ETV Bharat / state

ಮನವಿ ಕೊಡಲು ಕುಡಿದು ಬಂದಿದ್ದ ವ್ಯಕ್ತಿಗೆ ಬೆವರಿಳಿಸಿದ ಶಾಸಕ: ಹಿಗ್ಗಾ ಮುಗ್ಗ ಬೈಗುಳ - Arakalagudu JDS MLA Warning to the drunk Person

ಎಂ.ಎಸ್.ಐ.ಎಲ್ ವಿಚಾರವಾಗಿ ಶಾಸಕರೊಂದಿಗೆ ಮನವಿ ಸಲ್ಲಿಸಿ ಚರ್ಚಿಸಲು ಮುಂದಾದ ವೇಳೆ, ಮದ್ಯಪಾನ ಮಾಡಿದ್ದ ವ್ಯಕ್ತಿಯೋರ್ವ ಎಂ.ಎಸ್.ಐ.ಎಲ್ ಮಾಡಿಸಿಯೇ ಕೊಡಬೇಕು ಎಂದು ಶಾಸಕರಿಗೆ ಆಗ್ರಹ ಮಾಡಿದ್ದೆ ತಡ ಶಾಸಕ ಎ.ಟಿ.ರಾಮಸ್ವಾಮಿ ಅವರಿಗೆ ಅದೆಲ್ಲಿತ್ತೋ ಕೋಪ, ಹಿಗ್ಗಾ ಮುಗ್ಗಾ ಬೈದಿದ್ದಾರೆ.

Arakalagudu JDS MLA
ಕುಡಿದಿದ್ದ ವ್ಯಕ್ತಿಗೆ ಬೆವರಿಳಿಸಿದ ಶಾಸಕ: ಹಿಗ್ಗಾ ಮುಗ್ಗ ಬೈಗುಳ
author img

By

Published : Dec 29, 2019, 11:47 PM IST

ಹಾಸನ: ಅರಕಲಗೂಡು ಜೆಡಿಎಸ್ ಶಾಸಕ ಎ.ಟಿ. ರಾಮಸ್ವಾಮಿ ಕುಡಿದು ತಮ್ಮನ್ನು ಪ್ರಶ್ನಿಸಿದ ವ್ಯಕ್ತಿಯನ್ನು ಬೈದು ಚಳಿ ಬಿಡಿಸಿದ್ದಾರೆ.

ಕುಡಿದಿದ್ದ ವ್ಯಕ್ತಿಗೆ ಬೆವರಿಳಿಸಿದ ಶಾಸಕ: ಹಿಗ್ಗಾ ಮುಗ್ಗ ಬೈಗುಳ

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿದ ಕಬ್ಬಳಿಗೆರೆ ಶಾಲೆಯೊಂದರ ಕಾರ್ಯಕ್ರಮದಲ್ಲಿ ಈ ಘಟನೆ ಜರುಗಿದೆ. ಗ್ರಾಮಸ್ಥನೋರ್ವನಿಗೆ ಅಚಾಚ್ಯ ಶಬ್ದಗಳಿಂದ ಬೈದು ಬೆದರಿಸಿದ್ದಾರೆ. ಅರಕಲಗೂಡು ತಾಲೂಕಿನ ಬೆಳವಾಡಿಯಲ್ಲಿ ಎಂ.ಎಸ್.ಐ.ಎಲ್ ತೆರೆಯಬೇಕೆಂದು ಈ ಹಿಂದೆಯೂ ಗ್ರಾಮಸ್ಥರು ಮನವಿ ಮಾಡಿದ್ರು. ಆದ್ರೆ, ಗ್ರಾಮದ ಸುತ್ತಮುತ್ತಲಿನ ಸ್ತ್ರೀ ಶಕ್ತಿ ಸಂಘಗಳು ಮತ್ತು ಬೆಳವಾಡಿ ಮಹಿಳೆಯರು ಮದ್ಯದಂಗಡಿ ತೆರೆಯದಂತೆ ಪ್ರತಿಭಟನೆ ಮಾಡಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ರು. ಇದರ ನಡುವೆ ಇವತ್ತು ಕೆಲವು ಗ್ರಾಮಸ್ಥರು ಶಾಸಕರೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ.

ಎಂ.ಎಸ್.ಐ.ಎಲ್ ವಿಚಾರವಾಗಿ ಶಾಸಕರೊಂದಿಗೆ ಮನವಿ ಸಲ್ಲಿಸಿ ಚರ್ಚಿಸಲು ಮುಂದಾದ ವೇಳೆ, ಮದ್ಯಪಾನ ಮಾಡಿದ್ದ ವ್ಯಕ್ತಿಯೋರ್ವ ಎಂ.ಎಸ್.ಐ.ಎಲ್ ಮಾಡಿಸಿಯೇ ಕೊಡಬೇಕು ಎಂದು ಶಾಸಕರಿಗೆ ಆಗ್ರಹ ಮಾಡಿದ್ದೆ ತಡ ಶಾಸಕ ಎ.ಟಿ.ರಾಮಸ್ವಾಮಿ ಅವರಿಗೆ ಅದೆಲ್ಲಿತ್ತೋ ಕೋಪ, ಹಿಗ್ಗಾ ಮುಗ್ಗಾ ಬೈದಿದ್ದಾರೆ.

ಹಾಸನ: ಅರಕಲಗೂಡು ಜೆಡಿಎಸ್ ಶಾಸಕ ಎ.ಟಿ. ರಾಮಸ್ವಾಮಿ ಕುಡಿದು ತಮ್ಮನ್ನು ಪ್ರಶ್ನಿಸಿದ ವ್ಯಕ್ತಿಯನ್ನು ಬೈದು ಚಳಿ ಬಿಡಿಸಿದ್ದಾರೆ.

ಕುಡಿದಿದ್ದ ವ್ಯಕ್ತಿಗೆ ಬೆವರಿಳಿಸಿದ ಶಾಸಕ: ಹಿಗ್ಗಾ ಮುಗ್ಗ ಬೈಗುಳ

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿದ ಕಬ್ಬಳಿಗೆರೆ ಶಾಲೆಯೊಂದರ ಕಾರ್ಯಕ್ರಮದಲ್ಲಿ ಈ ಘಟನೆ ಜರುಗಿದೆ. ಗ್ರಾಮಸ್ಥನೋರ್ವನಿಗೆ ಅಚಾಚ್ಯ ಶಬ್ದಗಳಿಂದ ಬೈದು ಬೆದರಿಸಿದ್ದಾರೆ. ಅರಕಲಗೂಡು ತಾಲೂಕಿನ ಬೆಳವಾಡಿಯಲ್ಲಿ ಎಂ.ಎಸ್.ಐ.ಎಲ್ ತೆರೆಯಬೇಕೆಂದು ಈ ಹಿಂದೆಯೂ ಗ್ರಾಮಸ್ಥರು ಮನವಿ ಮಾಡಿದ್ರು. ಆದ್ರೆ, ಗ್ರಾಮದ ಸುತ್ತಮುತ್ತಲಿನ ಸ್ತ್ರೀ ಶಕ್ತಿ ಸಂಘಗಳು ಮತ್ತು ಬೆಳವಾಡಿ ಮಹಿಳೆಯರು ಮದ್ಯದಂಗಡಿ ತೆರೆಯದಂತೆ ಪ್ರತಿಭಟನೆ ಮಾಡಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ರು. ಇದರ ನಡುವೆ ಇವತ್ತು ಕೆಲವು ಗ್ರಾಮಸ್ಥರು ಶಾಸಕರೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ.

ಎಂ.ಎಸ್.ಐ.ಎಲ್ ವಿಚಾರವಾಗಿ ಶಾಸಕರೊಂದಿಗೆ ಮನವಿ ಸಲ್ಲಿಸಿ ಚರ್ಚಿಸಲು ಮುಂದಾದ ವೇಳೆ, ಮದ್ಯಪಾನ ಮಾಡಿದ್ದ ವ್ಯಕ್ತಿಯೋರ್ವ ಎಂ.ಎಸ್.ಐ.ಎಲ್ ಮಾಡಿಸಿಯೇ ಕೊಡಬೇಕು ಎಂದು ಶಾಸಕರಿಗೆ ಆಗ್ರಹ ಮಾಡಿದ್ದೆ ತಡ ಶಾಸಕ ಎ.ಟಿ.ರಾಮಸ್ವಾಮಿ ಅವರಿಗೆ ಅದೆಲ್ಲಿತ್ತೋ ಕೋಪ, ಹಿಗ್ಗಾ ಮುಗ್ಗಾ ಬೈದಿದ್ದಾರೆ.

Intro:ಹಾಸನ: ಅದ್ಯಾಕೋ ಗೊತ್ತಿಲ್ಲ. ಇತ್ತೀಚೆಗೆ ಜೆಡಿಎಸ್ ಪಕ್ಷದವರು ಮತದಾರರನ್ನ ಕಂಡರೆ, ಕ್ಷೇತ್ರದ ಜನರನ್ನ ಕಂಡ್ರೆ, ಅಥವಾ ಇತರ ಪಕ್ಷದವರು ಪ್ರಶ್ನೆ ಕೇಳಿದ್ರೆ ಅಸಂವಿಧಾನಿಕ ಪದ ಬಳಿಸಿ ನಾಲಿಗೆ ಹರಿಬಿಡುತ್ತಿದ್ದಾರೆ. ಮೊನ್ನೆ ಅರಸೀಕೆರೆ ಶಾಸಕ ಕಾಂಗ್ರೇಸ್ ಪಕ್ಷದವರು ಪ್ರಶ್ನೆ ಕೇಳಿದ್ರು ಎನ್ನೋ ಕಾರಣಕ್ಕೆ ಅವ್ಯಾಶ್ಚ್ಯ ಶಬ್ದಗಳನ್ನ ಬಳಸಿ ಸಭೆಯಿಂದ ಹೊರನಡೆದ್ರೆ, ಇವತ್ತು ಅರಕಲಗೂಡು ಜೆಡಿಎಸ್ ಶಾಸಕ ಕೂಡಾ ಅದೇ ರೀತಿ ಸಿಟ್ಟಾಗಿ ಮಾರುದ್ದ ನಾಲಿಗೆ ಹರಿಬಿಟ್ಟು ಕ್ಷೇತ್ರದ ವ್ಯಕ್ತಿಯೋರ್ವನನ್ನ ಬಾಯಿಗೆ ಬಂದಹಾಗೆ ಬೈದು ಸ್ಥಳದಿಂದ ಹೊರನಡೆದಿದ್ದಾರೆ.

ಇಂತಹುದೊಂದು ಘಟನೆ ನಡೆದಿದ್ದು, ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕಬ್ಬಳಿಗೆರೆ ಶಾಲೆಯೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ವಾಪಸ್ ತೆರಳುವಾಗ ಬೆಳವಾಡಿ ಗ್ರಾಮಸ್ಥನೋರ್ವನಿಗೆ ನಾಲಿಗೆ ಹರಿಬಿಟ್ಟು ಹಿಗ್ಗಾ ಮುಗ್ಗಾ ಬೈದಿದ್ದಾರೆ. ಕುಡಿದುಕೊಂಡು ಮಾತನಾಡೋದಿಕ್ಕೆ ಬಂದ್ರೆ ಸರಿಯಿರಲ್ಲ. ಯಾರತ್ರ ಮಾತಾಡ್ತಿದ್ದೀಯಾ...? ಬೋಳಿಮಗನೇ...ನಿನ್ನಿಂದ ಪಾಠ ಕಲಿಬೇಕಾ ನಾನು..ಏನು ಮಾಡಬೇಕು ಎಂದು ನನಗೆ ಗೊತ್ತಿದೆ. ಇಂತಹವರನ್ನ ಯಾಕೆ ಕರೆದುಕೊಂಡು ಬರ್ತಿರಾ..ಒದ್ರೆ ಸೊಂಟ ಮುರಿಬೇಕು ನನ್ಮಗನೆ ಎಂದು ನೆರೆದಿದ್ದ ಸಾರ್ವಜನಿಕರೆದ್ರು ಅವ್ಯಾಚ್ಚ್ಯ ಶಬ್ದಗಳಿಂದ ವ್ಯಕ್ತಿಯನ್ನ ಬೈದಿದ್ದಾರೆ.

ಏನಿದು ಘಟನೆ:
ಅರಕಲಗೂಡು ತಾಲ್ಲೂಕು ಬೆಳವಾಡಿಯಲ್ಲಿ ಎಂ.ಎಸ್.ಐ.ಎಲ್ ತೆರೆಯಬೇಕೆಂದು ಹಿಂದೆಯೂ ಗ್ರಾಮಸ್ಥರು ಮನವಿ ಮಾಡಿದ್ರು. ಆದ್ರೆ ಆ ಸುತ್ತಮುತ್ತಲಿನ ಸ್ತ್ರೀ ಶಕ್ತಿ ಸಂಘಗಳು ಮತ್ತು ಬೆಳವಾಡಿ ಮಹಿಳೆಯರು ಮದ್ಯದಂಗಡಿ ತೆರೆಯದಂತೆ ಪ್ರತಿಭಟನೆ ಮಾಡಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ರು. ಇದ್ರ ನಡುವೆ ಇವತ್ತು ಕೆಲವು ಗ್ರಾಮಸ್ಥರು ಶಾಸಕರೊಂದಿಗೆ ಮಾತುಕತೆ ಮಾಡಲು ತೀರ್ಮಾನಿಸಿದ್ರು. ಅದ್ರಂತೆ ಶಾಸಕ ಎ.ಟಿ.ರಾಮಸ್ವಾಮಿ, ಕೊಣನೂರು ಸಮೀಪದ ಕಬ್ಬಳಿಗೆರೆಯ ಶಾಲೆಯಲ್ಲಿರುವ ಮಾಹಿತಿ ತಿಳಿದು ಅಲ್ಲಿಗೆ ಹೋಗಿದ್ರು.

ಶಾಲೆಯ ಕಾರ್ಯಕ್ರಮ ಮುಗಿದ ಬಳಿಕ ಬೆಳವಾಡಿಯ ಕೆಲವು ಮಂದಿ ಎಂ.ಎಸ್.ಐ.ಎಲ್ ವಿಚಾರವಾಗಿ ಶಾಸಕರೊಂದಿಗೆ ಮನವಿ ಸಲ್ಲಿಸಿ ಚರ್ಚಿಸಲು ಮುಂದಾದವೇಳೆ, ಮಧ್ಯಪಾನ ಮಾಡಿದ್ದ ಗ್ರಾಮಸ್ಥನೋರ್ವ ಶಾಸಕನಿಗೆ ಎಂ.ಎಸ್.ಐ.ಎಲ್ ಮಾಡಿಸಿಯೇ ಕೊಡಬೇಕು ಎಂದು ಆಗ್ರಹ ಮಾಡಿದ್ದೆ ತಡ ಅದೆಲ್ಲಿತ್ತೋ ಕೋಪ ಶಾಸಕ ಎ.ಟಿ.ರಾಮಸ್ವಾಮಿ, ಹಿಗ್ಗಾ ಮುಗ್ಗಾ ಬೈದಿದ್ದಾರೆ.

ಇನ್ನು ಜೆಡಿಎಸ್ ಪಕ್ಷದವರ ಇಂತಹ ನಡತೆಯಿಂದ ಜಿಲ್ಲೆಯ ಜನ ತಲೆತಗ್ಗಿಸುತವಂತಾಗಿದೆ. ಜನಪ್ರತಿನಿಗಳು ಎಂಥ ಸಂದರ್ಭದಲ್ಲಿ ಹೇಗೆ ಮಾತನಾಡಬೇಕೆಂಬುದನ್ನ ಕಲಿತಿಲ್ಲವಲ್ಲಾ ಎಂಬ ಮಾತುಗಳು ಕೇಳಿಬರುತ್ತಿದ್ದು, ಕ್ಷೇತ್ರದ ಜನ್ರು ಅಷ್ಟೆಯಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಪಕ್ಷದ ಶಾಸಕರುಗಳನ್ನ ಕುರಿತು ಬಿಜೆಪಿ ಮತ್ತು ಕಾಂಗ್ರೇಶ್ ಪಕ್ಷದದವರು ಟೀಕಾಟಿಪ್ಪಣೆ ಬರೆಯುತ್ತಾ ಚರ್ಚೆ ನಡೆಸುತ್ತಿದ್ದಾರೆ. ನೆನ್ನೆ ಶಿವಲಿಂಗೇಗೌಡ, ಇಂದು ಎಟಿ ರಾಮಸ್ವಾಮಿ, ನಾಳೆ ಯಾರಿಗೆ ಯಾವ ಜೆಡಿಎಸ್ ಶಾಸಕ ಬೈತ್ತಾನೋ ನೋಡೋಣ ಎಂಬ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

•         ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.


Body:7203289


Conclusion:welcome

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.