ETV Bharat / state

ಹಾಸನದಲ್ಲೂ ಪ್ರಾಣಕ್ಕೆ ಕುತ್ತಾದ ರಸ್ತೆಗುಂಡಿ.. ಬೈಕ್​ ಸ್ಕಿಡ್ ಆಗಿ ದಂಪತಿ ಸಾವು, ಮಗನ ಸ್ಥಿತಿ ಗಂಭೀರ - ಶ್ರವಣಬೆಳಗೊಳ ಬೈಕ್​ ಅಪಘಾತದಲ್ಲಿ ದಂಪತಿ ಮೃತ

ರಸ್ತೆಬದಿಯ ಗುಂಡಿ ಮೇಲೆ ಬೈಕ್ ಚಲಿಸಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ, ಸ್ಕಿಡ್​​ ಆಗಿ ಮೂವರು ಬಿದ್ದಿದ್ದಾರೆ. ಘಟನೆಯಲ್ಲಿ ದಂಪತಿ ಸಾವನ್ನಪ್ಪಿದ್ದು, ಅವರ ಪುತ್ರ ತೀವ್ರ ಗಾಯಗೊಂಡಿದ್ದಾನೆ.

couple-killed-after-bike-skids-on-road-at-hassan
ಬೈಕ್​ ಸ್ಕಿಡ್ ಆಗಿ ಬಿದ್ದು​ ದಂಪತಿ ಸಾವು, ಮಗ ಗಂಭೀರ
author img

By

Published : Feb 3, 2022, 8:00 PM IST

ಶ್ರವಣಬೆಳಗೊಳ(ಹಾಸನ): ಬೆಂಗಳೂರಲ್ಲಿ ಶಿಕ್ಷಕಿಯೊಬ್ಬರ ಮೇಲೆ ಲಾರಿ ಹರಿದು ಮೃತಪಟ್ಟ ದುರ್ಘಟನೆ ಮಾಸುವ ಮುನ್ನವೇ ಮತ್ತೊಂದು ಇಂತಹದ್ದೇ ಘಟನೆ ಜಿಲ್ಲೆಯ ಶ್ರವಣಬೆಳಗೊಳ ಸಮೀಪ ಸಂಭವಿಸಿದ್ದು, ದಂಪತಿ ದುರಂತ ಅಂತ್ಯ ಕಂಡಿದ್ದಾರೆ.

couple-killed-after-bike-skids-on-road-at-hassan
ಬೈಕ್​ ಸ್ಕಿಡ್ ಆಗಿ ರಸ್ತೆಯಿಂದ ತಗ್ಗಿಗೆ ಬಿದ್ದ ಬೈಕ್​

ಧನಂಜಯ (45) ಮತ್ತು ಕಾಮಿನಿ (35) ಎಂಬುವರೆ ಮೃತ ದಂಪತಿ. ಇವರ ಪುತ್ರ ರಕ್ಷಿತ್‌ಗೌಡ (15) ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ದಂಪತಿಯು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಅಣ್ಣೆಚಾಕನಹಳ್ಳಿ ಗ್ರಾಮದವರೆಂದು ತಿಳಿದುಬಂದಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ರಸ್ತೆಗುಂಡಿ ತಪ್ಪಿಸಲು ಹೋಗಿ ಭೀಕರ ಅಪಘಾತ: ಶಿಕ್ಷಕಿ ತಲೆ ಮೇಲೆ ಹರಿದ ಗೂಡ್ಸ್​ ವಾಹನ

ಇವರು ಮಗನೊಂದಿಗೆ ಬೆಂಗಳೂರಿಗೆ ಬೈಕ್​​ನಲ್ಲಿ ತೆರಳುತ್ತಿದ್ದರು. ಮಾರ್ಗಮಧ್ಯೆ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ದಮ್ಮನಿಂಗಳ ಗ್ರಾಮದ ರಚನಾ ಶಾಲೆ ಬಳಿ ರಸ್ತೆಬದಿಯ ಗುಂಡಿ ಮೇಲೆ ಬೈಕ್ ಚಲಿಸಿದ್ದು, ಬಳಿಕ ನಿಯಂತ್ರಣ ತಪ್ಪಿ ಮೂವರೂ ಕೆಳಕ್ಕೆ ಬಿದ್ದಿದ್ದಾರೆ. ಬೈಕ್​ ರಸ್ತೆಯಿಂದ ಹೊರಹೋಗಿ ತಗ್ಗಿನಲ್ಲಿ ಬಿದ್ದಿತ್ತು.

couple-killed-after-bike-skids-on-road-at-hassan
ಮಗನೊಂದಿಗೆ ಧನಂಜಯ ದಂಪತಿ

ತೀವ್ರ ರಕ್ತಸ್ರಾವವಾಗಿ ಕಾಮಿನಿ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಧನಂಜಯರನ್ನ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಪುತ್ರ ರಕ್ಷಿತ್‌ಗೌಡನಿಗೆ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹಿಜಾಬ್​​ ಧರಿಸಿ ಬಂದ ವಿದ್ಯಾರ್ಥಿನಿಯರು.. ಕಾಲೇಜ್​ ಗೇಟ್​​ ಬಂದ್ ಮಾಡಿದ ಪ್ರಾಂಶುಪಾಲ

ಶ್ರವಣಬೆಳಗೊಳ(ಹಾಸನ): ಬೆಂಗಳೂರಲ್ಲಿ ಶಿಕ್ಷಕಿಯೊಬ್ಬರ ಮೇಲೆ ಲಾರಿ ಹರಿದು ಮೃತಪಟ್ಟ ದುರ್ಘಟನೆ ಮಾಸುವ ಮುನ್ನವೇ ಮತ್ತೊಂದು ಇಂತಹದ್ದೇ ಘಟನೆ ಜಿಲ್ಲೆಯ ಶ್ರವಣಬೆಳಗೊಳ ಸಮೀಪ ಸಂಭವಿಸಿದ್ದು, ದಂಪತಿ ದುರಂತ ಅಂತ್ಯ ಕಂಡಿದ್ದಾರೆ.

couple-killed-after-bike-skids-on-road-at-hassan
ಬೈಕ್​ ಸ್ಕಿಡ್ ಆಗಿ ರಸ್ತೆಯಿಂದ ತಗ್ಗಿಗೆ ಬಿದ್ದ ಬೈಕ್​

ಧನಂಜಯ (45) ಮತ್ತು ಕಾಮಿನಿ (35) ಎಂಬುವರೆ ಮೃತ ದಂಪತಿ. ಇವರ ಪುತ್ರ ರಕ್ಷಿತ್‌ಗೌಡ (15) ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ದಂಪತಿಯು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಅಣ್ಣೆಚಾಕನಹಳ್ಳಿ ಗ್ರಾಮದವರೆಂದು ತಿಳಿದುಬಂದಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ರಸ್ತೆಗುಂಡಿ ತಪ್ಪಿಸಲು ಹೋಗಿ ಭೀಕರ ಅಪಘಾತ: ಶಿಕ್ಷಕಿ ತಲೆ ಮೇಲೆ ಹರಿದ ಗೂಡ್ಸ್​ ವಾಹನ

ಇವರು ಮಗನೊಂದಿಗೆ ಬೆಂಗಳೂರಿಗೆ ಬೈಕ್​​ನಲ್ಲಿ ತೆರಳುತ್ತಿದ್ದರು. ಮಾರ್ಗಮಧ್ಯೆ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ದಮ್ಮನಿಂಗಳ ಗ್ರಾಮದ ರಚನಾ ಶಾಲೆ ಬಳಿ ರಸ್ತೆಬದಿಯ ಗುಂಡಿ ಮೇಲೆ ಬೈಕ್ ಚಲಿಸಿದ್ದು, ಬಳಿಕ ನಿಯಂತ್ರಣ ತಪ್ಪಿ ಮೂವರೂ ಕೆಳಕ್ಕೆ ಬಿದ್ದಿದ್ದಾರೆ. ಬೈಕ್​ ರಸ್ತೆಯಿಂದ ಹೊರಹೋಗಿ ತಗ್ಗಿನಲ್ಲಿ ಬಿದ್ದಿತ್ತು.

couple-killed-after-bike-skids-on-road-at-hassan
ಮಗನೊಂದಿಗೆ ಧನಂಜಯ ದಂಪತಿ

ತೀವ್ರ ರಕ್ತಸ್ರಾವವಾಗಿ ಕಾಮಿನಿ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಧನಂಜಯರನ್ನ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಪುತ್ರ ರಕ್ಷಿತ್‌ಗೌಡನಿಗೆ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹಿಜಾಬ್​​ ಧರಿಸಿ ಬಂದ ವಿದ್ಯಾರ್ಥಿನಿಯರು.. ಕಾಲೇಜ್​ ಗೇಟ್​​ ಬಂದ್ ಮಾಡಿದ ಪ್ರಾಂಶುಪಾಲ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.