ಹಾವೇರಿ: ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಮಣ್ಣಿತ್ತಿನ ಅಮವಾಸ್ಯೆ ಆಚರಿಸಲಾಗುತ್ತಿದೆ. ಮಣ್ಣಿನಿಂದ ಮಾಡಿದ ಬಸವಣ್ಣಗಳನ್ನು ಖರೀದಿಸಿದ ಜನ ಮನೆಗೆ ತಗೆದುಕೊಂಡು ಹೋಗಿ ಪೂಜೆ ಸಲ್ಲಿಸಿದರು.
ಅನ್ನದಾತನಿಗೆ ಎತ್ತುಗಳೇ ದೇವರು. ಅಲ್ಲದೆ ಈ ಸಮಯದಲ್ಲಿ ಎತ್ತುಗಳಿಂದ ಬಿತ್ತನೆ ಸೇರಿದಂತೆ ಇತರೆ ಕೃಷಿ ಚಟುವಟಿಕೆಗಳನ್ನ ನಡೆಸಲಾಗುತ್ತದೆ. ಇದರಿಂದಾಗಿ ಎತ್ತುಗಳನ್ನು ದೇವರಂತೆ ನೋಡಿಕೊಳ್ಳಬೇಕು ಎಂಬ ಕಲ್ಪನೆಯಿಂದ ಈ ಆಚರಣೆ ರೂಢಿಯಲ್ಲಿದೆ ಎನ್ನುತ್ತಾರೆ ಬಸವಣ್ಣನ ಭಕ್ತರು. ಮಣ್ಣೆತ್ತಿನ ಅಮವಾಸ್ಯೆ ಇರುವ ಹಿನ್ನೆಲೆಯಲ್ಲಿ ಮುಂಜಾನೆಯಿಂದ ಸಂಜೆಯವರೆಗೆ ಮಣ್ಣಿನ ಬಸವಣ್ಣಗಳ ಮಾರಾಟ ಮತ್ತು ಖರೀದಿ ಭರಾಟೆ ಜೋರಾಗಿತ್ತು.