ETV Bharat / state

ಬಡವರ ಜಮೀನುಗಳ ಪಹಣಿ, ಪಕ್ಕಾಪೋಡ್​​ಗಳನ್ನು ತಡೆಹಿಡಿಯಲಾಗಿದೆ.. ಡಿಎಸ್‌ಎಸ್‌ ಆಕ್ರೋಶ

author img

By

Published : Jun 29, 2020, 10:28 PM IST

ಫಾರಂ ನಂ 53 ನಮೂನೆಯ ದರಖಾಸ್ತು ಜಮೀನಿನ ದುರಸ್ಥಿ ಮತ್ತು ಹದ್ದುಬಸ್ತು ವಿಚಾರಕ್ಕೆ ಬಡವರ ಅರ್ಜಿಗಳನ್ನು ವಿಲೇವಾರಿ ಮಾಡದೆ ತಡ ಮಾಡಲಾಗುತ್ತಿದೆ ಎಂದು ದಲಿತ ಸಂಘರ್ಷ ಸಮಿತಿ ಆಕ್ರೋಶ ಹೊರ ಹಾಕಿತು..

sakaleshpur
ದಲಿತ ಸಂಘರ್ಷ ಸಮಿತಿ

ಸಕಲೇಶಪುರ : ತಾಲೂಕಿನ ಎಲ್ಲಾ ಜಾತಿಯವರ ಮತ್ತು ಬಡವರ ಜಮೀನುಗಳ ಪಹಣಿ ಮತ್ತು ಪಕ್ಕಾ ಪೋಡ್​ನ ಕೂಡಲೇ ಮಾಡಿಕೊಡಬೇಕು ಹಾಗೂ ಬಗರ್ ಹುಕುಂ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಬೇಕೆಂದು ಜಿಲ್ಲಾ ದಲಿತ ಸಂಘರ್ಷ ಸಮಿತಿ ವತಿಯಿಂದ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನಾ ಸಂಚಾಲಕ ವಳಲಹಳ್ಳಿ ವೀರೇಶ್, ಇತ್ತೀಚಿನ ದಿನಗಳಲ್ಲಿ ಫಾರಂ ನಂ.53 ನಮೂನೆಯ ದರಖಾಸ್ತು ಜಮೀನಿನ ದುರಸ್ಥಿ ಮತ್ತು ಹದ್ದುಬಸ್ತು ವಿಚಾರಕ್ಕೆ ಬಡವರ ಅರ್ಜಿಗಳನ್ನು ವಿಲೇವಾರಿ ಮಾಡದೆ ತಡ ಮಾಡಲಾಗುತ್ತಿದೆ. ಬಡವರನ್ನು ಸತಾಯಿಸಲಾಗುತ್ತಿದೆ. ಕೇವಲ ಉಳ್ಳವರಿಗೆ ಹಾಗೂ ಹೆಚ್​​ಆರ್​ಪಿ ಸಂತ್ರಸ್ತರಿಗೆ ಮಾತ್ರ ಜಮೀನು ಪಕ್ಕಾ ಪೋಡ್ ಹಾಗೂ ದುರಸ್ಥಿ ಮಾಡಿಕೊಡಲಾಗುತ್ತಿದೆ ಎಂದು ದೂರಿದರು.

ದಲಿತ ಸಂಘರ್ಷ ಸಮಿತಿ

ಬಡವರ ಜಮೀನುಗಳ ಹದ್ದುಬಸ್ತ್​​​ ಹಾಗೂ ಪಕ್ಕಾ ಪೋಡು ಮಾಡಲು ಕೂಡಲೇ ಕ್ರಮ ಕೈಗೊಳ್ಳಬೇಕು. ಕೆಲ ಗೋಮಾಳಗಳಲ್ಲಿ 10 ರಿಂದ 20 ಕುಟುಂಬ ಒಕ್ಕಲುತನ ಮಾಡಿಕೊಂಡು ಬಂದಿವೆ. ಆದರೆ, ದೂರದಲ್ಲಿ ಕುಳಿತಿರುವ ಅಧಿಕಾರಿಗಳು ಇದ್ಯಾವುದನ್ನು ಗಮನಕ್ಕೆ ತೆಗೆದುಕೊಳ್ಳದೆ ಹೆಚ್​​​ಆರ್​ಪಿಯಲ್ಲಿ ಜಾಗವನ್ನು ಪ್ರಭಾವಿಗಳಿಗೆ ಮಂಜೂರು ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.

ಈ ಸಂಧರ್ಭದಲ್ಲಿ ಬಿಎಸ್‌ಪಿ ತಾಲೂಕು ಅಧ್ಯಕ್ಷ ತಮ್ಮಯ್ಯ, ಸಂಘಟನೆಯ ಜಿಲ್ಲಾ ಸಂಚಾಲಕ ಗೋಪಾಲ್ ಹಾನುಬಾಳ್‌ ಸೇರಿದಂತೆ ಇತರರು ಹಾಜರಿದ್ದರು.

ಸಕಲೇಶಪುರ : ತಾಲೂಕಿನ ಎಲ್ಲಾ ಜಾತಿಯವರ ಮತ್ತು ಬಡವರ ಜಮೀನುಗಳ ಪಹಣಿ ಮತ್ತು ಪಕ್ಕಾ ಪೋಡ್​ನ ಕೂಡಲೇ ಮಾಡಿಕೊಡಬೇಕು ಹಾಗೂ ಬಗರ್ ಹುಕುಂ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಬೇಕೆಂದು ಜಿಲ್ಲಾ ದಲಿತ ಸಂಘರ್ಷ ಸಮಿತಿ ವತಿಯಿಂದ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನಾ ಸಂಚಾಲಕ ವಳಲಹಳ್ಳಿ ವೀರೇಶ್, ಇತ್ತೀಚಿನ ದಿನಗಳಲ್ಲಿ ಫಾರಂ ನಂ.53 ನಮೂನೆಯ ದರಖಾಸ್ತು ಜಮೀನಿನ ದುರಸ್ಥಿ ಮತ್ತು ಹದ್ದುಬಸ್ತು ವಿಚಾರಕ್ಕೆ ಬಡವರ ಅರ್ಜಿಗಳನ್ನು ವಿಲೇವಾರಿ ಮಾಡದೆ ತಡ ಮಾಡಲಾಗುತ್ತಿದೆ. ಬಡವರನ್ನು ಸತಾಯಿಸಲಾಗುತ್ತಿದೆ. ಕೇವಲ ಉಳ್ಳವರಿಗೆ ಹಾಗೂ ಹೆಚ್​​ಆರ್​ಪಿ ಸಂತ್ರಸ್ತರಿಗೆ ಮಾತ್ರ ಜಮೀನು ಪಕ್ಕಾ ಪೋಡ್ ಹಾಗೂ ದುರಸ್ಥಿ ಮಾಡಿಕೊಡಲಾಗುತ್ತಿದೆ ಎಂದು ದೂರಿದರು.

ದಲಿತ ಸಂಘರ್ಷ ಸಮಿತಿ

ಬಡವರ ಜಮೀನುಗಳ ಹದ್ದುಬಸ್ತ್​​​ ಹಾಗೂ ಪಕ್ಕಾ ಪೋಡು ಮಾಡಲು ಕೂಡಲೇ ಕ್ರಮ ಕೈಗೊಳ್ಳಬೇಕು. ಕೆಲ ಗೋಮಾಳಗಳಲ್ಲಿ 10 ರಿಂದ 20 ಕುಟುಂಬ ಒಕ್ಕಲುತನ ಮಾಡಿಕೊಂಡು ಬಂದಿವೆ. ಆದರೆ, ದೂರದಲ್ಲಿ ಕುಳಿತಿರುವ ಅಧಿಕಾರಿಗಳು ಇದ್ಯಾವುದನ್ನು ಗಮನಕ್ಕೆ ತೆಗೆದುಕೊಳ್ಳದೆ ಹೆಚ್​​​ಆರ್​ಪಿಯಲ್ಲಿ ಜಾಗವನ್ನು ಪ್ರಭಾವಿಗಳಿಗೆ ಮಂಜೂರು ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.

ಈ ಸಂಧರ್ಭದಲ್ಲಿ ಬಿಎಸ್‌ಪಿ ತಾಲೂಕು ಅಧ್ಯಕ್ಷ ತಮ್ಮಯ್ಯ, ಸಂಘಟನೆಯ ಜಿಲ್ಲಾ ಸಂಚಾಲಕ ಗೋಪಾಲ್ ಹಾನುಬಾಳ್‌ ಸೇರಿದಂತೆ ಇತರರು ಹಾಜರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.