ETV Bharat / state

ಹಾಸನದಲ್ಲಿ ವಿದ್ಯಾರ್ಥಿನಿ ಮೇಲೆ‌ ಹರಿದ ಕೆಎಸ್​ಆರ್​ಟಿಸಿ ಬಸ್​​​... ದೇಹದ ಅರ್ಧ ಭಾಗ ಛಿದ್ರ!

author img

By

Published : Aug 1, 2019, 7:50 PM IST

ಬಸ್ ನಿಲ್ದಾಣದಿಂದ ವೇಗವಾಗಿ ಬಂದ ಬಸ್, ರಸ್ತೆ ದಾಟುತ್ತಿದ್ದ ಯುವತಿಯ ಮೇಲೆ ಹರಿದ ಪರಿಣಾಮ ವಿದ್ಯಾರ್ಥಿನಿಯ ದೇಹದ ಅರ್ಧ ಭಾಗ ಸಂಪೂರ್ಣ ‌ಛಿದ್ರವಾಗಿದ್ದು, ಆಸ್ಪತ್ರೆಯಲ್ಲಿ ಸಾವು‌ ಬದುಕಿನ ನಡುವೆ‌‌ ಹೋರಾಡುತ್ತಿರುವ ಘಟನೆ ಹಾಸನದ ಕೆಎಸ್​ಆರ್​ಟಿಸಿ ಹೊಸ ಬಸ್ ನಿಲ್ದಾಣದ ಮುಂಭಾಗ ನಡೆದಿದೆ.

ವಿದ್ಯಾರ್ಥಿನಿ ಮೇಲೆ‌ ಹರಿದ ಕೆಎಸ್​ಆರ್​ಟಿಸಿ ಬಸ್

ಹಾಸನ: ವಿದ್ಯಾರ್ಥಿನಿ ಮೇಲೆ‌ ಸಾರಿಗೆ ಬಸ್ ಹರಿದು ಗಂಭೀರ ಗಾಯಗಳಾಗಿರುವ ಘಟನೆ ಹಾಸನದ ಕೆಎಸ್​ಆರ್​ಟಿಸಿ ಹೊಸ ಬಸ್ ನಿಲ್ದಾಣದ ಮುಂಭಾಗ ನಡೆದಿದೆ.

ವಿದ್ಯಾರ್ಥಿನಿ ಮೇಲೆ‌ ಹರಿದ ಕೆಎಸ್​ಆರ್​ಟಿಸಿ ಬಸ್

ಕೆಹೆಚ್​ಬಿ ಬಡಾವಣೆಯ ನಿವಾಸಿ ರೇಷ್ಮ (26) ಗಂಭೀರ ಗಾಯಗೊಂಡಿರುವ ಯುವತಿ. ಬೆಳಿಗ್ಗೆ 10‌ ಗಂಟೆ‌ಗೆ ಕೆಹೆಚ್​ಬಿ ಬಡಾವಣೆಯ ತಮ್ಮ ನಿವಾಸದಿಂದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ತಂದೆ‌ ಲಕ್ಷ್ಮೇಗೌಡರಿಗೆ‌ ‌ತಿಂಡಿ‌ ತೆಗೆದುಕೊಂಡು ಹೋಗುತ್ತಿರುವಾಗ ‌ ಬಸ್ ನಿಲ್ದಾಣದಿಂದ ವೇಗವಾಗಿ ಬಂದ ಬಸ್ ರಸ್ತೆ ದಾಟುತ್ತಿದ್ದ ಯುವತಿಯ ಮೇಲೆ ಹರಿದಿದೆ. ಪರಿಣಾಮ ಯುವತಿಯ ದೇಹದ ಅರ್ಧ ಭಾಗ ಸಂಪೂರ್ಣ ‌ಛಿದ್ರವಾಗಿದೆ. ಆಸ್ಪತ್ರೆಯಲ್ಲಿ ಯುವತಿ ಸಾವು‌ ಬದುಕಿನ ನಡುವೆ‌‌ ಹೋರಾಡುತ್ತಿದ್ದಾಳೆ.

ಇನ್ನು ಯುವತಿ ಬಿಎಸ್​ಸಿ ‌ವಿದ್ಯಾಭ್ಯಾಸ ಮಾಡುತ್ತಿದ್ದಾಳೆ ಎನ್ನಲಾಗಿದೆ. ಈಕೆ‌ಯ ತಂದೆ‌ ಲಕ್ಷ್ಮೇಗೌಡ ‌ಹಾಸನದ ಅಲಾನಕಾಫಿಕ್ಯೂರಿಂಗ್​​ನಲ್ಲಿ ‌ಕೆಲಸ ನಿರ್ವಹಿಸುತ್ತಿದ್ದ ವೇಳೆ ಇವರ ಮೇಲೂ‌‌ ಮಿಷಿನ್ ಬಿದ್ದು, ಗಂಭೀರ ‌ಗಾಯಗೊಂಡು‌ ಖಾಸಗಿ‌ ಆಸ್ಪತ್ರೆಯಲ್ಲಿ ‌ಚಿಕಿತ್ಸೆ ಪಡೆಯುತ್ತಿದ್ದರು. ಈ ಹಿನ್ನೆಲೆ ವಿದ್ಯಾರ್ಥಿನಿ‌ ಎಂದಿನಂತೆ‌ ತಿಂಡಿ‌ ತೆಗೆದುಕೊಂಡು ಆಸ್ಪತ್ರೆಗೆ ‌ಹೋಗುವ ಮಾರ್ಗ ಮಧ್ಯೆ ಘಟನೆ ನಡೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು‌ ಮುಟ್ಟಿದೆ.

ಚಾಲಕ ಅತೀ ವೇಗದಿಂದ ಹಾಗೂ ನಿರ್ಲಕ್ಷ್ಯದಿಂದ ಬಸ್ ಚಾಲನೆ ಮಾಡಿದ್ದೇ‌ ಘಟನೆಗೆ‌ ಕಾರಣವಾಗಿದೆ‌‌ ಎಂದು ಸ್ಥಳದಲ್ಲಿದ್ದ ಪ್ರತ್ಯೇಕದರ್ಶಿಗಳು ತಿಳಿಸಿದ್ದಾರೆ. ಘಟನೆ ನಂತರ ಬಸ್ ಚಾಲಕ ಪರಾರಿಯಾಗಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಬಸ್ ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡು‌ ತನಿಖೆ ಮುಂದುವರೆಸಿದ್ದಾರೆ.

ಆಸ್ಪತ್ರೆ‌ಯ‌ ನಿರ್ಲಕ್ಷ್ಯ:

ಇಡೀ ರಾಜ್ಯವೇ ತಿರುಗಿ ನೋಡುವ ಹೈಟೆಕ್‌ ಮಾದರಿ‌ಯ ಸರ್ಕಾರಿ ಆಸ್ಪತ್ರೆ ಹಾಸನದಲ್ಲಿ ನಿರ್ಮಾಣಗೊಂಡಿದೆ. ಆದ್ರೆ‌ ಅಲ್ಲಿ ವೈದ್ಯ ಸಲಕರಣೆ‌ ಹಾಗೂ ನುರಿತ ತಜ್ಞರ ‌ಕೊರತೆಯಿಂದ‌ ರೋಗಿಗಳಿಗೆ ‌ಸರಿಯಾದ‌‌ ಚಿಕಿತ್ಸೆ ದೊರೆಯದೇ ಖಾಸಗಿ‌ ಆಸ್ಪತ್ರೆಯತ್ತ ‌ಮುಖಮಾಡುವಂತಾಗಿದೆ. ಅಲ್ಲಿನ ಆಡಳಿತ ಮಂಡಳಿಯವರು ಮಾತ್ರ ನಮ್ಮಲ್ಲಿ ಎಲ್ಲಾ ಚಿಕಿತ್ಸೆ ದೊರೆಯುತ್ತವೆ ಎಂದು‌ ರೋಗಿಗಳನ್ನು‌ ದಿಕ್ಕು‌ ತಪ್ಪಿಸುತ್ತಿದ್ದಾರೆ ಎನ್ನುವ ಆರೋಪವಿದೆ. ಇಂದು ಬಸ್ ಹರಿದ‌ ಯುವತಿಯನ್ನು ‌ಸ್ಥಳದಲ್ಲಿದ್ದವರು‌ ಸರ್ಕಾರಿ‌ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸತತ ಎರಡು ಗಂಟೆಯಾದರೂ‌ ಉತ್ತಮ ಚಿಕಿತ್ಸೆ ‌ದೊರೆಯದೆ‌ ಖಾಸಗಿ‌ ನರ್ಸಿಂಗ್ ಹೋಂಗೆ ಕರೆದೊಯ್ಯಲು‌ ವೈದ್ಯರು ಸೂಚಿಸಿದ್ದಾರೆ ಎನ್ನಲಾಗಿದೆ.

ಹಾಸನ: ವಿದ್ಯಾರ್ಥಿನಿ ಮೇಲೆ‌ ಸಾರಿಗೆ ಬಸ್ ಹರಿದು ಗಂಭೀರ ಗಾಯಗಳಾಗಿರುವ ಘಟನೆ ಹಾಸನದ ಕೆಎಸ್​ಆರ್​ಟಿಸಿ ಹೊಸ ಬಸ್ ನಿಲ್ದಾಣದ ಮುಂಭಾಗ ನಡೆದಿದೆ.

ವಿದ್ಯಾರ್ಥಿನಿ ಮೇಲೆ‌ ಹರಿದ ಕೆಎಸ್​ಆರ್​ಟಿಸಿ ಬಸ್

ಕೆಹೆಚ್​ಬಿ ಬಡಾವಣೆಯ ನಿವಾಸಿ ರೇಷ್ಮ (26) ಗಂಭೀರ ಗಾಯಗೊಂಡಿರುವ ಯುವತಿ. ಬೆಳಿಗ್ಗೆ 10‌ ಗಂಟೆ‌ಗೆ ಕೆಹೆಚ್​ಬಿ ಬಡಾವಣೆಯ ತಮ್ಮ ನಿವಾಸದಿಂದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ತಂದೆ‌ ಲಕ್ಷ್ಮೇಗೌಡರಿಗೆ‌ ‌ತಿಂಡಿ‌ ತೆಗೆದುಕೊಂಡು ಹೋಗುತ್ತಿರುವಾಗ ‌ ಬಸ್ ನಿಲ್ದಾಣದಿಂದ ವೇಗವಾಗಿ ಬಂದ ಬಸ್ ರಸ್ತೆ ದಾಟುತ್ತಿದ್ದ ಯುವತಿಯ ಮೇಲೆ ಹರಿದಿದೆ. ಪರಿಣಾಮ ಯುವತಿಯ ದೇಹದ ಅರ್ಧ ಭಾಗ ಸಂಪೂರ್ಣ ‌ಛಿದ್ರವಾಗಿದೆ. ಆಸ್ಪತ್ರೆಯಲ್ಲಿ ಯುವತಿ ಸಾವು‌ ಬದುಕಿನ ನಡುವೆ‌‌ ಹೋರಾಡುತ್ತಿದ್ದಾಳೆ.

ಇನ್ನು ಯುವತಿ ಬಿಎಸ್​ಸಿ ‌ವಿದ್ಯಾಭ್ಯಾಸ ಮಾಡುತ್ತಿದ್ದಾಳೆ ಎನ್ನಲಾಗಿದೆ. ಈಕೆ‌ಯ ತಂದೆ‌ ಲಕ್ಷ್ಮೇಗೌಡ ‌ಹಾಸನದ ಅಲಾನಕಾಫಿಕ್ಯೂರಿಂಗ್​​ನಲ್ಲಿ ‌ಕೆಲಸ ನಿರ್ವಹಿಸುತ್ತಿದ್ದ ವೇಳೆ ಇವರ ಮೇಲೂ‌‌ ಮಿಷಿನ್ ಬಿದ್ದು, ಗಂಭೀರ ‌ಗಾಯಗೊಂಡು‌ ಖಾಸಗಿ‌ ಆಸ್ಪತ್ರೆಯಲ್ಲಿ ‌ಚಿಕಿತ್ಸೆ ಪಡೆಯುತ್ತಿದ್ದರು. ಈ ಹಿನ್ನೆಲೆ ವಿದ್ಯಾರ್ಥಿನಿ‌ ಎಂದಿನಂತೆ‌ ತಿಂಡಿ‌ ತೆಗೆದುಕೊಂಡು ಆಸ್ಪತ್ರೆಗೆ ‌ಹೋಗುವ ಮಾರ್ಗ ಮಧ್ಯೆ ಘಟನೆ ನಡೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು‌ ಮುಟ್ಟಿದೆ.

ಚಾಲಕ ಅತೀ ವೇಗದಿಂದ ಹಾಗೂ ನಿರ್ಲಕ್ಷ್ಯದಿಂದ ಬಸ್ ಚಾಲನೆ ಮಾಡಿದ್ದೇ‌ ಘಟನೆಗೆ‌ ಕಾರಣವಾಗಿದೆ‌‌ ಎಂದು ಸ್ಥಳದಲ್ಲಿದ್ದ ಪ್ರತ್ಯೇಕದರ್ಶಿಗಳು ತಿಳಿಸಿದ್ದಾರೆ. ಘಟನೆ ನಂತರ ಬಸ್ ಚಾಲಕ ಪರಾರಿಯಾಗಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಬಸ್ ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡು‌ ತನಿಖೆ ಮುಂದುವರೆಸಿದ್ದಾರೆ.

ಆಸ್ಪತ್ರೆ‌ಯ‌ ನಿರ್ಲಕ್ಷ್ಯ:

ಇಡೀ ರಾಜ್ಯವೇ ತಿರುಗಿ ನೋಡುವ ಹೈಟೆಕ್‌ ಮಾದರಿ‌ಯ ಸರ್ಕಾರಿ ಆಸ್ಪತ್ರೆ ಹಾಸನದಲ್ಲಿ ನಿರ್ಮಾಣಗೊಂಡಿದೆ. ಆದ್ರೆ‌ ಅಲ್ಲಿ ವೈದ್ಯ ಸಲಕರಣೆ‌ ಹಾಗೂ ನುರಿತ ತಜ್ಞರ ‌ಕೊರತೆಯಿಂದ‌ ರೋಗಿಗಳಿಗೆ ‌ಸರಿಯಾದ‌‌ ಚಿಕಿತ್ಸೆ ದೊರೆಯದೇ ಖಾಸಗಿ‌ ಆಸ್ಪತ್ರೆಯತ್ತ ‌ಮುಖಮಾಡುವಂತಾಗಿದೆ. ಅಲ್ಲಿನ ಆಡಳಿತ ಮಂಡಳಿಯವರು ಮಾತ್ರ ನಮ್ಮಲ್ಲಿ ಎಲ್ಲಾ ಚಿಕಿತ್ಸೆ ದೊರೆಯುತ್ತವೆ ಎಂದು‌ ರೋಗಿಗಳನ್ನು‌ ದಿಕ್ಕು‌ ತಪ್ಪಿಸುತ್ತಿದ್ದಾರೆ ಎನ್ನುವ ಆರೋಪವಿದೆ. ಇಂದು ಬಸ್ ಹರಿದ‌ ಯುವತಿಯನ್ನು ‌ಸ್ಥಳದಲ್ಲಿದ್ದವರು‌ ಸರ್ಕಾರಿ‌ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸತತ ಎರಡು ಗಂಟೆಯಾದರೂ‌ ಉತ್ತಮ ಚಿಕಿತ್ಸೆ ‌ದೊರೆಯದೆ‌ ಖಾಸಗಿ‌ ನರ್ಸಿಂಗ್ ಹೋಂಗೆ ಕರೆದೊಯ್ಯಲು‌ ವೈದ್ಯರು ಸೂಚಿಸಿದ್ದಾರೆ ಎನ್ನಲಾಗಿದೆ.

Intro: ಸಾರಿಗೆ ಬಸ್ ವಿದ್ಯಾರ್ಥಿನಿ ಮೇಲೆ‌ ಹರಿದು ಗಂಭೀರಗಾಯಗಳಾಗಿರುವ ಘಟನೆ ಹಾಸನದ ಕೆಎಸ್ ಆರ್ ಟಿಸಿ ಹೊಸ ಬಸ್ ನಿಲ್ದಾಣದ ಮುಂಭಾಗ ನಡೆದಿದೆ.
‌‌ಕೆ ಹೆಚ್ ಬಿ ಬಡಾವಣೆಯ ನಿವಾಸಿ ಲಕ್ಷ್ಮೇಗೌಡ ಅವರ ಪುತ್ರಿ ರೇಷ್ಮ(೨೬) ಗಂಭೀರಗಾಯಗೊಂಡಿರುವ ಯುವತಿ. ಬೆಳಿಗ್ಗೆ ೧೦‌ ಗಂಟೆ‌ ಸಮಯದಲ್ಲಿ ಕೆ ಹೆಚ್ ಬಿ ಬಡಾವಣೆಯ ತಮ್ಮ ನಿವಾಸದಿಂದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿರುವ ತಂದೆ‌ ಲಕ್ಷ್ಮೇಗೌಡರಿಗೆ‌ ‌ಬೆಳಿಗ್ಗಿನ ತಿಂಡಿ‌ ತೆಗೆದುಕೊಂಡು ರಸ್ತೆಯಲ್ಲಿ‌ ನಡೆದು‌ ಹೋಗುವಾಗ ‌ ಬಸ್ ನಿಲ್ದಾಣದಿಂದ ವೇಗವಾಗಿ ಬಂದ ಬಸ್ ರಸ್ತೆ ದಾಟುವಾಗ ಯುವತಿಯ ಮೇಲೆ ಬಸ್ ಹರಿದಿದೆ. ಘಟನೆಯಿಂದ ಯುವತಿಯ ದೇಹದ ಅರ್ಧಭಾಗ ಸಂಪೂರ್ಣ ‌ನುಜ್ಜುಗುಜ್ಜಾಗಿದ್ದು, ಆಸ್ಪತ್ರೆಯಲ್ಲಿ ಸಾವು‌ಬದುಕಿನ ನಡುವೆ‌‌ ಸೆಣಸಲಾಡುತ್ತಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು‌ ಮುಟ್ಟಿದೆ.
Body:ಯುವತಿ ಬಿಎಸ್ಸಿ ‌ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಈಕೆ‌ಯ ತಂದೆ‌ ಲಕ್ಷ್ಮೇಗೌಡ ‌ಹಾಸನದ ಅಲಾನಕಾಫಿಕ್ಯೂರಿಂಗ್ ನಲ್ಲಿ ‌ಕೆಲಸ ನಿರ್ವಹಿಸುತ್ತಿದ್ದ ಕೆಲಸ ನಿರ್ವಹಿಸುವಾಗ ಇವರ ಮೇಲೂ‌‌ ಮಿಷನ್ ಬಿದ್ದು ಗಂಭೀರ ‌ಗಾಯಗೊಂಡು‌ ಖಾಸಗಿ‌ ಆಸ್ಪತ್ರೆಯಲ್ಲಿ ‌ಚಿಕಿತ್ಸೆ ಪಡೆಯುತ್ತಿದ್ದರು.ಈ ಹಿನ್ನಲೆಯಲ್ಲಿ ವಿದ್ಯಾರ್ಥಿನಿ‌ರೇಷ್ಮ ಎಂದಿನಂತೆ‌ ತಿಂಡಿ‌ ತೆಗೆದುಕೊಂಡು ಆಸ್ಪತ್ರೆಗೆ ‌ಹೋಗುವ ಮಾರ್ಗಮಧ್ಯ‌ ಘಟನೆ ನಡೆದಿದೆ. ಬಸ್ ಚಾಲಕ ಈಗಾಗಲೇ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಪೊಲೀಸರು ಸ್ಥಳಗಾಮಿಸಿ ಬಸ್ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು‌ ತನಿಖೆ ಮುಂದುವರೆಸಿದ್ದಾರೆ.
ಕೆಎಸ್ಆರ್ ಟಿಸಿ‌ ಬಸ್ ಚಾಲನಕ ನಿರ್ಲಕ್ಷ್ಯ: ಸಾರಿಗೆ ಬಸ್ ಚಾಲಕ ಅತೀವೇಗ ಹಾಗೂ ನಿರ್ಲಕ್ಷ್ಯದಿಂದ ಬಸ್ ಚಾಲನೆ ಮಾಡಿದ್ದೆ‌ ಘಟನೆಗೆ‌ ಕಾರಣವಾಗಿದೆ‌‌ ಎಂದು ಸ್ಥಳದಲ್ಲಿದ್ದ ಪ್ರತ್ಯೇಕ ದರ್ಶಿಗಳು ತಿಳಿಸಿದ್ದಾರೆ. ಮೇಲ್ಸೇತುವೆ ನಿರ್ಮಾಣವಾದೆ ಟ್ರಾಫಿಕ್ ‌ಸಮಸ್ಯೆ ಹೆಚ್ಚಾಗಿದೆ. ಎನ್ ಆರ್ ಸರ್ಕಲ್ ‌ನಿಂದ ಹೊಸ ಬಸ್‌ ಬಸ್ ನಿಲ್ದಾಣಕ್ಕೆ‌ ಹೋಗಲು‌ ಹರಸಾಹಸ ಪಡಬೇಕಿದೆ. ಈಗಾಗಲೇ ರಾಜಕೀಯ ‌ಮೇಲಾಟದಿಂದ ಮೇಲ್ಸೇತುವೆ ಕಾಮಗಾರಿ‌ ಮಂದಗತಿಯಲ್ಲಿ ಸಾಗುತ್ತಿದೆ.ಇವೆಲ್ಲ ಸಮಸ್ಯೆಗಳು ನಿತ್ಯ‌ ಆ ರಸ್ತೆಯಲ್ಲಿ ಜನರನ್ನು ಕಾಡುತ್ತಿದ್ದರೂ ಕೆಎಸ್ ಆರ್‌ಟಿ ಬಸ್ ಚಾಲಕರು ಬಸ್ ಗಳನ್ನು ಪೈಪೋಟಿಯಲ್ಲಿ ಚಾಲನೆ ಮಾಡಲು‌ ಮುಂದಾಗುತ್ತಿರುವುದರಿಂದ ಇಂತಹ ಘಟನೆಗಳು‌ ನಿತ್ಯ ಮರುಕಳಿಸುತ್ತಿವೆ.ಆಗಾಗ‌ ಅಪಘಾತಗಳು , ವಾಹನ ಸವಾರ ನಡುವೆ ಗಲಾಟೆಗಳು ನಡೆಯುತ್ತಿರುವುದು ಸಾಮಾನ್ಯವಾಗಿದೆ.

ಸರ್ಕಾರಿ‌‌ ಆಸ್ಪತ್ರೆ‌ಯ‌ ನಿರ್ಲಕ್ಷ್ಯ: ಇಡೀ ರಾಜ್ಯವೇ ತಿರುಗಿ ನೋಡುವ ಹೈಟೆಕ್‌ ಮಾದರಿ‌ ಸರ್ಕಾರಿ ಆಸ್ಪತ್ರೆ ಹಾಸನದಲ್ಲಿ ನಿರ್ಮಾಣಗೊಂಡಿದೆ. ಆದರೆ‌ ಅಲ್ಲಿ ‌ ವೈದ್ಯ ಸಲಕರಣೆ‌ ಹಾಗೂ‌ ನುರಿತ ತಜ್ಞರು ‌ಕೊರತೆಯಿಂದ‌ ರೋಗಿಗಳಿಗೆ ‌ಸರಿಯಾದ‌‌ ಚಿಕಿತ್ಸೆ ದೊರೆಯದೆ ಖಾಸಗಿ‌ ಆಸ್ಪತ್ರೆ ಯತ್ತ ‌ಮುಖಮಾಡುವಂತಾಗಿದೆ. ಅಲ್ಲಿನ ಆಡಳಿತ ಮಂಡಳಿಯವರು ಮಾತ್ರ‌ನಮ್ಮ ಎಲ್ಲ‌ ಚಿಕಿತ್ಸೆ ದೊರೆಯುತ್ತವೆ ಎಂದು‌ ರೋಗಿಗಳನ್ನು‌ ದಿಕ್ಕು‌ತಪ್ಪಿಸುತ್ತಿದ್ದಾರೆ.ಇಂದು ಬಸ್ ಹರಿದ‌ ಯುವತಿಯನ್ನು ‌ ಸ್ಥಳದಲ್ಲಿದ್ದವರು‌ ಸರ್ಕಾರಿ‌ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸತತ ಎರಡು ಗಂಟೆಯಾದರೂ‌ ಉತ್ತಮ ಚಿಕಿತ್ಸೆ ‌ದೊರೆಯದೆ‌ ಖಾಸಗಿ‌ ನರ್ಸಿಂಗ್ ಹೋಂಗೆ ಕರೆದೊಯ್ಯಲು‌ ವೈದ್ಯರು ಸೂಚಿಸಿದ್ದಾರೆ ಎನ್ನಲಾಗಿದೆ. ಖಾಸಗಿ ವೈದ್ಯರು‌ ಹೇಳುವ ಪ್ರಕಾರ ಪ್ರಥಮ‌ ಹಂತದಲ್ಲಿ ತಡವಾಗಿದೆ. ನಮ್ಮ ‌ಪ್ರಯತ್ನ ಮಾಡುತ್ತೇವೆ. Conclusion:ಅಪಘಾತ ಗಂಭೀರವಾಗಿರುವುದರಿಂದ ಪ್ರಯತ್ನದಲ್ಲಿದ್ದೇವೆ ಎನ್ನುತ್ತಿದ್ದಾರಂತೆ. ಹೈಟೆಕ್‌ ಸರ್ಕಾರಿ ಆಸ್ಪತ್ರೆಯಲ್ಲಿ ‌ಲೋಟೆಕ್ ಚಿಕಿತ್ಸೆ ‌ದೊರೆತ ಹಿನ್ನಲೆಯಲ್ಲಿ ಯುವತಿ‌ಸ್ಥತಿ‌ ಗಂಬೀರವಾಗಿದೆ ಎಂಬುದು‌ ಆರೋಪ ವಾಗಿದೆ. ಒಟ್ಟಾರೆ ಸಾವು‌ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಯುವತಿ ಬದುಕಿ‌ಬರಲಿ ಎಂಬುದು ಎಲ್ಲರ ಆಶಯ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.