ETV Bharat / state

ಕೊರ್ಟ್​ ಸಮನ್ಸ್ ಬಂದಾಗ ಬಚ್ಚಿಟ್ಟು ಕುಳಿತಿದ್ರಿ: ಪ್ರಜ್ವಲ್‌ ರೇವಣ್ಣ ಮೇಲೆ ದೇವರಾಜೇ ಗೌಡ ಆರೋಪ - ದೇವರಾಜೇ ಗೌಡ ಸುದ್ದಿ

ಹಾಸನ ಸಂಸದ ಪ್ರಜ್ವಲ್ ರೇವಣ್ಣನವರು ಏನೋ ಸಾಧನೆ ಮಾಡಿರುವ ಹಾಗೆ ಎಲ್ಲೆಂದರಲ್ಲಿ ಹೇಳಿಕೆ ನೀಡುತ್ತಿದ್ದು, ಕೋರ್ಟಿನಿಂದ ಸಮನ್ಸ್ ಬಂದಾಗ ಜಿಲ್ಲೆಯಿಂದ ಓಡಿ ಹೋಗಿದ್ದು ನಾನಲ್ಲ, ಯಾರೆಂದು ಯೋಚಿಸಿ ಎಂದು ವಕೀಲ ಜಿ. ದೇವರಾಜೇಗೌಡ ಹೇಳಿದರು.

Devarajegowda
ದೇವರಾಜೇ ಗೌಡ ಆರೋಪ
author img

By

Published : Jan 14, 2020, 11:54 PM IST

ಹಾಸನ : ಸಂಸದ ಪ್ರಜ್ವಲ್ ರೇವಣ್ಣನವರು ಏನೋ ಸಾಧನೆ ಮಾಡಿರುವ ಹಾಗೆ ಎಲ್ಲೆಂದರಲ್ಲಿ ಹೇಳಿಕೆ ನೀಡುತ್ತಿದ್ದು, ಕೋರ್ಟಿನಿಂದ ಸಮನ್ಸ್ ಬಂದಾಗ ಜಿಲ್ಲೆಯಿಂದ ಓಡಿ ಹೋಗಿದ್ದು ನಾನಲ್ಲ, ಯಾರೆಂದು ಯೋಚಿಸಿ ಎಂದು ವಕೀಲ ಜಿ. ದೇವರಾಜೇಗೌಡ ಟಾಂಗ್ ಕೊಟ್ಟರು.

ಸುದ್ದಿಗೋಷ್ಠಿಯಲಿ ಮಾತನಾಡಿದ ಅವರು, ಮೂರು ತಿಂಗಳಲ್ಲಿ ಸಂಸದ ಸ್ಥಾನದಿಂದ ಹೊರಗೆ ಬರುತ್ತಾರೆ ಎಂದು ನಾನು ಕೂಡ ಕೆಲ ಸಂದರ್ಭಗಳಲ್ಲಿ ಹೇಳಿದ್ದೆ, ಎ. ಮಂಜು ಕೂಡ ಹೇಳಿದ್ದರು. ಕಾನೂನು ಪ್ರಕಾರವೇ ಎಲ್ಲವೂ ನಡೆದಿದೆ. ಸಂಸದರೇ ನಾನು ಜಿಲ್ಲೆ ಬಿಟ್ಟು ಓಡಿ ಹೋಗಿದ್ದೇನಾ ಯೋಚಿಸಿ? ಜಿಲ್ಲೆ ಬಿಟ್ಟು ನೀವು ಪಲಾಯಾನ ಮಾಡಿದ್ದೀರಾ, ನೀವು ಎಲ್ಲೆಲ್ಲಿ ಓಡಿ ಹೋಗಿದ್ದೀರಾ ಎಂಬುದರ ಬಗ್ಗೆ ಹೈಕೋರ್ಟ್ ಆದೇಶದ ಕಾಪಿ ತಂದಿದ್ದೇನೆ. ಕೋರ್ಟ್​ನಿಂದ ಮೊದಲು ಸಮನ್ಸ್ ಕಳುಹಿಸಿದಾಗ ನೀವು ಊರಲ್ಲಿ ಇಲ್ಲ ಎಂದರೆ ಕಾಣಿಸುತ್ತಿಲ್ಲ ಎಂದರ್ಥ ಎಂದರು.

ದೇವರಾಜೇ ಗೌಡ ಆರೋಪ

ಎರಡನೇ ಸಮನ್ಸ್ ಜಾರಿಯಾದಾಗ ಪಾರ್ಟಿನೇ ಇಲ್ಲ. ಕರ್ನಾಟಕ ಉಚ್ಛ ನ್ಯಾಯಾಲಯ ಕಳುಹಿಸಿದಂತಹ ನೋಟಿಸ್, ಮೂರನೇ ಸಮನ್ಸ್‌ಗೆ ವ್ಯಕ್ತಿ ಸ್ಥಳದಲ್ಲಿ ಹಾಜರಿರುವುದಿಲ್ಲ. ಸಮನ್ಸ್‌ಗೆ ಸ್ಪಂದಿಸದಿದ್ದರೇ ನಾನು ಕಳ್ಳರೋ ನೀವು ಕಳ್ಳರೋ ಎಂದು ಪ್ರಶ್ನೆ ಮಾಡಿದ ಅವರು, ನೀವು ಊರು ಬಿಟ್ಟು ಓಡಿ ಹೋಗಿದ್ದೀರಿ? ಜಿಲ್ಲೆಯ ಉನ್ನತ ಸ್ಥಾನದಲ್ಲಿರುವವರು ಹಾಸನ ಜಿಲ್ಲೆ ಬಿಟ್ಟು ಓಡಿ ಹೋಗಿದ್ದೀರಿ ಎಂದು ಕಿಡಿಕಾರಿದರು.

ಕೋರ್ಟ್ ರೆಕಾರ್ಡ್ ಪ್ರಕಾರ, ಒಂದು ತಿಂಗಳು ದೇಶ ಬಿಟ್ಟು ಹೋಗಿದ್ದೀರಿ ಎಂದ ನೀವು ಇಲ್ಲೇ ಕಳ್ಳರಾಗಿ ಬಚ್ಚಿಟ್ಟು ಕುಳಿತಿದ್ದೀರಿ ಎಂದು ದೂರಿದರು. ಎಂತಹ ಮಹಾತ್ಮರ ಮೊಮ್ಮಗನಾಗಿ ಹುಟ್ಟಿದ್ದೀರಿ. ಜಿಲ್ಲೆ, ರಾಜ್ಯ ಹಾಗೂ ದೇಶ ಕೊಂಡಾಡುವ ವ್ಯಕ್ತಿಯ ಮೊಮ್ಮಗನಾಗಿ ಅವರ ಕೀರ್ತಿಗೆ ಕಳಂಕ ತರುವ ಕೆಲಸ ಮಾಡಬಾರದು ಎಂದು ಬುದ್ದಿವಾದ ಹೇಳಿದರು.

ನೂತನ ಸಂಸದರಾದ ಪ್ರಜ್ವಲ್ ರೇವಣ್ಣ ಅವರ ಸಂಸದ ಸ್ಥಾನದ ಅನರ್ಹತೆ ವಿಚಾರವಾಗಿ ಉಚ್ಚ ನ್ಯಾಯಾಲಯದಲ್ಲಿ ವಾದ-ಪ್ರತಿವಾದ ನಡೆಯುತ್ತಿದ್ದು ಸೂಕ್ತ ತೀರ್ಪು ಹೊರಬೀಳಲಿದೆ. ನಾಮಪತ್ರ ಸಲ್ಲಿಕೆ ವಿಚಾರವಾಗಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಇದನ್ನು ಪ್ರಸ್ತಾಪ ಮಾಡುತ್ತ ಕೇವಲ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಹಾಸನ : ಸಂಸದ ಪ್ರಜ್ವಲ್ ರೇವಣ್ಣನವರು ಏನೋ ಸಾಧನೆ ಮಾಡಿರುವ ಹಾಗೆ ಎಲ್ಲೆಂದರಲ್ಲಿ ಹೇಳಿಕೆ ನೀಡುತ್ತಿದ್ದು, ಕೋರ್ಟಿನಿಂದ ಸಮನ್ಸ್ ಬಂದಾಗ ಜಿಲ್ಲೆಯಿಂದ ಓಡಿ ಹೋಗಿದ್ದು ನಾನಲ್ಲ, ಯಾರೆಂದು ಯೋಚಿಸಿ ಎಂದು ವಕೀಲ ಜಿ. ದೇವರಾಜೇಗೌಡ ಟಾಂಗ್ ಕೊಟ್ಟರು.

ಸುದ್ದಿಗೋಷ್ಠಿಯಲಿ ಮಾತನಾಡಿದ ಅವರು, ಮೂರು ತಿಂಗಳಲ್ಲಿ ಸಂಸದ ಸ್ಥಾನದಿಂದ ಹೊರಗೆ ಬರುತ್ತಾರೆ ಎಂದು ನಾನು ಕೂಡ ಕೆಲ ಸಂದರ್ಭಗಳಲ್ಲಿ ಹೇಳಿದ್ದೆ, ಎ. ಮಂಜು ಕೂಡ ಹೇಳಿದ್ದರು. ಕಾನೂನು ಪ್ರಕಾರವೇ ಎಲ್ಲವೂ ನಡೆದಿದೆ. ಸಂಸದರೇ ನಾನು ಜಿಲ್ಲೆ ಬಿಟ್ಟು ಓಡಿ ಹೋಗಿದ್ದೇನಾ ಯೋಚಿಸಿ? ಜಿಲ್ಲೆ ಬಿಟ್ಟು ನೀವು ಪಲಾಯಾನ ಮಾಡಿದ್ದೀರಾ, ನೀವು ಎಲ್ಲೆಲ್ಲಿ ಓಡಿ ಹೋಗಿದ್ದೀರಾ ಎಂಬುದರ ಬಗ್ಗೆ ಹೈಕೋರ್ಟ್ ಆದೇಶದ ಕಾಪಿ ತಂದಿದ್ದೇನೆ. ಕೋರ್ಟ್​ನಿಂದ ಮೊದಲು ಸಮನ್ಸ್ ಕಳುಹಿಸಿದಾಗ ನೀವು ಊರಲ್ಲಿ ಇಲ್ಲ ಎಂದರೆ ಕಾಣಿಸುತ್ತಿಲ್ಲ ಎಂದರ್ಥ ಎಂದರು.

ದೇವರಾಜೇ ಗೌಡ ಆರೋಪ

ಎರಡನೇ ಸಮನ್ಸ್ ಜಾರಿಯಾದಾಗ ಪಾರ್ಟಿನೇ ಇಲ್ಲ. ಕರ್ನಾಟಕ ಉಚ್ಛ ನ್ಯಾಯಾಲಯ ಕಳುಹಿಸಿದಂತಹ ನೋಟಿಸ್, ಮೂರನೇ ಸಮನ್ಸ್‌ಗೆ ವ್ಯಕ್ತಿ ಸ್ಥಳದಲ್ಲಿ ಹಾಜರಿರುವುದಿಲ್ಲ. ಸಮನ್ಸ್‌ಗೆ ಸ್ಪಂದಿಸದಿದ್ದರೇ ನಾನು ಕಳ್ಳರೋ ನೀವು ಕಳ್ಳರೋ ಎಂದು ಪ್ರಶ್ನೆ ಮಾಡಿದ ಅವರು, ನೀವು ಊರು ಬಿಟ್ಟು ಓಡಿ ಹೋಗಿದ್ದೀರಿ? ಜಿಲ್ಲೆಯ ಉನ್ನತ ಸ್ಥಾನದಲ್ಲಿರುವವರು ಹಾಸನ ಜಿಲ್ಲೆ ಬಿಟ್ಟು ಓಡಿ ಹೋಗಿದ್ದೀರಿ ಎಂದು ಕಿಡಿಕಾರಿದರು.

ಕೋರ್ಟ್ ರೆಕಾರ್ಡ್ ಪ್ರಕಾರ, ಒಂದು ತಿಂಗಳು ದೇಶ ಬಿಟ್ಟು ಹೋಗಿದ್ದೀರಿ ಎಂದ ನೀವು ಇಲ್ಲೇ ಕಳ್ಳರಾಗಿ ಬಚ್ಚಿಟ್ಟು ಕುಳಿತಿದ್ದೀರಿ ಎಂದು ದೂರಿದರು. ಎಂತಹ ಮಹಾತ್ಮರ ಮೊಮ್ಮಗನಾಗಿ ಹುಟ್ಟಿದ್ದೀರಿ. ಜಿಲ್ಲೆ, ರಾಜ್ಯ ಹಾಗೂ ದೇಶ ಕೊಂಡಾಡುವ ವ್ಯಕ್ತಿಯ ಮೊಮ್ಮಗನಾಗಿ ಅವರ ಕೀರ್ತಿಗೆ ಕಳಂಕ ತರುವ ಕೆಲಸ ಮಾಡಬಾರದು ಎಂದು ಬುದ್ದಿವಾದ ಹೇಳಿದರು.

ನೂತನ ಸಂಸದರಾದ ಪ್ರಜ್ವಲ್ ರೇವಣ್ಣ ಅವರ ಸಂಸದ ಸ್ಥಾನದ ಅನರ್ಹತೆ ವಿಚಾರವಾಗಿ ಉಚ್ಚ ನ್ಯಾಯಾಲಯದಲ್ಲಿ ವಾದ-ಪ್ರತಿವಾದ ನಡೆಯುತ್ತಿದ್ದು ಸೂಕ್ತ ತೀರ್ಪು ಹೊರಬೀಳಲಿದೆ. ನಾಮಪತ್ರ ಸಲ್ಲಿಕೆ ವಿಚಾರವಾಗಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಇದನ್ನು ಪ್ರಸ್ತಾಪ ಮಾಡುತ್ತ ಕೇವಲ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

Intro:ಹಾಸನ: ಸಂಸದರಾಗಿರುವ ಪ್ರಜ್ವಲ್ ರೇವಣ್ಣನವರು ಏನೋ ಸಾಧನೆ ಮಾಡಿರುವಾಗೇ ಎಲ್ಲೆಂದರಲ್ಲಿ ಹೇಳಿಕೆ ನೀಡುತಿದ್ದು, ಕೋರ್ಟಿನಿಂದ ಸಮನ್ಸ್ ಬಂದಾಗ ಜಿಲ್ಲೆಯಿಂದ ಓಡಿ ಹೋಗಿದ್ದು ನಾನಲ್ಲ. ಯಾರೇಂದು ಯೋಚಿಸಿ ಎಂದು ವಕೀಲ ಜಿ. ದೇವರಾಜೇಗೌಡ ಆರೋಪಿಸಿದರು.
ಪತ್ರಿಕಾಗೋಷ್ಠಿಯಲಿ ಮಾತನಾಡಿ, ನಾನು ಏನೋ ಸಾಧನೆ ಮಾಡಿರುವ ರೀತಿಯಲ್ಲಿ ಬಿಂಬಿಸಿ ಹೇಳಿಕೆಯನ್ನು ನೀಡಿದ್ದಾರೆ. ಯಾರೋ ಒಬ್ಬರೂ ಇನ್ನು ಮೂರು ತಿಂಗಳಲ್ಲಿ ಸಂಸದ ಸ್ಥಾನದಿಂದ ಕೆಳಗೆ ಇಳಿಸುವುದಾಗಿ ಹೇಳಿದವರೇ ಊರು ಬಿಟ್ಟು ಓಡಿ ಹೋಗಿರುವುದಾಗಿ ಹೇಳಿದ್ದಾರೆ. ಕೋರ್ಟ್ ತೀರ್ಮಾನಕ್ಕೆ ಸಂತೋಷವಾಗಿ ವಿಚಾರವನ್ನು ಮಾತನಾಡಿಕೊಂಡಿದ್ದಾರೆ. ಮಾತನಾಡಲು ನಾನು ತಪ್ಪು ಎಂದೇಳುತ್ತಿಲ್ಲ. ಆದರೇ ಕೆಲ ಮಾತಿನ ದಾಟಿ ಮತ್ತು ನಾಲಿಗೆ ಹಿಡಿತದಲ್ಲಿ ಮಾತನಾಡಬೇಕು ಎಂದರು.
ಮೂರು ತಿಂಗಳಲ್ಲಿ ಸಂಸದ ಸ್ಥಾನದಿಂದ ಹೊರಗೆ ಬರುತ್ತಾರೆ ಎಂದು ನಾನು ಕೂಡ ಕೆಲ ಸಂದರ್ಭಗಳಲ್ಲಿ ಹೇಳಿದ್ದೆ, ಎ. ಮಂಜು ಕೂಡ ಹೇಳಿದ್ದರು. ಕಾನೂನು ಪ್ರಕಾರ ನಡೆದಿದೆ. ಸಂಸದರೇ ನಾನು ಜಿಲ್ಲೆ ಬಿಟ್ಟು ಓಡಿ ಹೋಗಿದ್ದೇನಾ ಯೋಚಿಸಿ? ಜಿಲ್ಲೆ ಬಿಟ್ಟು ನೀವು ಪಲಯಾನ ಮಾಡಿದ್ದೀರಾ, ನೀವು ಎಲ್ಲೆಲ್ಲಿ ಓಡಿ ಹೋಗಿದ್ದೀರ ಎಂಬುದರ ಬಗ್ಗೆ ಹೈಕೋರ್ಟ್ ಆದೇಶದ ಕಾಫಿ ತಂದಿದ್ದೇನೆ. ಚುನಾವಣೆಯಲ್ಲಿನ ಬಗ್ಗೆ ೨೦೧೯ ರಲ್ಲಿ ನಾನು ನ್ಯಾಯಾಲಯದ ಮೆಟ್ಟಿಲು ಏರಲಾಗಿತ್ತು. ಮೊದಲ ಸಮನ್ಸ್ ಕಳುಹಿಸಿದಾಗ ನೀವು ಊರಲ್ಲಿ ಇಲ್ಲ. ಕಾಣೆಯಾಗಿದ್ದಾರೆ ಎಂದರೇ ಕಾಣಿಸುತ್ತೀಲ್ಲ ಎಂದರ್ಥ.
ಎರಡನೇ ಸಮೆನ್ಸ್ ಜಾರಿಯಾದಾಗ ಪಾರ್ಟಿನೇ ಇಲ್ಲ. ಕರ್ನಾಟಕ ಉಚ್ಛ ನ್ಯಾಯಾಲಯ ಕಳುಹಿಸಿದಂತಹ ನೋಟಿಸ್, ಮೂರನೇ ಸಮೆನ್ಸ್ ಗೆ ವ್ಯಕ್ತಿ ಸ್ಥಳದಲ್ಲಿ ಹಾಜರಿರುವುದಿಲ್ಲ. ಸಮನ್ಸ್ ಗೆ ಸ್ಪಂದಿಸದಿದ್ದರೇ ನಾನು ಕಳ್ಳರೋ ನೀವು ಕಳ್ಳರೋ ಎಂದು ಪ್ರಶ್ನೆ ಮಾಡಿದ ಅವರು, ನೀವು ಊರು ಬಿಟ್ಟು ಓಡಿ ಹೋಗಿದ್ದೀರಿ? ಜಿಲ್ಲೆಯ ಉನ್ನತ ಸ್ಥಾನದಲ್ಲಿರುವವರು ಹಾಸನ ಜಿಲ್ಲೆ ಬಿಟ್ಟು ಓಡಿ ಹೋಗಿದ್ದೀರಿ ಎಂದು ಕಿಡಿಕಾರಿದರು.
ಕೋರ್ಟ್ ರೆಕಾರ್ಡ್ ಪ್ರಕಾರ ಒಂದು ತಿಂಗಳು ದೇಶ ಬಿಟ್ಟು ಹೋಗಿದ್ದೀರಿ, ಎಂದು ಇಲ್ಲೆ ಕಳ್ಳರಾಗೆ ಬಚ್ಚಿಟ್ಟು ಕುಳಿತಿದ್ದೀರಿ ಎಂದು ದೂರಿದ ಅವರು, ನಾಚಿಕೆಯಾಗಬೇಕು ಎಂದರು. ಎಂತಹ ಮಹಾತ್ಮರ ಮೊಮ್ಮಗನಾಗಿ ಹುಟ್ಟಿದ್ದೀರಿ, ಜಿಲ್ಲೆ, ರಾಜ್ಯ ಹಾಗೂ ದೇಶ ಕೊಂಡಾಡುವ ವ್ಯಕ್ತಿಯ ಮೊಮ್ಮಗನಾಗಿ ಅವರ ಕೀರ್ತಿಗೆ ಕಳಂಕ ತರುವ ಕೆಲಸ ಮಾಡಬಾರದು ಎಂದು ಬುದ್ದಿವಾದವನ್ನು ಹೇಳಿದರು.
ನಾನು ನೀಡಿರುವ ಪ್ರಮುಖ ದಾಖಲೆಯಲ್ಲಿ ಪ್ರಜ್ವಲ್ ರೇವಣ್ಣ ೧೬ನೇ ವಯಸ್ಸಿನಲ್ಲಿ ಕೋಟ್ಯಂತರ ರೂಗಳ ಆಸ್ತಿಯ ಒಡೆಯರಾಗಿದ್ದಾರೆ ಹಾಗೂ ಆಸ್ತಿಯು ತಮಗೆ ಹೇಗೆ ಬಂದಿತ್ತು ಎಂಬ ಮಾಹಿತಿಯನ್ನು ಸಂಸದ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ವೇಳೆ ಮರೆಮಾಚಿದ್ದಾರೆ ಎಂದು ದೂರಿದರು.
ನೂತನ ಸಂಸದರಾದ ಪ್ರಜ್ವಲ್ ರೇವಣ್ಣ ಅವರ ಸಂಸದ ಸ್ಥಾನದ ಅನರ್ಹತೆ ವಿಚಾರವಾಗಿ ಉಚ್ಚ ನ್ಯಾಯಾಲಯದಲ್ಲಿ ವಾದ-ಪ್ರತಿವಾದ ನಡೆಯುತ್ತಿದ್ದು ಸೂಕ್ತ ತೀರ್ಪು ಹೊರಬೀಳಲಿದೆ ನಾನು ಎಲ್ಲೂ ಓಡಿ ಹೋಗಿಲ್ಲಾ. ನಾಮಪತ್ರ ಸಲ್ಲಿಕೆ ವಿಚಾರವಾಗಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ ಇದನ್ನು ಪ್ರಸ್ತಾಪ ಮಾಡುತ್ತ ಕೇವಲ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಈ ಆರೋಪ ಸತ್ಯಕ್ಕೆ ದೂರವಾಗಿದ್ದು ನ್ಯಾಯಾಲಯಕ್ಕೆ ಸೂಕ್ತ ದಾಖಲಾತಿಗಳನ್ನು ಒದಗಿಸಿದ್ದು ಈಗಾಗಲೇ ವಾದ-ಪ್ರತಿವಾದ ಪ್ರಗತಿಯಲ್ಲಿದೆ ನಾನು ನ್ಯಾಯಾಲಯಕ್ಕೆ ನೀಡಿರುವ ದಾಖಲಾತಿಯಲ್ಲಿ ಒಂದು ಅಂಶವೂ ಸಹ ಸುಳ್ಳಿನಿಂದ ಕೂಡಿಲ್ಲ ಎಂದು ಹೇಳಿದರು.

ಬೈಟ್ : ಜಿ. ದೇವರಾಜೇಗೌಡ, ವಕೀಲ.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.

Body:0Conclusion:0
ETV Bharat Logo

Copyright © 2025 Ushodaya Enterprises Pvt. Ltd., All Rights Reserved.