ETV Bharat / state

ಮೂಕ ಪ್ರಾಣಿಗಳ ಹಸಿವಿಗೆ ಮಿಡಿದ ಬೈಕ್ ರೈಡರ್ಸ್ ತಂಡ

ಲಾಕ್​​​ಡೌನ್​​​ ಘೋಷಣೆಯಾದಾಗಿನಿಂದಲೂ ಹಾಸನದ ದೇಶ್ ಭೂಷಣ್ ಎಂಬುವವರು, ತಮ್ಮ ಡೆಸ್ಟಿನಿ ರೈಡರ್ ಎಂಬ ತಂಡದ ವತಿಯಿಂದ ಪ್ರತಿನಿತ್ಯ 7 ರಿಂದ 8 ಬೈಕ್​​​​​ಗಳ ಮೂಲಕ ಆಹಾರ ಪೊಟ್ಟಣ ತೆಗೆದುಕೊಂಡು ಬೀದಿ ನಾಯಿಗಳು, ಜಾನುವಾರುಗಳಿಗೆ ನೀಡುತ್ತಿದ್ದಾರೆ.

author img

By

Published : Apr 26, 2020, 10:36 AM IST

Distribution of food to animals by Hassan's Destiny Rider
ಮೂಕ ಪ್ರಾಣಿಗಳಿಗಾಗಿ ಮಿಡಿದ ಬೈಕ್ ರೈಡರ್ಸ್ ತಂಡ

ಹಾಸನ: ಲಾಕ್​​​ಡೌನ್​​​ ಘೋಷಣೆದಾಗಿನಿಂದಲೂ ಹಾಸನದ ದೇಶ್ ಭೂಷಣ್ ಎಂಬುವವರು, ತಮ್ಮ ಡೆಸ್ಟಿನಿ ರೈಡರ್ ಎಂಬ ತಂಡದ ವತಿಯಿಂದ ಪ್ರತಿನಿತ್ಯ 7 ರಿಂದ 8 ಬೈಕ್​​​​​ಗಳ ಮೂಲಕ ಆಹಾರ ಪೊಟ್ಟಣ ತೆಗೆದುಕೊಂಡು ಬೀದಿ ನಾಯಿಗಳು, ಜಾನುವಾರುಗಳಿಗೆ ನೀಡುತ್ತಿದ್ದಾರೆ.

ಇವರ ಕಾರ್ಯಕ್ಕೆ ಇತರರು ಕೂಡಾ ಸಾಥ್ ನೀಡುತ್ತಿದ್ದಾರೆ. ಕೊರೊನಾ ವೈರಸ್​​ ನಡುವೆ ಬಿಡಾಡಿ ದನಗಳು, ನಾಯಿಗಳು, ಕೋತಿಗಳು ಹಾಗೂ ಅಳಿಲು ಸೇರಿದಂತೆ ವಿವಿಧ ಪಕ್ಷಿಗಳ ಹಸಿವು ನೀಗಿಸುತ್ತಿದ್ದಾರೆ. ಪ್ರಾಣಿಗಳಿಗೂ ಪೌಷ್ಟಿಕ ಆಹಾರ ಪೂರೈಸುವ ಮೂಲಕ ಮಾನವೀಯತೆ ಮರೆಯುತ್ತಿದ್ದಾರೆ.

ಮೂಕ ಪ್ರಾಣಿಗಳಿಗಾಗಿ ಮಿಡಿದ ಬೈಕ್ ರೈಡರ್ಸ್ ತಂಡ

ಆಹಾರ ನೀಡೋದಿಕ್ಕೆ ವೃತ್ತನಿರೀಕ್ಷಕ ಕಾರಣ:

ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಹಾಸನ ನಗರದಲ್ಲಿ ಪ್ರತಿನಿತ್ಯ 500ಕ್ಕೂ ಹೆಚ್ಚು ಮೂಕ ಪ್ರಾಣಿಗಳಿಗೆ ಆಹಾರ ನೀಡಲಾಗುತ್ತಿದ್ದು, ಜಾನುವಾರುಗಳಿಗೆ ಹೂ ಕೋಸು, ಕ್ಯಾರೆಟ್, ಬೀಟ್​​​​​ರೂಟ್, ಮೂಲಂಗಿ ಮತ್ತು ಹುಲ್ಲನ್ನು ನೀಡಲಾಗುತ್ತಿದೆ. ಇನ್ನು ನಾಯಿಗಳಿಗೆ ಬಿಸ್ಕತ್​, ಹಾಲು, ಮೊಟ್ಟೆ ಹಾಗೂ ಮೊಸರು ಮಿಶ್ರಿತ ಪೌಷ್ಟಿಕ ಆಹಾರ ನೀಡುತ್ತಿದ್ದಾರೆ. ಕಾಗೆ, ಗುಬ್ಬಿ ಸೇರಿದಂತೆ ಇತರೆ ಪಕ್ಷಿಗಳಿಗೆ ಬಿಸ್ಕತ್​ ಪುಡಿ, ಕಾಳು, ಅನ್ನದ ಅಗಳು ಹಾಗೂ ದ್ವಿದಳ ಧಾನ್ಯಗಳನ್ನು ನೀಡಲಾಗುತ್ತಿದೆ. ಇದಕ್ಕೆಲ್ಲಾ ಕಾರಣ ಹಾಸನ ನಗರದ ಸಿಪಿಐ ಕೃಷ್ಣಂರಾಜು ಕಾರಣ ಎನ್ನುತ್ತಾರೆ ಪ್ರಾಣಿ ಪ್ರಿಯರು.

ಇದೇ ರೀತಿ ಹಾಸನದ ಸಾಮಾಜಿಕ ಕಾರ್ಯಕರ್ತರಾದ ಉಮೇಶ್ ಅತ್ನಿ ಹಾಗೂ ಆರ್.ಜಿ. ಗಿರೀಶ್, ತಮ್ಮ ಬೈಕ್​​​​​​ನಲ್ಲಿ ಬಾಳೆಹಣ್ಣಿನ ಗೊನೆಗಳನ್ನು ತೆಗೆದುಕೊಂಡು ಹೋಗಿ, ಅರಸೀಕೆರೆ ಭಾಗದಲ್ಲಿನ ಕೋತಿಗಳಿಗೆ ನೀಡುತ್ತಿದ್ದಾರೆ. ಉಳಿದ ಬಾಳೆಗೊನೆಗಳನ್ನು ಕೋತಿಗಳು ಹಸಿವಾದಾಗ ತಿನ್ನಲೆಂದು ರಸ್ತೆ ಬದಿಯ ಮರಕ್ಕೆ ತೂಗು ಹಾಕಿದ್ದಾರೆ. ಪ್ರಾಣಿಗಳಿಗೆ ಆಹಾರ ಸಿಗದೆ ಸಮಸ್ಯೆ ತಲೆದೂರಿದ್ದು, ಪ್ರಾಣಿಗಳ ಈ ದಯನೀಯ ಸ್ಥಿತಿಯನ್ನು ಕಂಡು ಮರುಗಿದ ಯುವಕರು, ತಾವು ಸಂಪಾದಿಸಿ ಉಳಿಸಿದ ಹಣವನ್ನೇ ಸೇವಾ ಕಾರ್ಯಕ್ಕೆ ಬಳಸಿದ್ದಾರೆ. ಲಾಕ್​​​​​ಡೌನ್​​​ನಿಂದ ಜನರು ಮಾತ್ರವಲ್ಲ, ಪ್ರಾಣಿಗಳು ಸಂಕಷ್ಟದಲ್ಲಿವೆ. ಪ್ರಾಣಿಗಳ ಹಸಿವು ನೀಗಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಇವರುಗಳ ಮಾನವೀಯ ಕಾರ್ಯ ನಿಜಕ್ಕೂ ಮೆಚ್ಚುವಂತಹುದು.

ಹಾಸನ: ಲಾಕ್​​​ಡೌನ್​​​ ಘೋಷಣೆದಾಗಿನಿಂದಲೂ ಹಾಸನದ ದೇಶ್ ಭೂಷಣ್ ಎಂಬುವವರು, ತಮ್ಮ ಡೆಸ್ಟಿನಿ ರೈಡರ್ ಎಂಬ ತಂಡದ ವತಿಯಿಂದ ಪ್ರತಿನಿತ್ಯ 7 ರಿಂದ 8 ಬೈಕ್​​​​​ಗಳ ಮೂಲಕ ಆಹಾರ ಪೊಟ್ಟಣ ತೆಗೆದುಕೊಂಡು ಬೀದಿ ನಾಯಿಗಳು, ಜಾನುವಾರುಗಳಿಗೆ ನೀಡುತ್ತಿದ್ದಾರೆ.

ಇವರ ಕಾರ್ಯಕ್ಕೆ ಇತರರು ಕೂಡಾ ಸಾಥ್ ನೀಡುತ್ತಿದ್ದಾರೆ. ಕೊರೊನಾ ವೈರಸ್​​ ನಡುವೆ ಬಿಡಾಡಿ ದನಗಳು, ನಾಯಿಗಳು, ಕೋತಿಗಳು ಹಾಗೂ ಅಳಿಲು ಸೇರಿದಂತೆ ವಿವಿಧ ಪಕ್ಷಿಗಳ ಹಸಿವು ನೀಗಿಸುತ್ತಿದ್ದಾರೆ. ಪ್ರಾಣಿಗಳಿಗೂ ಪೌಷ್ಟಿಕ ಆಹಾರ ಪೂರೈಸುವ ಮೂಲಕ ಮಾನವೀಯತೆ ಮರೆಯುತ್ತಿದ್ದಾರೆ.

ಮೂಕ ಪ್ರಾಣಿಗಳಿಗಾಗಿ ಮಿಡಿದ ಬೈಕ್ ರೈಡರ್ಸ್ ತಂಡ

ಆಹಾರ ನೀಡೋದಿಕ್ಕೆ ವೃತ್ತನಿರೀಕ್ಷಕ ಕಾರಣ:

ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಹಾಸನ ನಗರದಲ್ಲಿ ಪ್ರತಿನಿತ್ಯ 500ಕ್ಕೂ ಹೆಚ್ಚು ಮೂಕ ಪ್ರಾಣಿಗಳಿಗೆ ಆಹಾರ ನೀಡಲಾಗುತ್ತಿದ್ದು, ಜಾನುವಾರುಗಳಿಗೆ ಹೂ ಕೋಸು, ಕ್ಯಾರೆಟ್, ಬೀಟ್​​​​​ರೂಟ್, ಮೂಲಂಗಿ ಮತ್ತು ಹುಲ್ಲನ್ನು ನೀಡಲಾಗುತ್ತಿದೆ. ಇನ್ನು ನಾಯಿಗಳಿಗೆ ಬಿಸ್ಕತ್​, ಹಾಲು, ಮೊಟ್ಟೆ ಹಾಗೂ ಮೊಸರು ಮಿಶ್ರಿತ ಪೌಷ್ಟಿಕ ಆಹಾರ ನೀಡುತ್ತಿದ್ದಾರೆ. ಕಾಗೆ, ಗುಬ್ಬಿ ಸೇರಿದಂತೆ ಇತರೆ ಪಕ್ಷಿಗಳಿಗೆ ಬಿಸ್ಕತ್​ ಪುಡಿ, ಕಾಳು, ಅನ್ನದ ಅಗಳು ಹಾಗೂ ದ್ವಿದಳ ಧಾನ್ಯಗಳನ್ನು ನೀಡಲಾಗುತ್ತಿದೆ. ಇದಕ್ಕೆಲ್ಲಾ ಕಾರಣ ಹಾಸನ ನಗರದ ಸಿಪಿಐ ಕೃಷ್ಣಂರಾಜು ಕಾರಣ ಎನ್ನುತ್ತಾರೆ ಪ್ರಾಣಿ ಪ್ರಿಯರು.

ಇದೇ ರೀತಿ ಹಾಸನದ ಸಾಮಾಜಿಕ ಕಾರ್ಯಕರ್ತರಾದ ಉಮೇಶ್ ಅತ್ನಿ ಹಾಗೂ ಆರ್.ಜಿ. ಗಿರೀಶ್, ತಮ್ಮ ಬೈಕ್​​​​​​ನಲ್ಲಿ ಬಾಳೆಹಣ್ಣಿನ ಗೊನೆಗಳನ್ನು ತೆಗೆದುಕೊಂಡು ಹೋಗಿ, ಅರಸೀಕೆರೆ ಭಾಗದಲ್ಲಿನ ಕೋತಿಗಳಿಗೆ ನೀಡುತ್ತಿದ್ದಾರೆ. ಉಳಿದ ಬಾಳೆಗೊನೆಗಳನ್ನು ಕೋತಿಗಳು ಹಸಿವಾದಾಗ ತಿನ್ನಲೆಂದು ರಸ್ತೆ ಬದಿಯ ಮರಕ್ಕೆ ತೂಗು ಹಾಕಿದ್ದಾರೆ. ಪ್ರಾಣಿಗಳಿಗೆ ಆಹಾರ ಸಿಗದೆ ಸಮಸ್ಯೆ ತಲೆದೂರಿದ್ದು, ಪ್ರಾಣಿಗಳ ಈ ದಯನೀಯ ಸ್ಥಿತಿಯನ್ನು ಕಂಡು ಮರುಗಿದ ಯುವಕರು, ತಾವು ಸಂಪಾದಿಸಿ ಉಳಿಸಿದ ಹಣವನ್ನೇ ಸೇವಾ ಕಾರ್ಯಕ್ಕೆ ಬಳಸಿದ್ದಾರೆ. ಲಾಕ್​​​​​ಡೌನ್​​​ನಿಂದ ಜನರು ಮಾತ್ರವಲ್ಲ, ಪ್ರಾಣಿಗಳು ಸಂಕಷ್ಟದಲ್ಲಿವೆ. ಪ್ರಾಣಿಗಳ ಹಸಿವು ನೀಗಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಇವರುಗಳ ಮಾನವೀಯ ಕಾರ್ಯ ನಿಜಕ್ಕೂ ಮೆಚ್ಚುವಂತಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.