ETV Bharat / state

ಗ್ರಾಮಕ್ಕೆ ಲಗ್ಗೆ ಇಡುತ್ತಿವೆ 100 ಕ್ಕೂ ಹೆಚ್ಚು ಆನೆಗಳು... ಜನರಲ್ಲಿ ಶುರುವಾಯ್ತು ನಡುಕ! - undefined

ಹಾಸನ ಜಿಲ್ಲೆಯಲ್ಲಿ ಕಾಡಾನೆಗಲ ಉಪಟಳ ಹೆಚ್ಚಾಗಿದ್ದು ಅಪಾರ ಪ್ರಮಅನದ ಬೆಳೆ ನಷ್ಟ ಸಂಭವಿಸಿದೆ.

ಆನೆ ಉಪಟಳಕ್ಕ ಹೈರಾಣಾದ ಹಾಸನ ಜನತೆ
author img

By

Published : Jul 14, 2019, 2:28 AM IST

Updated : Jul 14, 2019, 3:23 AM IST

ಹಾಸನ: ಇತ್ತೀಚಿನ ದಿನದಲ್ಲಿ ಆಲೂರು-ಸಕಲೇಶಪುರ ಭಾಗದಲ್ಲಿ ಕಾಡಾನೆಗಳು ಹಿಂಡು ಹಿಂಡಾಗಿ ಕಾಣಿಸಿಕೊಳ್ಳುತ್ತಿದ್ದು, ನಿನ್ನೆ ಕೂಡಾ 4 ಕಡೆ ಕಾಡಾನೆಗಳು ಕಾಣಿಸಿಕೊಂಡು ಈ ಭಾಗದ ಜನರಿಗೆ ನಡುಕ ಹುಟ್ಟಿಸಿವೆ.

ಆನೆ ಉಪಟಳಕ್ಕ ಹೈರಾಣಾದ ಹಾಸನ ಜನತೆ

ಆಲೂರು ಸುತ್ತಮುತ್ತಲಿನ ಗ್ರಾಮಗಳಾದ ಮಾದೇಹಳ್ಳಿ, ಅಡಿಬೈಲು, ಮಣಿಪುರ, ನಾಗವಾರ, ದೊಡ್ಡಬೆಟ್ಟ, ಚಿಕ್ಕಬೆಟ್ಟ, ಮಗ್ಗೆ, ರಾಯರಕೊಪ್ಪಲು, ಚಿನ್ನಹಳ್ಳಿ, ಹೊಸಗದ್ದೆ, ನವಿಲಹಳ್ಳಿ, ಮುತ್ತಿಗೆ ಹೀಗೆ ನಾನಾ ಭಾಗದಲ್ಲಿ ಕೆಲ ದಿನಗಳ ಹಿಂದೆ ರೈತರು ಬೆಳೆದ ಅಪಾರ ಪ್ರಮಾಣದ ಬೆಳೆಗಳನ್ನ ಆನೆಗಳು ನಾಶಮಾಡಿವೆ. ಸಕಲೇಶಪುರದ ಕೌಡಳ್ಳಿ, ಹೆತ್ತೂರು, ಹರಗರವಳ್ಳಿ, ಪಾಲಹಳ್ಳಿ, ಕೊರೊಡಿ, ಅಬ್ಬನಾ ಹೀಗೆ ನಾನಾ ಭಾಗದಲ್ಲಿ ಲಕ್ಷಾಂತರ ರೂಪಾಯಿಗಳ ಬೆಳೆ ಹಾನಿಮಾಡಿವೆ.

ಕಳೆದ 4 ವರ್ಷಗಳ ಹಿಂದೆ ಹೈಕೋರ್ಟ್ ಆದೇಶದಂತೆ ಸುಮಾರು 25 ಆನೆಗಳನ್ನ ಹಿಡಿದು ಮಡಿಕೇರಿ, ಚಾಮರಾಜನಗರ, ಮತ್ತು ಶಿವಮೊಗ್ಗ ಆನೆ ಶಿಬಿರಗಳಿಗೆ ಕಳುಹಿಸಲಾಗಿತ್ತು. ಆದ್ರೆ, ಮತ್ತೇ ಆನೆಗಳ ಸಂತತಿ ಹೆಚ್ಚಾಗಿದೆ. ನಿನ್ನೆ ಸುಮಾರು 100ಕ್ಕೂ ಅಧಿಕ ಆನೆಗಳು ಕಾಡಿನಿಂದ ನಾಡಿಗೆ ಬಂದು ಓಡಾಟ ನಡೆಸುತ್ತಿವೆ.

ಭರವಸೆಯಾಗಿಯೇ ಉಳಿದ ಸಿಎಂ ಮಾತು
ಕಳೆದ 3-4 ತಿಂಗಳ ಹಿಂದೆ ಮತ್ತೆ ಆನೆಗಳನ್ನ ಹಿಡಿದು ಸ್ಥಳಾಂತರ ಮಾಡಬೇಕೆಂದು ಆಗ್ರಹಿಸಿ ಸ್ಥಳೀಯ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಕಾಫಿ ಬೆಳೆಗಾರರೊಂದಿಗೆ ಮಲೆನಾಡು ಭಾಗದ ರೈತಾಪಿ ವರ್ಗದ ಜೊತೆಗೂಡಿ ಬಾಳ್ಳುಪೇಟೆಯಲ್ಲಿ ನಿರಂತರ ಪ್ರತಿಭಟನೆ ಮಾಡಿದ್ರು. ಅಂದು ಸಿಎಂ ಕುಮಾರಸ್ವಾಮಿ ತಮ್ಮ ಬಜೆಟ್​ನಲ್ಲಿ ಆನೆ ವಿಚಾರ ಪ್ರಸ್ತಾಪಿಸಿ ಕೇರಳ ಮಾದರಿಯಲ್ಲಿ ತಂತಿಬೇಲಿಯಾಕುವ ಭರವಸೆಯನ್ನ ನೀಡಿದ್ದರಿಂದ ಪ್ರತಿಭಟನೆಯನ್ನ ವಾಪಸ್ ಪಡೆದಿದ್ರು.

ಇದಾದ ಬಳಿಕ ಸಿಎಂ ನೀಡಿದ್ದ ಮಾತು ಭರವಸೆಯಾಗಿಯೇ ಉಳಿದಿದ್ದು, ಮತ್ತೆ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ಮನೆಯಿಂದ ಹೊರಬಂದು ಕೃಷಿಚಟುವಟಿಕೆಯಲ್ಲಿ ತೊಡಗುವುದಕ್ಕೂ ಭಯಪಡುವಂತಾಗಿದೆ.

ಹಾಸನ: ಇತ್ತೀಚಿನ ದಿನದಲ್ಲಿ ಆಲೂರು-ಸಕಲೇಶಪುರ ಭಾಗದಲ್ಲಿ ಕಾಡಾನೆಗಳು ಹಿಂಡು ಹಿಂಡಾಗಿ ಕಾಣಿಸಿಕೊಳ್ಳುತ್ತಿದ್ದು, ನಿನ್ನೆ ಕೂಡಾ 4 ಕಡೆ ಕಾಡಾನೆಗಳು ಕಾಣಿಸಿಕೊಂಡು ಈ ಭಾಗದ ಜನರಿಗೆ ನಡುಕ ಹುಟ್ಟಿಸಿವೆ.

ಆನೆ ಉಪಟಳಕ್ಕ ಹೈರಾಣಾದ ಹಾಸನ ಜನತೆ

ಆಲೂರು ಸುತ್ತಮುತ್ತಲಿನ ಗ್ರಾಮಗಳಾದ ಮಾದೇಹಳ್ಳಿ, ಅಡಿಬೈಲು, ಮಣಿಪುರ, ನಾಗವಾರ, ದೊಡ್ಡಬೆಟ್ಟ, ಚಿಕ್ಕಬೆಟ್ಟ, ಮಗ್ಗೆ, ರಾಯರಕೊಪ್ಪಲು, ಚಿನ್ನಹಳ್ಳಿ, ಹೊಸಗದ್ದೆ, ನವಿಲಹಳ್ಳಿ, ಮುತ್ತಿಗೆ ಹೀಗೆ ನಾನಾ ಭಾಗದಲ್ಲಿ ಕೆಲ ದಿನಗಳ ಹಿಂದೆ ರೈತರು ಬೆಳೆದ ಅಪಾರ ಪ್ರಮಾಣದ ಬೆಳೆಗಳನ್ನ ಆನೆಗಳು ನಾಶಮಾಡಿವೆ. ಸಕಲೇಶಪುರದ ಕೌಡಳ್ಳಿ, ಹೆತ್ತೂರು, ಹರಗರವಳ್ಳಿ, ಪಾಲಹಳ್ಳಿ, ಕೊರೊಡಿ, ಅಬ್ಬನಾ ಹೀಗೆ ನಾನಾ ಭಾಗದಲ್ಲಿ ಲಕ್ಷಾಂತರ ರೂಪಾಯಿಗಳ ಬೆಳೆ ಹಾನಿಮಾಡಿವೆ.

ಕಳೆದ 4 ವರ್ಷಗಳ ಹಿಂದೆ ಹೈಕೋರ್ಟ್ ಆದೇಶದಂತೆ ಸುಮಾರು 25 ಆನೆಗಳನ್ನ ಹಿಡಿದು ಮಡಿಕೇರಿ, ಚಾಮರಾಜನಗರ, ಮತ್ತು ಶಿವಮೊಗ್ಗ ಆನೆ ಶಿಬಿರಗಳಿಗೆ ಕಳುಹಿಸಲಾಗಿತ್ತು. ಆದ್ರೆ, ಮತ್ತೇ ಆನೆಗಳ ಸಂತತಿ ಹೆಚ್ಚಾಗಿದೆ. ನಿನ್ನೆ ಸುಮಾರು 100ಕ್ಕೂ ಅಧಿಕ ಆನೆಗಳು ಕಾಡಿನಿಂದ ನಾಡಿಗೆ ಬಂದು ಓಡಾಟ ನಡೆಸುತ್ತಿವೆ.

ಭರವಸೆಯಾಗಿಯೇ ಉಳಿದ ಸಿಎಂ ಮಾತು
ಕಳೆದ 3-4 ತಿಂಗಳ ಹಿಂದೆ ಮತ್ತೆ ಆನೆಗಳನ್ನ ಹಿಡಿದು ಸ್ಥಳಾಂತರ ಮಾಡಬೇಕೆಂದು ಆಗ್ರಹಿಸಿ ಸ್ಥಳೀಯ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಕಾಫಿ ಬೆಳೆಗಾರರೊಂದಿಗೆ ಮಲೆನಾಡು ಭಾಗದ ರೈತಾಪಿ ವರ್ಗದ ಜೊತೆಗೂಡಿ ಬಾಳ್ಳುಪೇಟೆಯಲ್ಲಿ ನಿರಂತರ ಪ್ರತಿಭಟನೆ ಮಾಡಿದ್ರು. ಅಂದು ಸಿಎಂ ಕುಮಾರಸ್ವಾಮಿ ತಮ್ಮ ಬಜೆಟ್​ನಲ್ಲಿ ಆನೆ ವಿಚಾರ ಪ್ರಸ್ತಾಪಿಸಿ ಕೇರಳ ಮಾದರಿಯಲ್ಲಿ ತಂತಿಬೇಲಿಯಾಕುವ ಭರವಸೆಯನ್ನ ನೀಡಿದ್ದರಿಂದ ಪ್ರತಿಭಟನೆಯನ್ನ ವಾಪಸ್ ಪಡೆದಿದ್ರು.

ಇದಾದ ಬಳಿಕ ಸಿಎಂ ನೀಡಿದ್ದ ಮಾತು ಭರವಸೆಯಾಗಿಯೇ ಉಳಿದಿದ್ದು, ಮತ್ತೆ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ಮನೆಯಿಂದ ಹೊರಬಂದು ಕೃಷಿಚಟುವಟಿಕೆಯಲ್ಲಿ ತೊಡಗುವುದಕ್ಕೂ ಭಯಪಡುವಂತಾಗಿದೆ.

Intro:ಹಾಸನ: ಮಾನವ ಮತ್ತು ಕಾಡುಪ್ರಾಣಿಗಳ ಸಂಘರ್ಷ ಇಂದು ನೆನ್ನೆಯದಲ್ಲ. ಕಳೆದ 3-4 ದಶಕಗಳಿಂದ ಮಲೆನಾಡು ಭಾಗದಲ್ಲಿ ಕಾಡಾನೆಗಳ ದಾಂದಲೆ, ಹಾವಳಿ ನಡೆಯುತ್ತಲೇ ಬಂದಿದೆ. ಇತ್ತೀಚಿನ ದಿನದಲ್ಲಿ ಅದು ಹೆಚ್ಚಾಗ ತೊಡಗಿದೆ. ಕಾರಣ ಮಾನವನ ಅತೀಯಾದ ಆಸೆಯೇ ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತಿದೆ. ಇತ್ತೀಚಿನ ದಿನದಲ್ಲಿ ಕಾಡುಪ್ರಾಣಿಗಳು ಉಪಟಳ ಹೇಗಿದೆ...? ಮಾನವ ತನ್ನ ಜೀವನವನ್ನ ಹೇಗೆ ನಡೆಸುತ್ತಿದ್ದಾನೆ....? ಇಲ್ಲಿದೆ ಒಂದು ವರದಿ.

ಹಾಸನ ಮಲೆನಾಡು, ಅರಮಲೆನಾಡು ಮತ್ತು ಬಯಲು ಸೀಮೆಯನ್ನ ಹೊಂದಿರುವ ಜಿಲ್ಲೆ. ಭೌಗೋಳಿಕವಾಗಿ ನೋಡುವುದಾದ್ರೆ ಇದನ್ನ ಬಡವರ ಊಟಿ ಅಂತನೇ ಕರೆಯುತ್ತಾರೆ. ಶಿಲ್ಪಕಲೆಗಳ ಬೀಡಾಗಿರೋ ಹಾಸನ ಪ್ರವಾಸಿ ತಾಣವೂ ಕೂಡಾ ಹೌದು. ಬೇಲೂರು, ಸಕಲೇಶಪುರ ಪ್ರವಾಸಿ ಕೇಂದ್ರಗಳಾಗಿದ್ದು, ನಿತ್ಯ ಸಾವಿರಾರು ಮಂದಿ ಜಿಲ್ಲೆಗೆ ಆಗಮಿಸಿ ಸೌಂದರ್ಯವನ್ನ ಸವಿದು ಹೋಗುತ್ತಾರೆ. ಸಕಲೇಶಪುರ ಆಲೂರು ಭಾಗದಲ್ಲಿ ನೋಡಲು ರಮಣಿಯ ದೃಶ್ಯಗಳು ಸಿಗುವುದರಿಂದ ಚಲನಚಿತ್ರಕ್ಕೆ ಬೇಕಾಗುವ ಸಾವಿರಾರು ದೃಶ್ಯಗಳನ್ನ ಸೆರೆಯಿಡಿಯಲಾಗಿದೆ. ಹೀಗಾಗಿ ರಾಜ್ಯವಷ್ಟೆಯಲ್ಲದೇ ಹೊರರಾಜ್ಯಗಳ ಚಿತ್ರಿಕರಣಕ್ಕೂ ಹಾಸನ ಜಿಲ್ಲೆಯನ್ನ ಆಯ್ಕೆ ಮಾಡಿಕೊಳ್ಳುತ್ತಾರೆ.

Body:: ನರಕವಾಗಿದೆ ಮಲೆನಾಡ ಜನರ ಬದುಕು :         

ದೂರದ ಬೆಟ್ಟ ನುಣ್ಣಗೆ ಎನ್ನುವ ಹಾಗೇ ದೂರದ ಮಂದಿಗೆ ಬಹಳ ಸುಂದರವಾಗಿಯೇ ಮಲೆನಾಡು ಕಾಣುತ್ತದೆ. ಆದ್ರೆ ಮಲೆನಾಡ ಹಾಗೂ ಕಾಡಂಚಿನ ಭಾಗದಲ್ಲಿ ವಾಸಿಸುವ ಮಂದಿಗೆ ಮಾತ್ರ ಅಕ್ಷರಶಃ ನರಕವಾಗಿದೆ. ಕಾರಣ ಮಲೆನಾಡು ಭಾಗದಲ್ಲಿ ಹೆಚ್ಚಾಗಿರೋ ಕಾಡುಪ್ರಾಣಿಗಳ ದಾಂದಲೆ. ಇತ್ತೀಚಿನ ದಿನದಲ್ಲಿ ಆಲೂರು-ಸಕಲೇಶಪುರ ಭಾಗದಲ್ಲಿ ಕಾಡಾನೆಗಳು ಹಿಂಡು ಹಿಂಡಾಗಿ ಕಾಣಿಸಿಕೊಳ್ಳುತ್ತಿದ್ದು, ಇಂದು ಕೂಡಾ 4 ಕಡೆ ಕಾಡಾನೆಗಳು ಕಾಣಿಸಿಕೊಂಡು ಈ ಭಾಗದ ಜನರಿಗೆ ನಡುಕ ಉಟ್ಟಿಸಿದೆ. ಒಂಟಿ ಕಾಡಾನೆಯೊಂದು ಮನೆಯ ಸಮೀಪವೇ ಕೆಲ ಕಾಲ ಬೀಡು ಬಿಟ್ಟಿದ್ದರಿಂದ ಬೆಳಗಿನ ನಿತ್ಯಕರ್ಮಗಳನ್ನ ಮುಗಿಸಿಲು ಸಾಧ್ಯವಾಗದೇ ಮನೆಯಲ್ಲಿಯೇ ಪರದಾಡಿದ್ದಾರೆ.

: 24 ಆನೆಗಳನ್ನ ಹಿಡಿದಿದ್ದ ಜಿಲ್ಲಾಡಳಿತ :

ಆಲೂರು ಸುತ್ತಮುತ್ತಲಿನ ಗ್ರಾಮಗಳಾದ ಮಾದೇಹಳ್ಳಿ, ಅಡಿಬೈಲು, ಮಣಿಪುರ, ನಾಗವಾರ, ದೊಡ್ಡಬೆಟ್ಟ, ಚಿಕ್ಕಬೆಟ್ಟ, ಮಗ್ಗೆ, ರಾಯರಕೊಪ್ಪಲು, ಚಿನ್ನಹಳ್ಳಿ, ಹೊಸಗದ್ದೆ, ನವಿಲಹಳ್ಳಿ, ಮುತ್ತಿಗೆ ಹೀಗೆ ನಾನಾ ಭಾಗದಲ್ಲಿ ಕೆಲ ದಿನಗಳ ಹಿಂದೆ ರೈತರ ಬೆಳೆದ ಅಪಾರ ಪ್ರಮಾಣದ ಬೆಳೆಗಳನ್ನ ಆನೆಗಳು ನಾಶಮಾಡಿದ್ರೆ, ಸಕಲೇಶಪುರದ ಕೌಡಳ್ಳಿ, ಹೆತ್ತೂರು, ಹರಗರವಳ್ಳಿ, ಪಾಲಹಳ್ಳಿ, ಕೊರೊಡಿ, ಅಬ್ಬನಾ ಹೀಗೆ ನಾನಾ ಭಾಗದಲ್ಲಿ ಲಕ್ಷಾಂತರ ರೂಪಾಯಿಗಳ ಬೆಳೆ ಹಾನಿಮಾಡಿವೆ. ಕಳೆದ 4 ವರ್ಷಗಳ ಹಿಂದೆ ಹೈಕೋರ್ಟ್ ಆದೇಶದಂತೆ ಸುಮಾರು 25 ಆನೆಗಳನ್ನ ಹಿಡಿದು ಮಡಿಕೇರಿ, ಚಾಮರಾಜನಗರ, ಮತ್ತು ಶಿವಮೊಗ್ಗ ಆನೆ ಶಿಬಿರಗಳಿಗೆ ಕಳುಹಿಸಲಾಗಿತ್ತು. ಆದ್ರೆ ಮತ್ತೆ ಆನೆಗಳ ಸಂತತಿ ಹೆಚ್ಚಾಗಿವೆ. ಇಂದು ಸುಮಾರು 100ಕ್ಕೂ ಅಧಿಕ ಆನೆಗಳು ಕಾಡಿನಿಂದ ನಾಡಿನಲ್ಲಿ ಓಡಾಟ ನಡೆಸುತ್ತಿದ್ದು, ಬೆಳೆದ ಬೆಳೆಗಳನ್ನ ನಾಶಮಾಡುವ ಮೂಲಕ ರೈತಾಪಿ ವರ್ಗದ ಬದುಕನ್ನ ಮೂರಾಬಟ್ಟೆ ಮಾಡಿವೆ.

:ಭರವಸೆಯಾಗಿಯೇ ಉಳಿದ ಸಿಎಂ ಮಾತು:

ಕಳೆದ 3-4 ತಿಂಗಳ ಹಿಂದೆ ಮತ್ತೆ ಆನೆಗಳನ್ನ ಹಿಡಿದು ಸ್ಥಳಾಂತರ ಮಾಡಬೇಕೆಂದು ಆಗ್ರಹಿಸಿ ಸ್ಥಳೀಯ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಕಾಫಿಬೆಳೆಗಾರರೊಂದಿಗೆ ಮಲೆನಾಡು ಭಾಗದ ರೈತಾಪಿ ವರ್ಗದ ಜೊತೆಗೂಡಿ ಬಾಳ್ಳುಪೇಟೆಯಲ್ಲಿ ನಿರಂತರ ಪ್ರತಿಭಟನೆ ಮಾಡಿದ್ರು. ಅಂದು ಸಿಎಂ ಕುಮಾರಸ್ವಾಮಿ ತಮ್ಮ ಬಜೆಟ್ ನಲ್ಲಿ ಆನೆ ವಿಚಾರ ಪ್ರಸ್ತಾಪಿಸಿ ಕೇರಳ ಮಾದರಿಯಲ್ಲಿ ತಂತಿಬೇಲಿಯಾಕುವ ಭರವಸೆಯನ್ನ ನೀಡಿದ್ದರಿಂದ ಪ್ರತಿಭಟನೆಯನ್ನ ವಾಪಸ್ ಪಡೆದಿದ್ರು. ಇದಾದ ಬಳಿಕ ಸಿಎಂ ನೀಡಿದ್ದ ಮಾತು ಭರವಸೆಯಾಗಿಯೇ ಉಳಿದಿದ್ದು, ಮತ್ತೆ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ಮನೆಯಿಂದ ಹೊರಬಂದು ಕೃಷಿಚಟುವಟಿಕೆಯಲ್ಲಿ ತೊಡಗುವುದಕ್ಕೂ ಭಯಪಡುವಂತಾಗಿದೆ. ಬೆಳ್ಳಂ ಬೆಳಗ್ಗೆಯೇ ಕಾಡಾನೆಗಳು ತೋಟದ ಸಾಲಿನಲ್ಲಿ ನಿಂತಿರುವುದನ್ನ ನೋಡಿದ್ರೆ ತೋಟಕ್ಕೆ ಹೋಗೋದಾದ್ರು ಹೇಗೆ ಹೇಳಿ.. ಇನ್ನು ಮನೆಯ ಮುಂದೆಯೇ ಆನೆ ಬರುತ್ತಿರುವುದನ್ನ ನೋಡಿದ್ರೆ, ಮಕ್ಕಳನ್ನ ಸ್ಕೂಲಿಗೆ ಕಳುಹಿಸುವುದಾದ್ರು ಹೇಗೆ ? ಇಂತಹ ಭಯದ ವಾತಾವರಣದಲ್ಲಿ ಬದುಕುವ ಸ್ಥಿತಿ ತಲುಪಿದೆ.

ನೆಲಕಚ್ಚಿದ ರೈತರ ಬೆಳೆಗಳು:

ಸಕಲೇಶಪುರದಲ್ಲಿ 2-3ದಿನಗಳಿಂದ 7 ರಿಂದ 8 ಕಾಡಾನೆಗಳು ಸಂಚರಿಸುತ್ತ ಇದೆ. ಸಂಜೆಯಾದ್ರೆ ಸಾಕು ಸುಮಾರು 5 ಘಂಟೆಯಿಂದ ರಾತ್ರಿಯಿಡಿ ಜಮೀನು ಮತ್ತು ತೋಟಗಳಲ್ಲಿ ಓಡಾಡುತ್ತವೆ. ಇಂದರಿಂದ ರೈತರು ಬೆಳದ ಬೆಳೆಯೆಲ್ಲಾ ಕಾಡಾನೆ ಪಾಲಾಗ್ತಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದ ಪರಸ್ಥಿತಿ ನಿರ್ಮಾಣವಾಗಿದೆ. ಎಲ್ಲಿ ನೋಡಿದರು ಆನೆಗಳ ಕಾಲಿನ ಬೃಹತ್ ಹೆಜ್ಜೆಗಳು, ಲದ್ದಿಗಳು ಕಾಣಸಿಗುತ್ತದೆ. ತುಂಡು ತುಂಡಾಗಿ ಬಿದ್ದಿರುವ ಬಾಳೆ ಗಿಡಗಳು, ಭತ್ತದ ಪೈರು, ಶುಂಠಿ ಹೊಲಗಳು ನೆಲಕಚ್ಚಿದೆ. ಇಷ್ಟೆಲ್ಲಾ ಹಾನಿಯಾದರೂ ಅರಣ್ಯ ಇಲಾಖೆಯವರು ಮಾತ್ರ ಕಣ್ಮುಚ್ಚಿ ಕುಳಿತಿರುವುದು ಈ ಭಾಗದ ರೈತರಿಗೆ ಬೇಸರವನ್ನ ಉಂಟು ಮಾಡಿದೆ.

ಹಿಂಡು ಹಿಂಡಾಗಿ ಬರುವ ಕಾಡಾನೆಗಳು:

ಗ್ರಾಮಸ್ಥರು ಹೇಳುವ ಪ್ರಕಾರ ದನಕರುಗಳು ಯಾವ ರೀತಿ ಗದ್ದೆ ಮತ್ತು ಜಮೀನಿನಲ್ಲಿ ಓಡಾಡುತ್ತವಯೋ ಅದೇ ರೀತಿ ಆನೆಗಳ ಸಂಚರಿಸುತ್ತವೆ. ಕೆಲವು ಕಾಫಿ ಎಸ್ಟೆಸ್ಟ್ ಗಳಿಗೆ ಆನೆಗಳು ದಾಳಿ ನಡೆಸಿದರೇ 50-60 ಆನೆಗಳು ಒಮ್ಮೆಲೆ ಬಂದು ಬಿಡುತ್ತವೆ. ನಮಗಂತೂ ಪಟಾಕಿ ಹೊಡೆದು ಹೊಡೆದು ಸುಸ್ತಾಗಿದೆ. ಜನರು ಈ ಉಪಟಳದಿಂದ ನೊಂದು ಪ್ರತಿಭಟನೆ ಮಾಡಿದ್ರೆ ಆನೆಧಾಮ, ಕಾರಿಡಾರ್ ವಿಚಾರ ಪ್ರಸ್ತಾಪಿಸಿ ತಣ್ಣಗಾಗಿಸುತ್ತಾರೆ.

ಕಾಡನ್ನ ನಾಡು ಮಾಡಿರುವುದರಿಂದ ಕಾರಿಡಾರ್ ಸಾಧ್ಯವೇ...?

ಮಾನವ ಸಂಘಜೀವಿ. ಇತ್ತೀಚಿನ ದಿನದಲ್ಲಿ ಮನುಷ್ಯನ ಆಸೆ ಮಿತಿ ಮೀರುತ್ತಿದ್ದು, ಅವುಗಳನ್ನ ಪೂರೈಸಿಕೊಳ್ಳಲು ಕಾಡನ್ನ ನಾಡು ಮಾಡಲು ಹೊರಟಿದ್ದಾನೆ. ರೆಸಾರ್ಟ್, ಕೃಷಿ ಭೂಮಿಯಾಗಿ ಪರಿವರ್ತನೆ, ಬಗರ್ ಹುಕ್ಕುಂ ಎಂಬ ಯೋಜನೆಯನ್ನ ರೂಪಿಸಿ ಕಾಡುಪ್ರಾಣಿಗಳ ಉಪಟಳಕ್ಕೆ ನಾವೇ ಕಾರಣವಾಗಿದ್ದೇವೆ. ಇದಲ್ಲದೇ ಆನೆ ಕಾರಿಡಾರ್ ಗೆ ಜಮೀನು ನೀಡಲು ರೈತಾಪಿ ವರ್ಗ ಮುಂದಾಗಿದೆ. ಆದ್ರೆ ಆನೆಕಾರಿಡಾರ್ ಮಾಡಲು ಜನಪ್ರತಿನಿಧಿಗಳು, ಸರ್ಕಾರ ಮೀನಾಮೇಷ ಎಣಿಸುತ್ತಿವೆ. ಎತ್ತಿನಹೊಳೆ, ರಸ್ತೆ ಅಭಿವೃದ್ದಿ ಹೀಗೆ ಹಲವು ಯೋಜನೆಗಳಿಗೆ ಸಾವಿರಾರು ಕೋಟಿ ಖರ್ಚು ಮಾಡುವ ಸರ್ಕಾರಕ್ಕೆ ಕಾರಿಡಾರ್ ನಿರ್ಮಿಸಲು ಎಷ್ಟು ಹಣ ಬೇಕು ಎಂಬುದು ತಿಳಿದಿಲ್ಲವೇ...? ಯೋಜನೆ ರೂಪಿಸಲು ಇಚ್ಚಾಶಕ್ತಿಯಿಲ್ಲ ಎಂಬುದು ಸ್ಪಷ್ಟವಾಗಿ ತೋರುತ್ತದೆ.

ಬೈಟ್: ಲೋಕೇಶ್, ರೈತ ಮುಖಂಡ, ಆಲೂರು, (ಬಿಳಿ ಅಂಗಿ ತೊಟ್ಟಿರುವವರು)

ಮರಗಿಡಗಳೆ ಖಾಲಿ ಖಾಲಿ:

ಕಾಡಾನೆಗಳಿಗೆ ಬೇಕಾಗುವ ಬೈನೆ, ಹಲಸು, ಬಿದುರು ಕಾಡುಗಳಲ್ಲಿ ಖಾಲಿಯಾಗಿದೆ. ಅರಣ್ಯ ಇಲಾಖೆಯವರಂತೂ ಕಾಡುಗಳಲ್ಲಿ ಪ್ರಾಣಿಗಳಿಗೆ ಬೇಕಾಗಬಹುದಾದ ಗಿಡಗಳನ್ನ ಬೆಳಸಲು ಮುಂದಾಗಿಲ್ಲ. ನಾನಾ ಕಾರಣ ಹೇಳಿ ನುಣುಚಿಕೊಳ್ಳುತ್ತಿದ್ದಾರೆ. ವ ಕಾಡುಗಳಲ್ಲಿ ಮಾತ್ರ ಯಾವ ಗಿಡವನ್ನು ನೆಡದೇ ವರ್ಷದಲ್ಲಿ ನಾವಿಷ್ಟು ಬೆಳಸಿದ್ದೇವೆ ಎಂದು ಲೆಕ್ಕದ ಪುಸ್ತಕದಲ್ಲಿ ತೋರಿಸಿ ಸುಮ್ಮನಾಗುತ್ತಾರೆ. ಆನೆಗಳಿಗೆ ಬೇಕಾಗುವ ಗಿಡಗಳನ್ನ ಮುಂದಾದ್ರು ಬೆಳೆಸಲು ಮುಂದಾಗಬೇಕೆಂಬುದು ಈ ಭಾಗದ ಜನರ ಆಗ್ರಹ.

ಬೈಟ್: ನಟರಾಜ್, ನಾಕಲಗೂಡು, ಆಲೂರು. (ಕೆಂಪು ಟೀ ಶರ್ಟ್ ಹಾಕಿರುವವರು)

ಇರುವಂತಹ ಕಾಡುಗಳು ನಾಡಾಗುತ್ತಿವೆ. ಹಾಗಾಗಿ ನಮ್ಮ ಜಾಗಕ್ಕೆ ಬರುತ್ತಿವೆ. ನಾವು ಬೆಳೆದ ಬೆಳೆಗಳನ್ನ ತಿನ್ನಲು ಪ್ರಾರಂಭಿಸಿರುವುದರಿಂದ ವಾಪಸ್ಸ್ ಕಾಡುಗಳಿಗೆ ಹೋಗಲು ಹಿಂಜರಿಯುತ್ತಿವೆ. ಇನ್ನು ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದು, ಆಹಾರದ ಜೊತೆಗೆ ನೀರು ಕೂಡಾ ಕಡಿಮೆಯಾಗುತ್ತಿದ್ದು, ಹೇಮಾವತಿ ಹಿನ್ನಿರಿನ ಭಾಗದಲ್ಲಿ ನೀರಿಗಾಗಿ ಹಿಂಡು ಹಿಂಡಾಗಿ ಆನೆಗಳು ಬರುತ್ತಿವೆ. ನಾವು ಹಸಿವನ್ನ ಹೇಗೆ ತಡೆಯುವುದಿಲ್ಲವೋ ಹಾಗೇ ಪ್ರಾಣಿಗಳು ತಡೆಯುವುದಿಲ್ಲ. ಅವುಗಳಿಗೆ ಕಾನೂನು ಎಂಬುದು ಇಲ್ಲ. ಜನಪ್ರತಿನಿಧಿಗಳು ಈಗಲಾದ್ರು ಕೂಡಾ ಆನೆಧಾಮ ಅಥವಾ ಕಾರಿಡಾರ್ ಯೋಜನೆ ರೂಪಿಸಿದ್ರೆ ಶಾಶ್ವತ ಪರಿಹಾರ ಸಿಗಬಹುದೇನೋ...

ಬೈಟ್: ರಾಜೇಶ್, ಮುತ್ತಿಗೆ ಗ್ರಾಮ. ಆಲೂರು. ( ಮೂರನೇ ಬೈಟ್ ಕೆಂಪು ಅಂಗಿ)Conclusion:ಒಟ್ಟಾರೆ ಕಾಡುಪ್ರಾಣಿಗಳ ಮತ್ತು ಮಾನವನ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತಿರುವುದು ಮುಂದಿನ ದಿನದಲ್ಲಿ ಆತಂಕಕಾರಿ ಬೆಳವಣಿಗೆಗೆ ಕಾರಣವಾಗುತ್ತಿದೆ. ಮೊನ್ನೆ ಮೊನ್ನೆ ತಾನೆ ಹಾಸನದಲ್ಲಿ ಆನೆ ಕಾಣಿಸಿಕೊಂಡಿದ್ದು, ಬೇಲೂರಿನ ಹಳೇಬೀಡಿನಲ್ಲಿ ಮಹಿಳೆಯನ್ನ ಸಾಯಿಸಿದ್ದು, ಆಲೂರಿನಲ್ಲಿ ಆನೆಯಿಂದ ಕೂದಲೆಳೆಯಲ್ಲಿ ಪಾರಾಗಿ ಬಂದ ಬಸವರಾಜ್ ಪ್ರಕರಣ ಮಾಸುವ ಮುನ್ನವೇ ಇಂದು ಸಕಲೇಶಪುರ ಮತ್ತು ಆಲೂರು ಭಾಗದಲ್ಲಿನ 4-5ಕಡೆ ಹಿಂಡು ಹಿಂಡಾಗಿ ಕಾಣಿಸಿಕೊಂಡಿರೋ ಆನೆಗಳನ್ನ ನೋಡಿದ್ರೆ ಬದುಕುವುದಾದ್ರು ಹೇಗೆ ಎಂಬ ಪ್ರಶ್ನೆ ಮೂಡದೇ ಇರದು...ಇನ್ನಾದ್ರು ಸರ್ಕಾರ ಕಾಡುಪ್ರಾಣಿಗಳ ಉಳಿವಿಗೆ ಮತ್ತು ಮಾನವನ ಬದುಕಿಗೆ ಶಾಶ್ವತ ಪರಿಹಾರವನ್ನ ಹುಡುಕುವರೇ ಕಾದುನೋಡಬೇಕಿದೆ....

ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
Last Updated : Jul 14, 2019, 3:23 AM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.