ETV Bharat / state

ಹಾಸನದಲ್ಲಿಂದು 226 ಜನರಿಗೆ ಕೊರೊನಾ..148 ಮಂದಿ ಗುಣಮುಖ

ಹಾಸನ ಜಿಲ್ಲೆಯಲ್ಲಿಂದು‌ 226 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಇಂದು 148 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುವರೆಂದು ಅಧಿಕಾರಿ ಡಾ. ಕಾಂತರಾಜ್ ತಿಳಿಸಿದ್ದಾರೆ.

author img

By

Published : Aug 19, 2020, 6:07 PM IST

Corona Positive of 226 people in Hassan district
ಹಾಸನದಲ್ಲಿಂದು 226 ಜನರಿಗೆ ಕೊರೊನಾ...148 ಮಂದಿ ಗುಣಮುಖ

ಹಾಸನ: ಜಿಲ್ಲೆಯಲ್ಲಿಂದು‌ 226 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ನಾಲ್ಕು ವರ್ಷದ ಬಾಲಕ ಸೇರಿ 7 ಜನ ಮೃತಪಟ್ಟಿದ್ದಾರೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಕಾಂತರಾಜ್ ತಿಳಿಸಿದ್ದಾರೆ.

ಹಾಸನದಲ್ಲಿಂದು 226 ಜನರಿಗೆ ಕೊರೊನಾ...148 ಮಂದಿ ಗುಣಮುಖ

ಆಲೂರು 04, ಅರಕಲಗೂಡು 31, ಅರಸೀಕೆರೆ 45, ಬೇಲೂರು 20, ಚನ್ನರಾಯಪಟ್ಟಣ 14, ಹಾಸನ 80, ಹೊಳೆನರಸೀಪುರ 25, ಸಕಲೇಶಪುರದಲ್ಲಿ 07 ಸೇರಿ ಒಟ್ಟು 226 ಜನರಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 5,224ಕ್ಕೆ ಏರಿಕೆಯಾಗಿದೆ. ಇಂದು 148 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದುವರೆಗೆ ಒಟ್ಟು 3,318 ಮಂದಿ ಬಿಡುಗಡೆಯಾಗಿದ್ದಾರೆ. 1,756 ಸಕ್ರಿಯ ಪ್ರಕರಣಗಳಿದ್ದು, 150 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದರು.

ಕೊರೊನಾ ಉಲ್ಬಣವಾಗುತ್ತಿರುವ ಹಿನ್ನಲೆಯಲ್ಲಿ, ಯಾರಿಗಾದರೂ ಉಸಿರಾಟದಲ್ಲಿ ತೊಂದರೆ, ಜ್ವರ, ಶೀತ, ಕೆಮ್ಮಿದ್ದರೆ ಆಸ್ಪತ್ರೆ ಭೇಟಿ ನೀಡಿ, ತಪಾಸಣೆಗೆ ಒಳಪಡಬೇಕು. ಸಾರ್ವಜನಿಕರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಮತ್ತು ಉತ್ತಮ ದರ್ಜೆಯ ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್ ಬಳಕೆ ಮಾಡಿ, ಸಭೆ ಸಮಾರಂಭವನ್ನು ಆದಷ್ಟು ಕಡಿಮೆ ಮಾಡುವ ಮೂಲಕ ಕೊರೊನಾ ಸೋಂಕು ತಡೆಗಟ್ಟಲು ಸಹಕರಿಸಬೇಕೆಂದು ಮನವಿ ಮಾಡಿದರು.

ಜಿಲ್ಲೆಯ ತಾಲ್ಲೂಕುವಾರು ಕೋವಿಡ್ ಪ್ರಕರಣಗಳು: ಆಲೂರು 142, ಅರಕಲಗೂಡು 434, ಅರಸೀಕೆರೆ 788, ಬೆಲೂರು 352, ಚನ್ನರಾಯಪಟ್ಟಣ 724, ಹಾಸನ 2096, ಹೊಳೆನರಸೀಪುರದಲ್ಲಿ 506, ಸಕಲೇಶಪುರ 147 ಹಾಗೂ 35 ಇತರೆ ಪ್ರಕರಣಗಳು ವರದಿಯಾಗಿವೆ.

ಹಾಸನ: ಜಿಲ್ಲೆಯಲ್ಲಿಂದು‌ 226 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ನಾಲ್ಕು ವರ್ಷದ ಬಾಲಕ ಸೇರಿ 7 ಜನ ಮೃತಪಟ್ಟಿದ್ದಾರೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಕಾಂತರಾಜ್ ತಿಳಿಸಿದ್ದಾರೆ.

ಹಾಸನದಲ್ಲಿಂದು 226 ಜನರಿಗೆ ಕೊರೊನಾ...148 ಮಂದಿ ಗುಣಮುಖ

ಆಲೂರು 04, ಅರಕಲಗೂಡು 31, ಅರಸೀಕೆರೆ 45, ಬೇಲೂರು 20, ಚನ್ನರಾಯಪಟ್ಟಣ 14, ಹಾಸನ 80, ಹೊಳೆನರಸೀಪುರ 25, ಸಕಲೇಶಪುರದಲ್ಲಿ 07 ಸೇರಿ ಒಟ್ಟು 226 ಜನರಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 5,224ಕ್ಕೆ ಏರಿಕೆಯಾಗಿದೆ. ಇಂದು 148 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದುವರೆಗೆ ಒಟ್ಟು 3,318 ಮಂದಿ ಬಿಡುಗಡೆಯಾಗಿದ್ದಾರೆ. 1,756 ಸಕ್ರಿಯ ಪ್ರಕರಣಗಳಿದ್ದು, 150 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದರು.

ಕೊರೊನಾ ಉಲ್ಬಣವಾಗುತ್ತಿರುವ ಹಿನ್ನಲೆಯಲ್ಲಿ, ಯಾರಿಗಾದರೂ ಉಸಿರಾಟದಲ್ಲಿ ತೊಂದರೆ, ಜ್ವರ, ಶೀತ, ಕೆಮ್ಮಿದ್ದರೆ ಆಸ್ಪತ್ರೆ ಭೇಟಿ ನೀಡಿ, ತಪಾಸಣೆಗೆ ಒಳಪಡಬೇಕು. ಸಾರ್ವಜನಿಕರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಮತ್ತು ಉತ್ತಮ ದರ್ಜೆಯ ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್ ಬಳಕೆ ಮಾಡಿ, ಸಭೆ ಸಮಾರಂಭವನ್ನು ಆದಷ್ಟು ಕಡಿಮೆ ಮಾಡುವ ಮೂಲಕ ಕೊರೊನಾ ಸೋಂಕು ತಡೆಗಟ್ಟಲು ಸಹಕರಿಸಬೇಕೆಂದು ಮನವಿ ಮಾಡಿದರು.

ಜಿಲ್ಲೆಯ ತಾಲ್ಲೂಕುವಾರು ಕೋವಿಡ್ ಪ್ರಕರಣಗಳು: ಆಲೂರು 142, ಅರಕಲಗೂಡು 434, ಅರಸೀಕೆರೆ 788, ಬೆಲೂರು 352, ಚನ್ನರಾಯಪಟ್ಟಣ 724, ಹಾಸನ 2096, ಹೊಳೆನರಸೀಪುರದಲ್ಲಿ 506, ಸಕಲೇಶಪುರ 147 ಹಾಗೂ 35 ಇತರೆ ಪ್ರಕರಣಗಳು ವರದಿಯಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.