇವೆ.

ನನ್ನ ಮಗ ಮುಖ್ಯಮಂತ್ರಿಯಾಗಲು ಮತ್ತೊಬ್ಬ ಮಗ ಜಿಲ್ಲಾ ಉಸ್ತುವಾರಿ ಸಚಿವ ನಾಗಲು ಈ ದೈವ ಕೃಪೆ ನಮ್ಮ ಮೇಲೆ ಇದೆ. ನಾವು ಯಾರು ಕೂಡ ರಾಜವಂಶಸ್ಥರ ಅಲ್ಲ; ಬದಲಿಗೆ ರೈತ ಕುಟುಂಬದಿಂದ ಬಂದಂತಹ ಸಾಮಾನ್ಯ ವ್ಯಕ್ತಿಗಳು. ಹಾಗಾಗಿ ನಾವು ಬೇರೆ ಮಾರ್ಗದಲ್ಲಿ ಹೋಗೋದಿಲ್ಲ. ಇನ್ನೂ ದೇಶದ ಪರಿಸ್ಥಿತಿಯಲ್ಲಿ ಏನೇನು ಬದಲಾವಣೆ ಆಗುತ್ತದೆ ಎಂಬುದನ್ನು ಕಾದು ನೋಡುತ್ತೇವೆ. ಈಶ್ವರ ತೋರುವ ಮಾರ್ಗದಲ್ಲಿ ನಾವು ನಡೆದುಕೊಳ್ಳುತ್ತೇವೆ ಅಂತ ಮುಂದಿನ ರಾಜಕೀಯ ಭವಿಷ್ಯವನ್ನು ಆ ದೇವರ ಹೆಸರಿಗೆ ಹೊರಿಸಿ ಮಾತಿನಲ್ಲಿಯೇ ಜಾರಿಕೊಂಡರು.

ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.




Body:0


Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
Last Updated : Mar 5, 2019, 11:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.