ETV Bharat / state

ಗ್ರಾಮೀಣ ಭಾಗದ ಸಂಸ್ಕೃತಿಯಿಂದಲೇ ಇವತ್ತು ಧರ್ಮ ಉಳಿಯುತ್ತಿರುವುದು: ವಿನಯ್​ ಗುರೂಜಿ

ದಂಡಿಗನಹಳ್ಳಿ ಹೋಬಳಿ ಕತ್ತರಿಘಟ್ಟ ಗ್ರಾಮದ ಶ್ರೀ ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದಲ್ಲಿ ನಡೆದ 16ನೇ ವರ್ಷದ ಲೋಕ ಕಲ್ಯಾಣಾರ್ಥವಾಗಿ ಚಂಡಿಕಾಯಾಗ ಹಾಗೂ ಮಹಿಳೆಯರಿಗೆ ಬಾಗಿನ ಮತ್ತು ಸೀರೆ ನೀಡುವ ಕಾರ್ಯಕ್ರಮ ನೆರವೇರಿತು.

author img

By

Published : May 8, 2022, 9:26 PM IST

Chandika yaga in Channarayapattana Vinay guuji attended program
ಗ್ರಾಮೀಣ ಭಾಗದ ಸಂಸ್ಕೃತಿಯಿಂದಲೇ ಇವತ್ತು ಧರ್ಮ ಉಳಿಯುತ್ತಿರುವುದು: ವಿನಯ್​ ಗುರೂಜಿ

ಚನ್ನರಾಯಪಟ್ಟಣ(ಹಾಸನ): ಧಾರ್ಮಿಕ ಕಾರ್ಯಗಳಿಂದ ದೇಶ ಉಳಿಯುತ್ತದೆ. ನಮ್ಮ ಸಂಸ್ಕೃತಿ ಉಳಿಯಬೇಕಾದರೆ ಹಳ್ಳಿಗಳಿಂದ ಮಾತ್ರ ಸಾಧ್ಯ. ಧರ್ಮ, ಆಧ್ಯಾತ್ಮ, ಸಮಾಜವನ್ನು ಒಂದೇ ಮಾರ್ಗದಲ್ಲಿ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಯಜ್ಞ ಯಾಗಾದಿಗಳು ಜರುಗುತ್ತಿವೆ. ಯಜ್ಞದ ವಿಗ್ರಹದಲ್ಲಿರುವ ಚೈತನ್ಯಕ್ಕೆ ಪೂಜೆ ಸಲ್ಲಿಸಿದರೆ ಬಾಗಿನ ಕೊಟ್ಟು ಜೀವಂತ ದೇವಿಗೆ ಉಪಾಸನ ಮಾಡಿರುವುದು ವಿಶೇಷವಾಗಿದೆ ಎಂದು ಗೌರಿಗದ್ದೆ ಆಶ್ರಮದ ಸದ್ಗುರು ಶ್ರೀವಿನಯ್‌ ಗುರೂಜಿ ತಿಳಿಸಿದರು.

ತಾಲೂಕಿನ ದಂಡಿಗನಹಳ್ಳಿ ಹೋಬಳಿ ಕತ್ತರಿಘಟ್ಟ ಗ್ರಾಮದ ಶ್ರೀ ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದಲ್ಲಿ ನಡೆದ 16ನೇ ವರ್ಷದ ಲೋಕ ಕಲ್ಯಾಣಾರ್ಥವಾಗಿ ಚಂಡಿಕಾಯಾಗ ಹಾಗೂ ಮಹಿಳೆಯರಿಗೆ ಬಾಗಿನ ಮತ್ತು ಸೀರೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿ, ಆಶ್ರಮದಿಂದ ಮುಂದಿನ ದಿನಗಳಲ್ಲಿ ವಿದ್ಯೆ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುವುದಾಗಿ ಆಶ್ರಮದ ಗುರೂಜಿ ತಿಳಿಸಿದ್ದಾರೆ ಹಾಗೂ ಜಿಲ್ಲೆಗೆ ಉತ್ತಮವಾದ ಹೃದಯ ರೋಗಕ್ಕೆ ಸಂಬಂಧಿಸಿದ ಆಸ್ಪತ್ರೆಯನ್ನು ತೆರೆಯಲು ಎಂಎಲ್ಸಿ ಅವರಿಗೆ ತಿಳಿಸಲಾಗಿದೆ ಎಂದರು.

ಗ್ರಾಮೀಣ ಭಾಗದ ಸಂಸ್ಕೃತಿಯಿಂದಲೇ ಇವತ್ತು ಧರ್ಮ ಉಳಿಯುತ್ತಿರುವುದು

ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದ ಚಂದ್ರಶೇಖರ ಗುರೂಜಿ ಮಾತನಾಡಿ, ಹಣ ಮಾಡುವ ಮೂಲ ಉದ್ದೇಶ ನಮ್ಮ ಆಶ್ರಮಕ್ಕೆ ಇಲ್ಲ, ಆಚಾರ ವಿಚಾರ ಧರ್ಮವನ್ನ ಉಳಿಸುವುದೇ ನಮ್ಮ ಮೂಲ ಉದ್ದೇಶ. ಅಕ್ಷರ, ಅನ್ನ, ಆರೋಗ್ಯ ಈ ಮೂರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ಅದನ್ನು ನಾವು ಎಂದಿಗೂ ನಿಲ್ಲಿಸುವುದಿಲ್ಲ, ನಮ್ಮ ಕೈಲಾದ ಸಹಾಯವನ್ನು ಮಾಡುತ್ತೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹೆಚ್. ಡಿ. ರೇವಣ್ಣ, ವಿಧಾನ ಪರಿಷತ್ ಸದಸ್ಯ ಸೂರಜ್‌ ರೇವಣ್ಣ, ಕಾಂಗ್ರೆಸ್ ಮುಖಂಡ ಮನೋಹರ್‌ ಕುಂಭೇನಹಳ್ಳಿ, ಕೊಳ್ಳೇಗಾಲದ ಶ್ರೀಪ್ರಸನ್ನ ವೀರಾಂಜನೇಯ ದೇವಸ್ಥಾನದ ರಾಘವನ್, ದೊಡ್ಡಮನೆ ವೆಂಕಟೇಶ್, ಕಾರ್ಯದರ್ಶಿ ಅಮೋಘ್, ನಂಜಪ್ಪ, ರಘುಗೌಡ ಮತ್ತಿತರಿದ್ದರು.

ಇದನ್ನೂ ಓದಿ: ಮದುವೆ ಪ್ರಸ್ತಾಪ ತಿರಸ್ಕರಿಸಿದ ಮಹಿಳೆ: ಏಳು ಜನರ ಸಜೀವ ದಹನಕ್ಕೆ ಕಾರಣವಾದ ಪಾಗಲ್ ಪ್ರೇಮಿ​!

ಚನ್ನರಾಯಪಟ್ಟಣ(ಹಾಸನ): ಧಾರ್ಮಿಕ ಕಾರ್ಯಗಳಿಂದ ದೇಶ ಉಳಿಯುತ್ತದೆ. ನಮ್ಮ ಸಂಸ್ಕೃತಿ ಉಳಿಯಬೇಕಾದರೆ ಹಳ್ಳಿಗಳಿಂದ ಮಾತ್ರ ಸಾಧ್ಯ. ಧರ್ಮ, ಆಧ್ಯಾತ್ಮ, ಸಮಾಜವನ್ನು ಒಂದೇ ಮಾರ್ಗದಲ್ಲಿ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಯಜ್ಞ ಯಾಗಾದಿಗಳು ಜರುಗುತ್ತಿವೆ. ಯಜ್ಞದ ವಿಗ್ರಹದಲ್ಲಿರುವ ಚೈತನ್ಯಕ್ಕೆ ಪೂಜೆ ಸಲ್ಲಿಸಿದರೆ ಬಾಗಿನ ಕೊಟ್ಟು ಜೀವಂತ ದೇವಿಗೆ ಉಪಾಸನ ಮಾಡಿರುವುದು ವಿಶೇಷವಾಗಿದೆ ಎಂದು ಗೌರಿಗದ್ದೆ ಆಶ್ರಮದ ಸದ್ಗುರು ಶ್ರೀವಿನಯ್‌ ಗುರೂಜಿ ತಿಳಿಸಿದರು.

ತಾಲೂಕಿನ ದಂಡಿಗನಹಳ್ಳಿ ಹೋಬಳಿ ಕತ್ತರಿಘಟ್ಟ ಗ್ರಾಮದ ಶ್ರೀ ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದಲ್ಲಿ ನಡೆದ 16ನೇ ವರ್ಷದ ಲೋಕ ಕಲ್ಯಾಣಾರ್ಥವಾಗಿ ಚಂಡಿಕಾಯಾಗ ಹಾಗೂ ಮಹಿಳೆಯರಿಗೆ ಬಾಗಿನ ಮತ್ತು ಸೀರೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿ, ಆಶ್ರಮದಿಂದ ಮುಂದಿನ ದಿನಗಳಲ್ಲಿ ವಿದ್ಯೆ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುವುದಾಗಿ ಆಶ್ರಮದ ಗುರೂಜಿ ತಿಳಿಸಿದ್ದಾರೆ ಹಾಗೂ ಜಿಲ್ಲೆಗೆ ಉತ್ತಮವಾದ ಹೃದಯ ರೋಗಕ್ಕೆ ಸಂಬಂಧಿಸಿದ ಆಸ್ಪತ್ರೆಯನ್ನು ತೆರೆಯಲು ಎಂಎಲ್ಸಿ ಅವರಿಗೆ ತಿಳಿಸಲಾಗಿದೆ ಎಂದರು.

ಗ್ರಾಮೀಣ ಭಾಗದ ಸಂಸ್ಕೃತಿಯಿಂದಲೇ ಇವತ್ತು ಧರ್ಮ ಉಳಿಯುತ್ತಿರುವುದು

ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದ ಚಂದ್ರಶೇಖರ ಗುರೂಜಿ ಮಾತನಾಡಿ, ಹಣ ಮಾಡುವ ಮೂಲ ಉದ್ದೇಶ ನಮ್ಮ ಆಶ್ರಮಕ್ಕೆ ಇಲ್ಲ, ಆಚಾರ ವಿಚಾರ ಧರ್ಮವನ್ನ ಉಳಿಸುವುದೇ ನಮ್ಮ ಮೂಲ ಉದ್ದೇಶ. ಅಕ್ಷರ, ಅನ್ನ, ಆರೋಗ್ಯ ಈ ಮೂರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ಅದನ್ನು ನಾವು ಎಂದಿಗೂ ನಿಲ್ಲಿಸುವುದಿಲ್ಲ, ನಮ್ಮ ಕೈಲಾದ ಸಹಾಯವನ್ನು ಮಾಡುತ್ತೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹೆಚ್. ಡಿ. ರೇವಣ್ಣ, ವಿಧಾನ ಪರಿಷತ್ ಸದಸ್ಯ ಸೂರಜ್‌ ರೇವಣ್ಣ, ಕಾಂಗ್ರೆಸ್ ಮುಖಂಡ ಮನೋಹರ್‌ ಕುಂಭೇನಹಳ್ಳಿ, ಕೊಳ್ಳೇಗಾಲದ ಶ್ರೀಪ್ರಸನ್ನ ವೀರಾಂಜನೇಯ ದೇವಸ್ಥಾನದ ರಾಘವನ್, ದೊಡ್ಡಮನೆ ವೆಂಕಟೇಶ್, ಕಾರ್ಯದರ್ಶಿ ಅಮೋಘ್, ನಂಜಪ್ಪ, ರಘುಗೌಡ ಮತ್ತಿತರಿದ್ದರು.

ಇದನ್ನೂ ಓದಿ: ಮದುವೆ ಪ್ರಸ್ತಾಪ ತಿರಸ್ಕರಿಸಿದ ಮಹಿಳೆ: ಏಳು ಜನರ ಸಜೀವ ದಹನಕ್ಕೆ ಕಾರಣವಾದ ಪಾಗಲ್ ಪ್ರೇಮಿ​!

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.