ETV Bharat / state

ಹಾಸನದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸೇರಿ 16 ಜನರಿಗೆ ಸೋಂಕು ದೃಢ: ಏನಾಗಲಿದೆ 18 ವಿದ್ಯಾರ್ಥಿಗಳ ಭವಿಷ್ಯ?

author img

By

Published : Jun 27, 2020, 9:19 PM IST

ಹಾಸನ ಜಿಲ್ಲೆಯಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿ ಸೇರಿ 16 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Corona positive for 16 people in Hassan district
ಹಾಸನ: ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿ ಸೇರಿ 16 ಜನರಿಗೆ ಕೊರೊನಾ

ಹಾಸನ: ಜಿಲ್ಲೆಯಲ್ಲಿ ಇಂದು ಎಸ್​ಎಸ್​ಎಲ್​ಸಿ ಪರೀಕ್ಷ ಬರೆಯುತ್ತಿದ್ದ ಓರ್ವ ವಿದ್ಯಾರ್ಥಿ ಸೇರಿ 16 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಹಾಸನ ಜಿಲ್ಲಾಧಿಕಾರಿ

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈವರೆಗೆ ಒಟ್ಟು 331 ಕೊರೊನಾ ಪ್ರಕರಣಗಳು ಕಂಡುಬಂದಿವೆ. ಈ ಪೈಕಿ 238 ಜನರು ಗುಣಮುಖರಾಗಿದ್ದಾರೆ. ಇನ್ನೂ 92 ಜನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೈಸೂರು ಜಿಲ್ಲೆ ಕೆ.ಆರ್. ನಗರ ತಾಲೂಕು ಸಾಲಿಗ್ರಾಮದ ಓರ್ವ, ಹೊಳೆನರಸೀಪುರಕ್ಕೆ ಚಿಕಿತ್ಸೆಗೆಂದು ಬಂದಾಗ ಸೋಂಕು ಪತ್ತೆಯಾಗಿದೆ. ಅದು ಹೊಳೆನರಸೀಪುರ ತಾಲೂಕಿನಲ್ಲಿ 5, ಅರಕಲಗೂಡಿನಲ್ಲಿ 3, ಅರಸೀಕೆರೆಯಲ್ಲಿ 6 ಹಾಗೂ ಹಾಸನದಲ್ಲಿ 2 ಪ್ರಕರಣ ಸೇರಿ ಒಟ್ಟು 16 ಜನರಿಗೆ ಇಂದು ಸೋಂಕು ಇರುವುದು ದೃಢಪಟ್ಟಿದೆ ಎಂದರು.

ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಯಲ್ಲಿ ಕೊರೊನಾ ಸೋಂಕು ಕಂಡುಬಂದಿದೆ. ಆತ ಕಳೆದೆರೆಡು ದಿನಗಳ ಹಿಂದೆ ಡೆಂಗ್ಯೂ ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ಸೇರಿದ್ದ. ನಂತರ ಸರ್ಕಾರಿ ಆಸ್ಪತ್ರೆಗೆ ಬಂದಿದ್ದು, ಈ ವೇಳೆ ಡೆಂಗ್ಯೂ ಜೊತೆಗೆ ಕೋವಿಡ್ ಪರೀಕ್ಷೆ ಮಾಡಲಾಗಿತ್ತು. ಎರಡನೇ ದಿನದ ಪರೀಕ್ಷೆಯಲ್ಲಿ ಆತನಿಗೆ ಕೊರೊನಾ ಇರುವುದು ಸಾಬೀತಾಗಿದೆ. ಈತನೊಂದಿಗೆ 18 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಆ ಮಕ್ಕಳ ಕುರಿತು ಶಿಕ್ಷಣ ಇಲಾಖೆಗೆ ಸ್ಪಷ್ಟೀಕರಣಕ್ಕಾಗಿ ಪತ್ರ ಬರೆಯಲಾಗಿದೆ. ಪಾಸಿಟಿವ್ ಇರುವ ವಿದ್ಯಾರ್ಥಿ ಮುಂದಿನ ಪರೀಕ್ಷೆ ಬರೆಯುವಂತಿಲ್ಲ. ಮುಂದೆ ಪೂರಕ ಪರೀಕ್ಷೆಗೆ ಅವಕಾಶ ನೀಡಲಾಗುವುದು ಎಂದರು.

ಜಿಲ್ಲೆಯಲ್ಲಿ ಒಟ್ಟು 30 ನಿರ್ಬಂಧಿತ ವಲಯವೆಂದು​ ಗುರುತಿಸಲಾಗಿದ್ದು, 28 ದಿನಗಳ ಗಡುವು ಪೂರ್ಣಗೊಂಡ ಬಳಿಕ 11 ಝೋನ್​ಗಳನ್ನು ತೆರವು ಮಾಡಲಾಗಿದೆ. ಇಂದು ಹೊಳೆನರಸೀಪುರದಲ್ಲಿ 3, ಅರಕಲಗೂಡಿನಲ್ಲಿ 3 ಹಾಗೂ ಹಾಸನದಲ್ಲಿ 2 ಸೇರಿದಂತೆ ಒಟ್ಟು 8 ಪ್ರದೇಶವನ್ನ ನಿರ್ಬಂಧಿತ​ ವಲಯಗಳೆಂದು ಘೋಷಿಸಲಾಗಿದೆ ಎಂದರು.

ಹಾಸನ: ಜಿಲ್ಲೆಯಲ್ಲಿ ಇಂದು ಎಸ್​ಎಸ್​ಎಲ್​ಸಿ ಪರೀಕ್ಷ ಬರೆಯುತ್ತಿದ್ದ ಓರ್ವ ವಿದ್ಯಾರ್ಥಿ ಸೇರಿ 16 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಹಾಸನ ಜಿಲ್ಲಾಧಿಕಾರಿ

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈವರೆಗೆ ಒಟ್ಟು 331 ಕೊರೊನಾ ಪ್ರಕರಣಗಳು ಕಂಡುಬಂದಿವೆ. ಈ ಪೈಕಿ 238 ಜನರು ಗುಣಮುಖರಾಗಿದ್ದಾರೆ. ಇನ್ನೂ 92 ಜನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೈಸೂರು ಜಿಲ್ಲೆ ಕೆ.ಆರ್. ನಗರ ತಾಲೂಕು ಸಾಲಿಗ್ರಾಮದ ಓರ್ವ, ಹೊಳೆನರಸೀಪುರಕ್ಕೆ ಚಿಕಿತ್ಸೆಗೆಂದು ಬಂದಾಗ ಸೋಂಕು ಪತ್ತೆಯಾಗಿದೆ. ಅದು ಹೊಳೆನರಸೀಪುರ ತಾಲೂಕಿನಲ್ಲಿ 5, ಅರಕಲಗೂಡಿನಲ್ಲಿ 3, ಅರಸೀಕೆರೆಯಲ್ಲಿ 6 ಹಾಗೂ ಹಾಸನದಲ್ಲಿ 2 ಪ್ರಕರಣ ಸೇರಿ ಒಟ್ಟು 16 ಜನರಿಗೆ ಇಂದು ಸೋಂಕು ಇರುವುದು ದೃಢಪಟ್ಟಿದೆ ಎಂದರು.

ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಯಲ್ಲಿ ಕೊರೊನಾ ಸೋಂಕು ಕಂಡುಬಂದಿದೆ. ಆತ ಕಳೆದೆರೆಡು ದಿನಗಳ ಹಿಂದೆ ಡೆಂಗ್ಯೂ ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ಸೇರಿದ್ದ. ನಂತರ ಸರ್ಕಾರಿ ಆಸ್ಪತ್ರೆಗೆ ಬಂದಿದ್ದು, ಈ ವೇಳೆ ಡೆಂಗ್ಯೂ ಜೊತೆಗೆ ಕೋವಿಡ್ ಪರೀಕ್ಷೆ ಮಾಡಲಾಗಿತ್ತು. ಎರಡನೇ ದಿನದ ಪರೀಕ್ಷೆಯಲ್ಲಿ ಆತನಿಗೆ ಕೊರೊನಾ ಇರುವುದು ಸಾಬೀತಾಗಿದೆ. ಈತನೊಂದಿಗೆ 18 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಆ ಮಕ್ಕಳ ಕುರಿತು ಶಿಕ್ಷಣ ಇಲಾಖೆಗೆ ಸ್ಪಷ್ಟೀಕರಣಕ್ಕಾಗಿ ಪತ್ರ ಬರೆಯಲಾಗಿದೆ. ಪಾಸಿಟಿವ್ ಇರುವ ವಿದ್ಯಾರ್ಥಿ ಮುಂದಿನ ಪರೀಕ್ಷೆ ಬರೆಯುವಂತಿಲ್ಲ. ಮುಂದೆ ಪೂರಕ ಪರೀಕ್ಷೆಗೆ ಅವಕಾಶ ನೀಡಲಾಗುವುದು ಎಂದರು.

ಜಿಲ್ಲೆಯಲ್ಲಿ ಒಟ್ಟು 30 ನಿರ್ಬಂಧಿತ ವಲಯವೆಂದು​ ಗುರುತಿಸಲಾಗಿದ್ದು, 28 ದಿನಗಳ ಗಡುವು ಪೂರ್ಣಗೊಂಡ ಬಳಿಕ 11 ಝೋನ್​ಗಳನ್ನು ತೆರವು ಮಾಡಲಾಗಿದೆ. ಇಂದು ಹೊಳೆನರಸೀಪುರದಲ್ಲಿ 3, ಅರಕಲಗೂಡಿನಲ್ಲಿ 3 ಹಾಗೂ ಹಾಸನದಲ್ಲಿ 2 ಸೇರಿದಂತೆ ಒಟ್ಟು 8 ಪ್ರದೇಶವನ್ನ ನಿರ್ಬಂಧಿತ​ ವಲಯಗಳೆಂದು ಘೋಷಿಸಲಾಗಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.